ಪುತ್ತೂರು

ಜಾಗದ ವಿಚಾರದಲ್ಲಿ ನೆರೆಮನೆಯ ನಾಲ್ವರಿಂದ ಹಲ್ಲೆ

ಕಡಬ: ಜಾಗದ ವಿಚಾರಕ್ಕೆ ಸಂಬಂಧಿಸಿ ಪಕ್ಕದ ಮನೆಯವರ ಮೇಲೆ ಹಲ್ಲೆ ಮಾಡಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕಲ್ಲುಗುಡ್ಡೆಯಲ್ಲಿ ನಡೆದಿದೆ. ಆರ್ಲ ನಿವಾಸಿ, ಸೈನಿಕ ಅಝೀಝ್‍, ಪತ್ನಿ ಫೌಝಿಯಾ ಹಾಗೂ ಮಗ ಮತ್ತು ಇನ್ನೋರ್ವರು ಹಲ್ಲೆಗೊಳಗಾದವರು ಕಲ್ಲುಗುಡ್ಡೆಯಲ್ಲಿರುವ ತಂದೆ ಮನೆಗೆ ಫೌಝಿಯಾ ಹೋಗಿದ್ದರು. ಈ ಸಂದರ್ಭದಲ್ಲಿ ನೆರೆಮನೆಯ ನಾಲ್ವರು ಜಾಗದ ವಿಚಾರದಲ್ಲಿ ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ಫೌಝಿಯಾ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಫೌಝಿಯಾ ಅವರ ತಂದೆ ಮೇಲೂ ಹಲ್ಲೆ ನಡೆದಿದೆ […]

ಜಾಗದ ವಿಚಾರದಲ್ಲಿ ನೆರೆಮನೆಯ ನಾಲ್ವರಿಂದ ಹಲ್ಲೆ Read More »

ಪುತ್ತೂರಿನಲ್ಲಿ ಅತೀ ದೊಡ್ಡ ಸ್ಪೋರ್ಟ್ಸ್ ಶೋರೂಂ “ಸ್ಪೋರ್ಟ್ಸ್ ವರ್ಲ್ಡ್” | ಎಲ್ಲಾ ತರದ ಬ್ರಾಂಡೆಡ್ ಸ್ಪೋರ್ಟ್ಸ್ ಐಟಂಗಳು ಲಭ್ಯ

ಪುತ್ತೂರು: ಕ್ರೀಡಾ ಪ್ರಿಯರೇ ಪುತ್ತೂರಿನ ಅತೀ ದೊಡ್ಡ ಸ್ಪೋರ್ಟ್ಸ್‍ ಶೋರೂಂ “ಸ್ಪೋರ್ಟ್ಸ್ ವರ್ಲ್ಡ್” ಇದೀಗ ಪುತ್ತೂರಿನಲ್ಲಿ ತನ್ನ ಮಳಿಗೆಯನ್ನು ತೆರೆದಿದೆ. ನಗರದ ಮುಖ್ಯ ರಸ್ತೆಯಲ್ಲಿರುವ ಅಮರ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸ್ಪೋರ್ಟ್ಸ್ ವರ್ಲ್ಡ್ ನಲ್ಲಿ ಎಲ್ಲಾ ತರದ ಬ್ರಾಂಡೆಡ್ ವಸ್ತುಗಳು, ಟ್ರೋಫಿಗಳು, ಸ್ಪೋರ್ಟ್ಸ್ ಶೂ, ಸ್ಪೋರ್ಟ್ಸ್ ವೇರ್ಸ್ ಸಹಿತ ಮತ್ತಿರ ಕ್ರೀಡಾ ಸಾಮಾಗ್ರಿಗಳು ಲಭ್ಯವಿದ್ದು, ತಮಗಿಷ್ಟ ಬಂದ ಸ್ಪೋರ್ಟ್ಸ್ ವಸ್ತುಗಳನ್ನು ಅತ್ಯುತ್ತಮ ದರದೊಂದಿಗೆ ಖರೀದಿಸಬಹುದು. ಸಂಸ್ಥೆಯಲ್ಲಿ ಟ್ರೋಫಿಗಳ ಮೇಲೆ ವಿಶೇಷ ರಿಯಾಯಿತಿ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆಯ

ಪುತ್ತೂರಿನಲ್ಲಿ ಅತೀ ದೊಡ್ಡ ಸ್ಪೋರ್ಟ್ಸ್ ಶೋರೂಂ “ಸ್ಪೋರ್ಟ್ಸ್ ವರ್ಲ್ಡ್” | ಎಲ್ಲಾ ತರದ ಬ್ರಾಂಡೆಡ್ ಸ್ಪೋರ್ಟ್ಸ್ ಐಟಂಗಳು ಲಭ್ಯ Read More »

