ಧಾರ್ಮಿಕ

ಆರ್ಯಾಪು ದೇವರ ಗ್ರಾಮ | ಕಾರ್ಪಾಡಿ ದೇವರ ಬಾಲಾಲಯ ಪ್ರತಿಷ್ಠಾ ಸಭಾ ಕಾರ್ಯಕ್ರಮದಲ್ಲಿ ಮುರಳೀಕೃಷ್ಣ ಹಸಂತ್ತಡ್ಕ

ಪುತ್ತೂರು: ಕೇರಳ ಹೇಗೆ ದೇವರ ರಾಜ್ಯವೋ, ಹಾಗೇ ಆರ್ಯಾಪು ದೇವರ ಗ್ರಾಮ. ಆದ್ದರಿಂದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಜೀರ್ಣೋದ್ಧಾರ ಕಾರ್ಯ ಸುಗಮವಾಗಿ ನಡೆಯಲಿದ್ದು, ಭಕ್ತರ ಸಮರ್ಪಣಾ ಭಾವ ಇಲ್ಲಿ ಅಗತ್ಯ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತ್ತಡ್ಕ ಹೇಳಿದರು. ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ದೇವರ ಅನುಜ್ಞಾ ಕಲಶ ಹಾಗೂ ಬಾಲಾಲಯ ಪ್ರತಿಷ್ಠೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮ ವ್ಯವಸ್ಥೆಯೊಂದಿಗೆ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಜೀರ್ಣೋದ್ಧಾರ ಕಾರ್ಯಕ್ಕೆ […]

ಆರ್ಯಾಪು ದೇವರ ಗ್ರಾಮ | ಕಾರ್ಪಾಡಿ ದೇವರ ಬಾಲಾಲಯ ಪ್ರತಿಷ್ಠಾ ಸಭಾ ಕಾರ್ಯಕ್ರಮದಲ್ಲಿ ಮುರಳೀಕೃಷ್ಣ ಹಸಂತ್ತಡ್ಕ Read More »

ಹನುಮಗಿರಿ ಕ್ಷೇತ್ರಕ್ಕೆ ಅಮಿತ್‌ ಶಾ ಆಗಮನ ಹಿನ್ನಲೆ : ಹ್ಯಾಲಿಪ್ಯಾಡ್ ಉದ್ಘಾಟನೆ

ಪುತ್ತೂರು : ಈಶ್ವರಮಂಗಲದ ಹನುಮಗಿರಿ ಕ್ಷೇತ್ರದ ಅಮರಗಿರಿ ಭಾರತಿ ಜ್ಯೋತಿ ಮಂದಿರ ಉದ್ಘಾಟನೆ ನೆರವೇರಿಸಲು ಅಮಿತ್ ಶಾ ಆಗಮನದ ಹಿನ್ನಲೆಯಲ್ಲಿ ಹನುಮಗಿರಿಯಲ್ಲಿ ಹ್ಯಾಲಿಪ್ಯಾಡ್‌ನ್ನು ಹನುಮಗಿರಿ ಕ್ಷೇತ್ರದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ಕ್ಷೇತ್ರದ ಅರ್ಚಕರು ವೈದಿಕ ವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ sಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ,

ಹನುಮಗಿರಿ ಕ್ಷೇತ್ರಕ್ಕೆ ಅಮಿತ್‌ ಶಾ ಆಗಮನ ಹಿನ್ನಲೆ : ಹ್ಯಾಲಿಪ್ಯಾಡ್ ಉದ್ಘಾಟನೆ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ನಿರಂತರ ನಡೆಯುವ ಕಾರ್ಯಕ್ರಮದ ನೂತನ ಕ್ಯಾಲೆಂಡರ್ ಬಿಡುಗಡೆ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮಗಳ ವಿವರವನ್ನೊಳಗೊಂಡ 2023ನೇ ಸಾಲಿನ ನೂತನ ಕ್ಯಾಲೆಂಡರ್‍ನ್ನು ಗುರುವಾರ ಶಾಸಕ ಸಂಜೀವ ಮಠಂದೂರು ಬಿಡುಗಡೆ ಮಾಡಿದರು. ದೇವಸ್ಥಾನದ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಕ್ಯಾಲೆಂಡರ್‍ ಬಿಡುಗಡೆ ಮಾಡಲಾಯಿತು. ನೂತನ ಕ್ಯಾಲೆಂಡರನ್ನು ಭಕ್ತರಿಗೆ ಉಚಿತವಾಗಿ ನೀಡಲಾಗುವುದು. ಜತೆಗೆ ಯುಗಾದಿ ಸಂದರ್ಭದಲ್ಲಿ ಭಾರತೀಯ ದಿನದರ್ಶಿಕೆಯ ಕ್ಯಾಲೆಂಡರ್‍ ಲೋಕಾರ್ಪಣೆ ಮಾಡಲಾಗುವುದು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್‍ ಮುಳಿಯ ಈ ಸಂದರ್ಭ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ನಿರಂತರ ನಡೆಯುವ ಕಾರ್ಯಕ್ರಮದ ನೂತನ ಕ್ಯಾಲೆಂಡರ್ ಬಿಡುಗಡೆ Read More »

