ರಾಜ್ಯ

GST ನೊಟೀಸ್ ನೀಡುವ ಮೂಲಕ ಬಡವರಿಗೆ ಬಿಜೆಪಿಯಿಂದ ಕಿರುಕುಳ: ಡಿ.ಕೆ. ಶಿವಕುಮಾರ್

ಬೆಂಗಳೂರು: ಬಿಜೆಪಿಯವರು ಬೆಣ್ಣೆ ತಿಂದು ಕಾಂಗ್ರೆಸ್ ಮೂತಿಗೆ ಒರೆಸುವ ತಂತ್ರ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಸಣ್ಣ ವ್ಯಾಪಾರಿಗಳಿಗೆ GST ನೊಟೀಸ್ ಜಾರಿ ಮಾಡುವ ಮೂಲಕ ಬಿಜೆಪಿ ಬಡವರಿಗೆ ಕಿರುಕುಳ ನೀಡುತ್ತಿದೆ. ಈ ನೀತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ 2019 ರಲ್ಲೇ ವಹಿವಾಟು ಮಿತಿ ನಿಗದಿ ಮಾಡಿ ಇದನ್ನು ಪಾಲಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ‌ಸೂಚಿಸಿದೆ. ಸಣ್ಣ ವ್ಯಾಪಾರದ ಮೂಲಕ ಜೀವನ ಕಟ್ಟಿಕೊಂಡ 14 ಸಾವಿರ ವ್ಯಾಪಾರಿಗಳಿಗೆ ಈಗಾಗಲೇ ನೊಟೀಸ್ […]

GST ನೊಟೀಸ್ ನೀಡುವ ಮೂಲಕ ಬಡವರಿಗೆ ಬಿಜೆಪಿಯಿಂದ ಕಿರುಕುಳ: ಡಿ.ಕೆ. ಶಿವಕುಮಾರ್ Read More »

ರಾಜ್ಯದಲ್ಲಿನ್ನು VIP ವಾಹನಗಳ ಸೈರನ್‌ಗಿಲ್ಲ ಅವಕಾಶ: ಪೊಲೀಸ್ ಮಹಾನಿರ್ದೇಶಕರಿಂದ ಮಹತ್ವದ ಆದೇಶ

ಬೆಂಗಳೂರು: ಗಣ್ಯ ವ್ಯಕ್ತಿಗಳ ವಿಐಪಿ ಸಂಚಾರದ ವೇಳೆ ಸೈರನ್ ‌ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಅವರು ಮಹತ್ವದ ಆದೇಶ‌ ಹೊರಡಿಸಿದ್ದಾರೆ. ಶಬ್ಧ ಮಾಲಿನ್ಯ ತಪ್ಪಿಸುವುದು ಮುತ್ತು ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಸೈರನ್ ‌ನಿಷೇಧಿಸಲಾಗಿದೆ. ಜೊತೆಗೆ ಗಣ್ಯ ವ್ಯಕ್ತಿಗಳ ವಾಹನಗಳ ಸೈರನ್ ಶಬ್ದದಿಂದ ಅವರು ಸಂಚರಿಸುವ ಮಾರ್ಗದ ಬಗ್ಗೆ ಅನಧಿಕೃತ ವ್ಯಕ್ತಿಗಳಿಗೂ ಮಾಹಿತಿ ಸಿಗುತ್ತದೆ. ಕೆಲ ಸಂದರ್ಭದಲ್ಲಿ ಇದು ಅಪಾಯಕ್ಕೂ ‌ಕಾರಣವಾಗುತ್ತದೆ ಎಂಬ ಕಾರಣಕ್ಕೆ ಸೈರನ್ ‌ನಿಷೇಧಕ್ಕೆ ಮುಂದಾಗಿರುವುದಾಗಿದೆ‌. ಸಾರ್ವಜನಿಕ ಸ್ಥಳಗಳಲ್ಲಿ

ರಾಜ್ಯದಲ್ಲಿನ್ನು VIP ವಾಹನಗಳ ಸೈರನ್‌ಗಿಲ್ಲ ಅವಕಾಶ: ಪೊಲೀಸ್ ಮಹಾನಿರ್ದೇಶಕರಿಂದ ಮಹತ್ವದ ಆದೇಶ Read More »

