ಸುದ್ದಿ

ಡಾ. ಹರಿಣಾಕ್ಷಿ ಕೇವಳ ಅವರಿಗೆ Ph.D. ಪದವಿ ಪ್ರಮಾಣಪತ್ರ ಪ್ರದಾನ

ಮುಕ್ತ ಗಂಗೋತ್ರಿ, ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ 21ನೆ ಘಟಿಕೋತ್ಸವದಲ್ಲಿ ಡಾ. ಹರಿಣಾಕ್ಷಿ ಎಂ. ಡಿ. ಯವರು ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಥಾವರ್’ಚಂದ್ ಗೆಹ್ಲೋಟ್ ಅವರಿಂದ Ph.D. ಪದವಿ ಪ್ರಮಾಣಪತ್ರವನ್ನು (Convocation Certificate) ಸ್ವೀಕರಿಸಿದರು. 2026ನೆ ಜನವರಿ 31ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ನಡೆದ ಸಮಾರಂಭದಲ್ಲಿ ಕುಲಪತಿಗಳಾದ ಪ್ರೊ. ಶರಣಪ್ಪ ವಿ. ಹಲಸೆ ಅವರು ಸ್ವಾಗತ, ಅತಿಥಿಗಳ ಪರಿಚಯ ಮತ್ತು ವರದಿ ವಾಚನಗಳನ್ನು ನೆರವೇರಿಸಿದರು. ಡಾ. ಹರಿಣಾಕ್ಷಿ […]

ಡಾ. ಹರಿಣಾಕ್ಷಿ ಕೇವಳ ಅವರಿಗೆ Ph.D. ಪದವಿ ಪ್ರಮಾಣಪತ್ರ ಪ್ರದಾನ Read More »

ಸಿಂಧೂ ಜಲ ವಿವಾದ: ಪಾಕ್‌ಗೆ ಮತ್ತೆ ಹಿನ್ನಡೆ

ನವದೆಹಲಿ: ಉಗ್ರವಾದಕ್ಕೆ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನಕ್ಕೆ ಯಾವುದೇ ಕಾರಣಕ್ಕೂ ಸಿಂಧೂ ನದಿಯ ನೀರನ್ನು ಬಿಡಲಾಗದು ಎಂದು ಭಾರತ ಗಟ್ಟಿ ಧ್ವನಿಯಲ್ಲಿ ಹೇಳಿದ್ದು, ಅಂತರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದೆ. ಹೇಗ್‍ನಲ್ಲಿರುವ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯವು ಸಿಂಧೂ ನದಿ‌ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲೆಗಳ ಸಲ್ಲಿಕೆಗೆ ಆದೇಶ ನೀಡಿತ್ತು. ಆದರೆ ಈ ಮಧ್ಯಸ್ಥಿಕೆ ನ್ಯಾಯಾಲಯವು ಕಾನೂನು ಬಾಹಿರ ರಚನೆಯಾಗಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಭಾರತ ನಿರಾಕರಣೆ ತೋರಿಸಿದೆ. ಹಾಗೆಯೇ ಈ ಸಂಬಂಧ ಹೇ‌ಗ್‌ನಲ್ಲಿರುವ ಪೀಸ್ ಪ್ಯಾಲೇಸ್‌ನಲ್ಲಿ

ಸಿಂಧೂ ಜಲ ವಿವಾದ: ಪಾಕ್‌ಗೆ ಮತ್ತೆ ಹಿನ್ನಡೆ Read More »

ವಿದೇಶದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ನೆಲೆಸಿದ ಮಹಿಳೆಯರು ಭಾರತಕ್ಕೆ ಸುಂಕವಿಲ್ಲದೆ ತರಬಹುದು 40 ಗ್ರಾಂ ಚಿನ್ನ

ನವದೆಹಲಿ: ವಿದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರ ಬ್ಯಾಗೇಜ್ ನಿಯಮಗಳಲ್ಲಿ ಬದಲಾವಣೆಯಾಗಿದ್ದು, ಚಿನ್ನಾಭರಣವನ್ನು ಒಳಗೊಂಡಂತೆ ಸುಂಕ ಇಲ್ಲದೆ ಹಲವಾರು ವಸ್ತುಗಳನ್ನು ದೇಶದೊಳಕ್ಕೆ ತರಲು ಇದ್ದ ಮಿತಿಯನ್ನು ಮತ್ತಷ್ಟು ವಿಸ್ತರಣೆ ಮಾಡಲಾಗಿದೆ. ಫೆ. 2 ರಿಂದಲೇ ಅನ್ವಯಿಸುವಂತೆ 2026 ರ ಬ್ಯಾಗೇಜ್ ನಿಯಮಗಳನ್ವಯ ಈ ಹಿಂದಿನ ಐವತ್ತು ಸಾವಿರ ರೂ. ವಸ್ತುಗಳ ಮಿತಿಯನ್ನು ಎಪ್ಪತೈದು ಸಾವಿರ ರೂ. ಗಳಿಗೆ ಏರಿಕೆ ಮಾಡಲಾಗಿದ್ದು, ಅಷ್ಟು ಮೌಲ್ಯದ ವಸ್ತುಗಳನ್ನು ಯಾವುದೇ ಸುಂಕ ಇಲ್ಲದೆ ಭಾರತಕ್ಕೆ ತರಲು ಅವಕಾಶ ನೀಡಲಾಗಿದೆ. ಹಾಗೆಯೇ ಒಂದು ವರ್ಷಕ್ಕಿಂತ

ವಿದೇಶದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ನೆಲೆಸಿದ ಮಹಿಳೆಯರು ಭಾರತಕ್ಕೆ ಸುಂಕವಿಲ್ಲದೆ ತರಬಹುದು 40 ಗ್ರಾಂ ಚಿನ್ನ Read More »

ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವು

ಪುತ್ತೂರು: ಕಳೆದ ಎರಡು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರ್ಮ ನಿವಾಸಿ, ಪಂಚಾಕ್ಷರಿ ಲೈಟಿಂಗ್ಸ್‌ನ ಮಾಲೀಕ ಗಣೇಶ್ ಗೌಡ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ. ಲೈಟಿಂಗ್ಸ್ ‌ಸಂಬಂಧಿಸಿದ ಕೆಲಸಕ್ಕೆ ಡಿ. 6 ರಂದು ಬದಿಯಡ್ಕಕ್ಕೆ ತೆರಳಿದ್ದ ಅವರು ಸ್ಕೂಟರ್ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದರು. ಅವರಿಗೆ ಕಾಸರಗೋಡು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೃತರು ಪತ್ನಿ, ಇಬ್ಬರು

ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವು Read More »

ಆಸ್ತಿಗಾಗಿ ಜಗಳ : ಗಾಯಗೊಂಡಿದ್ದ ಇನ್ನೋರ್ವ ಸಾವು

ಗಂಭೀರ ಗಾಯಗೊಂಡಿದ್ದ ನಾದಿನಿಯ ಪತಿಯೂ ಸಾವು ಮಂಗಳೂರು: ತಲಪಾಡಿ ಸಮೀಪ ತೂಮಿನಾಡಿನಲ್ಲಿ ಕುಟುಂಬದ ಆಸ್ತಿ ಕಲಹದಲ್ಲಿ ಗಾಯಗೊಂಡಿದ್ದ ಇನ್ನೋರ್ವ ವ್ಯಕ್ತಿಯೂ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಇದರೊಂದಿಗೆ ಕೊಲೆಯಾದವರ ಸಂಖ್ಯೆ ಎರಡಕ್ಕೇರಿದೆ. ಮಂಜೇಶ್ವರ ತೂಮಿನಾಡುವಿನ ಹಿಲ್‌ಟಾಪ್ ಎಂಬಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ನಡೆದ ಕುಟುಂಬ ಕಲಹದಲ್ಲಿ ಕೊಲೆಗಳು ಸಂಭವಿಸಿವೆ. ಮಾರಣಾಂತಿಕವಾಗಿ ಇರಿತಕ್ಕೆ ಒಳಗಾಗಿದ್ದ ಶೇಕುಂಞಿ ಎಂಬವರು ಫೆ.3ರಂದು ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರ ಪತ್ನಿಯ ಅಕ್ಕನ ಮಗಳು ಜುಮೈಲಾ(17) ಸೋಮವಾರ ಸಂಜೆ ಕೊಲೆಯಾಗಿದ್ದರು. ಘಟನೆಯಲ್ಲಿ

ಆಸ್ತಿಗಾಗಿ ಜಗಳ : ಗಾಯಗೊಂಡಿದ್ದ ಇನ್ನೋರ್ವ ಸಾವು Read More »

ರಾಜ್ಯಸಭೆಯಲ್ಲಿ ಮೇಜಿನ ಮೇಲೆ ಕೃತಕ ಕಾಲುಗಳನ್ನಿಟ್ಟು ಸಿಪಿಎಂ‌ನ ಹಿಂಸಾತ್ಮಕ ರಾಜಕೀಯ ಕರಾಳತೆ ಬಿಚ್ಚಿಟ್ಟ ಸಂಸದ