ಕೃಷಿಕರಾದ ತುಳುವರ ಪ್ರಮುಖ ಹಬ್ಬ ಕೆಡ್ಡಸ | ಏನಿದು ಕೆಡ್ಡಸ ; ಆಚರಣೆ ಹೇಗೆ | ಇಲ್ಲಿದೆ ಕಂಪ್ಲೀಟ್ ಸ್ಟೋರಿ

ಪುತ್ತೂರು : ಮೂಲತಃ ಕೃಷಿರಾದ ತುಳುವರ ಹಬ್ಬಗಳು ಕೃಷಿ ಆಧಾರಿತ ಹಿನ್ನಲೆಯಲ್ಲಿ ಆಚರಿಸಲಾಗುತ್ತಿದ್ದು, ಈ ಪೈಕಿ ಕೆಡ್ಡಸ ತುಳುವರ ಪೊನ್ನಿ ಅಥವಾ ಪುಯಿಂತೆಲ್ (ಫೆಬ್ರವರಿ) ತಿಂಗಳಿನ  27 ರಿಂದ ಕುಂಭ ಸಂಕ್ರಮಣದ ವರೆಗೆ ಅಂದರೆ ಮೂರು ದಿನ ಕೆಡ್ಡಸ ಆಚರಿಸಲ್ಪಡುತ್ತದೆ. ಶುರು ಕೆಡ್ಡಸ, ನಡುಕೆಡ್ಡಸ ಹಾಗೂ ಕಡೆಕೆಡ್ಡಸ ಎಂದು ಆಚರಣೆಗೊಳ್ಳುತ್ತದೆ. ಏನಿದು ಕೆಡ್ಡಸ : ನಮ್ಮ ಪೂರ್ವಿಕರು ಭೂಮಿಯನ್ನು ಹೆಣ್ಣೆಂದು ಪರಿಗಣಿಸಿ ಆರಾಧಿಸಿಕೊಂಡು ಬಂದಿದ್ದು, ಹೆಣ್ಣಾದ ಭೂಮಿತಾಯಿಯು ವರ್ಷಕ್ಕೆ ಮೂರುದಿನ ರಜಸ್ವಲೆಯಾಗುತ್ತಾಳೆ (ಋತುಮತಿ) ಎಂದು ನಂಬಿಕೆಯಿದೆ. ಈ

ಕೃಷಿಕರಾದ ತುಳುವರ ಪ್ರಮುಖ ಹಬ್ಬ ಕೆಡ್ಡಸ | ಏನಿದು ಕೆಡ್ಡಸ ; ಆಚರಣೆ ಹೇಗೆ | ಇಲ್ಲಿದೆ ಕಂಪ್ಲೀಟ್ ಸ್ಟೋರಿ Read More »

