ಪುತ್ತೂರು

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಮುಂದಿನ 50 ವರ್ಷಕ್ಕೆ ಪೂರಕ ವ್ಯವಸ್ಥೆ : ಶಾಸಕ ಸಂಜೀವ ಮಠಂದೂರು

ಪುತ್ತೂರು : ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ  ಮುಂದಿನ 50 ವರ್ಷಕ್ಕೆ ಪೂರಕವಾದ ವ್ಯವಸ್ಥೆ ಆಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಸೋಮವಾರ 10 ಕೋಟಿ. ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಪುತ್ತೂರು ಉಪ್ಪಿನಂಗಡಿ ರಸ್ತೆಯ ಕಾಮಗಾರಿಗೆ 34ನೇ ನೆಕ್ಕಿಲಾಡಿಯ ಶಕ್ತಿನಗರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ರಸ್ತೆಗಳ ಅಭಿವೃದ್ಧಿ ಆಗುತ್ತಿದ್ದಂತೆ ರಸ್ತೆಗಳನ್ನು ಮೇಲದರ್ಜೆಗೆ ಏರಿಸುವ ಕೆಲಸವೂ ಆಗುತ್ತಿದೆ. ಉಪ್ಪಿನಂಗಡಿ ಪ್ರವಾಸೋದ್ಯಮ ಕೇಂದ್ರ ಮಾಡುವ ಯೋಜನೆಗೆ ಪೂರಕವಾಗಿ ಸಂಗಮ ಕ್ಷೆತ್ರದಲ್ಲಿ ಬೋಟಿಗ್ ವ್ಯವಸ್ಥೆ ಮಾಡುವ […]

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಮುಂದಿನ 50 ವರ್ಷಕ್ಕೆ ಪೂರಕ ವ್ಯವಸ್ಥೆ : ಶಾಸಕ ಸಂಜೀವ ಮಠಂದೂರು Read More »

ಅಮಿತ್‍ಷಾ ಆಗಮನ ಹಿನ್ನಲೆ : ತೆಂಕಿಲ ವಿವೇಕಾನಂದ ಶಾಲಾ ಮೈದಾನದಲ್ಲಿ ಚಪ್ಪರಮುಹೂರ್ತ

ಪುತ್ತೂರು : ಪುತ್ತೂರಿನಲ್ಲಿ‌ ಫೆ.10 ರಿಂದ ನಡೆಯುವ ಕೃಷಿಯಂತ್ರ ಮೇಳ ಹಾಗೂ ಕ್ಯಾಂಪ್ಕೋ‌ ಸಂಸ್ಥೆಯ‌ ಸುವರ್ಣ ಮಹೋತ್ಸವಕ್ಕೆ ಅಮಿತ್ ಷಾ ಭೇಟಿ ಹಿನ್ನಲೆಯಲ್ಲಿ ಸಭಾ ಕಾರ್ಯಕ್ರಮ ನಡೆಯುವ ತೆಂಕಿಲ ವಿವೇಕಾನಂದ‌ ಶಾಲಾ ಮೈದಾನದಲ್ಲಿ ಸಭಾ ಕಾರ್ಯಕ್ರಮ‌ ವೇದಿಕೆಗೆ ಗುದ್ದಲಿ‌ಪೂಜೆ, ಚಪ್ಪರ‌ ಮುಹೂರ್ತ ಸೋಮವಾರ ನಡೆಯಿತು. ಪುತ್ತೂರು ಶಾಸಕ‌ ಸಂಜಿವ ಮಠಂದೂರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮಪ್ಪ ಶೆಟ್ಟಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಗನಿವಾಸ್ ರಾವ್, ಗ್ರಾಮಾಂತರ

ಅಮಿತ್‍ಷಾ ಆಗಮನ ಹಿನ್ನಲೆ : ತೆಂಕಿಲ ವಿವೇಕಾನಂದ ಶಾಲಾ ಮೈದಾನದಲ್ಲಿ ಚಪ್ಪರಮುಹೂರ್ತ Read More »