ಸಿದ್ದರಾಮಯ್ಯ ಅವರದ್ದು ಹೋರಾಟದ ಹಿನ್ನೆಲೆ ಅಲ್ಲ : ಬಿ.ವೈ. ವಿಜಯೇಂದ್ರ

ವಿಜಯನಗರ: ಸಿ ಎಂ ಸಿದ್ದರಾಮಯ್ಯ ಅವರು ಅಹಿಂದ ಹೆಸರು ಬಳಸಿಕೊಂಡು ಡಾ. ಜಿ. ಪರಮೇಶ್ವರ್, ಖರ್ಗೆ ಅವರನ್ನು ತುಳಿಯುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ‌ಬಿ. ವೈ. ವಿಜಯೇಂದ್ರ ಹೇಳಿದ್ದಾರೆ. ವಿಜಯನಗರದ ಕಾನಾಮಡುಗು ದಾಸೋಹ ಮಠಕ್ಕೆ ಭೇಟಿ ನೀಡಿದ ಅವರು ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು‌. ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಾಧನಾ ಸಮಾವೇಶ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಮಾಡಿದ ಕಾರ್ಯಕ್ರಮ. ಈ ಸಮಾವೇಶದ ಮೂಲಕ ಹೈಕಮಾಂಡ್ ಅನ್ನು ಬೆದರಿಸುವ ಪ್ರಯತ್ನ ಮಾಡಿದ್ದಾರೆ

ಸಿದ್ದರಾಮಯ್ಯ ಅವರದ್ದು ಹೋರಾಟದ ಹಿನ್ನೆಲೆ ಅಲ್ಲ : ಬಿ.ವೈ. ವಿಜಯೇಂದ್ರ Read More »

ಮುಡಾ ಹಗರಣ : ಸಿದ್ದರಾಮಯ್ಯ ಪತ್ನಿಗೆ ಸುಪ್ರೀಂ ಕೋರ್ಟ್‌ ರಿಲೀಫ್‌

ಮೇಲ್ಮನವಿ ಸಲ್ಲಿಸಿದ್ದ ಇ.ಡಿ.ಗೆ ಮುಖ್ಯ ನ್ಯಾಯಮೂರ್ತಿಯಿಂದ ತರಾಟೆ ಬೆಂಗಳೂರು : ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ತನಿಖೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್​​ಗೆ ಸುಪ್ರೀಂ ಕೋರ್ಟ್​ನಲ್ಲಿ ರಿಲೀಫ್ ದೊರೆತಿದೆ. ಪಾರ್ವತಿ ಅವರಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ನೋಟಿಸನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಇ.ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅಷ್ಟೇ ಅಲ್ಲದೆ, ಇ.ಡಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಅರ್ಜಿಯ

ಮುಡಾ ಹಗರಣ : ಸಿದ್ದರಾಮಯ್ಯ ಪತ್ನಿಗೆ ಸುಪ್ರೀಂ ಕೋರ್ಟ್‌ ರಿಲೀಫ್‌ Read More »

