ಪುತ್ತೂರು

ಧಾರ್ಮಿಕತೆಯ ಔನ್ನತ್ಯದಲ್ಲಿದ್ದರೂ, ಸರಳತೆಯ ಸಾಕಾರ ಮೂರ್ತಿ | ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ನಿಧನಕ್ಕೆ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಂತಾಪ

ಪುತ್ತೂರು: ಶ್ರವಣಬೆಳಗೊಳದ ಶ್ರೀ ಜೈನ ಮಠದ ಪೀಠಾಧ್ಯಕರಾದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ನಿಧನಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ಶ್ರೀ ಜೈನಮಠಕ್ಕೆ ಭೇಟಿ ನೀಡಿದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಅಂತಿಮ ದರ್ಶನ ಪಡೆದರು. ಸಂತಾಪ ಸಂದೇಶ ನೀಡಿದ ಅವರು, ಶ್ರೀ ಜೈನಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಇನ್ನಿಲ್ಲವಾದುದು ದುಃಖದ ಸಂಗತಿ. ಪೂಜ್ಯರು ಧಾರ್ಮಿಕ ಕ್ಷೇತ್ರದ ಔನ್ನತ್ಯದ ಸ್ಥಾನದಲ್ಲಿದ್ದರೂ ಸರಳತೆಯ […]

ಧಾರ್ಮಿಕತೆಯ ಔನ್ನತ್ಯದಲ್ಲಿದ್ದರೂ, ಸರಳತೆಯ ಸಾಕಾರ ಮೂರ್ತಿ | ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ನಿಧನಕ್ಕೆ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಂತಾಪ Read More »

ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಬ್ರಾಹ್ಮೀ ಬಿ.ಜೆ. ಪ್ರಥಮ ಶ್ರೇಣಿ

ಪುತ್ತೂರು : 2022-23ನೇ ಸಾಲಿನಲ್ಲಿ ನಡೆದ ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಬ್ರಾಹ್ಮೀ ಬಿ.ಜೆ. ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಅವರು ಕಡಬ ನೀನಾದ ನೃತ್ಯ ಕಲಾ ಶಾಲಾ ವಿದ್ಯಾರ್ಥಿನಿಯಾಗಿದ್ದು, ವಿದುಷಿ ಪ್ರಮೀಳಾ ಲೋಕೇಶ್ ಅವರ ಶಿಷ್ಯೆ. ಪುತ್ತೂರು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪ್ರಬಂಧಕ ಜನಾರ್ದನ ಮತ್ತು ರೇಷ್ಮಾ ದಂಪತಿ ಸುಪುತ್ರಿಯಾಗಿದ್ದಾರೆ

ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಬ್ರಾಹ್ಮೀ ಬಿ.ಜೆ. ಪ್ರಥಮ ಶ್ರೇಣಿ Read More »

ನಿವೃತ್ತ ಉಪತಹಶೀಲ್ದಾರ್ ಬಾಲಣ್ಣ ಪಿ. ನಿಧನ

ಪುತ್ತೂರು: ನಿವೃತ್ತ ಉಪತಹಶೀಲ್ದಾರ್ ಬಾಲಣ್ಣ ಪಿ. (68) ಬುಧವಾರ ನಿಧನರಾಗಿದ್ದಾರೆ. ಬನ್ನೂರು ನಂದಿಲ ನಿವಾಸಿಯಾದ ಅವರು ಪುತ್ತೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಮ್ಯಾನೇಜರ್ ಆಗಿದ್ದು, ಬಳಿಕ ಕಡಬದಲ್ಲಿ ಉಪ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ನಿವೃತ್ತ ಉಪತಹಶೀಲ್ದಾರ್ ಬಾಲಣ್ಣ ಪಿ. ನಿಧನ Read More »

