Uncategorized

RSS ಸೇವಾ ಮನೋಭಾವ ಎಲ್ಲರಿಗೂ ಸ್ಪೂರ್ತಿ: ವಿವೇಕ್ ಅಗ್ನಿಹೋತ್ರಿ

ನವದೆಹಲಿ: RSS ಸಾಧನೆಗಳು, ಸೇವಾ ಮನೋಭಾವದಿಂದ ನಾವೆಲ್ಲರೂ ಸ್ಪೂರ್ತಿ ಪಡೆಯಬೇಕು ಎಂದು ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. RSS ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವೆಯ ಭಾಷೆ ಮೌನ, ಇದನ್ನು ನಾನು RSS ನಿಂದ ಕಲಿತಿದ್ದೇನೆ. ಮೌನದಿಂದಲೇ ದೇಶ ಸೇವೆ ಮಾಡುವುದು, ಜನ ಸೇವೆ ಮಾಡುವುದಕ್ಕಿಂತ ದೊಡ್ಡ ಪವಿತ್ರವಾದ ಕಾರ್ಯ ಬೇರೊಂದಿಲ್ಲ. ಈ ವೇದಿಕೆಗೆ ನಾನು ಒಬ್ಬ ಭಾರತೀಯನಾಗಿ, ಕಲಾವಿದನಾಗಿ ಬಂದಿದ್ದೇನೆ ಎಂದು ತಿಳಿಸಿದ್ದಾರೆ. ಅಗ್ನಿಹೋತ್ರಿ ಅವರು ‘ದಿ ಕಾಶ್ಮೀರ್ ಫೈಲ್ಸ್’, ‘ದಿ ತಾಷ್ಕೆಂಟ್ […]

RSS ಸೇವಾ ಮನೋಭಾವ ಎಲ್ಲರಿಗೂ ಸ್ಪೂರ್ತಿ: ವಿವೇಕ್ ಅಗ್ನಿಹೋತ್ರಿ Read More »

ದೂರು ಹಿಂಪಡೆಯಲು ಮುಂದಾದ ಸುಜಾತ ಭಟ್: ಸಮ್ಮತಿ ನೀಡದ SIT

ಧರ್ಮಸ್ಥಳ: ತನ್ನ ಮಗಳು ಅನನ್ಯ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ ಸುಜಾತ ಭಟ್ ಅವರು ಇಂದು SIT ತನಿಖೆಗೆ ಹಾಜರಾಗಿದ್ದಾರೆ‌. ಆ. 27 ರಂದು ಸುಜಾತ ಭಟ್ ಅವರನ್ನು SIT ಅಧಿಕಾರಿಗಳು ಬೆಳಗ್ಗೆ 10 ಗಂಟೆಯಿಂದ ರಾತ್ರಿ 9.30 ರ ವರೆಗೆ ವಿಚಾರಣೆ ನಡೆಸಿದ್ದರು. SIT ಅಧಿಕಾರಿಗಳು ಕಳೆದ ಮೂರು ದಿನಗಳಿಂದಲೂ ಸುಜಾತ ಭಟ್ ಅವರನ್ನು ವಿಚಾರಣೆ ನಡೆಸುತ್ತಿದ್ದು, ಇದರಿಂದ ಬೇಸತ್ತ ಅವರು ತಾವು ನೀಡಿರುವ ದೂರನ್ನು ಹಿಂಪಡೆಯುವುದಾಗಿಯೂ ಹೇಳಿದ್ದಾರೆ. ಆದರೆ SIT ಅಧಿಕಾರಿಗಳು

ದೂರು ಹಿಂಪಡೆಯಲು ಮುಂದಾದ ಸುಜಾತ ಭಟ್: ಸಮ್ಮತಿ ನೀಡದ SIT Read More »

