ಪುತ್ತೂರು

ವೈಭವದಿಂದ ನಡೆಯಲಿದೆ ಪುತ್ತೂರು ಶಾರದೋತ್ಸವ : ಆಮಂತ್ರಣ ಪತ್ರಿಕೆ, ಲೋಗೋ ಬಿಡುಗಡೆ

ಪುತ್ತೂರು: ಅ.15 ರಿಂದ 24ರ ತನಕ ನಡೆಯುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಶಾರದಾ ಭಜನಾ ಮಂದಿರದ 89ನೇ ವರ್ಷದ ವೈಭವದ ಪುತ್ತೂರು ಶಾರದೋತ್ಸವದ ಲಾಂಛನ ಮತ್ತು ಆಮಂತ್ರಣ ಬಿಡುಗಡೆ ಮಾಡಲಾಯಿತು. ಮಾಜಿ ಶಾಸಕ ಸಂಜೀವ ಮಠಂದೂರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಡಾ.ಸುರೇಶ್ ಪುತ್ತೂರಾಯ ಲಾಂಛನ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು, ಶೋಭಾಯಾತ್ರೆ ಸಮಿತಿ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಸಮಿತಿ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, […]

ವೈಭವದಿಂದ ನಡೆಯಲಿದೆ ಪುತ್ತೂರು ಶಾರದೋತ್ಸವ : ಆಮಂತ್ರಣ ಪತ್ರಿಕೆ, ಲೋಗೋ ಬಿಡುಗಡೆ Read More »

ಪಡುವನ್ನೂರು ದರೋಡೆ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಪುತ್ತಿಲ ಪರಿವಾರ

ಪುತ್ತೂರು: ಪಡುವನ್ನೂರು ಗ್ರಾಮದ ಕುದ್ಕಾಡಿ ಗುರುಪ್ರಸಾದ್ ರೈ ಅವರ  ಮನೆಯಲ್ಲಿ ಸೆ. 9ರಂದು ರಾತ್ರಿ ನಡೆದ ದರೋಡೆ ಪ್ರಕರಣವನ್ನು ತಿಂಗಳೊಳಗೆ ಭೇದಿಸಿದ ಪೊಲೀಸ್ ಇಲಾಖೆಗೆ ಪುತ್ತಿಲ ಪರಿವಾರ ಅಭಿನಂದನೆ ಸಲ್ಲಿಸಿದೆ. ಘಟನೆ ನಡೆದ ದಿನವೇ ಅರುಣ್ ಕುಮಾರ್ ಪುತ್ತಿಲ ಸಹಿತ ಪುತ್ತಿಲ ಪರಿವಾರದ ಪ್ರಮುಖರು ಗುರುಪ್ರಸಾದ್ ರೈಯವರ ಮನೆಗೆ ಭೇಟಿ ನೀಡಿದ್ದು, ಆ ಸಂದರ್ಭ ಕಳ್ಳತನ ನಡೆದ ಘಟನೆಯನ್ನು ತಾಯಿ ಮಗ ವಿವರಿಸಿದ ರೀತಿಯನ್ನು ಕಂಡಾಗ ಆರೋಪಿಗಳ ಪತ್ತೆ ಕಷ್ಟಸಾಧ್ಯವೆಂಬಂತೆ ಕಾಣುತಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲಾ

ಪಡುವನ್ನೂರು ದರೋಡೆ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಪುತ್ತಿಲ ಪರಿವಾರ Read More »

ಪಡುವನ್ನೂರು ದರೋಡೆ ಪ್ರಕರಣ ಭೇದಿಸಿರುವುದು ಪೊಲೀಸ್ ವ್ಯವಸ್ಥೆಗೆ ಸಂದ ಗೌರವ | ತಂಡಕ್ಕೆ ಅಭಿನಂದನೆ ಸಲ್ಲಿಸಿದ ಶಾಸಕ ಅಶೋಕ್ ರೈ

ಪುತ್ತೂರು: ಬಡಗನ್ನೂರು ಗ್ರಾಮದ ಕುದ್ಕಾಡಿ ಗುರುಪ್ರಸಾದ್ ರೈ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣವನ್ನು ತಿಂಗಳೊಳಗೆ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಅಂತರರಾಜ್ಯ ದರೋಡೆಕೋರರನ್ನು ಬಂಧಿಸುವುದು ಸುಲಭದ ಕೆಲಸವಲ್ಲ. ಅದರಲ್ಲೂ ದರೋಡೆ ಮಾಡಿದ ಬಳಿಕ ಆ ತಂಡ ಅಲ್ಲಿ ಯವುದೇ ಕುರುಹುಗಳನ್ನು ಬಿಟ್ಟು ಹೋಗಿರಲಿಲ್ಲ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯಲ್ಲಿದ್ದ ತಾಯಿ ಮತ್ತು ಮಗ ಬಿಟ್ಟರೆ ಉಳಿದಂತೆ ಒಂದೇ ಒಂದು ಸಾಕ್ಷಿಯೂ ಇರಲಿಲ್ಲ. ಆದರೆ ಜಿಲ್ಲಾ ಎಸ್ಪಿ