ನವದೆಹಲಿ: ಸೋಮವಾರ ರಾಜ್ಯ ಸಭೆಯಲ್ಲಿ ಅತ್ಯಂತ ಭಾವುಕ ಸನ್ನಿವೇಶವೊಂದು ‌ಕಂಡು ಬಂದಿದ್ದು, ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡನೆಯ ವೇಳೆ ಕೇರಳದ ಬಿಜೆಪಿ ಸಂಸದ ಸದಾನಂದನ್ ಮಾಸ್ಟರ್ ಅವರು ತಮ್ಮ ಕೃತಕ ಕಾಲುಗಳನ್ನು ಮೇಜಿನ ಮೇಲಿಟ್ಟು, ಸಿಪಿಎಂ ಕರಾಳತೆಯಿಂದ ತಮಗಾದ ಅನ್ಯಾಯ, ದೌರ್ಜನ್ಯವನ್ನು ವಿವರಿಸಿ, ಭಾಷಣ ಮಾಡಿದರು. ತಮ್ಮ ಮೊದಲ ಭಾಷಣದಲ್ಲಿ, ಮೂವತ್ತೊಂದು ವರ್ಷಗಳ ಹಿಂದೆ ನಡೆದ ಈ ಕರಾಳತೆಗೆ ಕಾರಣರಾದವರು ಇಂದು ಪ್ರಜಾಪ್ರಭುತ್ವದ ಬಗ್ಗೆ ಮಾತ ನೀಡುತ್ತಿದ್ದಾರೆ. ಅವರು ನನ್ನ ಮೇಲಿನ ಈ ದೌರ್ಜನ್ಯವನ್ನು ಮರೆಯಬಾರದು.

ರಾಜ್ಯಸಭೆಯಲ್ಲಿ ಮೇಜಿನ ಮೇಲೆ ಕೃತಕ ಕಾಲುಗಳನ್ನಿಟ್ಟು ಸಿಪಿಎಂ‌ನ ಹಿಂಸಾತ್ಮಕ ರಾಜಕೀಯ ಕರಾಳತೆ ಬಿಚ್ಚಿಟ್ಟ ಸಂಸದ Read More »

ಬಾರ್ಯ ದೇವಸ್ಥಾನದ ಜಾತ್ರಾ ಪ್ರಯುಕ್ತ ಗೊನೆ ಮುಹೂರ್ತ

ಉಪ್ಪಿನಂಗಡಿ: ಸಮೀಪದ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಫೆ. 7ರಂದು ಜರಗಲಿರುವ ವಾರ್ಷಿಕ ಜಾತ್ರೆಯ ಪ್ರಯುಕ್ತ ಗೊನೆ ಮುಹೂರ್ತವು ವೈದಿಕ ವಿಧಿ ವಿಧಾನಗಳೊಂದಿಗೆ ಜರಗಿತು. ದೇವಸ್ಥಾನ ಮತ್ತು ಪರಿವಾರ ದೈವಗಳ ಆಡಳಿತ ಸೇವಾ ಟ್ರಸ್ಟ್ ನ ಅಧ್ಯಕ್ಷ ಭಾಸ್ಕರ ಬಾರ್ಯ ನೇತೃತ್ವದಲ್ಲಿ ಪ್ರಧಾನ ಅರ್ಚಕ ಗುರುಪ್ರಸಾದ ನೂರಿತ್ತಾಯ, ಪವಿತ್ರ ಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ ಅವರ ಉಪಸ್ಥಿತಿಯಲ್ಲಿ ಗೊನೆ ಮುಹೂರ್ತ ನಡೆಯಿತು ಆಡಳಿತ ಸೇವಾ ಟ್ರಸ್ಟಿನ ಕಾರ್ಯದರ್ಶಿ ಪ್ರಶಾಂತ ಪೈ, ಸ್ವರ್ಣ ಲತಾ ಭಾಸ್ಕರ್, ಶ್ರೀ ವಾರಿಣಿ,ಉತ್ಸವ ಸಮಿತಿ

ಬಾರ್ಯ ದೇವಸ್ಥಾನದ ಜಾತ್ರಾ ಪ್ರಯುಕ್ತ ಗೊನೆ ಮುಹೂರ್ತ Read More »

