ಸುಸೂತ್ರವಾಗಿ ಸಾಗಿದ ಬಿಜೆಪಿ ಜಾಥಾ ಅಂತ್ಯದಲ್ಲಿ ಬಿರುಸಾಗಿದ್ದೇಕೆ?! | ಈ ಬಿರುಸು ಪೂರ್ವ ನಿಯೋಜಿತ ಪ್ಲ್ಯಾನೇ?! | ಹಿರಿ ನಾಯಕರಿರುವ ಬಿಜೆಪಿಯಲ್ಲಿ ಈ ಗೊಂದಲವೇಕೆ? | ಬಿಜೆಪಿ ಪಡಸಾಲೆಯ ಗೊಂದಲ ಎದುರಾಳಿಗಳಿಗೆ ಆಹಾರವಾಗದೇ? ಇದಕ್ಕೆ ಹೊಣೆ ಯಾರು?

ಪುತ್ತೂರು: ಅಮಿತ್ ಶಾ ಕಾರ್ಯಕ್ರಮದ ಪ್ರಚಾರಾರ್ಥ ಗುರುವಾರ ಪೇಟೆಯಾದ್ಯಂತ ನಡೆದ ಜಾಥಾ, ಅಂತ್ಯದಲ್ಲಿ ಏಕಾಏಕೀ ಬಿರುಸಾಯಿತು. ಮಾತಿನ ಚಕಮಕಿ ತಾರಕಕ್ಕೇರಿತು. ಮುಖಂಡರ ಮಧ್ಯಪ್ರವೇಶ ಬಿರುಸಿನ ವಾತಾವರಣವನ್ನು ತಿಳಿಗೊಳಿಸಿತೇನೋ ನಿಜ. ಆದರೆ ಸುಸೂತ್ರವಾಗಿ ಸಾಗುತ್ತಿದ್ದ ಜಾಥಾ ಕೊನೆಯಲ್ಲಿ ಬಿರುಸಾಗಲು ಕಾರಣವೇನು? ಹೀಗೊಂದು ಪ್ರಶ‍್ನೆ ಬಿಜೆಪಿ ಪಾಳಯದೊಳಗೆ ಸದ್ದಿಲ್ಲದೆ ಹರಿದಾಡುತ್ತಿದೆ. ಜಾಥಾದ ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಎಲ್ಲಾ ಮುಖಂಡರು ಜೊತೆಗೆ ಹೆಜ್ಜೆ ಮುಂದಿಡುತ್ತಾ ಸಾಗಿದರು. ಪ್ರಚಾರಾರ್ಥ ಜಾಥಾ ವಿಜೃಂಭಣೆಯಿಂದಲೇ ಸಾಗಿತ್ತು. ಆದರೆ ಕೊನೆಯಲ್ಲಿ ಜಾಥಾ ಅಂತ್ಯವಾಗುತ್ತದೆ ಎಂದಾಗ, ಏಕಾಏಕೀ […]

ಸುಸೂತ್ರವಾಗಿ ಸಾಗಿದ ಬಿಜೆಪಿ ಜಾಥಾ ಅಂತ್ಯದಲ್ಲಿ ಬಿರುಸಾಗಿದ್ದೇಕೆ?! | ಈ ಬಿರುಸು ಪೂರ್ವ ನಿಯೋಜಿತ ಪ್ಲ್ಯಾನೇ?! | ಹಿರಿ ನಾಯಕರಿರುವ ಬಿಜೆಪಿಯಲ್ಲಿ ಈ ಗೊಂದಲವೇಕೆ? | ಬಿಜೆಪಿ ಪಡಸಾಲೆಯ ಗೊಂದಲ ಎದುರಾಳಿಗಳಿಗೆ ಆಹಾರವಾಗದೇ? ಇದಕ್ಕೆ ಹೊಣೆ ಯಾರು? Read More »