ಗಂಗೊಳ್ಳಿಯಲ್ಲಿ ಭವತಿ ಭಿಕ್ಷಾಂದೇಹಿ

ಪುತ್ತೂರು: ಪುತ್ತೂರು ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಕರ್ನಾಟಕ ಇದರ ನೇತೃತ್ವದಲ್ಲಿ ಬೆಳ್ತಂಗಡಿಯ ತೆಂಕಕಾರಂದೂರು ನಿವಾಸಿ ಪ್ರಶಾಂತ್ ಲಾವಣ್ಯ ದಂಪತಿ ಪುತ್ರಿ ಮಾನ್ಯ ಅವರ ಚಿಕಿತ್ಸೆ ಹಿನ್ನೆಲೆಯಲ್ಲಿ ಗಂಗೊಳ್ಳಿ ಖಾರ್ವಿಕೆರೆ ಶ್ರೀ ಮಹಾಂಕಾಳಿ ಅಮ್ಮ ದೇವಸ್ಥಾನದಲ್ಲಿ ಭವತಿ ಭಿಕ್ಷಾಂದೇಹಿ ಕಾರ್ಯಕ್ರಮ ನಡೆಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ ಈಶ್ವರ್ ಮಲ್ಪೆ ಅವರ ಸಹಕಾರದಲ್ಲಿ ಅಂಗವೈಕಲ್ಯದಿಂದ ಬಳಲುತ್ತಿರುವ 6 ವರ್ಷದ ಮಾನ್ಯ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಚಿಕಿತ್ಸೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗಂಗೊಳ್ಳಿಯಲ್ಲಿ ಭವತಿ ಭಿಕ್ಷಾಂದೇಹಿ Read More »

ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಸಂಪನ್ನ

ಪುತ್ತೂರು : ಕಡಬ ತಾಲೂಕಿನ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಮಂಗಳವಾರ ಹಾಗೂ ಬುಧವಾರ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಜಾತ್ರೋತ್ಸವದ ಅಂಗವಾಗಿ ಸೋಮವಾರ ಊರ ಭಕ್ತಾದಿಗಳಿಂದ ಸವಣೂರು ಪುರುಬೆಟ್ಟು ಜಿನಮಂದಿರದ ವಠಾರದಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಮಂಗಳವಾರ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪರಿವಾರ ದೇವರುಗಳ ಪ್ರತಿಷ್ಠಾ ದಿನದ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಪಲ್ಲಪೂಜೆ, ಅನ್ನಸಂತರ್ಪಣೆ ಜರಗಿತು. ಸಂಜೆ

ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಸಂಪನ್ನ Read More »

ದೈಪಿಲದಲ್ಲಿ ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವ

ಪುತ್ತೂರು : ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಶ್ರೀ ಕ್ಷೇತ್ರ ದೈಪಿಲದಲ್ಲಿ ಶ್ರೀ ಶಿರಾಡಿ ರಾಜನ್‍ ದೈವ, ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವ ಬುಧವಾರ ನಡೆಯಿತು.

ದೈಪಿಲದಲ್ಲಿ ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವ Read More »

ಫೆ.8 ರಿಂದ 10 : ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅನುಜ್ಞಾಕಲಶ, ಬಾಲಾಲಯ ಪ್ರತಿಷ್ಠೆ

ಪುತ್ತೂರು : ತಾಲೂಕಿನ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅನುಜ್ಞಾ ಕಲಶ ಹಾಗೂ  ಬಾಲಾಲಯ ಪ್ರತಿಷ್ಠೆ ಫೆ.8 ರಿಂದ 10 ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.8 ಬುಧವಾರ ಸಂಜೆ ರಕ್ಷೋಘ್ನ ಹೋಮ, ವಾಸ್ತುಹೋಮ ನಡೆಯಲಿದೆ. ಫೆ.9 ಗುರುವಾರ ಬೆಳಿಗ್ಗೆ ಮಹಾಗಣಪತಿ ಹೋಮ, ಬಿಂಬ ಶುದ್ಧಿ, ಕಲಶ ಪೂಜೆ, ಅನುಜ್ಞಾ ಕಲಶಪೂಜೆ, ತತ್ತ್ವ ಕಲಶ ಪೂಜೆ, ಮಧ್ಯಾಹ್ನ ಅನುಜ್ಞಾ ಕಲಶಾಭಿಷೇಕ, ತತ್ತ್ವ ಕಲಶಾಭಿಷೇಕ, ಧ್ಯಾನ

ಫೆ.8 ರಿಂದ 10 : ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅನುಜ್ಞಾಕಲಶ, ಬಾಲಾಲಯ ಪ್ರತಿಷ್ಠೆ Read More »

ಫೆ.11 : ಹನುಮಗರಿಯಲ್ಲಿ ಗೃಹ ಸಚಿವ ಅಮಿತ್‌ಶಾ ಅವರಿಂದ ಶ್ರೀ ಭಾರತಿ ಅಮರ ಜ್ಯೋತಿ ಮಂದಿರ ಲೋಕಾರ್ಪಣೆ