ಬೆಳ್ಳಾರೆ ಕುಸುಮಧರ ಆಚಾರ್ಯ ನಿಧನ

ಪುತ್ತೂರು: ಬೆಳ್ಳಾರೆ ನಿವಾಸಿ ಕುಸುಮಧರ ಆಚಾರ್ಯ ಬುಧವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪ್ರಾರ್ಥಿ‍ವ ಶರೀರವನ್ನು ಗುರುವಾರ ರಾತ್ರಿ ತಂದು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗುವುದು. ಶುಕ್ರವಾರ ಬೆಳ್ಳಾರೆ ಸ್ವಗೃಹಕ್ಕೆ ಕೊಂಡೊಯ್ದು ಅಲ್ಲಿ ಅಂತಿಮ ವಿಧಿವಿಧಾನ ನಡೆಸಿ ಪುತ್ತೂರು ಹಿಂದೂ ರುದ್ರಭೂಮಿಯಲ್ಲಿ ಬೆಳಿಗ್ಗೆ 11.30 ಕ್ಕೆ ಅಗ್ನಿಸ್ಪರ್ಶ ಮಾಡಲಾಗುವುದು.

ಬೆಳ್ಳಾರೆ ಕುಸುಮಧರ ಆಚಾರ್ಯ ನಿಧನ Read More »

ವಿಟ್ಲ: 94 ಸಿ, 94 ಸಿಸಿ ಹಕ್ಕುಪತ್ರ ವಿತರಿಸಿದ ಶಾಸಕ ಸಂಜೀವ ಮಠಂದೂರು | 1300 ಜನರಿಗೆ ಸಾಗುವಳಿ ಚೀಟಿ, ಶೇ. 80 ಜನರಿಗೆ 94ಸಿ ಹಾಗೂ 94 ಸಿಸಿ ಹಕ್ಕುಪತ್ರ

ವಿಟ್ಲ: ಬಂಟ್ವಾಳ ಹೋಬಳಿಯ 94ಸಿ ಹಾಗೂ 94 ಸಿಸಿ ಹಕ್ಕುಪತ್ರ ವಿತರಣೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಗುರುವಾರ ಇಲ್ಲಿನ ಬ್ರಹ್ಮಶ್ರೀ ಸಭಾಭವನದಲ್ಲಿ ನಡೆಯಿತು. ಹಕ್ಕುಪತ್ರ ವಿತರಿಸಿ, ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಕೋವಿಡ್ ಸಮಸ್ಯೆಯ ನಡುವೆಯೂ 1300 ಜನರಿಗೆ ಸಾಗುವಳಿ ಚೀಟಿ ಕೊಡುವ ಕೆಲಸ ಮಾಡಲಾಗಿದೆ. ಶೇ. 80 ಜನರಿಗೆ 94ಸಿ ಹಾಗೂ 94 ಸಿಸಿ ಹಕ್ಕುಪತ್ರ ನೀಡಲಾಗಿದೆ. ಈಗಾಗಲೇ ಸಾಧ್ಯವಾದಷ್ಟು ಜನರಿಗೆ ಪ್ರಾಮಾಣಿಕವಾಗಿ ಹಕ್ಕುಪತ್ರ ನೀಡುತ್ತಿದ್ದೇವೆ. ಹಕ್ಕುಪತ್ರ ಸಿಗದವರಿಗೆ ಚುನಾವಣೆ

ವಿಟ್ಲ: 94 ಸಿ, 94 ಸಿಸಿ ಹಕ್ಕುಪತ್ರ ವಿತರಿಸಿದ ಶಾಸಕ ಸಂಜೀವ ಮಠಂದೂರು | 1300 ಜನರಿಗೆ ಸಾಗುವಳಿ ಚೀಟಿ, ಶೇ. 80 ಜನರಿಗೆ 94ಸಿ ಹಾಗೂ 94 ಸಿಸಿ ಹಕ್ಕುಪತ್ರ Read More »

