ಪುತ್ತೂರು

ಹಿಂದೂಗಳ ಆರಾಧನೆಗೆ ಪೂರಕವಾಗಿ ಸರಕಾರ ದೇವಸ್ಥಾನಗಳು ಸಹಿತ ಗೋವುಗಳ ರಕ್ಷಣೆಗೆ ಹಲವಾರು ಕಾರ್ಯಕ್ರಮ ತಂದಿದೆ : ಶಾಸಕ ಸಂಜೀವ ಮಠಂದೂರು

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನ ಸಭಾಭವನ, ಅನ್ನಛತ್ರ ಉದ್ಘಾಟನೆ ಬೆಟ್ಟಂಪಾಡಿ : ಬೆಟ್ಟಂಪಾಡಿ  ಶ್ರೀ ಮಹಾಲಿಂಗೇಶ್ವರ ದೇವಸ್ಥಾನಪ್ರತಿಷ್ಠಾ ಮಹೋತ್ಸವ, ನೂತನ ಸಭಾ ಭವನ  ಹಾಗೂ ಅನ್ನಛತ್ರ ಉದ್ಘಾಟನಾ ಸಮಾರಂಭ  ಗುರುವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ನೂತನ ಸಭಾಭವನ ಉದ್ಘಾಟಿಸಿ ಮಾತನಾಡಿ, ಪರಶುರಾಮ ಸೃಷ್ಟಿಯ ನಮ್ಮ ಈ ನಾಡಿನಲ್ಲಿ ದೇವರ ಆರಾಧನೆ ಮುಖಾಂತರ ದೈವ ದೇವರನ್ನು ಆರಾಧನೆ ಮಾಡುವ ಕಾರ್ಯಕ್ರಮ ಆಗಿದೆ.  ಸರಕಾರ ಹಿಂದೂಗಳ ಆರಾಧನೆಗೆ ಪೂರಕವಾಗಿ ದೇವಸ್ಥಾನಗಳ, ಗೋವುಗಳ ರಕ್ಷಣೆಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ […]

ಹಿಂದೂಗಳ ಆರಾಧನೆಗೆ ಪೂರಕವಾಗಿ ಸರಕಾರ ದೇವಸ್ಥಾನಗಳು ಸಹಿತ ಗೋವುಗಳ ರಕ್ಷಣೆಗೆ ಹಲವಾರು ಕಾರ್ಯಕ್ರಮ ತಂದಿದೆ : ಶಾಸಕ ಸಂಜೀವ ಮಠಂದೂರು Read More »

ಫೆ.26 : ಕರ್ನಾಟಕದ ಇಂದಿನ ಅಗತ್ಯತೆಗಳು ಕುರಿತು “ಜನ ಸಂವಾದ”

ಪುತ್ತೂರು : ಪುತ್ತೂರು ಗಾಂಧಿ ವಿಚಾರ ವೇದಿಕೆ  ಹಾಗೂ ಮಂಗಳೂರು ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ  ಕರ್ನಾಟಕದ ಇಂದಿನ ಅಗತ್ಯತೆಗಳು ಕುರಿತು “ಜನ ಸಂವಾದ” ಫೆ.26 ಬೆಳಿಗ್ಗೆ 10. ಗಂಟೆಯಿಂದ ನಗರದ ಜೈನಭವನದಲ್ಲಿ ನಡೆಯಲಿದೆ ಎಂದು ಗಾಂಧಿ ವಿಚಾರ ವೇದಿಕೆ ಮಾತೃ ಘಟಕದ ಉಪಾಧ್ಯಕ್ಷ ಅಣ್ಣಾ ವಿನಯಚಂದ್ರ ತಿಳಿಸಿದ್ದಾರೆ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮೌಲ್ಯಗಳು ಕುಸಿತಗೊಂಡಿದ್ದು, ಸಾಮಾಜಿಕ ಮೌಲ್ಯಗಳಿಗೆ ಬೆಲೆ ಬರುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂಲಕ

ಫೆ.26 : ಕರ್ನಾಟಕದ ಇಂದಿನ ಅಗತ್ಯತೆಗಳು ಕುರಿತು “ಜನ ಸಂವಾದ” Read More »