ಜು.30 ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಮಹಾಸಭೆ | ಪ್ರತಿಭಾ ಪುರಸ್ಕಾರಕ್ಕೆ ಮಾಹಿತಿ ನೀಡುವಂತೆ ವಿನಂತಿ

ಪುತ್ತೂರು: ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ವಿದ್ಯಾರ್ಥಿಗಳು ತಮ್ಮ ಮಾಹಿತಿಯನ್ನು ಜು.20 ರೊಳಗೆ ಸಲ್ಲಿಸುವಂತೆ ತಿಳಿಸಿದೆ. ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಆಧಾರ್ ಕಾರ್ಡ್‍ ಪ್ರತಿ ಹಾಗೂ ದೃಢೀಕರಣ ಅಂಕ ಪಟ್ಟಿಯನ್ನು ಸಂಘದ ಕಚೇರಿಯಲ್ಲಿ ನೀಡತಕ್ಕದ್ದು. ಜು.30 ರಂದು ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯುವ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೀಡಲಾಗುವುದು. 2022-23 ರ ಶೈಕ್ಷಣಿಕ ವರ್ಷದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಶೇ.95 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದ

ಜು.30 ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಮಹಾಸಭೆ | ಪ್ರತಿಭಾ ಪುರಸ್ಕಾರಕ್ಕೆ ಮಾಹಿತಿ ನೀಡುವಂತೆ ವಿನಂತಿ Read More »

ಪುತ್ತೂರು ಸಹಾಯಕ ಆಯುಕ್ತರಾಗಿ ಕೆ.ಮಹೇಶಚಂದ್ರ ಅಧಿಕಾರ ಸ್ವೀಕಾರ

ಪುತ್ತೂರು : ಪುತ್ತೂರಿನ ನೂತನ ಸಹಾಯಕ ಆಯುಕ್ತರಾಗಿ ಕೆ. ಮಹೇಶಚಂದ್ರ ಸೋಮವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಸಹಾಯಕ ಆಯುಕ್ತರಾಗಿದ್ದ ಗಿರೀಶ್ ನಂದನ್ ಎತ್ತಿನಹೊಳೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದು, ತೆರವಾದ ಸ್ಥಾನಕ್ಕೆ ಕೆ. ಮಹೇಶಚಂದ್ರ ಆಗಮಿಸಿದ್ದಾರೆ. ಮಹೇಶಚಂದ್ರ ಅವರು ಕೆ.ಐ.ಎ.ಡಿ.ಬಿ.ಯ ಬೈಕಂಪಾಡಿ ಕಚೇರಿಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದು, ಇನ್ನು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಪುತ್ತೂರು ಸಹಾಯಕ ಆಯುಕ್ತರಾಗಿ ಕೆ.ಮಹೇಶಚಂದ್ರ ಅಧಿಕಾರ ಸ್ವೀಕಾರ Read More »

ಜು.16 ರ ವರಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ

ಬೆಂಗಳೂರು : ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 16ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ರಾಮನಗರ, ತುಮಕೂರು, ವಿಜಯಪುರದಲ್ಲಿ

ಜು.16 ರ ವರಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ Read More »

ಸರಕಾರದ ಉಚಿತ ಯೋಜನೆಯ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ಪ್ರತಿಭಟನೆ

ಪುತ್ತೂರು: ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟ, ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ, ಕರ್ನಾಟಕ ವಿದ್ಯುತ್ ಕಂಬ  ಅಳವಡಿಸುವವರ ಸಂಘದ ವತಿಯಿಂದ ಸರಕಾರಿ ಬಸ್‍ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಿಂದಾಗಿ ಟೂರಿಸ್ಟ್ ವಾಹನ ಚಾಲಕ-ಮಾಲಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಪ್ರತಿಭಟನೆ ಸೋಮವಾರ ಆಡಳಿತ ಸೌಧದ ಬಳಿ ಇರುವ ಅಮರ್ ಜವಾನ್ ಸ್ಮಾರದ ಬಳಿ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಕರ್ನಾಟಕ ಕಾರ್ಮಿಕ ಒಕ್ಕೂಟಗಳ ಅಧ್ಯಕ್ಷ ಬಿ.ಪುರಂದರ ಭಟ್ ಮಾತನಾಡಿ, ಸರಕಾರದ ಉಚಿತ ಯೋಜನೆಯಿಂದ ಕಾರ್ಮಿಕರು, ಖಾಸಗಿ ವಾಹನ ಚಾಲಕ-ಮಾಲಕರು ಬೀದಿಗೆ