ಪತ್ರಿಕಾಗೋಷ್ಠಿಯಲ್ಲಿ ಸಂಜೀವ ಮಠಂದೂರು ಈಶ್ವರಮಂಗಲ : ಸಮಾಜದ ಎಲ್ಲಾ ಬಂಧುಗಳನ್ನು ಜೋಡಿಸಿ ರಾಷ್ಟ್ರಾಭಿಮಾನ ಮೂಡಿಸಬೇಕು ಎಂಬ ನಿಟ್ಟಿನಲ್ಲಿ ಹನುಮಗಿರಿ ಕ್ಷೇತ್ರದಲ್ಲಿ ದೇಶ ಪೂಜಾನಾ ಕಲ್ಪನೆಯಂತೆ ಶ್ರೀ ಭಾರತಿ ಅಮರ ಜ್ಯೋತಿ ಮಂದಿರ ನಿರ್ಮಾಣ ಮಾಡಿ ಮಂದಿರದ ಮೂಲಕ ಎಲ್ಲಾ ಪ್ರಜೆಗಳು ರಾಷ್ಟ್ರಭಕ್ತಿ ಉದ್ದೀಪನ ಮಾಡುವ ಸಂಗತಿ ಹನುಮಗಿರಿ ಕ್ಷೇತ್ರದಿಂದ ಆಗಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಸೋಮವಾರ ಹನುಮಗಿರಿ ಕ್ಷೇತ್ರದಲ್ಲಿ ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿ, ನೆ.ಮೂಡ್ನೂರು ಗ್ರಾಮದ ಈಶ್ವರಮಂಗಲದ ಸನ್ನಿಧಿಯಲ್ಲಿ ಭಾರತ ಮಾತೆ ಮಂದಿರ ಲೋಕಾರ್ಪಣೆ

ಫೆ.11 : ಹನುಮಗರಿಯಲ್ಲಿ ಗೃಹ ಸಚಿವ ಅಮಿತ್‌ಶಾ ಅವರಿಂದ ಶ್ರೀ ಭಾರತಿ ಅಮರ ಜ್ಯೋತಿ ಮಂದಿರ ಲೋಕಾರ್ಪಣೆ Read More »

ಫೆ.8-9: ಕೆಮ್ಮಾಯಿಯಲ್ಲಿ ಬುರ್ದಾ ಹಾಗೂ ಜಲಾಲಿಯ್ಯ ಮಜ್ಲಿಸ್

ಪುತ್ತೂರು : ಸೂಫಿ ಪಂಥದ ಆದ್ಯಾತ್ಮಿಕ ವ್ಯಕ್ತಿ ಅಲ್‌ಹಾಜ್ ಸಯ್ಯಿದ್ದ ಅಬೂಬಕ್ಕರ್ ತಂಙಳ್ ಅಲ್‌ಹಾದಿ ಕೆಮ್ಮಾಯಿ ಅವರ ನಿವಾಸದಲ್ಲಿ ಜರಗುವ ಜಲಾಲಿಯ್ಯ ಇದರ ಪ್ರಥಮ ವಾರ್ಷಿಕದ ಪ್ರಯುಕ್ತ `ಬುರ್ದಾ ಹಾಗು ಜಲಾಲಿಯ್ಯ ಮಜ್ಲಿಸ್’ ಫೆ.8 ಮತ್ತು 9 ರಂದು ಕೆಮ್ಮಾಯಿ ತಂಙಳ್ ನಿವಾಸದಲ್ಲಿ ನಡೆಯಲಿದೆ ಎಂದು ಬುಸ್ತಾನುಲ್ ಬಾದುಷ ಜಲಾಲಿಯ್ಯ ಸಮಿತಿ ಸಂಚಾಲಕ ಇಸಾಕ್ ಸಾಲ್ಮರ ತಿಳಿಸಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಫೆ.8ರಂದು ರಾತ್ರಿ ನಡೆಯುವ ಕಾರ್ಯಕ್ರಮದಲ್ಲಿ ಅಲ್‌ಹಾಜ್ ಸಯ್ಯಿದ್ದ ಮುಹಮ್ಮದ್ ಅಲ್‌ಹಾದಿ ತಂಙಳ್ ಸಾಲ್ಮರ

ಫೆ.8-9: ಕೆಮ್ಮಾಯಿಯಲ್ಲಿ ಬುರ್ದಾ ಹಾಗೂ ಜಲಾಲಿಯ್ಯ ಮಜ್ಲಿಸ್ Read More »

error: Content is protected !!
Scroll to Top