ಎನ್.ಎಂ.ಎಂ.ಎಸ್. ವಿದ್ಯಾರ್ಥಿ ವೇತನಕ್ಕೆ ಬಿಳಿಯೂರುಕಟ್ಟೆ ಶಾಲಾ ವಿದ್ಯಾರ್ಥಿನಿ ಸ್ವರ್ಣ ಸಿ. ಆಯ್ಕೆ
ಪುತ್ತೂರು: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ನವದೆಹಲಿ ಆಶ್ರಯದಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ 8ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ 2023-24ನೇ ಸಾಲಿನ ರಾಜ್ಯಮಟ್ಟದ ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಸ್ವರ್ಣ ಸಿ. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ. ಸ್ವರ್ಣ ಸಿ. ಬಿಳಿಯೂರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 8 ನೇ ತರಗತಿ ವಿದ್ಯಾರ್ಥಿನಿ. ಚನಿಲ ನಿವಾಸಿ ದೇವಪ್ಪ ಹಾಗೂ ಯಶೋಧ ದಂಪತಿ ಪುತ್ರಿ.
ಎನ್.ಎಂ.ಎಂ.ಎಸ್. ವಿದ್ಯಾರ್ಥಿ ವೇತನಕ್ಕೆ ಬಿಳಿಯೂರುಕಟ್ಟೆ ಶಾಲಾ ವಿದ್ಯಾರ್ಥಿನಿ ಸ್ವರ್ಣ ಸಿ. ಆಯ್ಕೆ Read More »










