ಪುತ್ತೂರು

ವಿಷ ಸೇವಿಸಿ ಆತ್ಮಹತ್ಯೆ

ಕಡಬ: ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಐತ್ತೂರು ಗ್ರಾಮದ ಕೇರ್ಪಡ ನಿವಾಸಿ, ಕೆಎಫ್‌ಡಿಸಿ ನಿವೃತ್ತ ನೌಕರ ಮೋನಪ್ಪ ಗೌಡ (56ವ.)ರವರು ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೋನಪ್ಪ ಗೌಡರು ಅನಾರೋಗ್ಯದ ಹಿನ್ನೆಲೆಯಲ್ಲಿ 6 ವರ್ಷದ ಹಿಂದೆ ಕೆಎಸ್‌ಡಿಸಿ ಉದ್ಯೋಗ ಬಿಟ್ಟಿದ್ದರು. ಆ.6ರಂದು ಬೆಳಿಗ್ಗೆ ಮೈಲುತುತ್ತು ಸೇವಿಸಿ ಅಸ್ವಸ್ಥರಾಗಿದ್ದ ಅವರನ್ನು 108 ಆಂಬುಲೆನ್ಸ್‌ನಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ […]

ವಿಷ ಸೇವಿಸಿ ಆತ್ಮಹತ್ಯೆ Read More »

ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಿಪ್ಪಾಡಿ ಬೇರಿಕೆಯ ಕಾಯರ್ ಕಾಡ್ ನಲ್ಲಿ ನಡೆದಿದೆ. ಪುತ್ತೂರಿನ ಶರ್ಮಹಾನ್ ಸೊಸೈಟಿಯ ಅಧ್ಯಕ್ಷರಾಗಿದ್ದ ಗಿರೀಶ್ ಶರ್ಮ ಅವರ ತಂದೆ ಗಣೇಶ್ ಶರ್ಮ(60ವ)ರವರು ಮನೆಯ ಸಮೀಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಅವರು ತನ್ನ ಮನೆಯ ಹಿಂಬದಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರು ಪತ್ನಿ, ಪುತ್ರ, ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ Read More »

ನೆಲ್ಯಾಡಿ 14ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ |  ಆಮಂತ್ರಣ ಪತ್ರಿಕೆ ಬಿಡುಗಡೆ

ನೆಲ್ಯಾಡಿ: ನೆಲ್ಯಾಡಿ ಶ್ರೀರಾಮ ವಿದ್ಯಾಲಯದಲ್ಲಿ ಆ.25 ರಂದು ನಡೆಯಲಿರುವ 14ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಸಮಿತಿಯ ಪದಾಧಿಕಾರಿಗಳು ಶಾಲಾ ವಠಾರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷೆ ಪ್ರತಿಮಾ, ಕಾರ್ಯದರ್ಶಿ ಸುಮಲತಾ ಮಾತಾಜಿ, ಕೋಶಾಧಿಕಾರಿ ಸುಪ್ರೀತಾ ರವಿಚಂದ್ರ ಹೊಸವಕ್ಲು, ಸದಸ್ಯರಾದ ಪುಷ್ಪಾವತಿ ಜನಾರ್ದನ, ಪ್ರೀತ, ನಮಿತಾ, ಸಮಾನ, ಬೇಬಿ, ಸದಾನಂದ, ಕುಸುಮಾವತಿ, ಲಲಿತ, ವಿಮಲಾ, ಭವ್ಯ, ಬಿಂದು, ಜಯಂತಿ, ಹರಿಣಾಕ್ಷಿ, ರೇವತಿ, ವಿಶಾಲ, ಮಮತಾ,

ನೆಲ್ಯಾಡಿ 14ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ |  ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಅಂಬಿಕಾ ಸಿಬಿಎಸ್‌ಇ ಸಂಸ್ಥೆಯಲ್ಲಿ ಆಟಿದ ಕೂಟ ಆಚರಣೆ