ಶಾಂತಿಗೋಡು ಕೈಂದಾಡಿ ಶಿರಾಡಿ ದೈವ ನೇಮೋತ್ಸವ : ಶಾಸಕ ಸಂಜೀವ ಮಠಂದೂರು ಭಾಗಿ

ಶಾಂತಿಗೋಡು : ಶಾಂತಿಗೋಡು ಕೈಂದಾಡಿ ಶಿರಾಡಿ ರಾಜನ್ ದೈವಸ್ಥಾನ ಶಿರಾಡಿ ದೈವ ಹಾಗೂ ಪರಿವಾರ ದೈವಗಳ ವಾರ್ಷಿಕ  ನೆಮೋತ್ಸವ ಭಾನುವಾರ ನಡೆಯಿತು. ಪುತ್ತೂರು ಶಾಶಕ ಸಂಜೀವ ಮಠದೂರು ಪಾಲ್ಗೊಂಡು ಶ್ರೀ ದೈವದ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಕುಶಪ್ಪ ಗೌಡ ಕಲ್ಕರ್, ಕಾರ್ಯದರ್ಶಿ ಮೋಹನ್ ಗೌಡ  ಪಾದೆ, ಸಮಿತಿ ಸದಸ್ಯರಾದ ಕೃಷ್ಣ ಸಾಲಿಯಾನ್, ಶ್ಯಾಮ್ ಭಟ್ ಕೈಂಡಾಡಿ,ನಾರ್ಣಪ್ಪ ಸಾಲಿಯಾನ್ ಮರಕೂರು, ಶೀತರಮ್ ಓಲಾಡಿ, ಹೋನಪ್ಪ ಪೂಜಾರಿ ಕೈಂಡಾಡಿ, ಶಿವಪ್ರಸಾದ್ ಕೈಂಡಾಡಿ, ವಿನೋದ್ ಕರ್ಪುತಮೂಳೆ

ಶಾಂತಿಗೋಡು ಕೈಂದಾಡಿ ಶಿರಾಡಿ ದೈವ ನೇಮೋತ್ಸವ : ಶಾಸಕ ಸಂಜೀವ ಮಠಂದೂರು ಭಾಗಿ Read More »

ಶ್ರೀ ಗುರು ಕ್ರೆಡಿಟ್‍ ಕೋ-ಅಪರೇಟಿವ್‍ ಸೊಸೈಟಿಯ ವಿಟ್ಲ ಶಾಖೆ ಉದ್ಘಾಟನೆ

ಬಂಟ್ವಾಳ : ಮೆಲ್ಕಾರ್‍ ಶ್ರೀ ಗುರು ಕ್ರೆಡಿಟ್‍ ಕೋ-ಅಪರೇಟಿವ್‍ ಸೊಸೈಟಿ ಯ 6ನೇ ವಿಟ್ಲ ಶಾಖೆ ವಿಟ್ಲದ ರಸ್ಕಿನ್ಹಾ ಕಾಂಪ್ಲೆಕ್ಸ್‍ನಲ್ಲಿ ಭಾನುವಾರ ಉದ್ಘಾಟನೆಗೊಂಡಿತು, ಪುತ್ತೂರು ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಒಂದು ಗ್ರಾಮದ0 ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆ, ಶಾಲೆ, ಅಂಚೆ ಕಚೇರಿ ಬ್ಯಾಂಕ್‍ಗಳಷ್ಟೇ ಶಕ್ತಿಶಾಲಿ. ಗ್ರಾಹಕರಿಗೆ ಒಳ್ಳೆಯ ಸೌಲಭ್ಯ ನೀಡುವ ಮಟ್ಟಕ್ಕೆ ಸಹಕಾರಿ ಸಂಘಗಳು ಇಂದು ಬೆಳೆದಿದೆ. ಜತೆಗೆ ಜನರಿಗೆ ಬದುಕು, ಉದ್ಯೋಗ ಆರ್ಥಿಕ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದರು. ಈ ಸಂದರ್ಭದಲ್ಲಿ

ಶ್ರೀ ಗುರು ಕ್ರೆಡಿಟ್‍ ಕೋ-ಅಪರೇಟಿವ್‍ ಸೊಸೈಟಿಯ ವಿಟ್ಲ ಶಾಖೆ ಉದ್ಘಾಟನೆ Read More »