ಕನ್ವರ್ ಯಾತ್ರೆಗೆ ಅಪಖ್ಯಾತಿ ತರುವವರ ವಿರುದ್ಧ ಕ್ರಮ: ಸಿಎಂ ‌ಯೋಗೀಜಿ

ಲಕ್ನೋ: ಸೋಷಿಯಲ್ ಮೀಡಿಯಾಗಳನ್ನು ಬಳಸಿ ಕೆಲವು ಜನರು ಕನ್ವರ್ ಯಾತ್ರೆಗೆ ಅಪಖ್ಯಾತಿ ತರಲು ಯತ್ನಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ ಕಿಡಿ ಕಾರಿದ್ದಾರೆ. ಎಲ್ಲಿ ಉತ್ಸಾಹ, ನಂಬಿಕೆ, ಭಕ್ತಿ ಇರುತ್ತದೆಯೋ ಅಲ್ಲಿ ಅದನ್ನು ಭಂಗಗೊಳಿಸಲು, ಕೆಣಕಲು ಕೆಲವು ಅಂಶಗಳು ಪ್ರಯತ್ನ ನಡೆಸುತ್ತಲೇ ಇರುತ್ತದೆ. ಹಾಗೆಯೇ ಪ್ರತಿಯೊಂದು ಕನ್ವರ್ ಸಂಘವೂ ಇಂತಹ ದುಷ್ಕೃತ್ಯಗಳನ್ನು ಬಯಲು ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ. ಕೆಲವು ದುಷ್ಟರು ಕನ್ವರ್ ಯಾತ್ರೆಗೆ ತೆರಳುವ ಗುಂಪುಗಳ ಜೊತೆಗೆ ಸೇರಿ ಆ ಯಾತ್ರೆಗೆ

ಕನ್ವರ್ ಯಾತ್ರೆಗೆ ಅಪಖ್ಯಾತಿ ತರುವವರ ವಿರುದ್ಧ ಕ್ರಮ: ಸಿಎಂ ‌ಯೋಗೀಜಿ Read More »

ಸರ್ಕಾರದ ಸಾಧನೆಗಳ ಬಹಿರಂಗ ಚರ್ಚೆಗೆ ನಾವು ಸಿದ್ಧ, ಆದರೆ ಬಿಜೆಪಿ ಬರುತ್ತಿಲ್ಲ: ಸಿಎಂ ‌ಸಿದ್ದರಾಮಯ್ಯ

ಮೈಸೂರು: ಸರ್ಕಾರದ ಸಾಧನೆಗೆ ಸಂಬಂಧಿಸಿದ ಹಾಗೆ ಬಹಿರಂಗ ಚರ್ಚೆಗೆ ನಾವು ಸಿದ್ಧ. ಆದರೆ ಸರ್ಕಾರದ ಸಾಧನೆಯ ಬಗ್ಗೆ ಸುಳ್ಳು ಹೇಳುವ ಬಿಜೆಪಿಗರು ಎಂದಿಗೂ ಬಹಿರಂಗ ಚರ್ಚೆಗೆ ಬರುವುದಿಲ್ಲ ಎಂದು ಸಿಎಂ ‌ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಿಸಿ‌ ಮಾತನಾಡಿದ ಅವರು, ಸಾಧನೆಗೆ ಸಂಬಂಧಿಸಿದ ಹಾಗೆ ಬಹಿರಂಗ ಚರ್ಚೆಗೆ ನಾನು ಹಲವು ಬಾರಿ ಬಿಜೆಪಿಗರನ್ನು ಆಹ್ವಾನಿಸಿದ್ದೇನೆ. ಆದರೆ ಅವರು ಚರ್ಚೆಗೆ ಬಂದಿಲ್ಲ. ಸುಳ್ಳು ಮಾತನಾಡುವವರು ಚರ್ಚೆ ಮಾಡಲು ಬರುವುದಿಲ್ಲ. ಅವರು ಚರ್ಚೆಗೆ ಬಂದರೆ ನಾವು ಚರ್ಚೆ

ಸರ್ಕಾರದ ಸಾಧನೆಗಳ ಬಹಿರಂಗ ಚರ್ಚೆಗೆ ನಾವು ಸಿದ್ಧ, ಆದರೆ ಬಿಜೆಪಿ ಬರುತ್ತಿಲ್ಲ: ಸಿಎಂ ‌ಸಿದ್ದರಾಮಯ್ಯ Read More »

