ಸ್ಥಳೀಯ ಸುದ್ದಿ

ಮಹಾಭಾರತ ಸರಣಿಯ 114ನೇ ತಾಳಮದ್ದಳೆ ವಿಷಮ ದಾಂಪತ್ಯ

ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ರಿ. ಉಪ್ಪಿನಂಗಡಿ ನಡೆಸುತ್ತಿರುವ ಶ್ರೀ ಮಹಾಭಾರತ ಸರಣಿಯ 114ನೇ ಕಾರ್ಯಕ್ರಮದಲ್ಲಿ ಡಾ. ಶೇಣಿ ಗೋಪಾಲಕೃಷ್ಣ ಭಟ್ ರಚಿತ ವಿಷಮ ದಾಂಪತ್ಯ ತಾಳಮದ್ದಳೆ ಜರಗಿತು. ಭಾಗವತರಾಗಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಸುರೇಶ್ ರಾವ್ .ಬಿ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ ಅರ್ಥಧಾರಿಗಳಾಗಿ ಭಾಸ್ಕರ ಬಾರ್ಯ (ಉದ್ದಾಲಕ 1) ಶ್ರೀಧರ ಎಸ್. ಪಿ ಕೃಷ್ಣಾಪುರ (ಉದ್ದಾಲಕ 2) ದಿವಾಕರ ಆಚಾರ್ಯ ಗೇರುಕಟ್ಟೆ( ಚಂಡಿ 1) ಮಹಾಲಿಂಗೇಶ್ವರ ಭಟ್ ಪೆರಿಯಡ್ಕ (ಚಂಡಿ 2) ಬಿ. ಸುಬ್ರಹ್ಮಣ್ಯ […]

ಮಹಾಭಾರತ ಸರಣಿಯ 114ನೇ ತಾಳಮದ್ದಳೆ ವಿಷಮ ದಾಂಪತ್ಯ Read More »

ಹಿರಿಯರ ಸೇವಾ ಪ್ರತಿಷ್ಠಾನದಿಂದ ಸ್ವಾರ್ಥ ರಹಿತ ಸೇವೆ: ಬಿ ವಿಠಲ ರೈ

ಹಿರಿಯರ ಸೇವಾ ಪ್ರತಿಷ್ಠಾನದ ಮೂಲಕ ನಡೆಸುತ್ತಿರುವ ಸೇವಾ ಕಾರ್ಯಗಳು ವಿಶೇಷ ಮೌಲ್ಯವನ್ನು ಹೊಂದಿದೆ. ಸ್ವಾರ್ಥ ರಹಿತವಾದ ಈ ಸೇವಾ ಕಾರ್ಯಗಳನ್ನು ಎಲ್ಲರೂ ಬೆಂಬಲಿಸಬೇಕೆಂದು ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬಿ .ವಿಠಲ ರೈ ತಿಳಿಸಿದರು. ಬೆಂದ್ರುತೀರ್ಥ ಕ್ಷೇತ್ರದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ.ರಿ ಮೆಲ್ಕಾರ್ ಇದರ ಕೇಂದ್ರೀಯ ಸಮಿತಿಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಶಿವಾಜಿ ಯುವ ಸೇನೆ ರಿ. ಗೌರವಾಧ್ಯಕ್ಷರಾದ ಚಂದ್ರಹಾಸ ಮೂರೂರು ಬೆಂದ್ರುತೀರ್ಥದ ಇತಿಹಾಸದ ಬಗ್ಗೆ ಮಾಹಿತಿ ನೀಡಿ

ಹಿರಿಯರ ಸೇವಾ ಪ್ರತಿಷ್ಠಾನದಿಂದ ಸ್ವಾರ್ಥ ರಹಿತ ಸೇವೆ: ಬಿ ವಿಠಲ ರೈ Read More »

