ಪುತ್ತೂರು

ಅಟೋ ಚಾಲಕ ಕಮಲಾಕ್ಷ ನಿಧನ

ಕಡಬ : ಕಡಬ ತಾಲೂಕಿನ ಆಲಂಕಾರು ಗ್ರಾಮದ ನೆಕ್ಕಿಲಾಡಿ ನಿವಾಸಿ ಅಟೋ ಚಾಲಕ ಕಮಲಾಕ್ಷ ಗೌಡ(44) ಅಲ್ಪ ಕಾಲದ ಅಸೌಖ್ಯದಿಂದ ಗುರವಾರ ರಾತ್ರಿ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೂರು  ದಿನಗಳ  ಹಿಂದೆ ಬ್ರೈನ್ ಎಮರೇಜ್‌ಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಮಲಾಕ್ಷ ಗೌಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಜೀವನೋಪಾಯಕ್ಕೆ  ಆಲಂಕಾರಿನಲ್ಲಿ ಅಟೋ ಚಾಲನೆ ಮಡುತ್ತಿದ್ದ  ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಅಟೋ ಚಾಲಕ ಕಮಲಾಕ್ಷ ನಿಧನ Read More »

ಝೀ ಕನ್ನಡ ವಾಹಿನಿಯ ಛೋಟಾ ಚಾಂಪಿಯನ್ ಗೇಮ್ ಶೋಗೆ ರಾಮಕುಂಜದ ಆತ್ಮಿ ಗೌಡ ಆಯ್ಕೆ | ನಾಳೆ ಎಪಿಸೋಡ್ ಪ್ರಸಾರ

ರಾಮಕುಂಜ : ಝೀ ಕನ್ನಡ ವಾಹಿನಿಯಲ್ಲಿ ಹತ್ತು ವರ್ಷಗಳ ಬಳಿಕ ಪ್ರಾರಂಭಗೊಂಡ ಮಕ್ಕಳ ನಂ.1 ಗೇಮ್ ಶೋ ಛೋಟಾ ಚಾಂಪಿಯನ್ ನಲ್ಲಿ ರಾಮಕುಂಜ ಗ್ರಾಮದ ಸುಜಿತ್ ಎಸ್ ಇವರ ಪುತ್ರಿ ಆತ್ಮಿ ಗೌಡ ಎಸ್ ಆಯ್ಕೆಯಾಗಿದ್ದು ಶನಿವಾರ ಭಾನುವಾರದಂದು ಸಂಜೆ 6 ಗಂಟೆಗೆ ಎಪಿಸೋಡ್ ಪ್ರಸಾರಗೊಳ್ಳಲಿದೆ. ಹತ್ತು ವರ್ಷಗಳ ಹಿಂದೆ ಸೃಜನ್ ಲೋಕೇಶ್ ನಿರ್ವಹಿಸುತ್ತಿದ್ದ ಮಕ್ಕಳ ಗೇಮ್‌ಶೋ ಕಾರ್ಯಕ್ರಮದ ನಿರೂಪಣೆಯನ್ನು ಈ ಬಾರಿ ಶ್ವೇತಾ ಚಂಗಪ್ಪ ಮತ್ತು ಕುರಿ ಪ್ರತಾಪ್ ನಡೆಸಿಕೊಡುತ್ತಿದ್ದು ಇದರಲ್ಲಿ ೨ ರಿಂದ ೬

ಝೀ ಕನ್ನಡ ವಾಹಿನಿಯ ಛೋಟಾ ಚಾಂಪಿಯನ್ ಗೇಮ್ ಶೋಗೆ ರಾಮಕುಂಜದ ಆತ್ಮಿ ಗೌಡ ಆಯ್ಕೆ | ನಾಳೆ ಎಪಿಸೋಡ್ ಪ್ರಸಾರ Read More »