ಆಟೋ ರಿಕ್ಷಾ ಹಾಗೂ ಪದಾಚಾರಿಗೆ ಕಾರು ಡಿಕ್ಕಿ : ಇಬ್ಬರಿಗೆ ಗಾಯ

ಪುತ್ತೂರು : ಕಾರೊಂದು ಆಟೋ ರಿಕ್ಷಾ ಹಾಗೂ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಸಹಿತ ಇಬ್ಬರು ಗಾಯಗೊಂಡ ಘಟನೆ ನೆಹರೂನಗರ ವೃತ್ತದ ಬಳಿ ಶನಿವಾರ ನಡೆದಿದೆ. ಕಾರು ಚಾಲಕ ರೋಹಿತ್ ಕುಮಾರ್ ಎಂಬವರು ತನ್ನ ಕಾರನ್ನು ಪುತ್ತೂರು ಕಡೆ ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭ ಆಟೋ ರಿಕ್ಷಾವೊಂದಕ್ಕ ಡಿಕ್ಕಿ ಹೊಡೆದು, ಪುನಃ ರಸ್ತೆ ಬದಿ ಮಗುವನ್ನು ಎತ್ತಿಕೊಂಡು ನಿಂತಿದ್ದ ಪಾದಚಾರಿ ನಾರಾಯಣ ನಾಯ್ಕ (೬೬) ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾರಾಯಣ ನಾಯ್ಕ ಅವರಿಗೆ ತೊಡೆಗೆ ಗಾಯವಾಗಿದ್ದು, 

ಆಟೋ ರಿಕ್ಷಾ ಹಾಗೂ ಪದಾಚಾರಿಗೆ ಕಾರು ಡಿಕ್ಕಿ : ಇಬ್ಬರಿಗೆ ಗಾಯ Read More »

ಕೊಂಬೆಟ್ಟು ದ್ರಾವಿಡ ಬ್ರಾಹ್ಮಣರ ವಿದ್ಯಾರ್ಥಿ ಭವನ ಮತ್ತು ಕ್ಷೇಮಾಭಿವೃದ್ಧಿ ಸಂಘದ ಶತಮಾನೋತ್ಸವ

ಪುತ್ತೂರು : ವೇದ ಎಂಬುದು ಒಂದು ಕಾಲಕ್ಕೆ ಸೀಮಿತವಾಗಿರುವುದಲ್ಲ. ಯೋಗ್ಯತೆಗೆ ಅನುಗುಣವಾಗಿ ಗುಣಗಳನ್ನು ಮಾಡಲಾಗಿದೆ. ಇತಿಹಾಸವನ್ನು ಬರೆಯುವಾಗ ಸತ್ಯವನ್ನು ಮರೆಮಾಚಿಕೊಂಡು ಬರಲಾಗಿದೆ. ಜಪ, ಅನುಷ್ಠಾನಗಳನ್ನು ಬಿಟ್ಟು ಹೋಗುತ್ತಿರುವುದು ಅಪಾಯದ ಸೂಚನೆಯನ್ನು ನೀಡುತ್ತಿದೆ ಎಂದು ಶ್ರೀ ಕ್ಷೇತ್ರ ಕಟೀಲು ಹರಿನಾರಾಯಣ ಅಸ್ರಣ್ಣರು ಹೇಳಿದರು. ಅವರು ಭಾನುವಾರ ಕೊಂಬೆಟ್ಟು ದ್ರಾವಿಡ ಬ್ರಾಹ್ಮಣರ ವಿದ್ಯಾರ್ಥಿ ಭವನ ಮತ್ತು ಕ್ಷೇಮಾಭಿವೃದ್ಧಿ ಸಂಘದ ಶತಮಾನೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಹಿಂದು ಧರ್ಮ ತಾಯಿಗೆ ಮಹತ್ವ ಸ್ಥಾನ ನೀಡಿದೆ. ಹಿಂದುಗಳನ್ನು

ಕೊಂಬೆಟ್ಟು ದ್ರಾವಿಡ ಬ್ರಾಹ್ಮಣರ ವಿದ್ಯಾರ್ಥಿ ಭವನ ಮತ್ತು ಕ್ಷೇಮಾಭಿವೃದ್ಧಿ ಸಂಘದ ಶತಮಾನೋತ್ಸವ Read More »

ಪಟ್ಟೆ: ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರ

ಪುತ್ತೂರು : ಪುತ್ತೂರು ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ದಂತ ಚಿಕಿತ್ಸಾ ಶಿಬಿರ ಬಡಗನ್ನೂರು ಗ್ರಾಮದ ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆಯಿತು. ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆ, ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸುಳ್ಯ ಕೆ.ವಿ.ಜಿ. ಡೆಂಟಲ್ ಕಾಲೇಜು ಆಸ್ಪತ್ರೆ, ಪುತ್ತೂರು ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ತಜ್ನ ವೈದ್ಯರಿಂದ ಪಟ್ಟೆ ವಿದ್ಯಾಸಂಸ್ಥೆಗಳು, ಶ್ರೀಕೃಷ್ಣ ಯುವಕ ಮಂಡಲ ಪಟ್ಟೆ, ವಾಲಿ ಫ್ರೆಂಡ್ಸ್ ಪಟ್ಟೆ ಹಾಗೂ