ಪುತ್ತೂರು : ಪ್ರಕೃತಿಯಲ್ಲಿರುವ ಪ್ರತಿಯೊಂದು ಗಿಡಗಳೂ ಔಷಧೀಯ ಸಸ್ಯಗಳೇ ಆಗಿವೆ. ಹಾಗಾಗಿ ಪ್ರತಿಯೊಂದು ಗಿಡದಲ್ಲೂ ಸಕಾರಾತ್ಮಕ ಶಕ್ತಿ ಅಡಗಿದೆ. ಗಿಡಮರಗಳಷ್ಟೇ ಅಲ್ಲದೆ ಇಡಿಯ ಪ್ರಕೃತಿಯೇ ತನ್ನೊಳಗೆ ಔಷಧೀಯ ಅಂಶಗಳನ್ನು ಒಳಗೊಂಡಿದೆ ಎಂದು ನಾಟಿ ವೈದ್ಯ ದೇವಿಪ್ರಸಾದ್ ಹೇಳಿದರು. ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಆಯೋಜಿಸಲಾದ ’ಆಟಿದ ಕೂಟ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕೂಡುಕುಟುಂಬಗಳಿದ್ದಾಗ ಈ ಪ್ರಕೃತಿ ಆಧಾರಿತ ನಾಟಿ ವೈದ್ಯ ಹೆಚ್ಚು ಪ್ರಚಲಿತದಲ್ಲಿತ್ತು. ಆದರೆ ವಿಭಕ್ತ ಕುಟುಂಬಗಳು ಹೆಚ್ಚಾದಂತೆ ನಾಟಿ ಪರಂಪರೆಯೂ ನಶಿಸಿ

ಅಂಬಿಕಾ ಸಿಬಿಎಸ್‌ಇ ಸಂಸ್ಥೆಯಲ್ಲಿ ಆಟಿದ ಕೂಟ ಆಚರಣೆ Read More »

ದಿನೇಶ್ ಪೆರಿಯಡ್ಕ ನಿಧನ

ಪುತ್ತೂರು: ಹಿಂದೂ ಜಾಗರಣ ವೇದಿಕೆ ಸವಣೂರು ಘಟಕದ ಕಾರ್ಯಕರ್ತ ದಿನೇಶ್ ಪೆರಿಯಡ್ಕ (34) ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದಾರೆ. ಮೃತರು ವೃತ್ತಿಯಲ್ಲಿ ಇಲೆಕ್ಟ್ರೀಷಿಯನ್ ಆಗಿದ್ದರು. ಅವರು ತಂದೆ, ತಾಯಿ, ಪತ್ನಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ದಿನೇಶ್ ಪೆರಿಯಡ್ಕ ನಿಧನ Read More »

ಆ.14 : ಸೌಜನ್ಯ ಪ್ರಕರಣದ ಕುರಿತು ಪುತ್ತಿಲ ಪರಿವಾರದಿಂದ “ನಮ್ಮ ನಡೆ ನ್ಯಾಯದ ಕಡೆ” ಬೃಹತ್ ಕಾಲ್ನಡಿಗೆ ಜಾಥಾ

ಪುತ್ತೂರು: 11 ವರ್ಷಗಳ ಹಿಂದೆ  ಅತ್ಯಾಚಾರ ನಡೆದು ಕೊಲೆಯಾದ ಸಹೋದರಿ ಸೌಜನ್ಯ ಪ್ರಕರಣಕ್ಕೆ  ನ್ಯಾಯ ಒದಗಿಸಲು ಸರ್ಕಾರ ಮರುತನಿಖೆ ಕೈಗೊಳ್ಳಬೇಕು ಹಾಗೂ ನೈಜ ಆರೋಪಿಗಳ ಬಂಧನವಾಗಬೇಕೆಂದು ಒತ್ತಾಯಿಸಿ ಆ.14 ರಂದು  ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನಲ್ಲಿ ‘ನಮ್ಮ ನಡೆ ನ್ಯಾಯದ ಕಡೆ’ ಬೃಹತ್ ಕಾಲ್ನಾಡಿಗೆ ಜಾಥ ಹಾಗೂ ರಸ್ತೆ ತಡೆ ನಡೆಯಲಿದೆ. ಆ.8 ಮಂಗಳವಾರ ಪುತ್ತಿಲ ಪರಿವಾರ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಆಗಸ್ಟ್ 14ರ ಸೋಮವಾರದಂದು ಬೆಳಿಗ್ಗೆ 9.30 ಕ್ಕೆ  ದರ್ಬೆ