ಹೆಲ್ಮೆಟ್ ಇಲ್ಲ, ಇಂಧನ ಇಲ್ಲ: ಯೋಗಿ ಸರ್ಕಾರದ ವಿಭಿನ್ನ ರಸ್ತೆ ಸುರಕ್ಷತಾ ಸಪ್ತಾಹ

ಲಕ್ನೋ: ಉತ್ತರ ಪ್ರದೇಶದ ಸಿ ಎಂ ಯೋಗಿ ಆದಿತ್ಯನಾಥ್ ಸರ್ಕಾರವು ಸೆ. 1 ರಿಂದ 30 ರ ವರೆಗೆ ರಾಜ್ಯಾದ್ಯಂತ ರಸ್ತೆ ಸುರಕ್ಷತಾ ಅಭಿಯಾನ ನಡೆಸಲಿದ್ದು, ಇದಕ್ಕೆ ಅನುಗುಣವಾಗಿ ‘ಹೆಲ್ಮೆಟ್ ಇಲ್ಲ, ಇಂಧನ ಇಲ್ಲ’ ಅಭಿಯಾನ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಅಭಿಯಾನದ ಅಡಿಯಲ್ಲಿ ಜಿಲ್ಲಾಧಿಕಾರಿಗಳು ರಸ್ತೆ ಸುರಕ್ಷತಾ ಸಮಿತಿಯ ಸಮನ್ವಯದಲ್ಲಿ ಪೊಲೀಸ್, ಸಾರಿಗೆ, ಕಂದಾಯ ಅಧಿಕಾರಿಗಳು ಮೋಟರ್ ವಾಹನ ಕಾಯ್ದೆಯಡಿ ದ್ವಿಚಕ್ರ ಸವಾರರು ಹೆಲ್ಮೆಟ್ ಕಡ್ಡಾಯ ನಿಯಮಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಜಂಟಿಯಾಗಿ ಕೆಲಸ ಮಾಡಲಿದ್ದಾರೆ.

ಹೆಲ್ಮೆಟ್ ಇಲ್ಲ, ಇಂಧನ ಇಲ್ಲ: ಯೋಗಿ ಸರ್ಕಾರದ ವಿಭಿನ್ನ ರಸ್ತೆ ಸುರಕ್ಷತಾ ಸಪ್ತಾಹ Read More »

ದೇವರಿಗೆ ಯಾವುದೇ ಧರ್ಮ ವಿ ಎಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು: ಗಾಳಿ, ಬೆಳಕು, ನೀರಿಗೆ ಹೇಗೆ ಯಾವುದೇ ಜಾತಿ ಧರ್ಮ ಇಲ್ಲವೋ ಹಾಗೆಯೇ ಯಾವುದೇ ದೇವರಿಗೂ ಸಹ ಧರ್ಮವಿಲ್ಲ. ಪ್ರಾರ್ಥನೆ ಯಾರೊಬ್ಬರ ‌ಸೊತ್ತು ಅಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನಾನು ನಂಬಿದ ಗುರುಗಳು ಮಾನವ ಧರ್ಮದ ಮೂಲಕ ಜಗತ್ತಿಗೆ ಶಾಂತಿ ಎಂದು ಹೇಳಿದ್ದಾಗಿ ಅವರು ತಿಳಿಸಿದ್ದಾರೆ. ಚಾಮುಂಡೇಶ್ವರಿ ಎಲ್ಲಾ ಧರ್ಮದವರಿಗೂ ಆಶೀರ್ವಾದ ಮಾಡುವ ದೇವರು. ರಾಜವಂಶಸ್ಥರು ಮತ್ತು ಆಮೇಲೆ ಬಂದ ಸರ್ಕಾರ ಚಾಮುಂಡೇಶ್ವರಿಯನ್ನು ನಾಡ ದೇವಿ ಎಂದು ಕರೆದಿದ್ದಾರೆ. ಈ ದೇವಾಲಯ ಸಾರ್ವಜನಿಕರ ಆಸ್ತಿ.

