ಸುದ್ದಿ

ಗ್ರಾಮಜನ್ಯ ಹೊಸ ಆಡಳಿತ ಕಚೇರಿ ಉದ್ಘಾಟನೆ, ನಿರಖು ಠೇವಣಿ ಸೌಲಭ್ಯಕ್ಕೆ ಚಾಲನೆ

ಪುತ್ತೂರು: ಗ್ರಾಮಜನ್ಯ ತನ್ನ ಹೊಸ ಆಡಳಿತ ಕಚೇರಿ ಗುರುವಾರ ಪುತ್ತೂರಿನ ರಾಧಾಕೃಷ್ಣ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಂಡಿತು. ಪ್ರಮುಖ ಉದ್ಯಮಿ ಬಲರಾಮ ಆಚಾರ್ಯ ಉದ್ಘಾಟಿಸಿ ಮಾತನಾಡಿ, ನವೀನ ವ್ಯವಹಾರ ಮಾದರಿಗಳ ಮೂಲಕ ಕೃಷಿಯನ್ನು ಆಧುನೀಕರಿಸುವ ಅಗತ್ಯವನ್ನು ಒತ್ತಿ ಹೇಳಿದರು. ಭಾರತದ 45% ರಷ್ಟು ಉದ್ಯೋಗಿಗಳು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರೂ, ಈ ವಲಯವು ಜಿಡಿಪಿಗೆ ಕೇವಲ 17% ಕೊಡುಗೆ ನೀಡುತ್ತದೆ, ಇದು ಕಡಿಮೆ ಉತ್ಪಾದಕತೆ ಮತ್ತು ಆದಾಯದ ಮಟ್ಟವನ್ನು ಪ್ರತಿಬಿಂಬಿಸುತ್ತದೆ. ಕೃಷಿ ವ್ಯವಹಾರದಲ್ಲಿ ವಾಣಿಜ್ಯ ಮಾದರಿಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದ […]

ಗ್ರಾಮಜನ್ಯ ಹೊಸ ಆಡಳಿತ ಕಚೇರಿ ಉದ್ಘಾಟನೆ, ನಿರಖು ಠೇವಣಿ ಸೌಲಭ್ಯಕ್ಕೆ ಚಾಲನೆ Read More »

ಇಂದು ಪುತ್ತೂರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ

ಪುತ್ತೂರು : ಇಂದು ಪುತ್ತೂರು ಮತ್ತು ಮಂಗಳೂರಿಗೆ ಖಾಸಗಿ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ನೀಡಲಿದ್ದಾರೆ. ಸಂಜೆ 6.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ  ರಸ್ತೆ ಮಾರ್ಗವಾಗಿ ಪುತ್ತೂರಿಗೆ 8 ಗಂಟೆಗೆ ತಲುಪಲಿದ್ದಾರೆ. ಪುತ್ತೂರಿನಲ್ಲಿ ಸುಪ್ರೀಂ ಕೋರ್ಟಿನ ಅಡಿಷನಲ್ ಸೋಲಿಸಿಟರ್ ಜಿನರಲ್ ಈಶ್ವರಮಂಗಲದ ಹನುಮಗಿರಿಯ ಕೆ.ಎಂ.ನಟರಾಜ್ ಅವರ ನೂತನ ಗೃಹ ಪ್ರವೇಶ ಇತ್ತಿಚೆಗೆ ನಡೆದಿದ್ದು, ಕೆ.ಎಂ.ನಟರಾಜ್ ಅವರ ಮನೆಗೆ ವಿಜಯೇಂದ್ರ ಭೇಟಿ ನೀಡಲಿದ್ದಾರೆ. ಅಲ್ಲಿಂದ 8.30 ಕ್ಕೆ ಹೊರಟು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್

ಇಂದು ಪುತ್ತೂರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ Read More »