ಮಂಜುನಾಥನ ಶಾಪದಿಂದ ಸರ್ಕಾರ ಸರ್ವನಾಶ : ಜನಾರ್ದನ ರೆಡ್ಡಿ ಆಕ್ರೋಶ

ಓಲೈಕೆಗಾಗಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಟೀಕೆ ಬೆಂಗಳೂರು: ಮಂಜುನಾಥನ ಶಾಪದಿಂದ ರಾಜ್ಯದ ಕಾಂಗ್ರೆಸ್‌ ಸರ್ಕಾರ ಸರ್ವನಾಶವಾಗಲಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಧರ್ಮಸ್ಥಳ ಪ್ರಕರಣಗಳ ಬೆಳವಣಿಗೆ ಹಿನ್ನೆಲೆಯಲ್ಲಿ ಭವಿಷ್ಯ ನುಡಿದಿದ್ದಾರೆ. ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣ ತನಿಖೆಗೆ ಎಸ್‍ಐಟಿ ರಚನೆ ಬಗ್ಗೆ ಪ್ರತಿಕ್ರಿಯಿಸಿ, ಇವತ್ತಿನ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿಯನ್ನುಜ ಅನುಸರಿಸುತ್ತಿದೆ. ಧರ್ಮಸ್ಥಳ ವಿಚಾರವನ್ನು ಬಹಳಷ್ಟು ವರ್ಷಗಳ ನಂತರ ಅನಗತ್ಯವಾಗಿ ಎಳೆಯುವಂಥ ಕೆಲಸ ಯಾರು ಮಾಡ್ತಿದ್ದಾರೆ ಎನ್ನುವುದು ಎಲ್ಲರಿಗೂ

ಮಂಜುನಾಥನ ಶಾಪದಿಂದ ಸರ್ಕಾರ ಸರ್ವನಾಶ : ಜನಾರ್ದನ ರೆಡ್ಡಿ ಆಕ್ರೋಶ Read More »

ನಮ್ಮ ಬೆಂಗಳೂರಿನ ‘ ನಮ್ಮ ಮೆಟ್ರೋ ‘ ರೈಲಿಗೆ ಚಾಲಕ ರಹಿತ ಅಂತಾರಾಷ್ಟ್ರೀಯ ಐಎಸ್‌ಎ (Independent Safety Assessment – ISA) ಗ್ರೀನ್ ಸಿಗ್ನಲ್ ವ್ಯವಸ್ಥೆ | ಬೆಂಗಳೂರಿನ ಹಳಿಗಳಿಗೆ ಮತ್ತೊಂದು ಹೈಟೆಕ್ ಕೊಡುಗೆ

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಿರ್ಮಿಸುತ್ತಿರುವ ಚಾಲಕ ರಹಿತ ಮೆಟ್ರೋ ವ್ಯವಸ್ಥೆಗೆ ಅಂತರರಾಷ್ಟ್ರೀಯ ಸ್ವತಂತ್ರ ಸುರಕ್ಷತಾ ಮೌಲ್ಯಮಾಪಕ ಸಂಸ್ಥೆಯಿಂದ ಹಸಿರು ನಿಶಾನೆ ದೊರೆತಿದೆ. ಇದು ಬೆಂಗಳೂರಿನ ಮೆಟ್ರೋ ಜಾಲದಲ್ಲಿ ಚಾಲಕ ರಹಿತ ರೈಲುಗಳ ಸುಗಮ-ಸುರಕ್ಷ-ಸ್ವತಂತ್ರ ಸಂಚಾರಕ್ಕೆ ನಾಂದಿ ಹಾಡಲಿದೆ. ಮೊದಲಿಗೆ ವಿಮಾನ ನಿಲ್ದಾಣ ಮಾರ್ಗ (ಬ್ಲೂ ಲೈನ್) ಮತ್ತು ನಂತರದಲ್ಲಿ ಇತರ ಮಾರ್ಗಗಳಲ್ಲಿ ಈ ವ್ಯವಸ್ಥೆಯಡಿಯಲ್ಲಿ ಸಂಚಾರವನ್ನು ಯೋಜಿಸಲಾಗಿದೆ. ಇದು ಅತ್ಯಾಧುನಿಕ ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ತಂತ್ರಜ್ಞಾನವನ್ನು ಅವಲಂಬಿಸಿದ್ದು, ಮಾನವನ ಹಸ್ತಕ್ಷೇಪವಿಲ್ಲದೆ ರೈಲುಗಳು