ಆ.14 : ಸೌಜನ್ಯ ಪ್ರಕರಣದ ಕುರಿತು ಪುತ್ತಿಲ ಪರಿವಾರದಿಂದ “ನಮ್ಮ ನಡೆ ನ್ಯಾಯದ ಕಡೆ” ಬೃಹತ್ ಕಾಲ್ನಡಿಗೆ ಜಾಥಾ Read More »

ಗಿರಾಕಿ ಸೋಗಿನಲ್ಲಿ ಬಂದು ಚಿನ್ನದ ಚೈನ್ ಎಗರಿಸಿದ ಮಹಿಳೆ | ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ

ಪುತ್ತೂರು: ಮಹಿಳೆಯೊಬ್ಬರು ಗಿರಾಕಿ ಸೋಗಿನಲ್ಲಿ ಬಂದು ಚಿನ್ನಾಭರಣ ಅಂಗಡಿಯಿಂದ ಚಿನ್ನದ ಚೈನು ಎಗರಿಸಿದ ಘಟನೆ ನಡೆದಿದೆ. ಸೋಮವಾರ ನಗರದ ಕೋರ್ಟ್ ರಸ್ತೆಯಲ್ಲಿರುವ ಬಾವಾ ಜ್ಯುವೆಲ್ಲರ್ಸ್ ಗೆ ಬುರ್ಖಾ ಧರಿಸಿ ಸಣ್ಣ ಮಗುವಿನೊಂದಿಗೆ ಬಂದ ಮಹಿಳೆಯೊಬ್ಬರು ಈ ಕೃತ್ಯ ಎಸಗಿದ್ದಾರೆ. ಗಿರಾಕಿಯಂತೆ ಬಂದ ಮಹಿಳೆ 8 ಗ್ರಾಂ, 4ಗ್ರಾಂ ನ ಚೈನು(ಸರ) ಬೇಕೆಂದು ಬೇರೆ ಬೇರೆ ಡಿಸೈನ್ ನ ಸರಗಳನ್ನು ನೋಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಆ ಮಹಿಳೆ ಮಗುವಿಗೆ ಎದೆ ಹಾಲು ಕೊಡಲು ಶುರು ಮಾಡಿದೆ. ಈ

ಗಿರಾಕಿ ಸೋಗಿನಲ್ಲಿ ಬಂದು ಚಿನ್ನದ ಚೈನ್ ಎಗರಿಸಿದ ಮಹಿಳೆ | ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ Read More »

ಆ.13 : ನಡೆಪಿಯರ ಉಂಡು ಸಾರಕರೆ ಬೊಲಿಯಾಳ ಶ್ರೀ ಶೀನಪ್ಪ ಪೂಜಾರಿ ಮೇರ್‍ನ ಸ್ಮರಣಾರ್ಥವಾದ್ ಕೆಸರ ಕಂಡೋಡು ಒಂಜಿದಿನ ಪೊರ್ಲ ಪೊಲಬು | ಶ್ರೀ ಧರ್ಮರಸು ಉಳ್ಳಾಕುಳು ಚಾಕೋಟೆತ್ತಡಿ ಮಾಡ, ಮುಲ್ಪ

ಪುತ್ತೂರು: ಸಾರಕರೆ ಬೊಲಿಯಾಳ ಶ್ರೀ ಶೀನಪ್ಪ ಪೂಜಾರಿ ಮೇರ್‍ನ ಸ್ಮರಣಾರ್ಥವಾದ್ ಸಾಂಪ್ರಾದಾಯಿಕ  ಕಂಬುಲ ಕೆಸರ ಕಂಡ ಕ್ರೀಡಾಕೂಟ ತಿಂಗಳಾಡಿ ಬಾಲಯ ಕಂಬಳ ಕೂಟೋದ ಲೋಹಿತ್ ಬಂಗೇರ ಉಂಬೆರೆನ ಮುತಾಲಿಕೆಡ್  ಕೆಸರ ಕಂಡೋಡು ಒಂಜಿದಿನ ಪೊರ್ಲ ಪೊಲಬು ಉಂದುವೆ ಐತಾರ ಆಟಿ ೨೮ ಪೋಪುನಾನಿ ಶ್ರೀ ಧರ್ಮರಸು ಉಳ್ಳಾಕುಳು ಚಾಕೋಟೆತ್ತಡಿ ಮಾಡ, ಮುಲ್ಪ ನಡೆಪಿಯರ ಉಂಡು. ಗೊಬ್ಬುದ  ಉದಿಪನೊನು ಸಿರಿಮತಿ ಆಶಾತಿಮ್ಮಪ್ಪ ಗೌಡ ನಡಪಾದ್ ಕೊರ್ಯರ ಉಲ್ಲೆರ್. ಮಿತ್ತರ್ಮೆದ ಬಾಮೋಡು ಲೇಸ್ ದ ಉದಿಪನೊನು ಕ್ಯಾಂಪ್ಕೊ ಲಿ. ದ