ಹನುಮಗಿರಿ ಕ್ಷೇತ್ರಕ್ಕೆ ಅಮಿತ್‌ ಶಾ ಆಗಮನ ಹಿನ್ನಲೆ : ಹ್ಯಾಲಿಪ್ಯಾಡ್ ಉದ್ಘಾಟನೆ

ಪುತ್ತೂರು : ಈಶ್ವರಮಂಗಲದ ಹನುಮಗಿರಿ ಕ್ಷೇತ್ರದ ಅಮರಗಿರಿ ಭಾರತಿ ಜ್ಯೋತಿ ಮಂದಿರ ಉದ್ಘಾಟನೆ ನೆರವೇರಿಸಲು ಅಮಿತ್ ಶಾ ಆಗಮನದ ಹಿನ್ನಲೆಯಲ್ಲಿ ಹನುಮಗಿರಿಯಲ್ಲಿ ಹ್ಯಾಲಿಪ್ಯಾಡ್‌ನ್ನು ಹನುಮಗಿರಿ ಕ್ಷೇತ್ರದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ಕ್ಷೇತ್ರದ ಅರ್ಚಕರು ವೈದಿಕ ವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ sಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ,

ಹನುಮಗಿರಿ ಕ್ಷೇತ್ರಕ್ಕೆ ಅಮಿತ್‌ ಶಾ ಆಗಮನ ಹಿನ್ನಲೆ : ಹ್ಯಾಲಿಪ್ಯಾಡ್ ಉದ್ಘಾಟನೆ Read More »

ಪ್ರೇರಣಾ ಸಂಸ್ಥೆಯಲ್ಲಿ PDO, FDA, SDA  ಪರೀಕ್ಷೆಗೆ ತರಬೇತಿ ಕಾರ್ಯಾಗಾರ | ಫೆ.9 ರಿಂದ ಫೆ.21 ರ ತನಕ ನೋಂದಾವಣೆ

ಪುತ್ತೂರು : ನಗರದ ಅರುಣಾ ಥಿಯೇಟರ್ ಎದುರಿನ, ಕೆನರಾ ಬ್ಯಾಂಕ್ ಸಮೀಪ ಇರುವ ಪ್ರಭು ಬಿಲ್ಡಿಂಗನಲ್ಲಿ ಕಾರ್ಯಾಚರಿಸುತ್ತಿರುವ ಪ್ರೇರಣಾ ಕೋಚಿಂಗ್ ಸೆಂಟರ್‌ನಲ್ಲಿ PDO, FDA, SDA  ಪರೀಕ್ಷೆಗೆ ತರಬೇತಿ ಕಾರ್ಯಾಗಾರ ನಡೆಯಲಿದ್ದು,  ಫೆ.9 ರಿಂದ ಫೆ.21 ರ ತನಕ ನೋಂದಾವಣೆ ನಡೆಯಲಿದೆ. ಸರಕಾರಿ ಹುದ್ದೆಗಳಿಗೆ ಕೆಎಎಸ್ ಮತ್ತು ಐಎಎಸ್ ಪೂರ್ವಭಾವಿ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದು, ಮೊದಲು ಬಂದ 20 ಮಂದಿಗೆ ಮಾತ್ರ ಅವಕಾಶವಿದೆ. ಆಸಕ್ತರು ಹೆಸರು ನೋಂದಾಯಿಸಲು ಪ್ರೇರಣಾ ಸಂಸ್ಥೆಯನ್ನು ಮುಖತಃ ಅಥವಾ

ಪ್ರೇರಣಾ ಸಂಸ್ಥೆಯಲ್ಲಿ PDO, FDA, SDA  ಪರೀಕ್ಷೆಗೆ ತರಬೇತಿ ಕಾರ್ಯಾಗಾರ | ಫೆ.9 ರಿಂದ ಫೆ.21 ರ ತನಕ ನೋಂದಾವಣೆ Read More »