ನಮ್ಮ ಬೆಂಗಳೂರಿನ ‘ ನಮ್ಮ ಮೆಟ್ರೋ ‘ ರೈಲಿಗೆ ಚಾಲಕ ರಹಿತ ಅಂತಾರಾಷ್ಟ್ರೀಯ ಐಎಸ್‌ಎ (Independent Safety Assessment – ISA) ಗ್ರೀನ್ ಸಿಗ್ನಲ್ ವ್ಯವಸ್ಥೆ | ಬೆಂಗಳೂರಿನ ಹಳಿಗಳಿಗೆ ಮತ್ತೊಂದು ಹೈಟೆಕ್ ಕೊಡುಗೆ Read More »

ಅಬ್ಬಿ ಫಾಲ್ಸ್‌ನಲ್ಲಿ ಕೊಚ್ಚಿ ಹೋಗಿ ಯುವಕ ಸಾವು

ಬೆಂಗಳೂರಿನಿಂದ ಪ್ರವಾಸ ಬಂದು ಅಪಾಯ ಲೆಕ್ಕಿಸದೆ ಜಲಪಾತಕ್ಕಿಳಿದಿದ್ದ ಯುವಕ ಶಿವಮೊಗ್ಗ: ಹೊಸನಗರ ತಾಲೂಕಿನ ಅಬ್ಬಿ ಫಾಲ್ಸ್‌ನಲ್ಲಿ ಫೋಟೋ ತೆಗೆಸಿಕೊಳ್ಳಲು ಹೋಗಿ ಬೆಂಗಳೂರು ಮೂಲದ ಪ್ರವಾಸಿಗರೊಬ್ಬರು ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ. ಅವರನ್ನು ಬೆಂಗಳೂರಿನ ನಾಗರಬಾವಿಯ ಖಾಸಗಿ ಕಂಪನಿಯೊಂದರ ಮ್ಯಾನೇಜರ್ ರಮೇಶ್ (35) ಎಂದು ಗುರುತಿಸಲಾಗಿದೆ. ಐವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ. ಅಬ್ಬಿ ಫಾಲ್ಸ್‌ನಲ್ಲಿ ಫೋಟೊ ತೆಗೆಯಲು ಫೋಸ್‌ ಕೊಡಲು ಫಾಲ್ಸ್‌ಗೆ ಇಳಿದಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಫಾಲ್ಸ್‌ನಲ್ಲಿ ರಮೇಶ್‌ ಕಣ್ಮರೆಯಾಗುವ 20 ಸೆಕೆಂಡ್‌ನ ವಿಡಿಯೋ

ಅಬ್ಬಿ ಫಾಲ್ಸ್‌ನಲ್ಲಿ ಕೊಚ್ಚಿ ಹೋಗಿ ಯುವಕ ಸಾವು Read More »

ತನಿಖೆಗೆ ಎಸ್‌ಐಟಿ ರಚನೆ : ಧರ್ಮಸ್ಥಳದ ವಕ್ತಾರ ಸ್ವಾಗತ

ತನಿಖೆಯಿಂದ ಹಿಂದೆ ಸರಿಯಲಿದ್ದಾರಾ ಇಬ್ಬರು ಐಪಿಎಸ್‌ ಅಧಿಕಾರಿಗಳು? ಧರ್ಮಸ್ಥಳ: ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ನೂರಾರು ಶವಗಳನ್ನು ಹೂತಿರುವ ಆರೋಪದ ತನಿಖೆಗೆ ಎಸ್‌ಐಟಿ ರಚಿಸಿರುವುದನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ವಕ್ತಾರ ಕೆ.ಪಾರ್ಶ್ವನಾಥ್ ಜೈನ್ ಸ್ವಾಗತಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿದ ಅವರು, ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ‘ಹಲವಾರು ಶವಗಳನ್ನು ಹೂತಿದ್ದೆ’ ಎಂಬ ದೂರು ಪ್ರಕರಣವು ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ತರ್ಕವಾತರ್ಕಗಳು, ಊಹಾಪೋಹಗಳು ಹಾಗೂ ಗೊಂದಲಗಳನ್ನು ಹುಟ್ಟುಹಾಕಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ತನಿಖೆ

ತನಿಖೆಗೆ ಎಸ್‌ಐಟಿ ರಚನೆ : ಧರ್ಮಸ್ಥಳದ ವಕ್ತಾರ ಸ್ವಾಗತ Read More »

error: Content is protected !!
Scroll to Top