ಏ. 10ರಿಂದ ಐತಿಹಾಸಿಕ ಪುತ್ತೂರು ಜಾತ್ರೆ | ಮಾ. 25ರಂದು ಆಹ್ವಾನ ಪತ್ರಿಕೆ ವಿತರಣೆ, ಮಾ. 9ರಂದು ಹಸಿರು ಹೊರೆಕಾಣಿಕೆ
ಪುತ್ತೂರು: ಹತ್ತೂರ ಭಕ್ತರಿಂದ ಆರಾಧನೆ ಪಡೆದುಕೊಳ್ಳುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಏ. 10ರಿಂದ 20ರವರೆಗೆ ನಡೆಯಲಿದೆ. ಪುತ್ತೂರು ಜಾತ್ರೆಯ ಹಿನ್ನೆಲೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾಹಿತಿ ನೀಡುತ್ತಾ, ಏ. 1ರಂದು ಗೊನೆ ಮುಹೂರ್ತ ನಡೆಯಲಿದೆ. ಬೆಳಿಗ್ಗೆ ಪ್ರಾರ್ಥನೆ ನಡೆದು 9.35ರ ವೃಷಭ ಲಗ್ನದಲ್ಲಿ ಜಾತ್ರೆಗೆ ಗೊನೆ ಕಡಿಯಲಾಗುವುದು. ಏ. 10ರಂದು ಬೆಳಿಗ್ಗೆ 9.25ರ ವೃಷಭ ಲಗ್ನದಲ್ಲಿ ಧ್ವಜಾರೋಹಣ ನಡೆದು, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಅಂಕುರಾರ್ಪಣೆ, ಬಲಿ ಹೊರಟು ಉತ್ಸವ, […]