ಮಾರ್ಚ್ 26ರಂದು ಪುತ್ತೂರಿನಲ್ಲಿ ಯುವ ಜಾಥಾ | ಬಿಜೆಪಿ ಯುವಮೋರ್ಚಾದಿಂದ ಪೂರ್ವಭಾವಿ ಸಭೆ

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಮಾ. 26ರಂದು ಪುತ್ತೂರಿನಲ್ಲಿ ನಡೆಯಲಿರುವ ಯುವ ಜಾಥಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಗುರುವಾರ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಸಹಜ್ ರೈ ಬಳೆಜ್ಜ ಪ್ರಾಸ್ತಾವಿಕವಾಗಿ ಮಾತನಾಡಿ, ಮಾರ್ಚ್ 26ರಂದು ಮಧ್ಯಾಹ್ನ 3 ಗಂಟೆಗೆ ಜಾಥಾ ನಡೆಯಲಿದ್ದು, ಜಾಥಾವು ಎರಡು ಭಾಗಳಿಂದ ಆಗಮಿಸಲಿದೆ. ವಿಟ್ಲದಿಂದ ಹಾಗೂ ಕುಂಬ್ರದಿಂದ ಜಾಥಾ ಆಗಮಿಸಿ ಕಲ್ಲೇಗ ಭಾರತ್ ಮಾತಾ ಸಭಾಭವನದಲ್ಲಿ ಸೇರಲಿದೆ. ಕಾರ್ಯಕ್ರಮದ ಯಶಸ್ಸಿಗೆ

ಮಾರ್ಚ್ 26ರಂದು ಪುತ್ತೂರಿನಲ್ಲಿ ಯುವ ಜಾಥಾ | ಬಿಜೆಪಿ ಯುವಮೋರ್ಚಾದಿಂದ ಪೂರ್ವಭಾವಿ ಸಭೆ Read More »

ನಾಳೆ (ಮಾ.24) : ಹಿಂ.ಜಾ.ವೇ. ವತಿಯಿಂದ  ಆ‍ಶ್ಲೇಷ ಬಲಿ, ಅರ್ಧ ಏಕಹಾ ಭಜನೆ, ಜನಜಾಗೃತಿ ಸಭೆ

ಪುತ್ತೂರು: ಹಿಂದು ಜಾಗರಣ ವೇದಿಕೆ ವತಿಯಿಂದ ಆಶ್ಲೇಷ ಬಲಿ, ಧಾರ್ಮಿಕ ಸಭೆ ಹಾಗೂ ಅರ್ಧ ಏಕಾಹ ಭಜನೆ ಮಾ.24 ಶುಕ್ರವಾರ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ಇರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಸ್ಥಳದಲ್ಲಿ ನಡೆಯಲಿದೆ. ಬೆಳಿಗ್ಗೆ 6 ರಿಂದ ಗಣಪತಿ ಹೋಮ, 7 ರಿಂದ ಅರ್ಧಏಕಹಾ ಭಜನೆ, ಸಂಜೆ 6 ರಿಂದ ಆಶ್ಲೇಷ ಬಲಿ, 7 ಕ್ಕೆ ಜನಜಾಗೃತಿ ಸಭೆ, 8 ರಿಂದ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಹಿಂದೂ ಸಮಾಜದ ದೇವಸ್ಥಾನ, ದೈವಸ್ಥಾನ,

ನಾಳೆ (ಮಾ.24) : ಹಿಂ.ಜಾ.ವೇ. ವತಿಯಿಂದ  ಆ‍ಶ್ಲೇಷ ಬಲಿ, ಅರ್ಧ ಏಕಹಾ ಭಜನೆ, ಜನಜಾಗೃತಿ ಸಭೆ Read More »

ಶಾಂತಿಗೋಡು, ನರಿಮೊಗರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ |ಶಾಸಕ ಮಠಂದೂರು ಅವರಿಂದ ಉದ್ಘಾಟನೆ

ಪುತ್ತೂರು: ಶಾಂತಿಗೋಡು, ನರಿಮೊಗರು ಗ್ರಾಪಂ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಇಲಾಖೆ ಮತ್ತು ಗ್ರಾಮ ಸಡಕ್ ಯೋಜನೆಯಲ್ಲಿ ನಡೆದಿರುವ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ ನಡೆಯಿತು. ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಅಭಿವೃದ್ಧಿ ಕಾರ್ಯದಿಂದ ಊರಿನ ಚಿತ್ರಣ ಬದಲಾಗಿದೆ : ಮೀನಾಕ್ಷಿ ಶಾಂತಿಗೋಡು ಜಿಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ನನ್ನ ಜಿಲ್ಲಾ ಪಂಚಾಯಿತಿ ಅವಧಿ ಆಗಿರಬಹುದು, ಶಾಸಕರ ಐದು ವರ್ಷದ ಅವಧಿ ಆಗಿರಬಹುದು. ಹಲವು ಕೋಟಿ ಅನುದಾನ ಶಾಂತಿಗೋಡಿಗೆ