ಮಹಿಳೆಗೆ ಕಿರುಕುಳ | ವ್ಯಕ್ತಿಯೊಬ್ಬರ ಮೇಲೆ ಪ್ರಕರಣ ದಾಖಲು

ಪುತ್ತೂರು: ಮಹಿಳೆಯೊಬ್ಬರಿಗೆ ಬಸ್ಸಿನಲ್ಲಿ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ಮೇಲೆ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ. ಕೆಮ್ಮಿಂಜೆ ಸುಬ್ರಹ್ಮಣ್ಯ ಭಟ್ ಎಂಬವರು ಬಸ್ ನಲ್ಲಿ ಪುತ್ತೂರಿಗೆ ಬರುತ್ತಿದ್ದ ವೇಳೆ ಬೊಳುವಾರಿನಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಿಳೆಗೆ ಕಿರುಕುಳ | ವ್ಯಕ್ತಿಯೊಬ್ಬರ ಮೇಲೆ ಪ್ರಕರಣ ದಾಖಲು Read More »

ಮತಾಂತರ ನಿಷೇಧ ಕಾಯ್ದೆ ವಾಪಾಸ್ | ಹಿಂದೂ ವಿರೋಧಿ ನಡೆಯ ಬಗ್ಗೆ ಚರ್ಚಿಸಲು ವಿಹಿಂಪ ಬಜರಂಗದಳದ ವತಿಯಿಂದ ಕನ್ಯಾಡಿ ಶ್ರೀಗಳ ಭೇಟಿ

ಪುತ್ತೂರು: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುವ ಹಿಂದೂ ವಿರೋಧಿ ನಡೆಯ ಬಗ್ಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ  ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿತ್ಯಾನಂದ ನಗರ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಮುಂದಿನ ಹೋರಾಟದ ಬಗ್ಗೆ ಶ್ರೀಗಳಿಂದ  ಮಾರ್ಗದರ್ಶನ ಪಡೆಯಲಾಯಿತು. ಬಜರಂಗದಳದ ಪ್ರಾಂತ ಸಹ ಸಂಯೋಜಕರಾದ ಮುರಳೀಕೃಷ್ಣ ಹಸಂತ್ತಡ್ಕ, ವಿಶ್ವ ಹಿಂದೂ ಪರಿಷದ್ ವಿಭಾಗ ಸಾಮಾಜಿಕ ಸಾಮರಸ್ಯ

ಮತಾಂತರ ನಿಷೇಧ ಕಾಯ್ದೆ ವಾಪಾಸ್ | ಹಿಂದೂ ವಿರೋಧಿ ನಡೆಯ ಬಗ್ಗೆ ಚರ್ಚಿಸಲು ವಿಹಿಂಪ ಬಜರಂಗದಳದ ವತಿಯಿಂದ ಕನ್ಯಾಡಿ ಶ್ರೀಗಳ ಭೇಟಿ Read More »

ಆಲಂಕಾರು: ಮನೆ ಮಗನ ಸಾವಿನ ಬಳಿಕ ಕಂಗಾಲಾದ ಕುಟುಂಬ |ಸಹಾಯದ ನಿರೀಕ್ಷೆಯಲ್ಲಿ ತಂದೆ , ಗರ್ಭಿಣಿ ಪತ್ನಿ

ಕಡಬ: ಮನೆಯ ಆಧಾರಸ್ತಂಭವಾಗಿದ್ದ ಮನೆ ಮಗ ಅಳಿದ ಬಳಿಕ ಆತನ ಕುಟುಂಬ ಕಂಗಾಲಾಗಿದೆ. ಆಲಂಕಾರು ಗ್ರಾಮದ ನಗ್ರಿ  ನಿವಾಸಿ ಪದ್ಮಯ್ಯ ಗೌಡರ ಪುತ್ರ ಹರಿಪ್ರಸಾದ್(28) ಜೂನ್ 2 ರಂದು ನೆಟ್ಟಣ ಸಮೀಪ ಮೇರೊಂಜಿ ಎಂಬಲ್ಲಿ ಕಟ್ಟಡ ಕಾಮಗಾರಿ ನಿರ್ವಹಣೆ ವೇಳೆ ಆಕಸ್ಮಿಕವಾಗಿ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ಬಳಿಕ ಈ ಬಡ ಕುಟುಂಬ ಹೈರಾಣಾಗಿದೆ.  ಆರ್ಥಿಕವಾಗಿ ಸಂಕಸ್ಟದಲ್ಲಿರುವ ಈ ಬಡ ಕುಟುಂಬದ ಸಮಸ್ಯೆ ನಿವಾರಿಸುವಲ್ಲಿ ದಾನಿಗಳ ನೆರವಿನ ಅಗತ್ಯವಿದೆ. ಹರಿಪ್ರಸಾದ್ ಅವರು ಮನೆಗೆ ಆಧಾರಸ್ತಂಭವಾಗಿದ್ದ ಯುವಕನನ್ನು ಕಳೆದುಕೊಂಡ ಪತ್ನಿ