ಹುತಾತ್ಮ ಯೋಧರ ಕುಟುಂಬಗಳಿಗೆ ಪರಿಹಾರ : ಸಿದ್ದರಾಮಯ್ಯ

ಬೆಳಗಾವಿಯಲ್ಲಿ ಇಬ್ಬರಿಗೆ ಅಂತಿಮ ನಮನ ಸಲ್ಲಿಸಿದ ಸಿಎಂ ಬೆಳಗಾವಿ: ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹುತಾತ್ಮರಾಗಿರುವ ಕರ್ನಾಟಕದ ಮೂವರು ಯೋಧರ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು ಸೇರಿ ಐವರು ಹುತಾತ್ಮರಾಗಿದ್ದಾರೆ. ಬೆಳಗಾವಿಯಲ್ಲಿ ಇಬ್ಬರು ಯೋದರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಿ ಸರ್ಕಾರದಿಂದ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.ಬೆಳಗಾವಿಯ ಸೇನಾ ಯುದ್ಧ ಸ್ಮಾರಕದಲ್ಲಿ ಸುಬೇದಾರ್ ದಯಾನಂದ ತಿರುಕಣ್ಣನವರ್,

ಹುತಾತ್ಮ ಯೋಧರ ಕುಟುಂಬಗಳಿಗೆ ಪರಿಹಾರ : ಸಿದ್ದರಾಮಯ್ಯ Read More »

ಸಿಲಿಂಡರ್ ಸ್ಪೋಟದಲ್ಲಿ ಚಿಕಿತ್ಸೆ ಫಲಿಸದೆ  ಇಬ್ಬರು ಮಾಲಾದಾರಿಗಳು ಮೃತ್ಯು

ಹುಬ್ಬಳ್ಳಿ: ಮಲಗಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡು 9 ಅಯ್ಯಪ್ಪ ಮಾಲಾಧಾರಿಗಳಿಗೆ ತೀವ್ರ ಗಾಯಗಳಾಗಿದ್ದ ಘಟನೆಗೆ ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಮೃತಪಟ್ಟ ಅಯ್ಯಪ್ಪ ಮಾಲಾಧಾರಿಗಳನ್ನು ನಿಜಲಿಂಗಪ್ಪ ಮಲ್ಲಪ್ಪ ಬೇಪೂರು (58), ಸಂಜಯ್ ಪ್ರಕಾಶ್ ಸವದತ್ತಿ (17) ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯ ಅಚ್ಚವನ ಕಾಲೋನಿಯ ಈಶ್ವರ ದೇವಾಲಯದಲ್ಲಿ ಮೂರು ದಿನಗಳ ಹಿಂದೆ ಸಿಲಿಂಡರ್‌ನಿಂದ ಗ್ಯಾಸ್‌ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿದ್ದು. ಘಟನೆಯಲ್ಲಿ ಒಂಬತ್ತು ಜನ ಮಾಲಾಧಾರಿಗಳಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಕಳೆದ ಮೂರು ದಿನಗಳಿಂದ ಹುಬ್ಬಳ್ಳಿ ಕಿಮ್ಸ್

ಸಿಲಿಂಡರ್ ಸ್ಪೋಟದಲ್ಲಿ ಚಿಕಿತ್ಸೆ ಫಲಿಸದೆ  ಇಬ್ಬರು ಮಾಲಾದಾರಿಗಳು ಮೃತ್ಯು Read More »

ಬಿಜೆಪಿಗೆ ಅತ್ಯಧಿಕ 2,244 ಕೋ. ರೂ. ದೇಣಿಗೆ

ಕಾಂಗ್ರೆಸ್‌ಗೆ ಸಿಕ್ಕಿದ್ದು 289 ಕೋ. ರೂ. ಮಾತ್ರ ಹೊಸದಿಲ್ಲಿ : 2023-24ನೇ ಹಣಕಾಸು ವರ್ಷದಲ್ಲಿ ಬಿಜೆಪಿಗೆ ಬರೋಬ್ಬರಿ 2,244 ಕೋಟಿ ರೂ. ದೇಣಿಗೆ ಹರಿದುಬಂದಿದೆ. ಇದೇ ವೇಳೆ ಕಂಗ್ರೆಸ್‌ಗೆ ಸಿಕ್ಕಿರುವುದು 289 ಕೋ. ರೂ. ದೇಣಿಗೆ. ಬಿಜೆಪಿ ತನ್ನ ಘಟಕಗಳು, ವ್ಯಕ್ತಿಗಳು, ಟ್ರಸ್ಟ್ ಮತ್ತು ಕಾರ್ಪೊರೇಟ್ ಕಂಪನಿಗಳಿಂದ 20 ಸಾವಿರ ರೂ.ಗಿಂತ ಅಧಿಕ ಮೊತ್ತದ ಒಟ್ಟು 2,244 ಕೋಟಿ ರೂ. ದೇಣಿಗೆ ಪಡೆದುಕೊಂಡಿದೆ.ಭಾರತೀಯ ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪಕ್ಷಗಳು ನೀಡಿದ ಮಾಹಿತಿಯನ್ನು ಅಪ್ಲೋಡ್‌ ಮಾಡಿದೆ. 2022-23ರ

