ಸುದ್ದಿ

ಮಹಿಳೆಯರ ಉಚಿತ ಪ್ರಯಾಣಕ್ಕೆ ಆಧಾರ್‌ ಬದಲು ಸ್ಮಾರ್ಟ್‌ ಕಾರ್ಡ್‌

4 ಸಾರಿಗೆ ನಿಗಮಗಳಿಂದ ಸ್ಮಾರ್ಟ್‌ ಕಾರ್ಡ್‌ ವಿತರಿಸಲು ತೀರ್ಮಾನ ಬೆಂಗಳೂರು: ಸಾರಿಗೆ ಬಸ್​ಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಯಲ್ಲಿ ತುಸು ಮಾರ್ಪಾಡು ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇನ್ನು ಮುಂದೆ ಆಧಾರ್ ಬದಲಿಗೆ ಶಕ್ತಿ ಯೋಜನೆಯಡಿ ಸ್ಮಾರ್ಟ್‌ ಕಾರ್ಡ್‌ ವಿತರಣೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಜತೆಗೆ, ಹಲವು ಮತ್ವದ ನಿರ್ಣಯಗಳನ್ನು ಕ್ಯಾಬಿನೆಟ್​​ನಲ್ಲಿ ಕೈಗೊಳ್ಳಲಾಗಿದೆ. ಮಹಿಳೆಯರ ಉಚಿತ ಪ್ರಯಾಣಕ್ಕೆ 4 ಸಾರಿಗೆ ನಿಗಮಗಳು […]

ಮಹಿಳೆಯರ ಉಚಿತ ಪ್ರಯಾಣಕ್ಕೆ ಆಧಾರ್‌ ಬದಲು ಸ್ಮಾರ್ಟ್‌ ಕಾರ್ಡ್‌ Read More »

ಪುತ್ತೂರು ನಿವಾಸಿಗೆ 2.37 ಲ.ರೂ. ವಂಚಿಸಿದವ ಸೆರೆ

ವಿಮಾ ಪ್ರಕ್ರಿಯೆ ರದ್ದುಪಡಿಸುವ ನೆಪದಲ್ಲಿ ವಂಚನೆ ಪುತ್ತೂರು: ಪುತ್ತೂರಿನ ನಿವಾಸಿಯೊಬ್ಬರಿಗೆ ಆನ್‌ಲೈನ್ ಮೂಲಕ 2.37 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯು ಮೂಲತಃ ಮಹಾರಾಷ್ಟ್ರದವನಾಗಿದ್ದು, ಸದ್ಯ ಮಂಡ್ಯದ ಕೃಷ್ಣರಾಜಪೇಟೆಯಲ್ಲಿ ವಾಸವಿರುವ ಅವಿನಾಶ್ ರಮೇಶ್ ಗೌಡ (24) ಎಂದು ಗುರುತಿಸಲಾಗಿದೆ. ಪುತ್ತೂರಿನ ನಿವಾಸಿ ಯಶೋಧರ ಎಂಬವರು ನೀಡಿದ ದೂರಿನ ಪ್ರಕಾರ, ಅಪರಿಚಿತ ವ್ಯಕ್ತಿಯೊಬ್ಬ ವಿಮಾ ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಂಡು ವಿವಿಧ ಮೊಬೈಲ್ ಸಂಖ್ಯೆಗಳಿಂದ

ಪುತ್ತೂರು ನಿವಾಸಿಗೆ 2.37 ಲ.ರೂ. ವಂಚಿಸಿದವ ಸೆರೆ Read More »

ಮಾ.6ರಂದು ರಾಜ್ಯ ಬಜೆಟ್‌ ಮಂಡನೆ

ದಾಖಲೆ 17ನೇ ಬಾರಿಗೆ ಬಜೆಟ್‌ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ ಬೆಂಗಳೂರು : 2026-27ನೇ ಆರ್ಥಿಕ ವರ್ಷದ ಕರ್ನಾಟಕ ರಾಜ್ಯ ಬಜೆಟ್‌ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದೆ. ಮಾ.6ರಿಂದ ಮಾರ್ಚ್ 27ರವರೆಗೆ ಬಜೆಟ್ ಅಧಿವೇಶನ ನಡೆಯಲಿದ್ದು, ಮಾ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಮಾ.6ರಿಂದ ಮಾರ್ಚ್ 27ರವರೆಗೆ ಬಜೆಟ್ ಅಧಿವೇಶನ ನಡೆಯಲಿದ್ದು, ಅಧಿವೇಶನದ ಮೊದಲ ದಿನವಾದ ಮಾರ್ಚ್ 6ರಂದು ಹಣಕಾಸು ಸಚಿವವರೂ

ಮಾ.6ರಂದು ರಾಜ್ಯ ಬಜೆಟ್‌ ಮಂಡನೆ Read More »