ದೇವರಿಗೆ ಯಾವುದೇ ಧರ್ಮ ವಿ ಎಲ್ಲ: ಡಿ.ಕೆ. ಶಿವಕುಮಾರ್ Read More »

ಡಿ.ಕೆ. ಶಿವಕುಮಾರ್ ಕ್ಷಮೆ ಯಾಚನೆ: ಜೆಡಿಎಸ್ ಲೇವಡಿ

ಬೆಂಗಳೂರು: ಸದನದಲ್ಲಿ RSS ಗೀತೆ ಹಾಡಿ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕ್ಷಮೆ ಕೇಳಿದ್ದು, ಅವರ ಈ ನಡೆಯನ್ನು JDS ಟೀಕಿಸಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಲೇವಡಿ ಮಾಡಿ ಪೋಸ್ಟ್ ಮಾಡಿರುವ JDS, ಉಚ್ಛಾಟನೆಗೆ ಹೆದರಿ ಕ್ಷಮೆ ಯಾಚನೆ ಮಾಡಿದ ಉಪಮುಖ್ಯಮಂತ್ರಿ ಎಂದು ಕಾಲೆಳೆದಿದೆ. ಸದನದಲ್ಲಿ ಹುಲಿ, ಹೈಕಮಾಂಡ್ ಮುಂದೆ ಇಲಿ. ವಿಧಾನ ಸಭೆಯಲ್ಲಿ RSS ಗೀತೆ ಹಾಡಿ ಇಟಲಿ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ರಣಹೇಡಿ ಡಿಕೆಶಿ ಅಧಿಕಾರ ಉಳಿಸಿಕೊಳ್ಳಲು,

ಡಿ.ಕೆ. ಶಿವಕುಮಾರ್ ಕ್ಷಮೆ ಯಾಚನೆ: ಜೆಡಿಎಸ್ ಲೇವಡಿ Read More »

ಕಣಿವೆ ರಾಜ್ಯದಲ್ಲಿ ಮತ್ತೆ ಮೇಘಸ್ಪೋಟ: 4 ಸಾವು

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಧೋಡಾ ಜಿಲ್ಲೆಯಲ್ಲಿ ಭಾರೀ ಮೇಘಸ್ಪೋಟ ನಡೆದಿದ್ದು, ದಿಢೀರ್ ಪ್ರವಾಹದಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಹ ಕಾರಣದಿಂದ ಚೆನಾಬ್ ನದಿ ಉಕ್ಕಿ ಹರಿಯುತ್ತಿದ್ದು, ಭಾರೀ ಮಳೆಯ ಕಾರಣಕ್ಕೆ 10 ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಕಥುವಾ ಮತ್ತು ಕಿಶ್ತ್ವಾರ್‌ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿದ ನಂತರ ಈಗ ಧೋಡಾ‌ದಲ್ಲಿಯೂ ಮೇಘಸ್ಪೋಟ ಸಂಭವಿಸಿರುವುದಾಗಿದೆ. ಜಮ್ಮು ಕಾಶ್ಮೀರದ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗಿವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದ್ದು, ಆ ಬಳಿಕ ಈ ಘಟನೆ

ಕಣಿವೆ ರಾಜ್ಯದಲ್ಲಿ ಮತ್ತೆ ಮೇಘಸ್ಪೋಟ: 4 ಸಾವು Read More »