ಬೆಳ್ತಂಗಡಿಯಲ್ಲಿ ವ್ಯಾಪಿಸಿದ ಭಾರಿ ಕಾಡ್ಗಿಚ್ಚು

ಬೆಟ್ಟದ ತುದಿ ತನಕ ವ್ಯಾಪಿಸಿದ ಬೆಂಕಿ; ನಂದಿಸುವ ಕಾರ್ಯಾಚರಣೆ ಪ್ರಗತಿಯಲ್ಲಿ ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದ ಸುಮಾರು 10 ಎಕರೆ ಪ್ರದೇಶದಲ್ಲಿ ಬುಧವಾರ ಭಾರಿ ಕಾಡ್ಗಿಚ್ಚು ವ್ಯಾಪಿಸಿದ್ದು, ಬೆಂಕಿ ನಂದಿಸಲು ಅಧಿಕಾರಿಗಳು ಹರಸಾಹಸಪಟ್ಟಿದ್ದಾರೆ. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದ್ದು, ಶೇ. 80ಕ್ಕೂ ಹೆಚ್ಚಿನ ಬೆಂಕಿಯನ್ನು ನಂದಿಸಲಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ. ಕಾಡ್ಗಿಚ್ಚಿಗೆ ಕಾರಣವೇನೆಂಬುದು ಇನ್ನಷ್ಟೇ ತಿಳಿಯಬೇಕಿದೆ. ಅಳದಂಗಡಿ ವಲಯದ ಹೂವಿನಕೊಪ್ಪಲು ಹಾಗೂ ಊರ್ಜಾಲುಬೆಟ್ಟ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಹರಡಿತ್ತು ಎಂದು

ಬೆಳ್ತಂಗಡಿಯಲ್ಲಿ ವ್ಯಾಪಿಸಿದ ಭಾರಿ ಕಾಡ್ಗಿಚ್ಚು Read More »

ಉಪ್ಪಿನಂಗಡಿ ಮಖೆ ಜಾತ್ರೆ ಅಂಗವಾಗಿ ಉಪ್ಪಿನಂಗಡಿಯ ಶ್ರೀ ದುರ್ಗಾ ಫರ್ನಿಚರ್ ಆಂಡ್ ಹೋಮ್ ಅಪ್ಲೈಯನ್ಸ್ ನಲ್ಲಿ ವಿಶೇಷ ಆಫರ್ ಲಭ್ಯ

ಉಪ್ಪಿನಂಗಡಿ : ಉಪ್ಪಿನಂಗಡಿ ಮಖೆ ಜಾತ್ರೋತ್ಸವದ ಅಂಗವಾಗಿ ಶ್ರೀ ದುರ್ಗಾ ಫರ್ನಿಚರ್ ಅಂಡ್‍ ಹೋಮ್  ಅಪ್ಲೈಯನ್ಸ್ ನಲ್ಲಿ ಗ್ರಾಹಕರಿಗೆ ವಿಶೇಷ ಆಫರ್ ನೀಡುವ ನಿಟ್ಟಿನಲ್ಲಿ ಫರ್ನಿಚರ್ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಒಂದೇ ಸೂರಿನಡಿ ಲಭ್ಯವಾಗುವಂತೆ ವ್ಯವಸ್ತೆ ಕಲ್ಪಿಸಲಾಗಿದೆ. ಫೆ.18 ರಿಂದ ಆರಂಭಗೊಂಡಿದ್ದು, ಮಾ.24 ರ ತನಕ ನಡೆಯಲಿದೆ  ಈ ಅವಧಿಯಲ್ಲಿ ಖರೀದಿ ಮೇಲೆ ವಿಶೇಷ ಆಫರ್ ಮತ್ತು ಉಡುಗೊರೆಗಳು ಲಭ್ಯವಿದೆ. ಫರ್ನಿಚರ್ ಆಂಡ್‍ ಹೋಮ್‍ ಅಪ್ಲೈಯನ್ಸ್ ವಿನೂತನ ಮಾದರಿಯ ಡೈನಿಂಗ್‍ ಟೇಬಲ್‍, ದೇವರ ಸ್ಟ್ಯಾಂಡ್‍, ಸೋಫಾ ಸೆಟ್,

ಉಪ್ಪಿನಂಗಡಿ ಮಖೆ ಜಾತ್ರೆ ಅಂಗವಾಗಿ ಉಪ್ಪಿನಂಗಡಿಯ ಶ್ರೀ ದುರ್ಗಾ ಫರ್ನಿಚರ್ ಆಂಡ್ ಹೋಮ್ ಅಪ್ಲೈಯನ್ಸ್ ನಲ್ಲಿ ವಿಶೇಷ ಆಫರ್ ಲಭ್ಯ Read More »

ಫೆ.24-25 : ಉಪ ಚುನಾವಣೆ ನಡೆಯುವ ಗ್ರಾಪಂ ವ್ಯಾಪ್ತಿಯ ಮದ್ಯದಂಗಡಿಗಳು ಬಂದ್ | ದ.ಕ.ಜಿಲ್ಲಾಧಿಕಾರಿ ಆದೇಶ