ಸರಕಾರದ ಉಚಿತ ಯೋಜನೆಯ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ಪ್ರತಿಭಟನೆ Read More »

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನ ನೂತನ ರಥಕ್ಕೆ ದಡೆ ಮುಹೂರ್ತ

ಬೆಳ್ಳಾರೆ :  ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನೂತನ ಬ್ರಹ್ಮರಥ ನಿರ್ಮಾಣ ಕೆಲಸ ಭರದಿಂದ ಸಾಗುತ್ತಿದ್ದು ಜು.10 ರಂದು  ದಡೆ ಮೂಹರ್ತ ನಡೆಯಿತು. ದೇವಸ್ಥಾನದ   ಪ್ರಧಾನ ಅರ್ಚಕರಾದ ಶ್ರೀನಿವಾಸ ಹೆಬ್ಬಾರ್ ಪೂಜೆ ಕಾರ್ಯಕ್ರಮ ನೆರೆವೇರಿಸಿದರು.  ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ  ಪದ್ಮನಾಭ ಶೆಟ್ಟಿ, ಸದಸ್ಯರಾದ  ವೆಂಕಟಕೃಷ್ಣ ರಾವ್ ,ನಾರಾಯಣ ಕೊಂಡೆಪ್ಪಾಡಿ,ಹಾಗೂ.ಕಾಷ್ಟಾ ಶಿಲ್ಪಿಗಳಾದ ಹರೀಶ್ ಆಚಾರ್ಯ ಬೊಲಿಯಾರು,ಸಂತೋಷ್ ಆಚಾರ್ಯ, ಬಾಲಕೃಷ್ಣ ಆಚಾರ್ಯ, ಮತ್ತು  ಭೋಜರಾಜ್ ಶೆಟ್ಟಿ ಕಲ್ಕಂಪಾಡಿಗುತ್ತು,ದೇವದಾಸ್ ಶೆಟ್ಟಿ,  ದೇವರಮಾರ್,ಪ್ರೀತಮ್ ರೈ ಪೆರುವಾಜೆ,ಸುಧಾನಂದ ಪೆರುವಾಜೆ, ಗಣೇಶ್ ಪೂಜಾರಿ 

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನ ನೂತನ ರಥಕ್ಕೆ ದಡೆ ಮುಹೂರ್ತ Read More »

ಕರ್ಕಿಸ್ಥಾನದಲ್ಲಿ ನಡೆದ ಏಷ್ಯಾ ಚೆಸ್ ಚಾಂಪಿಯನ್ ಶಿಪ್‍ | ಆದ್ಯಾ ಗೌಡ ಮೂರನೇ ಸ್ಥಾನ

ಪುತ್ತೂರು: ಕಳೆದ ಒಂದು ವಾರದಿಂದ ಕರ್ಕಿಸ್ಥಾನ್‍ ನಲ್ಲಿ ನಡೆದ ಏಷ್ಯಾ ಮಟ್ಟದ 10 ವರ್ಷದೊಳಗಿನ ಚೆಸ್ ಸ್ಪರ್ಧೆಯಲ್ಲಿ ಆದ್ಯಾ ಗೌಡ ಮೂರನೇ ಸ್ಥಾನ ಗಳಿಸಿದ್ದು, ವುಮೆನ್ ವುಮೆನ್  ಕ್ಯಾಂಡಿಡೇಟ್ ಮಾಸ್ಟರ್ ಗ್ರೇಡ್ ಲಭಿಸಿದೆ. ಇತ್ತೀಚೆಗೆ ಇಂಡಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿ ಕರ್ಕಿಸ್ಥಾನದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಅವರು ಬೆಂಗಳೂರಿನ ಕೇಂಬ್ರಿಡ್ಜ್‍ ಇಂಗ್ಲೀಷ್ ಸ್ಕೂಲ್‍ನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅರವಿಂದ ಹಾಗೂ ಡಾ.ರಮ್ಯಾ ದಂಪತಿ ಪುತ್ರಿಯಾಗಿದ್ದಾರೆ. ಜಿನ್ನಪ್ಪ ಗೌಡ ಮಳುವೇಲು ಹಾಗೂ

ಕರ್ಕಿಸ್ಥಾನದಲ್ಲಿ ನಡೆದ ಏಷ್ಯಾ ಚೆಸ್ ಚಾಂಪಿಯನ್ ಶಿಪ್‍ | ಆದ್ಯಾ ಗೌಡ ಮೂರನೇ ಸ್ಥಾನ Read More »