ಶಾಂತಿಗೋಡು, ನರಿಮೊಗರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ |ಶಾಸಕ ಮಠಂದೂರು ಅವರಿಂದ ಉದ್ಘಾಟನೆ Read More »

ಪಾಣಾಜೆ ಸಮುದಾಯ ಕೇಂದ್ರದಲ್ಲಿಯೂ ಡಯಾಲಿಸೀಸ್ ಘಟಕ! | ಪಾಣಾಜೆಯಲ್ಲಿ ಅಮೃತ ಸಮುದಾಯ ಆರೋಗ್ಯ ಕೇಂದ್ರ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಪಾಣಾಜೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸಾರ್ವಜನಿಕ ಬಳಕೆಗೆ ತೆರೆದುಕೊಂಡಿದ್ದು, ಮುಂದಿನ ದಿನದಲ್ಲಿ ಡಯಾಲಿಸಿಸ್ ಘಟಕ ತೆರೆಯಲು ಪ್ರಯತ್ನಗಳು ನಡೆಯುತ್ತಿವೆ. ಇದರೊಂದಿಗೆ ಪಾಣಾಜೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿದ ಕಬಕ, ಬನ್ನೂರಿನ 3 ಕಡೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಮೇಲ್ದರ್ಜೆಗೇರಿದ ಪಾಣಾಜೆ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಭಾಂಗಣ ಉದ್ಘಾಟಿಸಿ ಅವರು ಮಾತನಾಡಿದರು. ಪುತ್ತೂರಿನ

ಪಾಣಾಜೆ ಸಮುದಾಯ ಕೇಂದ್ರದಲ್ಲಿಯೂ ಡಯಾಲಿಸೀಸ್ ಘಟಕ! | ಪಾಣಾಜೆಯಲ್ಲಿ ಅಮೃತ ಸಮುದಾಯ ಆರೋಗ್ಯ ಕೇಂದ್ರ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಶಾಸಕ ಸಂಜೀವ ಮಠಂದೂರು Read More »

ಉಪ್ಪಿನಂಗಡಿ: ಮಹಾಕಾಳಿ ಅಮ್ಮನವರ ಮೆಚ್ಚಿ ಜಾತ್ರೆ

ಪುತ್ತೂರು: ಇತಿಹಾಸ ಪ್ರಸಿದ್ಧ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ರಾತ್ರಿ ಶ್ರೀ ಮಹಾಕಾಳಿ ಅಮ್ಮನವರ ಮೆಚ್ಚಿ ಜಾತ್ರೆ ಜರಗಿತು. ಭಕ್ತವತ್ಸಲಾ ಹಾಗೂ ಕಾರ್ಣಿಕದ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಮಹಾಕಾಳಿ ಅಮ್ಮನವರ ವರ್ಷಾವಧಿ ಮೆಚ್ಚಿ ಜಾತ್ರೆ ಇದಾಗಿದ್ದು, ಸಾವಿರಾರು ಭಕ್ತರು ಆಗಮಿಸಿ, ದೇವಿಯ ದರ್ಶನ ಪಡೆದು ಪುನೀತರಾದರು. ನೇಮೋತ್ಸವದ ಅಂಗವಾಗಿ ಅನ್ನಸಂತರ್ಪಣೆ ಜರಗಿತು.

ಉಪ್ಪಿನಂಗಡಿ: ಮಹಾಕಾಳಿ ಅಮ್ಮನವರ ಮೆಚ್ಚಿ ಜಾತ್ರೆ Read More »

error: Content is protected !!
Scroll to Top