Uncategorized

ಎಸ್‌ಐಟಿ ಕಚೇರಿ ಮೆಟ್ಟಿಲು ಹತ್ತುವಾಗ ಎದೆ ಢವ ಢವ ಆಯಿತು: ಮಟ್ಟಣ್ಣವರ್‌ ಹೇಳಿಕೆ ವೈರಲ್‌

ಎಸ್‌ಐಟಿ ಮುಂದೆ ಸುದೀರ್ಘ ವಿಚಾರಣೆಗೆ ಹಾಜರಾದ ಮಟ್ಟಣ್ಣವರ್‌ ಬೆಳ್ತಂಗಡಿ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಗಿರೀಶ್ ಮಟ್ಟಣ್ಣನವರ್ ಅವರನ್ನು ಶುಕ್ರವಾರ ಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ವಿಚಾರಣೆ ಮುಗಿಸಿದ ಬಳಿಕ ಎಸ್‌ಐಟಿ ಕಚೇರಿಯಿಂದ ಹೊರಬಂದ ಅವರು ಮಾಧ್ಯಮದವರ ಜೊತೆ ಮಾತನಾಡಿ ಎಸ್‌ಐಟಿ ಕಚೇರಿ ಮೆಟ್ಟಿಲು ಹತ್ತುತ್ತಿದ್ದಂತೆಯೇ ಎದೆ ಢವ ಢವ ಅಂತಾ ಬಡಿಕೊಳ್ಳಲು ಪ್ರಾರಂಭಿಸಿತು. ಜಗತ್ತಿನಲ್ಲಿ ಎಷ್ಟು ಮುಸ್ಲಿಂ, ಕ್ರಿಶ್ಚಿಯನ್ ರಾಷ್ಟ್ರಗಳಿವೆ ಎಂದು ಕೇಳಿದರು. ನಂತರ ಯಾವ ಯಾವ ಪಾದ್ರಿ, ಮೌಲಿ, ಶೇಟ್‌ಗಳಿಂದ […]

ಎಸ್‌ಐಟಿ ಕಚೇರಿ ಮೆಟ್ಟಿಲು ಹತ್ತುವಾಗ ಎದೆ ಢವ ಢವ ಆಯಿತು: ಮಟ್ಟಣ್ಣವರ್‌ ಹೇಳಿಕೆ ವೈರಲ್‌ Read More »

ಅನ್ಯ ಕೋಮಿನ ಯುವಕನ ಜೊತೆ ಪ್ರೇಮ: ತಂದೆಯಿಂದಲೇ ಮಗಳ ಹತ್ಯೆ

ಕಲ್ಬುರ್ಗಿ: ಅನ್ಯ ಕೋಮಿನ ಯುವಕನನ್ನು ಪ್ರೀತಿ ಮಾಡಿದಳು ಎಂಬ ಕಾರಣಕ್ಕೆ ತಂದೆಯೇ ಇನ್ನಿಬ್ಬರ ಸಹಾಯದೊಂದಿಗೆ ಮಗಳನ್ನು ಕತ್ತು ಹಿಸುಕಿ, ಸುಟ್ಟು ಹಾಕಿದ ಘಟನೆ ನಡೆದಿದೆ.‌ ಕೊಲೆಯಾದ ದುರ್ದೈವಿಯನ್ನು ಕವಿತಾ ಎಂದು ಗುರುತಿಸಲಾಗಿದೆ. ಆಕೆಯ ತಂದೆ ಶಂಕರ ಕೊಳ್ಳು ಅವರು ಪೊಲೀಸ್ ವಶದಲ್ಲಿದ್ದು, ಇನ್ನಿಬ್ಬರು ಆರೋಪಿಗಳಾದ ಶರಣಪ್ಪ, ದತ್ತು ಪರಾರಿಯಾಗಿದ್ದಾರೆ. ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆ ಮಾಡಿದ ಬಳಿಕ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಿ ಶವವನ್ನು ಸುಟ್ಟು ಹಾಕಲಾಗಿದೆ. ಆ ಬಳಿಕ ಮಗಳನ್ನು ಕೊಲೆ ಮಾಡಿದ್ದಾಗಿ

ಅನ್ಯ ಕೋಮಿನ ಯುವಕನ ಜೊತೆ ಪ್ರೇಮ: ತಂದೆಯಿಂದಲೇ ಮಗಳ ಹತ್ಯೆ Read More »