ಪ್ರಿಯತಮನ ಜೊತೆ ಸೇರಿ ಅತ್ತೆಯನ್ನೇ ಕೊಂದ ಖತರ್ನಾಕ್ ಸೊಸೆ ಪೊಲೀಸ್ ವಶಕ್ಕೆ

ಚಿಕ್ಕಮಗಳೂರು: ರಾಗಿ ಮುದ್ದೆಯಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ತೆಯನ್ನು ಸೊಸೆಯೊಬ್ಬಳು ಹತ್ಯೆ ಮಾಡಿದ ಘಟನೆ ಅಜ್ಜಂಪುರದ ತಡಗ ಗ್ರಾಮದಲ್ಲಿ ನಡೆದಿದೆ. ಪ್ರಿಯಕರ ಆಂಜನೇಯ ಎಂಬಾತನ ಜೊತೆ ಸೇರಿ ಸೊಸೆ ಅಶ್ವಿನಿ ಎಂಬಾಕೆ ಈ ಕುಕೃತ್ಯ ಎಸಗಿದ್ದು, ಬಳಿಕ ಚಿನ್ನಾಭರಣ ಕಳವು ಮಾಡಿದ್ದು, ಸದ್ಯ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ದೋಚಿದ್ದ ಚಿನ್ನಾಭರಣವನ್ನು ಪೊಲೀಸರು ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಅಶ್ವಿನಿಯ ಅತ್ತೆ ದೇವೀರಮ್ಮ ಮೃತಪಟ್ಟಿದ್ದು, ಇದನ್ನು ಸಹಜ ಮರಣ ಎಂದು ಭಾವಿಸಿ ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿದ್ದರು. ಆದರೆ

ಪ್ರಿಯತಮನ ಜೊತೆ ಸೇರಿ ಅತ್ತೆಯನ್ನೇ ಕೊಂದ ಖತರ್ನಾಕ್ ಸೊಸೆ ಪೊಲೀಸ್ ವಶಕ್ಕೆ Read More »

ಲೀಥಿಯಂ ಐಯಾನ್ ಬ್ಯಾಟರಿ ಉತ್ಪಾದನಾ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ: ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳ ಲೀಥಿಯಂ ಐಯಾನ್ ಬ್ಯಾಟರಿ ಉತ್ಪಾದನಾ ಘಟಕವನ್ನು ಅಹಮದಾಬಾದ್‌ನಲ್ಲಿ ಉದ್ಘಾಟಿಸಿದ ‌ಪ್ರಧಾನಿ ಮೋದಿ ಅವರು ಇದು ಮೇಕ್ ಇನ್ ಇಂಡಿಯಾ ಯಾನಕ್ಕೆ ಹೊಸ ಅಧ್ಯಾಯ ಸೇರ್ಪಡೆಯಾಗಿರುವುದಾಗಿ ತಿಳಿಸಿದ್ದಾರೆ. ಮೇಕ್ ಇನ್ ಇಂಡಿಯಾ’ ಮತ್ತು ‘ಮೇಕ್ ಫಾರ್ ದಿ ವರ್ಲ್ಡ್’ ಎಂಬ ಗುರಿಗಳತ್ತ ಭಾರತದ ದೊಡ್ಜ ಜಿಗಿತ ಇದಾಗಿದೆ. ಭಾರತ ಈಗ 100 ದೇಶಗಳಿಗೆ ವಿದ್ಯುತ್‌ ವಾಹನಗಳನ್ನು ರಫ್ತು ಮಾಡಲಿದೆ ಮತ್ತು ದೇಶದಲ್ಲಿ ಹೈಬ್ರಿಡ್ ಬ್ಯಾಟರಿ ಎಲೆಕ್ಟೋಲೈಟ್ ಉತ್ಪಾದನೆ ಪ್ರಾರಂಭವಾಗಿದೆ ಎಂದಿದ್ದಾರೆ. ಗಣೇಶೋತ್ಸವದ ಶುಭ

ಲೀಥಿಯಂ ಐಯಾನ್ ಬ್ಯಾಟರಿ ಉತ್ಪಾದನಾ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ Read More »