ಅಮಿತ್ ಶಾ ಆಗಮನ ಹಿನ್ನೆಲೆ: ಪ್ರಚಾರಾರ್ಥವಾಗಿ ಪುತ್ತೂರು ಪೇಟೆಯಲ್ಲಿ ಬಿಜೆಪಿ ಜಾಥಾ

ಪುತ್ತೂರು: ಮೊದಲ ಬಾರಿಗೆ ಪುತ್ತೂರಿಗೆ ಆಗಮಿಸುತ್ತಿರುವ ಕೇಂದ್ರದ ಗೃಹ ಸಚಿವ, ಸಹಕಾರ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಪುತ್ತೂರು ಪೇಟೆಯಲ್ಲಿ ಗುರುವಾರ ಜಾಥಾ ನಡೆಸಲಾಯಿತು. ಪುತ್ತೂರು ಬಿಜೆಪಿ ಘಟಕದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಜಾಥಾಕ್ಕೆ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಬಳಿಕ ದರ್ಬೆಯಿಂದ ಹೊರಟ ಜಾಥಾ, ಪುತ್ತೂರು ಪೇಟೆಯಾಗಿ ಸಾಗಿ ಬೊಳುವಾರಿನಲ್ಲಿ ಸಮಾಪನಗೊಂಡಿತು. ದಾರಿಯುದ್ಧಕ್ಕೂ ಆಸುಪಾಸಿನ ಅಂಗಡಿಗಳಿಗೆ, ಸಾರ್ವಜನಿಕರಿಗೆ ಆಮಂತ್ರಣ ಪತ್ರ ನೀಡಲಾಯಿತು. ಜಾಥಾದ ಮುಂಭಾಗದಿಂದ ಕಾರ್ಯಕ್ರಮದ ವಿವರಣೆಯನ್ನು

ಅಮಿತ್ ಶಾ ಆಗಮನ ಹಿನ್ನೆಲೆ: ಪ್ರಚಾರಾರ್ಥವಾಗಿ ಪುತ್ತೂರು ಪೇಟೆಯಲ್ಲಿ ಬಿಜೆಪಿ ಜಾಥಾ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ನಿರಂತರ ನಡೆಯುವ ಕಾರ್ಯಕ್ರಮದ ನೂತನ ಕ್ಯಾಲೆಂಡರ್ ಬಿಡುಗಡೆ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮಗಳ ವಿವರವನ್ನೊಳಗೊಂಡ 2023ನೇ ಸಾಲಿನ ನೂತನ ಕ್ಯಾಲೆಂಡರ್‍ನ್ನು ಗುರುವಾರ ಶಾಸಕ ಸಂಜೀವ ಮಠಂದೂರು ಬಿಡುಗಡೆ ಮಾಡಿದರು. ದೇವಸ್ಥಾನದ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಕ್ಯಾಲೆಂಡರ್‍ ಬಿಡುಗಡೆ ಮಾಡಲಾಯಿತು. ನೂತನ ಕ್ಯಾಲೆಂಡರನ್ನು ಭಕ್ತರಿಗೆ ಉಚಿತವಾಗಿ ನೀಡಲಾಗುವುದು. ಜತೆಗೆ ಯುಗಾದಿ ಸಂದರ್ಭದಲ್ಲಿ ಭಾರತೀಯ ದಿನದರ್ಶಿಕೆಯ ಕ್ಯಾಲೆಂಡರ್‍ ಲೋಕಾರ್ಪಣೆ ಮಾಡಲಾಗುವುದು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್‍ ಮುಳಿಯ ಈ ಸಂದರ್ಭ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ನಿರಂತರ ನಡೆಯುವ ಕಾರ್ಯಕ್ರಮದ ನೂತನ ಕ್ಯಾಲೆಂಡರ್ ಬಿಡುಗಡೆ Read More »

ಕ್ಯಾಂಪ್ಕೋ ಸುವರ್ಣ ಮಹೋತ್ಸವ : ಸಾರ್ವಜನಿಕರ ಅನುಕೂಲಕ್ಕೆ ಹೆಚ್ಚಿನ ಬಸ್‍ ನಿಯೋಜನೆ

ಪುತ್ತೂರು : ಫೆ.11 ರಂದು ನಡೆಯುವ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್‍ ಶಾ ಹಾಗೂ ಮುಖ್ಯಮಂತ್ರಿ ಬಸವರಾಜ್‍ ಬೊಮ್ಮಾಯಿ , ಸಚಿವರುಗಳು ಆಗಮಿಸುವ ಹಿನ್ನಲೆಯಲ್ಲಿ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಕೆಎಸ್‍ಆರ್‍ಟಿಸಿ ಪುತ್ತೂರು ವಿಭಾಗದಿಂದ ಹೆಚ್ಚುವರಿ ಬಸ್‍ ನಿಯೋಜನೆ ಮಾಡಲಾಗುತ್ತಿದೆ. ಈ ಕುರಿತು ಕಾರ್ಯಕ್ರಮ ಸಂಯೋಜಕರಿಂದ ಪುತ್ತೂರು ಕೆಎಸ್‍ಆರ್‍ಟಿಸಿ ವಿಭಾಗಕ್ಕೆ ಮನವಿ ಬಂದ ಹಿನ್ನಲೆಯಲ್ಲಿ ಹೆಚ್ಚುವರಿ ಬಸ್‍ ನಿಯೋಜನೆ ಮಾಡಲಾಗುವುದು. ಆದ್ದರಿಂದ ಪುತ್ತೂರು, ಸುಳ್ಯ, ಬೆಳ್ತಂಗಡಿ. ಬಂಟ್ವಾಳ. ಕಡಬ ಹಾಗೂ ಮಡಿಕೇರಿ