ಪುತ್ತೂರು : ದ.ಕ. ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮ ಪಂಚಾಯಿತಿಗೆ ನಡೆಯಲಿರುವ ಉಪ ಚುನಾವಣೆ ಹಿನ್ನಲೆಯಲ್ಲಿ ಫೆ.24 ಹಾಗೂ 25 ರಂದು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳನ್ನು ಬಂದ್‍ ಮಾಡುವಂತೆ ದ.ಕ.ಜಿಲ್ಲಾಧಿಕಾರಿ ರವಿ ಕುಮಾರ್‍ ಆದೇಶಿಸಿದ್ದಾರೆ. ಮತದಾನ ದಿನದಂದು ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಫೆ.24 ರ ಬೆಳಿಗ್ಗೆ 6 ಗಂಟೆಯಿಂದ ಫೆ.25 ರ ಸಂಜೆ 6 ರ ತನಕ ಮದ್ಯದಂಗಡಿಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ. ಬಂಟ್ವಾಳ ತಾಲೂಕಿನ ಪುದು

ಫೆ.24-25 : ಉಪ ಚುನಾವಣೆ ನಡೆಯುವ ಗ್ರಾಪಂ ವ್ಯಾಪ್ತಿಯ ಮದ್ಯದಂಗಡಿಗಳು ಬಂದ್ | ದ.ಕ.ಜಿಲ್ಲಾಧಿಕಾರಿ ಆದೇಶ Read More »

ರೈತರಿಗೆ ಸಹಕಾರಿ ಸಂಘಗಳಲ್ಲಿ ನೀಡುವ ಸಾಲದ ಮೊತ್ತ 3 ಲಕ್ಷದಿಂದ  ರಿಂದ 5 ಲಕ್ಷಕ್ಕೆ ಹೆಚ್ಚಿಸುವಂತೆ ಶಾಸಕ ಸಂಜೀವ ಮಠಂದೂರು ಅವರಿಂದ ಸಹಕಾರ ಸಚಿವರಿಗೆ ಮನವಿ

ಪುತ್ತೂರು : ಸಹಕಾರಿ ಸಂಘಗಳ ಮೂಲಕ ನೀಡುವ ಶೂನ್ಯ ಬಡ್ಡಿ ದರದ ಸಾಲದ ಮೊತ್ತವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುವಂತೆ ಶಾಸಕ ಸಂಜೀವ ಮಠಂದೂರು ಸಹಕಾರ ಸಚಿವ ಎಸ್‍.ಟಿ.ಸೋಮಶೇಖರ್ ಅವರಿಗೆ ಮನವಿ ಮಾಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ರೈತರಿಗೆ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ. ಸಾಲ ನೀಡಲಾಗುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೃಷಿ ಉತ್ಪಾದನಾ ವೆಚ್ಚದ ಅಧಿಕ ಹೊರೆ ಬೀಲುತ್ತಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನ ಸಾಲ

ರೈತರಿಗೆ ಸಹಕಾರಿ ಸಂಘಗಳಲ್ಲಿ ನೀಡುವ ಸಾಲದ ಮೊತ್ತ 3 ಲಕ್ಷದಿಂದ  ರಿಂದ 5 ಲಕ್ಷಕ್ಕೆ ಹೆಚ್ಚಿಸುವಂತೆ ಶಾಸಕ ಸಂಜೀವ ಮಠಂದೂರು ಅವರಿಂದ ಸಹಕಾರ ಸಚಿವರಿಗೆ ಮನವಿ Read More »

ಫೆ.24 : ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಸುಕೃತೀಂದ್ರ ಕಲಾಮಂದಿರದಲ್ಲಿ “ರೋಟರಿ ಪುತ್ತೂರು ಸೇವಾ ಉತ್ಸವ್”

ಪುತ್ತೂರು : ಪುತ್ತೂರು ರೋಟರಿ ಕ್ಲಬ್ ಹಾಗೂ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಜಂಟಿ ಆಶ್ರಯದಲ್ಲಿ “ರೋಟರಿ ಪುತ್ತೂರು ಸೇವಾ ಉತ್ಸವ್” ಫೆ.24 ಶುಕ್ರವಾರ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಸುಕೃತೀಂದ್ರ ಕಲಾಮಂದಿರದಲ್ಲಿ ನಡೆಯಲಿದೆ. ಪ್ರಪ್ರಥಮ ಬಾರಿಗೆ ಒಂದೇ ಸೂರಿನಡಿ ವಿವಿಧ ವೈದ್ಯಕೀಯ ಸೌಲಭ್ಯಗಳು ಮತ್ತು ಸೇವಾ ಯೋಜನೆಗಳ ಕಾರ್ಯಕ್ರಮ ಇದಾಗಿದ್ದು, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ರ ತನಕ ನಡೆಯಲಿದೆ. ಕಾರ್ಯಕ್ರಮದಲ್ಲಿ ಉಚಿತ ವೈದ್ಯಕೀಯ ಸೌಲಭ್ಯಗಳಾದ ಕಣ್ಣಿ ತಪಾಸಣೆ, ಸಲಹೆ, ದಂತ ತಪಾಸಣೆ, ಚಿಕಿತ್ಸೆ, ರಕ್ತದೊತ್ತಡ, ಮಧುಮೇಹ

