‘ನ್ಯೂಸ್ ಪುತ್ತೂರು’ ಯಶಸ್ವಿ ಎರಡನೇ ವರ್ಷಕ್ಕೆ ಪಾದಾರ್ಪಣೆ | ಕಚೇರಿಯಲ್ಲಿ ಗಣಪತಿ ಹೋಮದೊಂದಿಗೆ ಪ್ರಥಮ ವರ್ಷದ ವಾರ್ಷಿಕೋತ್ಸವ
ಪುತ್ತೂರು: ಪ್ರತಿಷ್ಠಿತ ಜನಮನದ ಪ್ರತಿಧ್ವನಿ ‘ನ್ಯೂಸ್ ಪುತ್ತೂರು’ ಯಶಸ್ವಿ ಎರಡನೇ ವರ್ಷಕ್ಕೆ ಇಂದು ಪಾದಾರ್ಪನೆ ಮಾಡಿದ್ದು, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಡಿ ಕಾರ್ಯಾಚರಿಸುತ್ತಿರುವ ನ್ಯೂಸ್ ಪುತ್ತೂರು ಕಚೇರಿಯ ಪ್ರಥಮ ವರ್ಷದ ವಾರ್ಷಿಕೋತ್ಸವ ಇಂದು ನಡೆಯಿತು. ಬೆಳಿಗ್ಗೆ ಕಚೇರಿಯಲ್ಲಿ ಗಣಪತಿ ಹೋಮ ಜರಗಿತು. ಈ ಸಂದರ್ಭದಲ್ಲಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ಹರೀಶ್ ಉಬರಡ್ಕ, ನಿರ್ದೇಶಕರಾದ ವಸಂತ ಎಸ್. ವೀರಮಂಗಲ, ಚಿದಾನಂದ ಬೈಲಾಡಿ, ಸೀತಾರಾಮ ಕೇವಳ, ಪ್ರವೀಣ್ ಕುಂಟ್ಯಾನ, ಯತೀಶ್ ಎನ್., ಮುರಳೀಧರ […]