ಕ್ಯಾಂಪ್ಕೋ ಸುವರ್ಣ ಮಹೋತ್ಸವ : ಸಾರ್ವಜನಿಕರ ಅನುಕೂಲಕ್ಕೆ ಹೆಚ್ಚಿನ ಬಸ್‍ ನಿಯೋಜನೆ Read More »

ಮುಂಡೂರು ಶಾಲೆಯಲ್ಲಿ ನೀರಿನ ಘಟಕ, ಸ್ಮಾರ್ಟ್‍ ಕ್ಲಾಸ್‍ ಉದ್ಘಾಟನೆ

ಪುತ್ತೂರು : ಮುಂಡೂರು ಉನ್ನತಿ ಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಸಮಾರಂಭ ಗುರುವಾರ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಕ್ಕಳು ಮನೆಯಿಂದ ಪ್ಲಾಸ್ಟಿಕ್‍ ಬಾಟಲಿಗಳಲ್ಲಿ ನೀರು ತರಬಾರದು ಎಂಬ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಲೆಗಳಿಗೆ ಒದಗಿಸಲಾಗುತ್ತಿದೆ. ಇದರ ಸದುಪಯೋಗ ಮಾಡಿಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ವಿಜಯ ಪಿ, ಎಎಸ್‍ಡಿಎಂ ಸಿ ಅಧ್ಯಕ್ಷ ರಮೇಶ್ ಪಜಿಮಣ್ಣು, ಗ್ರಾ.ಪಂ. ಸದಸ್ಯ

ಮುಂಡೂರು ಶಾಲೆಯಲ್ಲಿ ನೀರಿನ ಘಟಕ, ಸ್ಮಾರ್ಟ್‍ ಕ್ಲಾಸ್‍ ಉದ್ಘಾಟನೆ Read More »

ಡಿಜಿಟಲ್‍ ಶಿಕ್ಷಣಕ್ಕೆ ಪೂರಕವಾಗಿ ಶೈಕ್ಚಣಿಕ, ವೈಜ್ಞಾನಿಕ ವ್ಯವಸ್ಥೆ ಆಗಬೇಕು : ಶಾಸಕ ಸಂಜೀವ ಮಠಂದೂರು | ಸುದಾನ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಕರ ಸಭೆ

ಪುತ್ತೂರು : ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ  ಫೆ 9 ಗುರುವಾರ ಮಂಜಲ್ಪಡ್ಪು ಸುಧಾನ ಪ್ರೌಢ ಶಾಲಾ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಪ್ರೌಢ ಶಾಲೆಗಳಲ್ಲಿ ಯಾವುದೇ ಕೊರತೆ ಆಗದಂತೆ ಸರಕಾರ ಯೋಜನೆಯನ್ನು ಹಾಕಿಕೊಳ್ಳುವ ಮೂಲಕ ಸರಕಾರಿ ಶಾಲೆಗಳನ್ನು ಬೆಳೆಸುವ, ಉಳಿಸುವ ಕೆಲಸ ಆಗಿದೆ. ರಾಷ್ಟ್ರಿಯ ಶಿಕ್ಷಣ ನೀತಿಯಿಂದ ಇಂದಿನ ನಮ್ಮ ಶಿಕ್ಷಣ  ಡಿಜಿಟಲ್ ಶಿಕ್ಷಣಕ್ಕೆ ಪೂರಕವಾಗಿ ಶೈಕ್ಷಣಿಕ, ವೈಜ್ಞಾನಿಕ ವ್ಯವಸ್ಥೆ ಮುಂದಿನ ದಿನಗಳಲ್ಲಿ ಆಗಬೇಕು. ಈ