ಟಿ20 ವಿಶ್ವಕಪ್‌ : ನಮೀಬಿಯಾ ಎದುರು ಭಾರತಕ್ಕೆ 93 ರನ್‌ಗಳ ಭರ್ಜರಿ ಗೆಲುವು

ದುರ್ಬಲ ತಂಡವಾದರೂ ಬೌಲಿಂಗ್‌ನಲ್ಲಿ ಮಿಂಚಿದ ನಮೀಬಿಯಾ ನವದೆಹಲಿ: ಭಾರತ ತಂಡ ಟಿ20 ವಿಶ್ವಕಪ್​ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಅಮೆರಿಕ ತಂಡವನ್ನು ಸೋಲಿಸಿದ್ದ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ನಮೀಬಿಯಾವನ್ನು 93 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ಹಾರ್ದಿಕ್ ಪಾಂಡ್ಯ ಅವರ ಅದ್ಭುತ ಆಲ್‌ರೌಂಡ್ ಪ್ರದರ್ಶನ ಮತ್ತು ಇಶಾನ್ ಕಿಶನ್ ಮತ್ತು ವರುಣ್ ಚಕ್ರವರ್ತಿ ಅವರ ಅದ್ಭುತ ಪ್ರದರ್ಶನ ದೆಹಲಿಯಲ್ಲಿ ನಡೆದ ಈ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲಲು ಸಹಾಯ ಮಾಡಿತು. ಮೊದಲು ಬ್ಯಾಟಿಂಗ್

ಟಿ20 ವಿಶ್ವಕಪ್‌ : ನಮೀಬಿಯಾ ಎದುರು ಭಾರತಕ್ಕೆ 93 ರನ್‌ಗಳ ಭರ್ಜರಿ ಗೆಲುವು Read More »

ಕವಿ ಕುವೆಂಪು ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುವುದು: ಕುಟುಂಬವರ್ಗ

ಮೈಸೂರು: ನಗರದ ವಿವಿಪುರಂ ನಲ್ಲಿರುವ ರಾಷ್ಟ್ರಪತಿ ಕುವೆಂಪು ಅವರ ಮನೆ ಉದಯರವಿಯನ್ನು ಮಾರುವ ಅಥವಾ ಸರ್ಕಾರದ ವಶಕ್ಕೆ ನೀಡುವ ಯಾವುದೇ ಉದ್ದೇಶ ನಮ್ಮ ಮುಂದೆ ಇಲ್ಲ. ಅದನ್ನು ನಾವೇ ಮ್ಯೂಸಿಯಂ ಆಗಿ ಪರಿವರ್ತನೆ ಮಾಡುತ್ತೇವೆ ಎಂದು ಕುವೆಂಪು ಅವರ ಕುಟುಂಬ ವರ್ಗ ಮಾಹಿತಿ ನೀಡಿದೆ. ಈ ಬಗ್ಗೆ ಕುವೆಂಪು ಅವರ ಅಳಿಯ, ವಿಶ್ರಾಂತ ಕುಲಪತಿ ಪ್ರೊ. ಕೆ. ಚಿದಾನಂದ ಗೌಡ ಮಾತನಾಡಿದ್ದು, ಉದಯರವಿ ಎಂಬುದು ಕುವೆಂಪು ಅವರು 60 ವರ್ಷಗಳ ಕಾಲ ಬಾಳಿ ಬದುಕಿದ ಮತ್ತು ಅವರ

ಕವಿ ಕುವೆಂಪು ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುವುದು: ಕುಟುಂಬವರ್ಗ Read More »