ಬಿಜೆಪಿಗೆ ಅತ್ಯಧಿಕ 2,244 ಕೋ. ರೂ. ದೇಣಿಗೆ Read More »

ಜೈನ ಧರ್ಮ ಅವಹೇಳನ : ನಾರಾವಿಯ ಮಹಿಳೆ ವಿರುದ್ಧ ಕೇಸ್‌

ಬಾಹುಬಲಿ ಫೋಟೊ ವಿಕೃತಗೊಳಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟ ಮಹಿಳೆ ನಾರಾವಿ : ಬಾಹುಬಲಿ ಮೂರ್ತಿಯ ಫೋಟೊ ವಿಕೃತಗೊಳಿಸಿ ಜೈನಧರ್ಮವನ್ನು ಅವಹೇಳನ ಮಾಡಿರುವ ನಾರಾವಿಯ ಮಹಿಳೆಯ ವಿರುದ್ಧ ವೇಣೂರು ಠಾಣೆಯಲ್ಲಿ ದೂರು ದಾಖಲಾಗಿದೆ. ನಾರಾವಿ ಗ್ರಾಮದ ವಿಜಯಾ ನಾರಾವಿ ಎಂಬಾಕೆ ಡಿ.20ರಂದು ತನ್ನ ಫೇಸ್‌ಬುಕ್‌ ಮತ್ತು ವಾಟ್ಸಪ್‌ನಲ್ಲಿ ಬಾಹುಬಲಿಯ ವಿಕೃತ ಚಿತ್ರಗಳನ್ನು ಹಂಚಿಕೊಂಡಿದ್ದಳು. ಭಗವಾನ್‌ ಬಾಹುಬಲಿ ಸ್ವಾಮಿಯ ಮೂರ್ತಿಯ ಭಾವಚಿತ್ರವನ್ನು ವಿರೂಪಗೊಳಿಸಿ, ಫೇಸ್‌ಬುಕ್‌ ಖಾತೆ ಹಾಗೂ ವಾಟ್ಸಪ್‌ ಮೂಲಕ ಹರಿಯಬಿಟ್ಟು ಜೈನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ

ಜೈನ ಧರ್ಮ ಅವಹೇಳನ : ನಾರಾವಿಯ ಮಹಿಳೆ ವಿರುದ್ಧ ಕೇಸ್‌ Read More »

ಆಟೋಗೆ ಗೋವನ್ನು ಕಟ್ಟಿ ಎಳೆದೊಯಿದ ಚಾಲಕ

ಪುತ್ತೂರು : ಆಟೋಗೆ ಗೋವನ್ನು ಕಟ್ಟಿ ಎಳೆದೊಯ್ಯುವ ಘಟನೆ ಕೃತ್ಯ  ಡಿ.26ರಂದು ಸವಣೂರಿನಲ್ಲಿ ನಡೆದಿದೆ. ಆಟೋಗೆ ಗೋವನ್ನು ಕಟ್ಟಿ ಎಳೆದೊಯ್ಯುದ ಚಾಲಕನ ದುಷ್ಟ ಬುದ್ದಿಯ ವಿಡಿಯೋ ವೈರಲ್ ಆಗಿದೆ. ಪುತ್ತೂರು ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರಿನಲ್ಲಿ KA21 B 4123 ನಂಬರಿನ ಆಟೋ ಎಂದು ತಿಳಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ, ರಾತ್ರಿ ಹೊತ್ತು ಈ ಘಟನೆ ನಡೆದಿದ್ದು ಕಾರಣ ಇನ್ನು ತಿಳಿದುಬಂದಿಲ್ಲ,

ಆಟೋಗೆ ಗೋವನ್ನು ಕಟ್ಟಿ ಎಳೆದೊಯಿದ ಚಾಲಕ Read More »