ಡಿಜಿಟಲ್‍ ಶಿಕ್ಷಣಕ್ಕೆ ಪೂರಕವಾಗಿ ಶೈಕ್ಚಣಿಕ, ವೈಜ್ಞಾನಿಕ ವ್ಯವಸ್ಥೆ ಆಗಬೇಕು : ಶಾಸಕ ಸಂಜೀವ ಮಠಂದೂರು | ಸುದಾನ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಕರ ಸಭೆ Read More »

ಕೇಂದ್ರ ಗೃಹ ಸಚಿವ ಅಮಿತ್‍ಶಾ ಆಗಮನ ಹಿನ್ನಲೆ : ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ

ಪುತ್ತೂರು : ಅಮಿತ್‍ ಶಾ ಫೆ.11 ರಂದು ಪುತ್ತೂರಿಗೆ ಆಗಮಿಸುವ ಹಿನ್ನಲೆಯಲ್ಲಿ ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಗುರುವಾರ ಪ್ರಾರ್ಥ‍ನೆ ಸಲ್ಲಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್‍.ಭಟ್‍ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ,, ನಗರಸಭೆ ಅಧ್ಯಕ್ಷ ಜೀವಂಧರ್‍ ಜೈನ್‍, ಬಿಜೆಪಿ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಸಾಜ ರಾಧಾಕೃಷ್ಣ ಆಳ್ವ,, ರಾಧಾಕೃಷ್ಣ ಬೋರ್ಕರ್‍, ರಾಜೇಶ್‍

ಕೇಂದ್ರ ಗೃಹ ಸಚಿವ ಅಮಿತ್‍ಶಾ ಆಗಮನ ಹಿನ್ನಲೆ : ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ Read More »

ಕೃಷಿಕರಾದ ತುಳುವರ ಪ್ರಮುಖ ಹಬ್ಬ ಕೆಡ್ಡಸ | ಏನಿದು ಕೆಡ್ಡಸ ; ಆಚರಣೆ ಹೇಗೆ | ಇಲ್ಲಿದೆ ಕಂಪ್ಲೀಟ್ ಸ್ಟೋರಿ

ಪುತ್ತೂರು : ಮೂಲತಃ ಕೃಷಿರಾದ ತುಳುವರ ಹಬ್ಬಗಳು ಕೃಷಿ ಆಧಾರಿತ ಹಿನ್ನಲೆಯಲ್ಲಿ ಆಚರಿಸಲಾಗುತ್ತಿದ್ದು, ಈ ಪೈಕಿ ಕೆಡ್ಡಸ ತುಳುವರ ಪೊನ್ನಿ ಅಥವಾ ಪುಯಿಂತೆಲ್ (ಫೆಬ್ರವರಿ) ತಿಂಗಳಿನ  27 ರಿಂದ ಕುಂಭ ಸಂಕ್ರಮಣದ ವರೆಗೆ ಅಂದರೆ ಮೂರು ದಿನ ಕೆಡ್ಡಸ ಆಚರಿಸಲ್ಪಡುತ್ತದೆ. ಶುರು ಕೆಡ್ಡಸ, ನಡುಕೆಡ್ಡಸ ಹಾಗೂ ಕಡೆಕೆಡ್ಡಸ ಎಂದು ಆಚರಣೆಗೊಳ್ಳುತ್ತದೆ. ಏನಿದು ಕೆಡ್ಡಸ : ನಮ್ಮ ಪೂರ್ವಿಕರು ಭೂಮಿಯನ್ನು ಹೆಣ್ಣೆಂದು ಪರಿಗಣಿಸಿ ಆರಾಧಿಸಿಕೊಂಡು ಬಂದಿದ್ದು, ಹೆಣ್ಣಾದ ಭೂಮಿತಾಯಿಯು ವರ್ಷಕ್ಕೆ ಮೂರುದಿನ ರಜಸ್ವಲೆಯಾಗುತ್ತಾಳೆ (ಋತುಮತಿ) ಎಂದು ನಂಬಿಕೆಯಿದೆ. ಈ

ಕೃಷಿಕರಾದ ತುಳುವರ ಪ್ರಮುಖ ಹಬ್ಬ ಕೆಡ್ಡಸ | ಏನಿದು ಕೆಡ್ಡಸ ; ಆಚರಣೆ ಹೇಗೆ | ಇಲ್ಲಿದೆ ಕಂಪ್ಲೀಟ್ ಸ್ಟೋರಿ Read More »

error: Content is protected !!
Scroll to Top