ಚುನಾವಣೆಯಲ್ಲಿ ಸ್ಪರ್ಧಿಸಲು ಮಗಳನ್ನೇ ಕೊಂದ ಪಾಪಿ ತಂದೆ

ಅವಳಿ ಮಕ್ಕಳಲ್ಲಿ ಒಬ್ಬಳನ್ನು ಕಾಲುವೆಗೆ ನೂಕಿ ಹತ್ಯೆ ಮುಂಬೈ: ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ತಂದೆಯೊಬ್ಬ ತನ್ನ ಮಗಳನ್ನೇ ಕೊಲೆ ಮಾಡಿದ ಕ್ರೂರ ಘಟನೆ ಮಹಾರಾಷ್ಟ್ರದಲ್ಲಿ ಸಂಭವಿಸಿದೆ. ಎರಡಕ್ಕಿಂತ ಹೆಚ್ಚು ಮಕ್ಕಳಿದ್ರೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲ ಎಂಬ ನಿಯಮ ಇರುವುದರಿಂದ ಮಹಾರಾಷ್ಟ್ರದ ಈ ಪಾಪಿ ತಂದೆ 6 ವರ್ಷದ ಮಗಳನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬೋಧನ್ ಕಾಲುವೆಗೆ ನೂಕಿ ಹತ್ಯೆ ಮಾಡಿದ್ದಾನೆ. ಪ್ರಾಚಿ ಕೊಲೆಯಾದ ಬಾಲಕಿ. ಹತ್ಯೆಗೈದ ಆರೋಪಿಯನ್ನು ಪಾಂಡುರಂಗ ಕೊಂಡ್ಮಂಗಳೆ (28) ಎಂದು ಗುರುತಿಸಲಾಗಿದೆ. ಈತ

ಚುನಾವಣೆಯಲ್ಲಿ ಸ್ಪರ್ಧಿಸಲು ಮಗಳನ್ನೇ ಕೊಂದ ಪಾಪಿ ತಂದೆ Read More »

ಭಾರತದ ಮೇಲಿನ ಸುಂಕ ಇಳಿಕೆ ಮಾಡಿದ ಟ್ರಂಪ್‌

ಉಭಯ ದೇಶಗಳಿಗೆ ಲಾಭ ಎಂದ ಪ್ರಧಾನಿ ನರೇಂದ್ರ ಮೋದಿ ನವದೆಹಲಿ: ಯುರೋಪಿಯನ್‌ ಒಕ್ಕೂಟದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತದ ಸಹಿ ಬಿದ್ದ ಬೆನ್ನಲ್ಲೇ ಅಮೆರಿಕ ಭಾರತದ ಸರಕುಗಳ ಮೇಲೆ ವಿಧಿಸಿದ್ದ ಸುಂಕವನ್ನು ಗಣನೀಯವಾಗಿ ಕಡಿತ ಮಾಡಿದೆ. ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೆ ಏರಿದ ಬಳಿಕ ಪ್ರತಿ ಅಮೆರಿಕ ತೆರಿಗೆ, ರಷ್ಯಾದಿಂದ ಕಚ್ಚಾತೈಲವನ್ನು ಆಮದು ಮಾಡುತ್ತಿರುವುದಕ್ಕೆ ಪ್ರತಿಯಾಗಿ 25% ದಂಡ ಸೇರಿದಂತೆ ಭಾರತದ ವಸ್ತುಗಳಿಗೆ ಅಮೆರಿಕ 50% ಸುಂಕವನ್ನು ವಿಧಿಸಿತ್ತು. ಈ ಟ್ರಂಪ್‌ ಈಗ 18% ಮಾತ್ರ ತೆರಿಗೆ

ಭಾರತದ ಮೇಲಿನ ಸುಂಕ ಇಳಿಕೆ ಮಾಡಿದ ಟ್ರಂಪ್‌ Read More »

ವಾಣಿಜ್ಯ ಸಂಸ್ಥಾಪನೆಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ : ಜಿಲ್ಲಾಧಿಕಾರಿ ಆದೇಶ

ಇಂಗ್ಲಿಷ್‌ ಮೀಡಿಯಂ ಶಾಲೆಗಳ ನಾಮಫಲಕವೂ ಕನ್ನಡದಲ್ಲಿರಬೇಕು ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಅಂಗಡಿ, ಕಂಪನಿ, ಕಚೇರಿಗಳು ಹೋಟೆಲ್ ಸೇರಿದಂತೆ ವಾಣಿಜ್ಯ ಸಂಸ್ಥಾಪನೆಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಇರಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.ಸೂಚಿಸಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್‍ಗಳು ವಾಣಿಜ್ಯ ಸಂಸ್ಥೆಗಳಿಗೆ ಟ್ರೇಡ್ ಲೈಸೆನ್ಸ್ ಮಂಜೂರು ಮಾಡುವಾಗಲೇ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಎಂಬ ಶರತ್ತು ವಿಧಿಸಬೇಕು. ಈ ಬಗ್ಗೆ ಆಗ್ಗಿಂದಾಗೆ ಪರಿಶೀಲನೆ ನಡೆಸಬೇಕು ಎಂದು ಹೇಳಿದ್ದಾರೆ. ರಾಷ್ಟ್ರ್ರೀಯ ಹೆದ್ದಾರಿಗಳಲ್ಲಿ ವಿವಿಧ ಸೂಚನಾ ಫಲಕಗಳಲ್ಲಿ ಕನ್ನಡದಲ್ಲಿ

ವಾಣಿಜ್ಯ ಸಂಸ್ಥಾಪನೆಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ : ಜಿಲ್ಲಾಧಿಕಾರಿ ಆದೇಶ Read More »

error: Content is protected !!
Scroll to Top