ಚಿನ್ನ ತೊಳೆಯುವ ನೆಪದಲ್ಲಿ ರಾಸಾಯನಿಕ ಬಳಸಿ ವೃದ್ಧೆಯ ಚಿನ್ನ ಕದ್ದ ಅಪರಿಚಿತ

ಬೆಳ್ತಂಗಡಿ: ಅಪರಿಚಿತನೊಬ್ಬ ಚಿನ್ನದ ಸರವನ್ನು ತೊಳೆಯುವ ನೆಪದಲ್ಲಿ ಕೆಮಿಕಲ್ ಬಳಸಿ ವೃದ್ಧೆಯೊಬ್ಬರ ಎರಡೂ ಮುಕ್ಕಾಲು ಪವನಿನ ಚಿನ್ನವನ್ನು ಕರಗಿಸಿ ಮೋಸ ಗೊಳಿಸಿರುವ ಘಟನೆ ಕಾಶೀಪಟ್ಣದ ಪಣಿಲಾಜೆಯಲ್ಲಿ ನಡೆದಿದೆ. ರುಕ್ಮಿಣಿ ಶೆಟ್ಟಿಗಾರ್ (90) ಎಂಬವರೇ ‌ವಂಚನೆಗೊಳಗಾದ ವೃದ್ಧೆ. ಈ ಸಂಬಂಧ ಅವರು ವೇಣೂರು ಪೊಲೀಸರಿಗೂ ದೂರು ನೀಡಿದ್ದಾರೆ. ಅವರು ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭದಲ್ಲಿ ಚಿನ್ನ ತೊಳೆಯುವುದಾಗಿ ಹೇಳಿಕೊಂಡು ಅಪರಿಚಿತ ವ್ಯಕ್ತಿಯೊಬ್ಬ ಬಂದಿದ್ದಾನೆ. ಅವನ ಮಾತನ್ನು ನಂಬಿ ರುಕ್ಮಿಣಿ ಅವರು ಮನೆಯೊಳಗೆ ಭದ್ರವಾಗಿಟ್ಟಿದ್ದ ಚಿನ್ನದ ಸರವನ್ನು ನೀಡಿದ್ದಾರೆ. ಆತ

ಚಿನ್ನ ತೊಳೆಯುವ ನೆಪದಲ್ಲಿ ರಾಸಾಯನಿಕ ಬಳಸಿ ವೃದ್ಧೆಯ ಚಿನ್ನ ಕದ್ದ ಅಪರಿಚಿತ Read More »

ಬಾಬರಿ ಮಸೀದಿ ಮರುನಿರ್ಮಾಣ ಇಲ್ಲ: ಯೋಗಿ ಆದಿತ್ಯನಾಥ್

ಲಕ್ನೋ: ಬಾಬ್ರಿ ಮಸೀದಿಯನ್ನು ಯಾವುದೇ ಕಾರಣಕ್ಕೂ ಅಯೋಧ್ಯೆಯಲ್ಲಿ ಮರು ನಿರ್ಮಾಣ ಮಾಡಲಾಗುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ. ಬಾಬ್ರಿ ಮಸೀದಿಯ ನಿರ್ಮಾಣವನ್ನು ಅಂತ್ಯದಿನಕ್ಕೆ ಹೋಲಿಕೆ ಮಾಡಿರುವ ಅವರು ಆ ದಿನ ಮರಳಿ ಬರುವುದಿಲ್ಲ. ನೀವು ಭಾರತದಲ್ಲಿ ಇರಲು ಬಯಸಿದರೆ ಇಲ್ಲಿನ ನಿಯಮಗಳನ್ನು ಪಾಲಿಸಬೇಕು ಎಂದು ಅವರು ಬಾಬ್ರಿ ಮಸೀದಿ ಮರು ನಿರ್ಮಾಣದ ಕನಸು ಕಾಣುತ್ತಿರುವವರಿಗೆ ಹೆಸರು ಹೇಳದೆಯೇ ತಿರುಗೇಟು ನೀಡಿದ್ದಾರೆ. ನಾವು‌ ಅಯೋಧ್ಯೆಯಲ್ಲೇ ಬಾಲರಾಮನ ದೇವಾಲಯ ನಿರ್ಮಾಣ ಮಾಡುವುದಾಗಿ ಹೇಳಿದ್ದೆವು. ದೇವಾಲಯ

ಬಾಬರಿ ಮಸೀದಿ ಮರುನಿರ್ಮಾಣ ಇಲ್ಲ: ಯೋಗಿ ಆದಿತ್ಯನಾಥ್ Read More »

ಟಿ20 ವಿಶ್ವಕಪ್‌ : ಇಂದು ಬಲಿಷ್ಠ ಭಾರತಕ್ಕೆ ದುರ್ಬಲ ನಮೀಬಿಯ ಎದುರಾಳಿ

ಟೀಂ ಇಂಡಿಯಾಕ್ಕೆ ಆಟಗಾರರ ಗಾಯ, ಅನಾರೋಗ್ಯದ ಚಿಂತೆ ನವದೆಹಲಿ : ಭಾರತ ತಂಡ ಗುರುವಾರದ ಟಿ20 ವಿಶ್ವಕಪ್ ಪಂದ್ಯದಲ್ಲಿ ನಮಿಬಿಯಾ ವಿರುದ್ಧ ಆಡಲಿದೆ.‌ ಎದರಾಳಿ ಅಷ್ಟಾಗಿ ಬಲಿಷ್ಠವಾಗಿರದಿದ್ದರೂ ಭಾರತಕ್ಕೆ ಹಲವು ಆಟಗಾರರ ಅಸೌಖ್ಯ ಮತ್ತು ಗಾಯ ಆತಂಕ ತರಿಸಿದೆ. ಸ್ಫೋಟಕ ಶೈಲಿಯ ಬ್ಯಾಟರ್ ಅಭಿಷೇಕ್ ಶರ್ಮಾ ಎರಡು ದಿನ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದ ನಂತರ ಬುಧವಾರ ತಂಡಕ್ಕೆ ಮರಳಿದ್ದಾರೆ. ಅವರು ನಮಿಬಿಯಾ ಎದುರು ಕಣಕ್ಕಿಳಿಯುವ ಕುರಿತು ಪಂದ್ಯದ ಆರಂಭಕ್ಕೂ ಮುನ್ನ ನಿರ್ಧರಿಸಲಾಗುವುದು ಎಂದು ಭಾರತ ತಂಡದ