ಸಮುದಾಯ ಭವನ ಸಮಾಜದ ಸ್ವಾಭಿಮಾನ ಸಂಕೇತ : ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ | ಒಗ್ಗಟಿದ್ದರೆ ಸಮಾಜಮುಖಿ ಕೆಲಸಗಳಿಗೆ ಪ್ರೇರಣೆ ಸಿಗುತ್ತದೆ : ಯತೀಶ್‍ ಕುಮಾರ್ | ಒಕ್ಕಲಿಗ ಸಮಾಜವು ಮಾನವ ಕುಲಕ್ಕೆ ದಾರಿದೀಪವಾಗಿದೆ : ಪ್ರದೀಪ್‍ ಆರ್.ಗೌಡ | ಸಮುದಾಯ ಭವನ ಶ್ರೀಮಂತರ ಭವನ ಆಗದೆ ಸಮಾಜದ ಪ್ರತಿಯೊಬ್ಬರಿಗೂ ಉಪಯೋಗಕ್ಕೆ ಸಿಗಬೇಕು : ಸುರೇಶ್ ಬೈಲು | ಯಾವುದೇ ಫಲಾಪೇಕ್ಷೆ ಇಲ್ಲದೆ ಸಂಘದ ಮುನ್ನಡೆ : ಕೇಶವ ಅಮೈ | ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ನೂತನ ಸಮುದಾಯ ಭವನದಲ್ಲಿ ಸಂಘ ಆಡಳಿತ ಕಚೇರಿ ಉದ್ಘಾಟನೆ | ಕಡಬ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟ

ಕಡಬ: ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ವತಿಯಿಂದ ಕಡಬ ಹೊಸಮಠದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಸಮುದಾಯ ಭವನದಲ್ಲಿ ಸಂಘದ ಆಡಳಿತ ಕಚೇರಿಯ ಉದ್ಘಾಟನೆ ಹಾಗೂ ಕಡಬ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟ ಡಿ.25 ರಂದು ಕಡಬ ಹೊಸಮಠದಲ್ಲಿ ನಡೆಯಿತು. ಸಮುದಾಯ ಭವನ ಸಮಾಜದ ಸ್ವಾಭಿಮಾನ ಸಂಕೇತ : ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಆಡಳಿತ ಕಚೇರಿ ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದ ಶ್ರೀ ಆದಿಚುಂಚನಗಿರಿ ಮಂಗಳೂರು ಕಾವೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ,

ಸಮುದಾಯ ಭವನ ಸಮಾಜದ ಸ್ವಾಭಿಮಾನ ಸಂಕೇತ : ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ | ಒಗ್ಗಟಿದ್ದರೆ ಸಮಾಜಮುಖಿ ಕೆಲಸಗಳಿಗೆ ಪ್ರೇರಣೆ ಸಿಗುತ್ತದೆ : ಯತೀಶ್‍ ಕುಮಾರ್ | ಒಕ್ಕಲಿಗ ಸಮಾಜವು ಮಾನವ ಕುಲಕ್ಕೆ ದಾರಿದೀಪವಾಗಿದೆ : ಪ್ರದೀಪ್‍ ಆರ್.ಗೌಡ | ಸಮುದಾಯ ಭವನ ಶ್ರೀಮಂತರ ಭವನ ಆಗದೆ ಸಮಾಜದ ಪ್ರತಿಯೊಬ್ಬರಿಗೂ ಉಪಯೋಗಕ್ಕೆ ಸಿಗಬೇಕು : ಸುರೇಶ್ ಬೈಲು | ಯಾವುದೇ ಫಲಾಪೇಕ್ಷೆ ಇಲ್ಲದೆ ಸಂಘದ ಮುನ್ನಡೆ : ಕೇಶವ ಅಮೈ | ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ನೂತನ ಸಮುದಾಯ ಭವನದಲ್ಲಿ ಸಂಘ ಆಡಳಿತ ಕಚೇರಿ ಉದ್ಘಾಟನೆ | ಕಡಬ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟ Read More »

ಧರ್ಮಸ್ಥಳಕ್ಕೂ ಬರುತ್ತೇನೆ, ಸವದತ್ತಿಗೂ ಹೋಗುತ್ತೇನೆ : ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಿ.ಟಿ.ರವಿ ಪ್ರತಿ ಸವಾಲು