ಆ.13 : ನಡೆಪಿಯರ ಉಂಡು ಸಾರಕರೆ ಬೊಲಿಯಾಳ ಶ್ರೀ ಶೀನಪ್ಪ ಪೂಜಾರಿ ಮೇರ್‍ನ ಸ್ಮರಣಾರ್ಥವಾದ್ ಕೆಸರ ಕಂಡೋಡು ಒಂಜಿದಿನ ಪೊರ್ಲ ಪೊಲಬು | ಶ್ರೀ ಧರ್ಮರಸು ಉಳ್ಳಾಕುಳು ಚಾಕೋಟೆತ್ತಡಿ ಮಾಡ, ಮುಲ್ಪ Read More »

ಸಿ ಎ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಪುತ್ತೂರು: ಭಾರತೀಯ ಚಾರ್ಟಡ್ ಅಕೌಂಟೆಂಟ್ಸ್ ಸಂಸ್ಥೆ ಕಳೆದ ಜೂನ್ ನಲ್ಲಿ ನಡೆಸಿದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ತೇರ್ಗಡೆಯಾಗುವುದರ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ಸುದೇಶ್ ಭಟ್-245 ಅಂಕ, ಆದಿತ್ಯ ನಾರಾಯಣ ಪಿ ಎಸ್-239 ಅಂಕ, ಪ್ರದೀಪ್ ಕೃಷ್ಣ ಐ-202 ಅಂಕ  ಮತ್ತು ಎಸ್ ತ್ವಿಷ-200 ಅಂಕಗಳನ್ನು ಪಡೆದು ತೇರ್ಗಡೆಯಾಗುವುದರ ಮೂಲಕ ಮುಂದಿನ ಹಂತದ ಸಿ ಎ ಇಂಟರ್‌ಮಿಡಿಯೆಟ್ ಪರೀಕ್ಷೆಯನ್ನು ಬರೆಯಲು ಅರ್ಹತೆ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ

ಸಿ ಎ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ Read More »

ಸೇತುವೆ ನಿರ್ಮಾಣಕ್ಕೆಂದು ತಂದಿಟ್ಟಿದ್ದ ಸಾಮಾಗ್ರಿಗಳು ಕಳವು | ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

ವಿಟ್ಲ: ಸೇತುವೆ ನಿರ್ಮಾಣಕ್ಕೆಂದು ತಂದಿಟ್ಟಿದ್ದ ವಸ್ತುಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಬಿ ಮೂಡ ಗ್ರಾಮದ ನಿವಾಸಿ, ಕೆ.ಎಸ್‍.ಆರ್. ಕನ್‍ ಸ್ಟ್ರಕ್ಷನ್ ಕಂಪೆನಿಯ ಪಿಆರ್ ಒ ಆಗಿರುವ ಆರ್.ನಂದಕುಮಾರ್ ದೂರು ನೀಡಿದ್ದಾರೆ. ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆಂದು ತಂದಿಟ್ಟಿದ್ದ ಕಬ್ಬಿಣದ ಸಲಾಖೆಗಳು, ಪ್ಲೇಟ್ಸ್ ಇನ್ನಿತರ ಸಾಮಾಗ್ರಿಗಳು ಸೋಮವಾರ ಕಳ್ಳತನವಾಗಿತ್ತು. ಕಳ್ಳತನವಾದ ಸಾಮಾಗ್ರಿಗಳ ಒಟ್ಟು ಮೌಲ್ಯ 3.50 ಲಕ್ಷ ಎಂದು ಅಂದಾಜಿಸಲಾಗಿದೆ.

ಸೇತುವೆ ನಿರ್ಮಾಣಕ್ಕೆಂದು ತಂದಿಟ್ಟಿದ್ದ ಸಾಮಾಗ್ರಿಗಳು ಕಳವು | ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು Read More »

error: Content is protected !!
Scroll to Top