ಟಿ20 ವಿಶ್ವಕಪ್‌ : ಇಂದು ಬಲಿಷ್ಠ ಭಾರತಕ್ಕೆ ದುರ್ಬಲ ನಮೀಬಿಯ ಎದುರಾಳಿ Read More »

ಬೆಳ್ತಂಗಡಿ: ಸರಕು ಸಾಗಿಸುವ ವಾಹನದಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಹೆಡ್‌ಮಾಸ್ಟ್ರು!

ಶತಮಾನೋತ್ಸವ ಅಚರಿಸಿದ ಶಾಲಾ ಮುಖ್ಯಶಿಕ್ಷಕರ ನಡೆಗೆ ಪೋಷಕರ ತೀವ್ರ ಆಕ್ರೋಶ ಬೆಳ್ತಂಗಡಿ : ಸರಕುಗಳನ್ನು ಸಾಗಿಸುವ ಪಿಕಪ್‌ ವಾಹನ ಮತ್ತು ಟಿಪ್ಪರ್‌ನಲ್ಲಿ ಶಾಲಾ ಮಕ್ಕಳನ್ನು ಅಧ್ಯಯನ ಪ್ರವಾಸಕ್ಕೆ ಕರೆದುಕೊಂಡು ಹೋದ ಶಾಲೆಯ ಮುಖ್ಯಶಿಕ್ಷಕರೊಬ್ಬರ ನಡೆಗೆ ಪಾಲಕರಿಂದ ಅಕ್ರೋಶ ವ್ಯಕ್ತವಾಗಿದೆ. ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದಲ್ಲಿ ಸರಕುಗಳಂತೆ ಶಾಲಾ ಮಕ್ಕಳನ್ನು ವಾಹನಗಳಿಗೆ ತುಂಬಿಸಿ ಜೇನು ಕೃಷಿ ಅಧ್ಯಯನ ಮಾಡಲು ತೆರೆದ ಪಿಕಪ್ ಮತ್ತು ಟಿಪ್ಪರ್ ನಲ್ಲಿ ಕರೆದುಕೊಂಡು ಹೋದ ಈ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಿದ

ಬೆಳ್ತಂಗಡಿ: ಸರಕು ಸಾಗಿಸುವ ವಾಹನದಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಹೆಡ್‌ಮಾಸ್ಟ್ರು! Read More »

ಪಿಕಪ್‌ ಪಲ್ಟಿಯಾಗಿ ಚಾಲಕ ಸಾವು

ಉಪ್ಪಿನಂಗಡಿ: ತೆಕ್ಕಾರು ಗ್ರಾಮದ ಕನರಾಜೆ ಎಂಬಲ್ಲಿ ಪಿಕಪ್ ವಾಹನ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಫೆ.11ರಂದು ನಡೆದಿದೆ. ಮೃತ ವ್ಯಕ್ತಿ ಅಳಕೆ ನಿವಾಸಿ ಪುಟ್ಟ (31) ಎಂಬವರಾಗಿದ್ದಾರೆ. ಸೆಂಟ್ರಿಂಗ್ ಕೆಲಸದ ಸಾಮಾಗ್ರಿಗಳನ್ನು ಸಾಗಿಸುವ ವೇಳೆ ಪಿಕಪ್‌ ವಾಹನ ಪಲ್ಟಿಯಾಗಿದೆ. ಮೇಲ್ಬಾಗದ ರಸ್ತೆಯಿಂದ ವಾಹನ ಕೆಳಭಾಗದ ರಸ್ತೆಗೆ ಪಿಕಪ್‌ ಉರುಳಿ ಬಿದ್ದಿದ್ದು, ಚಾಲಕ ಅಳಕ್ಕೆ ನಿವಾಸಿ ಹರಿಶ್ಚಂದ್ರ ಎಂಬವರ ಮಗ ಹೇಮಚಂದ್ರ (32) ಎಂಬವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಹಾಗೂ ಪಿಕಪ್‍ನಲ್ಲಿದ್ದ ಉಮ್ಮರಬ್ಬ (51) ಎಂಬವರು ಗಾಯಗೊಂಡು

ಪಿಕಪ್‌ ಪಲ್ಟಿಯಾಗಿ ಚಾಲಕ ಸಾವು Read More »

error: Content is protected !!
Scroll to Top