ಫೆ.24 : ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಸುಕೃತೀಂದ್ರ ಕಲಾಮಂದಿರದಲ್ಲಿ “ರೋಟರಿ ಪುತ್ತೂರು ಸೇವಾ ಉತ್ಸವ್” Read More »

ಕಾಂಗ್ರೆಸ್ – ಎಸ್.ಡಿ.ಪಿ.ಐ. ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ | ಅಡ್ಯನಡ್ಕ ಶೈಕ್ಷಣಿಕ ಕಾರ್ಯಾಗಾರದ ಷಡ್ಯಂತ್ರ ಬಯಲಿಗೆಳೆದ ಹಿಂಜಾವೇ, ಬಿಎಂಎಸ್ ಕಾರ್ಯಕರ್ತರಿಗೆ ಅಭಿನಂದನೆ ತಿಳಿಸಿದ ಹರಿಪ್ರಸಾದ್ ಯಾದವ್

ಪುತ್ತೂರು: ಅಡ್ಯನಡ್ಕ ಶೈಕ್ಷಣಿಕ ಕಾರ್ಯಗಾರದ ವಿಷಯದಲ್ಲಿ ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ಒಂದೇ ನಾಣ್ಯದ ಎರಡು ಮುಖಗಳಂತೆ ಎಂದು ಸಾಬೀತಾಗಿದ್ದು, ಈ ವಿಷಯದಲ್ಲಿ ಉಳ್ಳಾಲ ಕಾಂಗ್ರೆಸ್ ಶಾಸಕರು ಮತ್ತು ನಿಷೇಧಿತ ಪಿ.ಎಫ್.ಐ ಸಂಘಟನೆಯ ರಾಜಕೀಯ ಪಾರ್ಟಿಯಾದ ಎಸ್ ಡಿಪಿಐ ಮುಖಂಡ ನೀಡಿದ ಹೇಳಿಕೆಯಲ್ಲಿ ಸಾಮ್ಯತೆ ಇದೆ ಎಂದು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ತಿಳಿಸಿದ್ದಾರೆ. ಈ ಎರಡು ಪಾರ್ಟಿಗಳು ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರ ಪರವಾಗಿ ನಿಲ್ಲದೆ ಕಾರ್ಯಾಗಾರ ನಡೆಸಿದ ಸಂಘಟನೆ ಪರವಾಗಿ ನಿಂತಿರುವುದು

ಕಾಂಗ್ರೆಸ್ – ಎಸ್.ಡಿ.ಪಿ.ಐ. ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ | ಅಡ್ಯನಡ್ಕ ಶೈಕ್ಷಣಿಕ ಕಾರ್ಯಾಗಾರದ ಷಡ್ಯಂತ್ರ ಬಯಲಿಗೆಳೆದ ಹಿಂಜಾವೇ, ಬಿಎಂಎಸ್ ಕಾರ್ಯಕರ್ತರಿಗೆ ಅಭಿನಂದನೆ ತಿಳಿಸಿದ ಹರಿಪ್ರಸಾದ್ ಯಾದವ್ Read More »

ಇಸ್ಲಾಂ ಮತ ಪ್ರವಚನಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಿದ ಘಟನೆ: ಮುಖ್ಯಶಿಕ್ಷಕ ತಾತ್ಕಾಲಿಕ ಅಮಾನತು