ಬಾನು ಮುಷ್ತಾಕ್ ಸೀರೆ ಉಟ್ಟು, ಕುಂಕುಮ ಹಚ್ಚಿ ದಸರಾ ಉದ್ಘಾಟಿಸಿದರೆ ನಮ್ಮ ಅಭ್ಯಂತರ ಇಲ್ಲ: ಪ್ರತಾಪ್ ಸಿಂಹ

ಹುಬ್ಬಳ್ಳಿ: ಪ್ರಕೃತಿಯಲ್ಲಿ ದೇವರನ್ನು ಕಾಣುವವರು ನಾವು. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಮೇಡಂ ಅವರು ಸೀರೆ ಉಟ್ಟು, ಕುಂಕುಮ ಹಚ್ಚಿ, ಹೂ ಮುಡಿದು ಬಂದರೆ ನಮ್ಮ ಅಭ್ಯಂತರ ಇಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಕೆಲ ಸಮಯದ ಹಿಂದೆ ಸಮ್ಮೇಳನ ಒಂದರಲ್ಲಿ ಕನ್ನಡಾಂಬೆಗೆ ಕುಂಕುಮ ಇಟ್ಟು, ಸೀರೆಯುಡಿಸಿದ್ದರಿಂದ ಕರ್ನಾಟಕದಿಂದ ಮುಸ್ಲಿಮರನ್ನೇ ಹೊರಗಿಟ್ಟಿದ್ದಾಗಿ ನೀವು ಹೇಳಿದ್ದಿರಿ. ಈಗ ಅದೇ ಚಾಮುಂಡೇಶ್ವರಿ ಉತ್ಸವಕ್ಕೆ ಚಾಲನೆ ನೀಡಲು ನಿಮಗೆ ಮನಸ್ಸಾದರೂ ಹೇಗೆ ಬರುತ್ತದೆ. ನಾವು ತಾಯಿ ಭುವನೇಶ್ವರಿಯಲ್ಲಿ ದೇವರನ್ನು

ಬಾನು ಮುಷ್ತಾಕ್ ಸೀರೆ ಉಟ್ಟು, ಕುಂಕುಮ ಹಚ್ಚಿ ದಸರಾ ಉದ್ಘಾಟಿಸಿದರೆ ನಮ್ಮ ಅಭ್ಯಂತರ ಇಲ್ಲ: ಪ್ರತಾಪ್ ಸಿಂಹ Read More »

ಧರ್ಮಸ್ಥಳದ ಬಗ್ಗೆ ಅವಹೇಳನ: ವಿಚಾರಣೆಗೆ ಹಾಜರಾದ ಲಾಯರ್ ಜಗದೀಶ್

ಬೆಳ್ತಂಗಡಿ: ಧರ್ಮಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನಕಾರಿ ವಿಡಿಯೋ ಮಾಡಿದ ಲಾಯರ್ ಜಗದೀಶ್ ಇಂದು ವಿಚಾರಣೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಲು ಜೀವ ಭಯ ಇದ್ದು,‌ ಪೊಲೀಸ್ ಭದ್ರತೆ ಒದಗಿಸುವಂತೆ ಅವರು ವಿನಂತಿ ಮಾಡಿಕೊಂಡಿದ್ದ ಹಿನ್ನೆಲೆ ಇಬ್ಬರು ಪೊಲೀಸರ ಜೊತೆ ಅವರು ಸ್ಟೇಷನ್ ‌ಗೆ ಆಗಮಿಸಿದ್ದರು.

ಧರ್ಮಸ್ಥಳದ ಬಗ್ಗೆ ಅವಹೇಳನ: ವಿಚಾರಣೆಗೆ ಹಾಜರಾದ ಲಾಯರ್ ಜಗದೀಶ್ Read More »

ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ವಿಚಾರಣೆಗೆ ಹಾಜರಾದ ತಿಮರೋಡಿ

ಬೆಳ್ತಂಗಡಿ: ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಅವರನ್ನು ಅವಹೇಳನ ಮಾಡಿದ ಆರೋಪದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ಸಂದರ್ಭ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿತ್ತು. ಈ ಪ್ರಕರಣದಲ್ಲಿ ತಿಮರೋಡಿ 3 ನೇ ಆರೋಪಿಯಾಗಿದ್ದು, ಈ ಪ್ರಕರಣದ ವಿಚಾರಣೆಗಾಗಿ ಇಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಹಾಗೆಯೇ ಅನನ್ಯ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಹೀಗೆ ಸುಜಾತ ಭಟ್ ಅವರು ತಮ್ಮ ನಾಲ್ಕನೇ ದಿನದ ವಿಚಾರಣೆಗಾಗಿ ಬೆಳ್ತಂಗಡಿ SIT ಕಚೇರಿಗೆ ಆಗಮಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಲು SIT ಮುಖ್ಯಸ್ಥ

ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ವಿಚಾರಣೆಗೆ ಹಾಜರಾದ ತಿಮರೋಡಿ Read More »

ಆ. 31: ಧರ್ಮಸ್ಥಳಕ್ಕೆ ನೈತಿಕ ಬಲ‌ ತುಂಬಲು ಜೆಡಿಎಸ್‌ನಿಂದ ‘ಧರ್ಮಸ್ಥಳ ಸತ್ಯ ಯಾತ್ರೆ’

ಬೆಂಗಳೂರು: ಧರ್ಮಸ್ಥಳ ಕ್ಷೇತ್ರದ ಮೇಲೆ ಅಪಪ್ರಚಾರ, ಷಡ್ಯಂತ್ರ, ಸುಳ್ಳು ಆರೋಪಗಳು ನಡೆಯುತ್ತಿದ್ದು, ಇದನ್ನು ವಿರೋಧಿಸಿ ಜೆಡಿಎಸ್ ಆ.31 ರಂದು ಧರ್ಮಸ್ಥಳ ಸತ್ಯ ಯಾತ್ರೆ ಕೈಗೊಂಡಿರುವುದಾಗಿ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಸರ್ಕಾರ ಧರ್ಮಸ್ಥಳಕ್ಕೆ ಅಪಮಾನ ಮಾಡಲು ಮುಂದಾಗಿದೆ. ನಾನು ಒಬ್ಬ ಭಕ್ತನಾಗಿ ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರ ಜೊತೆ ಧರ್ಮಸ್ಥಳಕ್ಕೆ ತೆರಳಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ಪಾರದರ್ಶಕವಾಗಿ ನಡೆದಿದೆಯೇ? ಇದರ ಹಿಂದೆ ಯಾರಿದ್ದಾರೆ?

ಆ. 31: ಧರ್ಮಸ್ಥಳಕ್ಕೆ ನೈತಿಕ ಬಲ‌ ತುಂಬಲು ಜೆಡಿಎಸ್‌ನಿಂದ ‘ಧರ್ಮಸ್ಥಳ ಸತ್ಯ ಯಾತ್ರೆ’ Read More »

ನಿವೃತ್ತಿ ಬಗ್ಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?

ನವದೆಹಲಿ: 75 ವರ್ಷಗಳನ್ನು ಪೂರೈಸಿದ ಬಳಿಕ ನಾನು ನಿವೃತ್ತಿ ಹೊಂದಬೇಕು ಅಥವಾ ನಿವೃತ್ತಿ ಹೊಂದುವುದಾಗಿ ಎಲ್ಲಿಯೂ ಹೇಳಿಲ್ಲ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಅವರು ಸ್ಪಷ್ಚನೆ ನೀಡಿದ್ದಾರೆ. ಮುಂದಿನ ತಿಂಗಳು ಪ್ರಧಾನಿ ಮೋದಿ ಮತ್ತು ಮೋಹನ್ ಭಾಗ್ವತ್ ಅವರಿಬ್ಬರೂ 75 ವರ್ಷಕ್ಕೆ ಕಾಲಿಡಲಿದ್ದು, ಈ‌ ಸಂದರ್ಭದಲ್ಲಿಯೇ ಅವರು ಈ ಸ್ಪಷ್ಟನೆ ‌ನೀಡಿರುವುದಾಗಿದೆ. 75 ವರ್ಷಕ್ಕೆ ನಿವೃತ್ತಿ ಹೊಂದುವ ವಿಷಯದಲ್ಲಿ ವಿರೋಧಿಗಳು ಭಾಗ್ವತ್ ಅವರ ಈ ಹಿಂದಿನ ಹೇಳಿಕೆಯೊಂದನ್ನು ವ್ಯಂಗ್ಯ ಮಾಡುತ್ತಿದ್ದು, ಆ ಕಾರಣಕ್ಕೆ ಈ ಸ್ಪಷ್ಟೀಕರಣ

ನಿವೃತ್ತಿ ಬಗ್ಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು? Read More »

ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬರೆದ ಉಡುಪಿಯ ವಿದುಷಿ ದೀಕ್ಷಾ

ಉಡುಪಿ: 216 ಗಂಟೆಗಳ ಕಾಲ ಭರತನಾಟ್ಯ ಮಾಡುವ ಗುರಿಯೊಂದಿಗೆ ಆ.21 ರಂದು ನೃತ್ಯ ಆರಂಭ ಮಾಡಿದ್ದ ಉಡುಪಿಯ ವಿದುಷಿ ದೀಕ್ಷಾ ಅವರ ಹೆಸರು ಸದ್ಯ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ನಲ್ಲಿ ಅಚ್ಚಾಗಿದೆ. ಕೆಲ ದಿನಗಳ ಹಿಂದಷ್ಟೇ ಭರತನಾಟ್ಯ 170 ಗಂಟೆಗಳ ಕಾಲ ಭರತನಾಟ್ಯ ಮಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತಮ್ಮ ಹೆಸರು ದಾಖಲಾಗುವಂತೆ ಮಾಡಿದ್ದ ಮಂಗಳೂರಿನ ರೆಮೊನಾ ಪಿರೇರಾ ಅವರ ದಾಖಲೆ ಮುರಿದು, ಹೊಸ ದಾಖಲೆ ಬರೆದಿದ್ದಾರೆ. ದೀಕ್ಷಾ ಅವರು 170 ಗಂಟೆಗಳ

ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬರೆದ ಉಡುಪಿಯ ವಿದುಷಿ ದೀಕ್ಷಾ Read More »

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಮಾತು: ಕಾಂಗ್ರೆಸ್ ಕ್ಷಮೆ ಯಾಚನೆಗೆ ಬಿಜೆಪಿ ಆಗ್ರಹ

ಪಾಟ್ನಾ: ಬಿಹಾರದಲ್ಲಿ ನಡೆಯುತ್ತಿರುವ ರಾಹುಲ್ ಗಾಂಧಿ ಅವರ ವೋಟರ್ ಅಧಿಕಾರ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ಮತ್ತು ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಬಗ್ಗೆ ಕಾಂಗ್ರೆಸ್ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಈ ಸಂಬಂಧ ವಿಡಿಯೋ ವೈರಲ್ ಆಗಿದ್ದು ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರ ಬ್ಯಾನರ್ ಹೊಂದಿದ್ದ ವೇದಿಕೆಯಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಶಬ್ದ ಬಳಸಿ ನಿಂದಿಸಿರುವುದಾಗಿದೆ. ಹಾಗೆಯೇ ಅಲ್ಲಿನ ಟಿಕೆಟ್

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಮಾತು: ಕಾಂಗ್ರೆಸ್ ಕ್ಷಮೆ ಯಾಚನೆಗೆ ಬಿಜೆಪಿ ಆಗ್ರಹ Read More »

ನನ್ನ ಮಾತುಗಳಲ್ಲಿ ತಪ್ಪು ಹುಡುಕುವುದೇ ಕೆಲವರ ಕೆಲಸವಾಗಿದೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ಸತ್ಯ ಹೇಳಿದರೆ ಅದನ್ನು ಸಹಿಸುವ ‌ಶಕ್ತಿ ಕೆಲವರಿಗೆ ಇರುವುದಿಲ್ಲ. ಆದ್ದರಿಂದ ನಾನು ಮಾತನಾಡದೆ ಇರುವುದೇ ಉತ್ತಮ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಸದನವೂ ಸೇರಿದಂತೆ ನಾನು ಎಲ್ಲಿ ಏನೇ ಮಾತನಾಡಲಿ, ಅದರಲ್ಲಿ ಕೇವಲ ತಪ್ಪು ಕಂಡು ಹಿಡಿಯುವುದೇ ಬೇರೆಯವರ ಕೆಲಸವಾಗಿದೆ. ರಾಜಕೀಯದವರು, ಪ್ರಮೋದ ದೇವಿಯವರು, ಯದುವೀರ್ ಅವರು, ವಿಧಾನಸಭೆಯಲ್ಲಿ ಹೀಗೆ ನನ್ನ ಮಾತುಗಳನ್ನು ತಪ್ಪು ಹುಡುಕುವುದೇ ‌ಆಗಿದೆ ಎಂದಿದ್ದಾರೆ. ಈ ಕಾರಣದಿಂದ ನಾನು ಮಾತನಾಡದೆ ಇರುವುದೇ ಉತ್ತಮ ಎಂದು ಕಾಣುತ್ತದೆ. ಈ ವಿಚಾರಗಳನ್ನು

ನನ್ನ ಮಾತುಗಳಲ್ಲಿ ತಪ್ಪು ಹುಡುಕುವುದೇ ಕೆಲವರ ಕೆಲಸವಾಗಿದೆ: ಡಿ.ಕೆ. ಶಿವಕುಮಾರ್ Read More »

error: Content is protected !!
Scroll to Top