ಪಟ್ಟೆ: ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರ Read More »

ಕಲ್ಲೇಗ ನೇಮೋತ್ಸವದಲ್ಲಿ ಶಾಸಕ ಸಂಜೀವ ಮಠಂದೂರು ಭಾಗಿ

ಪುತ್ತೂರು  : ಪುತ್ತೂರು ನೆಹರು ನಗರದ ಕಲ್ಲೇಗ ಕಲ್ಕುಡ ಕಲ್ಲುರ್ಟಿ ದೈವದ ನೇಮೋತ್ಸವ ಶನಿವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು. ನೇಮೋತ್ಸವದ ಅಂಗವಾಗಿ ರಾತ್ರಿ ಮೂಲನೆಲೆ ಕಾರ್ಜಾಲು ಗುತ್ತಿನಿಂದ ಶ್ರೀ ದೈವಗಳ ಭಂಡಾರ ಹೊರಟು ಕಲ್ಲೇಗ ದೈವಸ್ಥಾನವನ್ನು ತಲುಪಿತು. ಬಳಿಕ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಆಕರ್ಷಕ ಸುಡ್ಡಮದ್ದು ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು  ಭಾಗವಹಿಸಿ ಶ್ರೀ ದೈವಗಳ ಗಂಧ ಪ್ರಸಾದ ಸ್ವೀಕರಿಸಿದರು. ದೈವಸ್ಥಾನದ ಅಧ್ಯಕ್ಷ ಅಜಿತ್‍ ಕುಮಾರ್‍

ಕಲ್ಲೇಗ ನೇಮೋತ್ಸವದಲ್ಲಿ ಶಾಸಕ ಸಂಜೀವ ಮಠಂದೂರು ಭಾಗಿ Read More »

ಶಾಂತಿಗೋಡು ಶಿರಾಡಿ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ

ಪುತ್ತೂರು : ನರಿಮೊಗರು ಗ್ರಾಮದ ಶಾಂತಿಗೋಡು ಕೈಂದಾಡಿ ಶಿರಾಡಿ ರಾಜನ್ ದೈವಸ್ಥಾನದ ಶಿರಾಡಿ ದೈವ ಹಾಗೂ ಪರಿವಾರ ದೈವಗಳ ವಾರ್ಷಿಕ  ನೆಮೋತ್ಸವ  ಭಾನುವಾರ ನಡೆಯಿತು.

ಶಾಂತಿಗೋಡು ಶಿರಾಡಿ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ Read More »

ಎಣ್ಮೂರು ಶಾಲಾ ಹಳೆ ವಿದ್ಯಾರ್ಥಿ ಸಂಘದಿಂದ ಸನ್ಮಾನ

ಪುತ್ತೂರು : ಎಣ್ಮೂರು ಶಾಲೆಗೆ ಟೈಲ್ಸ್ ಅಳವಡಿಸಲು  50 ಸಾವಿರವನ್ನು ನೀಡಿದ ಅಬ್ದುಲ್‍ ಸತ್ತರ್‍ ಫ್ಯಾಮಿಲಿ ಉಲ್ಲಲಾಡಿ ಅವರ ತಂದೆಯನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರಮೇಶ್ ಕೋಟೆ, ಅಧ್ಯಕ್ಷ ಪ್ರಕಾಶ್‍ ರೈ, ಎಸ್‍ಡಿಎಂಸಿ ಅಧ್ಯಕ್ಷ ಅಬ್ದುಲ್‍ ಶರೀಫ್‍ ಜಿ., ಉಪಾಧ್ಯಕ್ಷೆ ಸುನಿತಾ, ಶಾಲಾ ಮುಖ್ಯ ಶಿಕ್ಷಕಿ ಭುವನೇಶ್ವರಿ ಹೇಮಳ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸನ್ಮಾನಿತರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು.

ಎಣ್ಮೂರು ಶಾಲಾ ಹಳೆ ವಿದ್ಯಾರ್ಥಿ ಸಂಘದಿಂದ ಸನ್ಮಾನ Read More »

error: Content is protected !!
Scroll to Top