ಪುತ್ತೂರು: ಅಡ್ಯನಡ್ಕ ಜನತಾ ಪ್ರೌಢಶಾಲೆಯಲ್ಲಿ ಸಮೀಪದ ಕಟ್ಟಡದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಆಯೋಜಿಸಿ, ಅದರಲ್ಲಿ ಇಸ್ಲಾಂ ಮತಪ್ರವಚನ ನೀಡಿದ ಘಟನೆಗೆ ಸಂಬಂಧಪಟ್ಟಂತೆ ಶಾಲಾ ಮುಖ್ಯಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಅಡ್ಯನಡ್ಕ ಎಜ್ಯುಕೇಶನಲ್ ಸೊಸೈಟಿಯ ಕಾರ್ಯದರ್ಶಿಗಳು ಅಧ್ಯಕ್ಷರ ಅನುಮತಿ ಮೇರೆಗೆ ಈ ಆದೇಶ ಹೊರಡಿಸಿದ್ದಾರೆ. ಆದ್ದರಿಂದ ಪ್ರೌಢಶಾಲಾ ಮುಖ್ಯಶಿಕ್ಷಕ ಟಿ.ಆರ್. ನಾಯ್ಕ್ ಅವರನ್ನು ತಾತ್ಕಾಲಿಕವಾಗಿ ಸೇವೆಯಿಂದ ಅಮಾನತುಗೊಳ್ಳಲಿದ್ದಾರೆ. ಫೆ. 18ರಂದು 10ನೇ ತರಗತಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಶಾಲಾ ಮುಖ್ಯಶಿಕ್ಷಕ ಟಿ.ಆರ್. ನಾಯ್ಕ್ ಅವರು ಕಾರ್ಯಾಗಾರಕ್ಕೆ ಕಳುಹಿಸಿಕೊಟ್ಟಿದ್ದರು. ಆ

ಇಸ್ಲಾಂ ಮತ ಪ್ರವಚನಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಿದ ಘಟನೆ: ಮುಖ್ಯಶಿಕ್ಷಕ ತಾತ್ಕಾಲಿಕ ಅಮಾನತು Read More »

ವಾಹನ ದಟ್ಟಣೆ ಏರಿಕೆ | ಗ್ರಾಮೀಣ ರಸ್ತೆ ಸಹಿತ ಜಿಲ್ಲಾ ಮುಖ್ಯರಸ್ತೆಗಳು ಮೇಲ್ದರ್ಜೆಗೆ | ಶಾಸಕ ಸಂಜೀವ ಮಠಂದೂರು ಶಿಫಾರಸಿನ ಮೇರೆಗೆ ಪುತ್ತೂರಿನ 112.5 ಕಿ.ಮೀ. ಗ್ರಾಮೀಣ ರಸ್ತೆ, 41 ಕಿ.ಮೀ. ಜಿಲ್ಲಾ ರಸ್ತೆ ಮೇಲ್ದರ್ಜೆಗೆ

ಪುತ್ತೂರು: ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ರಸ್ತೆಗಳನ್ನು ಕಾಲಕಾಲಕ್ಕೆ ಮೇಲ್ದರ್ಜೆಗೇರಿಸುವುದು ಪ್ರಮುಖ ಮೂಲಭೂತ ಸೌಕರ್ಯಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರ ಮುತುವರ್ಜಿಯಲ್ಲಿ ಪುತ್ತೂರು ತಾಲೂಕಿನ ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆದಿದೆ. ದಿನದಿಂದ ದಿನಕ್ಕೆ ವಾಹನ ದಟ್ಟಣೆ ಏರಿಕೆಯಾಗುವುದರಿಂದ ಗ್ರಾಮೀಣ ಪ್ರದೇಶ ಸಹಿತ ನಗರ ಪ್ರದೇಶಗಳಲ್ಲಿ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಇದರಿಂದ ವಾಹನ ಸವಾರರು ಸಹಿತ ಪಾದಚಾರಿಗಳಿಗೂ ಸಮಸ್ಯೆ ಉಂಟಾಗುತ್ತಿವೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಮೀಣ ರಸ್ತೆ ಹಾಗೂ ಜಿಲ್ಲಾ ಮುಖ್ಯರಸ್ತೆಗಳನ್ನು

ವಾಹನ ದಟ್ಟಣೆ ಏರಿಕೆ | ಗ್ರಾಮೀಣ ರಸ್ತೆ ಸಹಿತ ಜಿಲ್ಲಾ ಮುಖ್ಯರಸ್ತೆಗಳು ಮೇಲ್ದರ್ಜೆಗೆ | ಶಾಸಕ ಸಂಜೀವ ಮಠಂದೂರು ಶಿಫಾರಸಿನ ಮೇರೆಗೆ ಪುತ್ತೂರಿನ 112.5 ಕಿ.ಮೀ. ಗ್ರಾಮೀಣ ರಸ್ತೆ, 41 ಕಿ.ಮೀ. ಜಿಲ್ಲಾ ರಸ್ತೆ ಮೇಲ್ದರ್ಜೆಗೆ Read More »

error: Content is protected !!
Scroll to Top