ಮನೆಯೊಂದರಲ್ಲಿ ಹಿಂದೂಗಳ ಮತಾಂತರಕ್ಕೆ ಯತ್ನ: ದೂರು ದಾಖಲು

ಕಡಬ: ಹಿಂದೂ ಮಹಿಳೆಯರು, ಪುರುಷರು ಮತ್ತು ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿ ಮತಾಂತರದ ‌ಪ್ರಯತ್ನ ನಡೆಸಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ನೀಡಿದ ಮಾಹಿತಿಯ ಅನ್ವಯ ಐತ್ತೂರಿನ ಮನೆಯೊಂದರ ಮೇಲೆ ಕಡಬ ಪೊಲೀಸರು ದಾಳಿ ನಡೆಸಿದ್ದಾರೆ. ಐತ್ತೂರಿನ ಜೋಸೆಫ್ ಎಂಬಾತನ ಮನೆಯಲ್ಲಿ ಬೆಂಗಳೂರು ಮೂಲದ ಸುಮಾರು 15 ಕ್ಕೂ ಅಧಿಕ ಜನ‌ ಮಹಿಳೆಯರು, ಪುರುಷರು ಮತ್ತು ಮಕ್ಕಳು ತಂದಿರುವ ಸಂಗತಿ ಪೊಲೀಸ್ ದಾಳಿಯ ವೇಳೆ ಬಯಲಾಗಿದೆ. ಜೋಸೆಫ್ ಮನೆಯಲ್ಲಿ ಮತಾಂತರ ಮತ್ತು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಹಿಂದೂ

ಮನೆಯೊಂದರಲ್ಲಿ ಹಿಂದೂಗಳ ಮತಾಂತರಕ್ಕೆ ಯತ್ನ: ದೂರು ದಾಖಲು Read More »

ಗೇರುಕಟ್ಟೆಯಲ್ಲಿ ಎರಡು ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

ಗೇರುಕಟ್ಟೆ: ಕೀರ್ತಿಶೇಷ ಆರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನದ ಸಹಯೋಗದಿಂದಎಂ. ವಿ. ಪ್ರತಿಷ್ಠಾನ ಗೇರುಕಟ್ಟೆ ಆಯೋಜಿಸಿದ ಭಾರವಿ ಬೇಸಿಗೆ ಶಿಬಿರದ ಸಮಾರೋಪವು ಸಂಚಾಲಕ ದಿವಾಕರ ಆಚಾರ್ಯ ಗೇರುಕಟ್ಟೆ ಅಧ್ಯಕ್ಷತೆಯಲ್ಲಿ ಜರಗಿತು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಸುಮಾರು 37 ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ಎ. 30 ರಂದು ನಿವೃತ್ತರಾದ ಗುಣರತ್ನ ಆಚಾರ್ಯ ಕಾವೂರು ಇವರನ್ನು ಗೌರವಿಸಲಾಯಿತು. ಮುಖ್ಯಅತಿಥಿ ಯೋಗಪಟು ಸತೀಶ್ ಭಂಡಾರಿ ಶಿಬಿರದಲ್ಲಿ ನಡೆಸಲಾದ ವಿವಿಧ ಚಟುವಟಿಕೆ ವಿಭಿನ್ನವಾಗಿದ್ದು ಉಪಯುಕ್ತವಾಗಿದೆ

ಗೇರುಕಟ್ಟೆಯಲ್ಲಿ ಎರಡು ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ Read More »

ಅಕ್ರಮವಾಗಿ 4 ಜಾನುವಾರುಗಳ ಸಾಗಾಟ: ಇಬ್ಬರು ಆರೋಪಿಗಳ ಬಂಧನ

ಹಿರಿಯಡ್ಕ: ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ‌ ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಪಕ್ಕಾಲು ಹೆಬ್ಬಾರು ಸೇತುವೆ ಬಳಿಯಲ್ಲಿ ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕುರ್ಕಾಲುವಿನ ‌ಸುಹಾಸ್(21) ಮತ್ತು ಕಾಪು ಭರತ್ ನಗರದ ಲವ ಶೆಟ್ಟಿ(64) ಎಂದು ಗುರುತಿಸಲಾಗಿದೆ. ಆರೋಪಿಗಳು ಜಾನುವಾರುಗಳನ್ನು ಮಾಂಸ ಮಾಡುವ ಉದ್ದೇಶದಿಂದ ಕಸಾಯಿಖಾನೆಗೆ ಸಾಗಿಸುತ್ತಿದ್ದರು. ಪೆರ್ಡೂರು ಕಡೆಯಿಂದ ಹಿರಿಯಡ್ಕದತ್ತ ನಾಲ್ಕು ದನಗಳನ್ನು ಪಾಪಿಗಳು ಬೊಲೆರೋ ಗೂಡ್ಸ್ ‌ಟೆಂಪೋದಲ್ಲಿ ಸಾಗಾಟ ಮಾಡುತ್ತಿದ್ದರು. ಈ ವಾಹನ ಪಕ್ಕಾಲು ‌ಹೆಬ್ಬಾರು ಸೇತುವೆ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಆರೋಪಿಗಳಿಬ್ಬರನ್ನು

ಅಕ್ರಮವಾಗಿ 4 ಜಾನುವಾರುಗಳ ಸಾಗಾಟ: ಇಬ್ಬರು ಆರೋಪಿಗಳ ಬಂಧನ Read More »

ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆ: ಅಶ್ರಫ್‌ನಿಗೆ ಧರ್ಮದೇಟು ‌ನೀಡಿದ ಎರಡನೇ ಪತ್ನಿಯ ತಾಯಿ

ಪುತ್ತೂರು: ಮೊದಲು ಮದುವೆಯಾಗಿರುವ ‌ಸಂಗತಿಯನ್ನು ರಹಸ್ಯವಾಗಿಟ್ಟು, ಎರಡನೇ ಮದುವೆ ಮಾಡಿಕೊಂಡ ವ್ಯಕ್ತಿಗೆ ಆತನ ಎರಡನೇ ಪತ್ನಿಯ ಕಡೆಯವರು ಮನೆಯೊಂದರಲ್ಲಿ ಕೂಡಿ ಹಾಕಿ, ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಕೆಮ್ಮಿಂಜೆಯ ಬೆಳ್ಳಗುಡ್ಡೆ ನಿವಾಸಿ ಮಹಮ್ಮದ್ ಅಶ್ರಫ್ (35) ಎಂದು ಗುರುತಿಸಲಾಗಿದೆ. ಆರೋಪಿ ಅಶ್ರಫ್‌ಗೆ ಖತೀಜಮ್ಮ ಜೊತೆಗೆ ಮೊದಲೇ ಮದುವೆ ನಡೆದಿದ್ದರೂ, ಅದನ್ನು ರಹಸ್ಯವಾಗಿಟ್ಟು ಮೂಡಬಿದ್ರೆಯ ಐಸಮ್ಮ ಎಂಬವರ ಪುತ್ರಿ ರುಬಿಯಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದ. ಈ ವಿಚಾರ ತಿಳಿದ ಖತೀಜಮ್ಮ ಅಶ್ರಫ್ ವಿರುದ್ಧ ಪುತ್ತೂರು ಮಹಿಳಾ ಪೊಲೀಸರಿಗೆ ದೂರು

ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆ: ಅಶ್ರಫ್‌ನಿಗೆ ಧರ್ಮದೇಟು ‌ನೀಡಿದ ಎರಡನೇ ಪತ್ನಿಯ ತಾಯಿ Read More »

ನ್ಯಾಯವಾದಿ ನಿಶಾಂತ್ ಮುಂದಾಳತ್ವದಲ್ಲಿ ನೂತನ ಸಂಸ್ಥೆ ಉದ್ಘಾಟನೆ

ಪುತ್ತೂರು: ನ್ಯಾಯವಾದಿ ನಿಶಾಂತ್ ಅವರ ಮುಂದಾಳತ್ವದಲ್ಲಿ ಆರಂಭಗೊಂಡ ನೂತನ ಸಂಸ್ಥೆಯ ಉದ್ಘಾಟನಾ ಸಮಾರಂಭವು ಭಾನುವಾರ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ನಿಶಾಂತ್ ಅವರ ತಂದೆ ಭಾಸ್ಕರ ಪೂಜಾರಿ ಹಾಗೂ ತಾಯಿ ವನಿತಾ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಹಾಗೂ ಪುತ್ತೂರು ಯೋಗ ಕೇಂದ್ರದ ಅಧ್ಯಕ್ಷ ಗಿರೀಶ ಮಳಿ, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಕುಮಾರ್ ಸೊರಕೆ, ಪುತ್ತೂರು ವಕೀಲರ ಸಂಘದ

ನ್ಯಾಯವಾದಿ ನಿಶಾಂತ್ ಮುಂದಾಳತ್ವದಲ್ಲಿ ನೂತನ ಸಂಸ್ಥೆ ಉದ್ಘಾಟನೆ Read More »

ಅಶಕ್ತ ವೃದ್ಧೆಗೆ ಸೂಕ್ತ ಚಿಕಿತ್ಸೆ ನೀಡಿ, ಪುನರ್ವಸತಿ ಕಲ್ಪಿಸಿದ ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯರು

ಪುತ್ತೂರು: ಒಳ ರೋಗಿಯಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊಡಿಂಬಾಡಿಯ ದಾರಂದಕುಕ್ಕು ನಿವಾಸಿ ಲಕ್ಷ್ಮೀ (80) ಎಂಬ ವೃದ್ಧೆಗೆ ಪುನರ್ವಸತಿ ಕಲ್ಪಿಸಿ‌ ಮಾನವೀಯತೆ ಮೆರೆದ ಹೃದಯಸ್ಪರ್ಶಿ ಘಟನೆ ನಡೆದಿದೆ. ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಸಾಯುವ ಸ್ಥಿತಿಗೆ ತಲುಪಿದ್ದ ಲಕ್ಷ್ಮೀ ಅಮ್ಮನಿಗೆ ಸರ್ಕಾರಿ ಆಸ್ಪತ್ರೆಯ ಡಾ. ಯದುರಾಜ್ ‌ಡಿ. ಕೆ. ಅವರ ತಂಡ ಸೂಕ್ತ ಚಿಕಿತ್ಸೆ ನೀಡಿದ್ದು, ಇದರಿಂದ ಆ ತಾಯಿ ಚೇತರಿಸಿಕೊಂಡು ನಡೆದಾಡುವ ಸ್ಥಿತಿಗೆ ಬಂದಿದ್ದಾರೆ. ಆ ಬಳಿಕ ಲಕ್ಷ್ಮೀ ಅಮ್ಮನನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳ ಮನವಿಯ ಮೇರೆಗೆ ಮಹಿಳಾ

ಅಶಕ್ತ ವೃದ್ಧೆಗೆ ಸೂಕ್ತ ಚಿಕಿತ್ಸೆ ನೀಡಿ, ಪುನರ್ವಸತಿ ಕಲ್ಪಿಸಿದ ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯರು Read More »

ಜಿಡೆಕಲ್ಲಿನಲ್ಲಿ ಕಾಲೇಜು ವಾರ್ಷಿಕೋತ್ಸವ

ಜಿಡೆಕಲ್ಲು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಆಕರ್ಷಕವಾಗಿ ನಡೆಯಿತು. ಕಾಲೇಜು ಅಭಿವೃದ್ಧಿಗೆ ಕೈ ಜೋಡಿಸೋಣ, ಪ್ರಾಂಶುಪಾಲರ ಪ್ರಯತ್ನ ಸ್ತುತ್ಯರ್ಹ – ಶಾಸಕ ಅಶೋಕ್ ಕುಮಾರ್ ರೈ ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಜೀವನದಲ್ಲಿ ಯೋಗ್ಯವಾದ ಶಿಕ್ಷಣದ ಆಯ್ಕೆ ಮಾಡಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳು ಸಾಧನೆ ಮಾಡುವ ಮೂಲಕ ಸಂ‌ಸ್ಥೆಗೆ ಫಲ ನೀಡಬೇಕು ಎಂದರು. ವಿಧೇಯತೆ ಮತ್ತು ಯೋಜನಾಬದ್ಧ ಕಾರ್ಯ ನಿರ್ವಹಣೆಗಳನ್ನು ಪ್ರಾಯೋಗಿಕವಾಗಿ ಕಲಿತು ಜೀವನ ನಿರ್ವಹಣೆ ಮಾಡುವ ಕನಸು

ಜಿಡೆಕಲ್ಲಿನಲ್ಲಿ ಕಾಲೇಜು ವಾರ್ಷಿಕೋತ್ಸವ Read More »

ನಳ್ಳಿ ನೀರಿನ ವಿಚಾರಕ್ಕೆ ನಿಂದನೆ, ಹಲ್ಲೆ: ದೂರು ದಾಖಲು

ಪುತ್ತೂರು: ನಳ್ಳಿ ‌ನೀರಿನ ಸರಬರಾಜು ವಿಷಯಕ್ಕೆ ಸಂಬಂಧಿಸಿದ ಹಾಗೆ ಹಲ್ಲೆ ನಡೆದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಶಾಂತಿಗೋಡು ಗ್ರಾಮದ ಉಮೇಶ್ ಖಂಡಿಗ ಅವರು ದೂರು ನೀಡಿರುವುದಾಗಿದೆ. ಉಮೇಶ್ ಅವರು ನರಿಮೊಗರು ಪಂಚಾಯತ್‌ನಿಂದ ನಳ್ಳಿ ‌ನೀರಿನ ಸೌಲಭ್ಯ ಪಡೆದಿದ್ದು, ಅವರ ಮನೆಗೆ ನೀರು ಸರಬರಾಜು ಸ್ಥಗಿತವಾಗಿತ್ತು‌. ಈ ಬಗ್ಗೆ ನೀರು ಬಿಡುವ ಕೆಲಸ ಮಾಡುತ್ತಿದ್ದ ಶೇಖರ್ ಎಂಬವರಿಗೆ ಕರೆ ಮಾಡಿ ನೀರು ಬಿಡುವಂತೆ ಹೇಳಿದ್ದರು. ಆದರೆ ಶೇಖರ್ ಮತ್ತು

ನಳ್ಳಿ ನೀರಿನ ವಿಚಾರಕ್ಕೆ ನಿಂದನೆ, ಹಲ್ಲೆ: ದೂರು ದಾಖಲು Read More »

error: Content is protected !!
Scroll to Top