ಚಿಕ್ಕಮಗಳೂರು: ಬೆಳಗಾವಿಯಲ್ಲಿ ನನ್ನನ್ನು ಬಂಧಿಸಿದಾಗ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಎದುರಿಗೆ ಕರೆದುಕೊಂಡು ಹೋದರು. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನನ್ನನ್ನು ಕಾಪಾಡು ಎಂದು ಎಲ್ಲಮ್ಮನಿಗೆ ಹರಕೆ ಹೊತ್ತಿದ್ದೇನೆ. ಹರಕೆ ತೀರಿಸಲು ಅಲ್ಲಿಗೆ ಹೋಗುತ್ತೇನೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸವಾಲು ಹಾಕಿರುವಂತೆ ಧರ್ಮಸ್ಥಳಕ್ಕೂ ಹೋಗುತ್ತೇನೆ ಎಂದು ಎಂಎಲ್‌ಸಿ ಸಿ.ಟಿ. ರವಿ ಹೇಳಿದ್ದಾರೆ.ಆಕ್ಷೇಪಾರ್ಹ ಶಬ್ದ ಬಳಸಿಲ್ಲ ಎನ್ನುವುದಾದರೆ ಸಿ.ಟಿ.ರವಿ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲಿ ಎಂದಿರುವ ಲಕ್ಷ್ಮೀ ಹೆಬ್ಬಾಳ್ಕರ್‌ ಸವಾಲಿಗೆ ತಿರುಗೇಟು ನೀಡಿದ ಸಿ.ಟಿ.ರವಿ, ಸದನದಲ್ಲಿ ನಡೆದ ಘಟನೆಯ ಸಿಸಿಟಿವಿ ವಿಡಿಯೋ

ಧರ್ಮಸ್ಥಳಕ್ಕೂ ಬರುತ್ತೇನೆ, ಸವದತ್ತಿಗೂ ಹೋಗುತ್ತೇನೆ : ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಿ.ಟಿ.ರವಿ ಪ್ರತಿ ಸವಾಲು Read More »

ಕೊನೆಗೂ ಮಾರುಕಟ್ಟೆಗೆ ಬಂದ ನಂದಿನಿ ಇಡ್ಲಿ, ದೋಸೆ ಹಿಟ್ಟು

ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ಉತ್ಪನ್ನ ಬಿಡುಗಡೆ ವಿಚಾರ ಬೆಂಗಳೂರು: ಸಾಕಷ್ಟು ರಾಜಕೀಯ ಕೆಸರೆರಚಾಟದ ಬಳಿಕ ಕೊನೆಗೂ ನಂದಿನಿಯ ಇಡ್ಲಿ ಮತ್ತು ದೋಸೆ ಹಿಟ್ಟು ಮಾರುಕಟ್ಟೆಗೆ ಬಂದಿದೆ. ನವೆಂಬರ್‌ನಲ್ಲಿಯೇ ಈ ಉತ್ಪನ್ನ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಬಳಿಕ ಸದ್ಯಕ್ಕೆ ಉತ್ಪನ್ನ ಬಿಡುಗಡೆ ಮಾಡುವುದಿಲ್ಲ ಎಂದು ಕೆಎಂಎಫ್ ಹೇಳಿತ್ತು. ಈ ವೇಳೆ ಕೇರಳದ ಇಡ್ಲಿ ಮತ್ತು ದೋಸೆ ಹಿಟ್ಟು ಮಾರುಕಟ್ಟೆ ಆಕ್ರಮಿಸಲು ತೊಡಗಿತ್ತು. ಈ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ಸರಕಾರ ನಂದಿನಿ ಬ್ರಾಂಡ್‌ ಉತ್ಪನ್ನಗಳಿಗೆ ತಡೆಯೊಡ್ಡಿದೆ ಎಂಬ ಆಕ್ರೋಶ

ಕೊನೆಗೂ ಮಾರುಕಟ್ಟೆಗೆ ಬಂದ ನಂದಿನಿ ಇಡ್ಲಿ, ದೋಸೆ ಹಿಟ್ಟು Read More »

error: Content is protected !!
Scroll to Top