ಆಲಂಕಾರು: ಮನೆ ಮಗನ ಸಾವಿನ ಬಳಿಕ ಕಂಗಾಲಾದ ಕುಟುಂಬ |ಸಹಾಯದ ನಿರೀಕ್ಷೆಯಲ್ಲಿ ತಂದೆ , ಗರ್ಭಿಣಿ ಪತ್ನಿ Read More »

ಪುತ್ತೂರು: ವಿವೇಕಾನಂದ ಕನ್ನಡ ಶಾಲೆಯಲ್ಲಿ ’ಸಹಜ’ – ಮೂಲಿಕಾ ವನ ನಿರ್ಮಾಣ ಯೋಜನೆ |

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಮಹತ್ವಾಕಾಂಕ್ಷೆ ಯೋಜನೆ ’ವಿವೇಕ ಸಂಜೀವಿನಿ’ಯ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜಾಗೃತಿಯ ಆಂದೋಲನ ಆಶಯದಂತೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಸಹಜ- ಮೂಲಿಕಾ ವನ ನಿರ್ಮಾಣ ಯೋಜನೆ ಕಾರ್ಯಕ್ರಮ ಶುಕ್ರವಾರ ನಡೆಯಿತು. ಪುತ್ತೂರು ಶ್ರೀ ದುರ್ಗಾ ಕ್ಲಿನಿಕ್ ನ ಆರ್ಯುವೇದಿಕ್ ವೈದ್ಯರಾದ ಡಾ|ಹರಿಕೃಷ್ಣ ಪಾಣಾಜೆ ಕಾರ್ಯಕ್ರಮ ಉದ್ಫಾಟಿಸಿ ಮಾತಾನಾಡಿ,  ’ಔಷಧೀಯ ಸಸ್ಯಗಳ ಸಂರಕ್ಷಣೆ ಹಾಗೂ ಬಳಕೆಯ ಅರಿವು ಶಾಲಾ ದಿನಗಳಿಂದಲೇ ಬೆಳೆಸುವ ಕಾರ್ಯ ಶ್ಲಾಘನೀಯವಾಗಿದೆ. ಈಗ ಬೆಳೆಸಿಕೊಳ್ಳುವ ಈ

ಪುತ್ತೂರು: ವಿವೇಕಾನಂದ ಕನ್ನಡ ಶಾಲೆಯಲ್ಲಿ ’ಸಹಜ’ – ಮೂಲಿಕಾ ವನ ನಿರ್ಮಾಣ ಯೋಜನೆ | Read More »

ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣ ಪತ್ತೆ | ಜ್ವರ ಬಾಧಿತ ಹಲವರು ಆಸ್ಪತ್ರೆಗೆ ದಾಖಲು

ಪುತ್ತೂರು: ತಾಲೂಕಿನ ನೆಲ್ಯಾಡಿ ಸಮೀಪದ ಕೆಲವು ಪ್ರದೇಶದಲ್ಲಿ ಡೆಂಗ್ಯೂ ಜ್ವರ ಬಾಧಿಸಿ ಹಲವರು ಆಸ್ಪತ್ರೆಗೆ ದಾಖಲಾದ ಮಾಹಿತಿ ಬೆಳಕಿಗೆ ಬಂದಿದೆ. ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಶಂಕಿತ ಡೆಂಗ್ಯೂ ಬಾಧಿತ ಇಬ್ಬರು ದಾಖಲಾಗಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಜ್ವರ ಪೀಡಿತ ಪ್ರದೇಶಗಳ ಮನೆಗಳಿಗೆ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ಜ್ವರ ಪೀಡಿತರ ಚಿಕಿತ್ಸೆಗೆ ಮಾರ್ಗದರ್ಶನ ನೀಡುವ ಮೂಲಕ ಜ್ವರದ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಪುತ್ತೂರು ಪೇಟೆಯಲ್ಲಿ ಡೆಂಗ್ಯೂ ರೋಗ ಲಕ್ಷಣ ಕಂಡು ಬಂದಿಲ್ಲ. ಕುದ್ಮಾರಿನ 13

ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣ ಪತ್ತೆ | ಜ್ವರ ಬಾಧಿತ ಹಲವರು ಆಸ್ಪತ್ರೆಗೆ ದಾಖಲು Read More »

ಉಚಿತ ಕಾನೂನು ತರಬೇತಿ ಪಡೆಯಲಿಚ್ಛಿಸುವ ಕಾನೂನು ಪದವೀಧರರಿಗೆ ಅರ್ಜಿ ಆಹ್ವಾನ

ಪುತ್ತೂರು: 2023-24ನೇ ಸಾಲಿನಲ್ಲಿ ಸರಕಾರಿ ವಕೀಲರ ಅಧೀನದಡಿ ನಾಲ್ಕು ವರ್ಷಗಳ ಉಚಿತ ಕಾನೂನು ತರಬೇತಿ ಕಾರ್ಯಕ್ರಮದಡಿ ಕಾನೂನು ತರಬೇತಿ ಪಡೆಯಲಿಚ್ಛಿಸುವ ಹಿಂದುಳಿದ ವರ್ಗಗಳ ಪ್ರವರ್ಗ 1,2ಎ, 3ಬಿಗೆ ಸೇರಿದ ಕಾನೂನು ಪದವೀಧರರಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯನ್ನು ಜಿಲ್ಲಾಧಿಕಾರಿಯವರ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆನೆಗುಂಡಿ ರೋಡ್, ಬಿಜೈ ಕಾಪಿಖಾಡ್ ಮಂಗಳೂರು ಇಲ್ಲಿ ಪಡೆಯಬಹುದು. ರ್ಗಾವಣೆ ಪ್ರಮಾಣ ಪತ್ರದ ಪ್ರತಿ, ಕಾನೂನು ಪದವಿ ಅಂಕ ಪಟ್ಟಿ, ಬಾರ್ ಕೌನ್ಸಿಲ್‍ನ ನೋಂದಾಯಿತ ಬಗ್ಗೆ ಪ್ರಮಾಣ ಪತ್ರ, ಜಾತಿ,

ಉಚಿತ ಕಾನೂನು ತರಬೇತಿ ಪಡೆಯಲಿಚ್ಛಿಸುವ ಕಾನೂನು ಪದವೀಧರರಿಗೆ ಅರ್ಜಿ ಆಹ್ವಾನ Read More »

ಕೆಯ್ಯೂರು ಪಬ್ಲಿಕ್ ಸ್ಕೂಲ್‍ನಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ

ಪುತ್ತೂರು: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪುತ್ತೂರು ತಾಲೂಕಿನ ಕೆದಂಬಾಡಿ ವಲಯದ ಪರಿಸರ ಮಾಹಿತಿ ಕಾರ್ಯಕ್ರಮ, ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಇಕೋ ಕ್ಲಬ್ ವನಶ್ರೀ ಇಕೋ ಕ್ಲಬ್ ಸಂಯೋಗದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಿತು. ವಲಯ ಅರಣ್ಯ ಅಧಿಕಾರಿ ಕಿರಣ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆಯ್ಯೂರು ಗ್ರಾಪಂ ಅಧ್ಯಕ್ಷೆ ಜಯಂತಿ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ. ಪಿ,

ಕೆಯ್ಯೂರು ಪಬ್ಲಿಕ್ ಸ್ಕೂಲ್‍ನಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ Read More »

ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ

ಸುಬ್ರಹ್ಮಣ್ಯ: ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ನೆಟ್ಟಣದಲ್ಲಿ ನಡೆದಿದೆ. ಕಡಬ ತಾಲೂಕಿನ ಐನೆಕಿದು ಪೈಲಾಜೆ ನಿವಾಸಿ ಧರ್ಮರಾಜ ಮುತ್ಲಾಜೆ (45) ಈ ಕೃತ್ಯ ಎಸಗಿದವರು. ಧರ್ಮರಾಜ್ ಎಲಿಮಲೆ ರಬ್ಬರ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಕೆಲ ಸಮಯಗಳಿಂದ ಕೆಲಸಕ್ಕೆ ಗೈರು ಹಾಜರಾಗುತ್ತಿದ್ದರು ಎಂದು ತಿಳಿದು ಬಂದಿದೆ. ಗೂಡ್ಸ್‍ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ Read More »

error: Content is protected !!
Scroll to Top