ಡಿಕೆಶಿ ಬಗ್ಗೆ ಹೈಕಮಾಂಡ್‌ ಮೃದು ಧೋರಣೆ ತಾಳಿದೆ: ಸತೀಶ್ ಜಾರಕಿಹೊಳಿ

ಬಾಗಲಕೋಟೆ: ರಾಜ್ಯದಲ್ಲಿ ನಡೆಯುವ ಎಲ್ಲಾ ವಿಷಯಗಳು ರಾಹುಲ್ ಗಾಂಧಿಯನ್ನು ತಲುಪುವುದಿಲ್ಲ. ಕೆಲವು ವಿಷಯಗಳಷ್ಟೇ ತಲುಪುತ್ತವೆ. ಎಲ್ಲಾ ವಿಷಯಗಳು ಹೈಕಮಾಂಡ್‌ಗೆ ತಿಳಿಯುವಂತಾಗಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಡಿಕೆಶಿ ಅವರು ಸದನದಲ್ಲಿ RSS ಗೀತೆ ಹಾಡಿರುವುದಕ್ಕೆ ಅವರೇ ಉತ್ತರಿಸಬೇಕು. ನಾನು ಈ ಬಗ್ಗೆ ಮಾತನಾಡಲು ಆಗುವುದಿಲ್ಲ. ಈ ಬಗ್ಗೆ ಸಿ ಎಂ ಸಿದ್ದರಾಮಯ್ಯ, ಪಕ್ಷದ ಹೈಕಮಾಂಡ್ ಚರ್ಚೆ ಮಾಡಬೇಕು. ನಮ್ಮ ಮಟ್ಟದಲ್ಲಿ ಆಗಬೇಕಾದ ಚರ್ಚೆಯಲ್ಲ. ಈ ಎಲ್ಲ ವಿಷಯಗಳನ್ನು ರಾಹುಲ್ ಗಾಂಧಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು

ಡಿಕೆಶಿ ಬಗ್ಗೆ ಹೈಕಮಾಂಡ್‌ ಮೃದು ಧೋರಣೆ ತಾಳಿದೆ: ಸತೀಶ್ ಜಾರಕಿಹೊಳಿ Read More »

ನನ್ನ ಗಂಡನ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿಲ್ಲ: ಮಾಸ್ಕ್ ಮ್ಯಾನ್ ಚೆನ್ನಯ್ಯನ ಎರಡನೇ ಪತ್ನಿ ಹೇಳಿಕೆ

ಚಾಮರಾಜನಗರ: ಧರ್ಮಸ್ಥಳ ಪ್ರಕರಣದ ಮಾಸ್ಕ್‌ಮ್ಯಾನ್ ಚೆನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಮಾತನಾಡಿದ್ದು, ನಾನು ಮತ್ತು ನನ್ನ ಗಂಡ ಯಾವುದೇ ಧರ್ಮಕ್ಕೂ ಮತಾಂತರ ಆಗಿಲ್ಲ. ಧರ್ಮಸ್ಥಳದಲ್ಲಿ ಶವ ಹೂಳಿರುವುದಕ್ಕೆ ‌ಸಂಬಂಧಿಸಿದ ಹಾಗೆ ಅವರು ನನ್ನ ಬಳಿ ಏನನ್ನೂ ಹೇಳಿಲ್ಲ. ಅವರ ಹಿಂದೆ ಯಾರಿದ್ದಾರೆ ಎನ್ನುವುದು ತಿಳಿದಿಲ್ಲ ಎಂದು ಹೇಳಿದ್ದಾರೆ. ಚೆನ್ನಯ್ಯ ತನ್ನ ಎರಡನೇ ಪತ್ನಿ ಮಲ್ಲಿಕಾ ಜೊತೆಗೆ ತಮಿಳುನಾಡಿನಲ್ಲಿ ವಾಸವಿದ್ದು, ಕಳೆದ ಎರಡೂವರೆ ತಿಂಗಳ ಹಿಂದೆ ಕೂಲಿ ಕೆಲಸಕ್ಕೆಂದು ಹೋದವನು ಮತ್ತೆ ಬಂದಿರಲಿಲ್ಲ. ಅವರ ಅಣ್ಣ ಕ್ರೈಸ್ತ ಪಾದ್ರಿಯಾಗಿದ್ದು,

ನನ್ನ ಗಂಡನ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿಲ್ಲ: ಮಾಸ್ಕ್ ಮ್ಯಾನ್ ಚೆನ್ನಯ್ಯನ ಎರಡನೇ ಪತ್ನಿ ಹೇಳಿಕೆ Read More »

error: Content is protected !!
Scroll to Top