ಗ್ರಾಪಂ ಉಪಚುನಾವಣೆ | ನಿಡ್ಪಳ್ಳಿ ಗ್ರಾಪಂಗೆ ಪುತ್ತಿಲ ಪರಿವಾರದ ಅಭ್ಯರ್ಥಿಯಾಗಿ ಜಗನ್ನಾಥ ರೈ ಕೊಳೆಂಬೆತ್ತಿಮಾರು ನಾಮಪತ್ರ ಸಲ್ಲಿಕೆ

ನಿಡ್ಪಳ್ಳಿ : ನಿಡ್ಪಳ್ಳಿ ಗ್ರಾಮ ಪಂಚಾಯತ್ ನ ಉಪಚುನಾವಣೆಗೆ ಪುತ್ತಿಲ ಪರಿವಾರದಿಂದ ಅಭ್ಯರ್ಥಿಯಾಗಿ ನಾಮಪತ್ರ ಜಗನ್ನಾಥ್ ರೈ ಕೊಳೆಂಬೆತ್ತಿಮಾರು ನಾಮಪತ್ರ ಸಲ್ಲಿಸಿದರು. ಸೋಮವಾರ ಪುತ್ತಿಲ ಪರಿವಾರದ ಮುಖಂಡರೊಂದಿಗೆ ತೆರಳಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ನಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತಾ, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ವೀರಮಂಗಲ, ಪ್ರಮುಖರಾದ ಸುಧೀರ್ ರೈ ನೇಸರ ಕಂಪ, ನಗರ ಅಧ್ಯಕ್ಷ ಅನಿಲ್ ತೆಂಕಿಲ, ಕುಮಾರ್

ಗ್ರಾಪಂ ಉಪಚುನಾವಣೆ | ನಿಡ್ಪಳ್ಳಿ ಗ್ರಾಪಂಗೆ ಪುತ್ತಿಲ ಪರಿವಾರದ ಅಭ್ಯರ್ಥಿಯಾಗಿ ಜಗನ್ನಾಥ ರೈ ಕೊಳೆಂಬೆತ್ತಿಮಾರು ನಾಮಪತ್ರ ಸಲ್ಲಿಕೆ Read More »

ಉದ್ಯಮ ಯಶಸ್ವಿಯಾಗಬೇಕಾದರೆ ಆಡಳಿತ –ಸಿಬ್ಬಂದಿ ವರ್ಗ ಗಾಡಿಯ ನಾಲ್ಕು ಚಕ್ರದಂತಿರಬೇಕು : ಹರೀಶ್ ಕುಮಾರ್ | ಸುಳ್ಯ ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ 22ನೇ ಶಾಖೆ ಶುಭಾರಂಭ

ಮುಂಡಾಜೆ : ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 22ನೇ ಶಾಖೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸೋಮಂತಡ್ಕ ಡಿಸೋಜಾ ಕಾಂಪ್ಲೆಕ್ಸ್ ಒಂದನೇ ಮಹಡಿಯಲ್ಲಿ ಭಾನುವಾರ ಶುಭಾರಂಭಗೊಂಡಿತು. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಉದ್ಯಮ ಯಶಸ್ವಿಯಾಗಬೇಕಾದರೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಒಂದೇ ಗಾಡಿಯ ನಾಲ್ಕು ಚಕ್ರದಂತೆ ಸಾಗಬೇಕು. ಹಾಗಾದರೆ ಯಶಸ್ವಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ವೆಂಕಟರಮಣ ಸೊಸೈಟಿ ಅನೇಕ ಸಾಮಾಜಿಕ ಅಭಿವೃದ್ಧಿ ಧ್ಯೇಯವನ್ನಿಟ್ಟುಕೊಂಡು ಗ್ರಾಹಕರ ವಿಶ್ವಾಸ ಪಡೆದು

ಉದ್ಯಮ ಯಶಸ್ವಿಯಾಗಬೇಕಾದರೆ ಆಡಳಿತ –ಸಿಬ್ಬಂದಿ ವರ್ಗ ಗಾಡಿಯ ನಾಲ್ಕು ಚಕ್ರದಂತಿರಬೇಕು : ಹರೀಶ್ ಕುಮಾರ್ | ಸುಳ್ಯ ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ 22ನೇ ಶಾಖೆ ಶುಭಾರಂಭ Read More »

error: Content is protected !!
Scroll to Top