ಪಡುವನ್ನೂರು ದರೋಡೆ ಪ್ರಕರಣ ಭೇದಿಸಿರುವುದು ಪೊಲೀಸ್ ವ್ಯವಸ್ಥೆಗೆ ಸಂದ ಗೌರವ | ತಂಡಕ್ಕೆ ಅಭಿನಂದನೆ ಸಲ್ಲಿಸಿದ ಶಾಸಕ ಅಶೋಕ್ ರೈ Read More »

ಪುತ್ತೂರು ಅರಣ್ಯ ರಕ್ಷಕ ರಾಜುಚಂದ್ರ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

ಪುತ್ತೂರು: ಅರಣ್ಯ ಇಲಾಖಾ ಶೌರ್ಯ ಮತ್ತು ದಿಟ್ಟತನ ಕರ್ತವ್ಯಕ್ಕೆ 2020-21ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕವನ್ನು ಪುತ್ತೂರು ವಲಯದ ಗಸ್ತು ಅರಣ್ಯಪಾಲಕ ರಾಜುಚಂದ್ರ ಅವರಿಗೆ ಶುಕ್ರವಾರ ಪ್ರದಾನ ಮಾಡಲಾಯಿತು. ರಾಜುಚಂದ್ರ ಅವರು ಕೆರೆಕಟ್ಟೆ ವನ್ಯಜೀವಿ ವಲಯದಲ್ಲಿ ನಕ್ಸಲರು ವನ್ಯಜೀವಿ ಕಚೇರಿಗೆ ಬೆಂಕಿ ಹಾಕಿದ ಸಂದರ್ಭ ಧೃತಿಗೆಡದೆ ಕರ್ತವ್ಯ ನಿರ್ವಹಿಸಿದ್ದರು. ಪುತ್ತೂರು ಶಾಖೆಯಲ್ಲಿ ಹಿರಿಯ ಅಧಿಕಾರಿಗಳ ಸಹಕಾರದೊಂದಿಗೆ ವಿವಿಧ ಅರಣ್ಯ ಅಪರಾಧ ಪತ್ತೆಹಚ್ಚಿರುತ್ತಾರೆ. ಅಕ್ರಮ ಅರಣ್ಯ ಸಂಪತ್ತು ಸಾಗಾಟ ಮಾಡುತ್ತಿದ್ದ 21 ವಾಹನಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಪಿಲಿಗೊಂಡದಲ್ಲಿ

ಪುತ್ತೂರು ಅರಣ್ಯ ರಕ್ಷಕ ರಾಜುಚಂದ್ರ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ Read More »

ಮಾನಹಾನಿಕರ ಸುದ್ದಿ ಬಿತ್ತರ: ನಗರ ಠಾಣೆಗೆ ದೂರು

ಪುತ್ತೂರು: ಬನ್ನೂರು ನಿವಾಸಿ ಶೇಖರ್ ಎನ್‍.ಪಿ. ಎಂಬವರು ತನ್ನ ಮೇಲೆ ಮಾನಹಾನಿಕರ ಸುಳ್ಳು ಸುದ್ದಿ ಬಿತ್ತರಿಸಿರುವುದಾಗಿ ಆರೋಪಿಸಿ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಪತ್ರಿಕೆ ಮತ್ತು ಖಾಸಗಿ ಚಾನೆಲ್ ನಲ್ಲಿ ಇಲ್ಲ ಸಲ್ಲದ ಆರೋಪ ಮಾಡಿ, ತೇಜೋವಧೆ ಮಾಡಿ, ಮಾನಹಾನಿಕರವಾದ ಸುಳ್ಳು ಸುದ್ದಿಯನ್ನು ಬಿತ್ತರಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಉದ್ಯಮಿಯಾಗಿರುವ ನಾನು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಜನಪರ ಸೇವೆಗಳಲ್ಲಿ ಭಾಗಿಯಾಗಿರುತ್ತೇನೆ. ಈ ಸಂದರ್ಭ ರಾಜಕೀಯ ಕೆಸರೆರಚಾಟಗಳು ಸಾಮಾನ್ಯವಾಗಿದ್ದು, ಈ ಹಿನ್ನೆಲೆ ತೋಜೋವಧೆ ಮಾಡುವ ಉದ್ದೇಶದಿಂದ

ಮಾನಹಾನಿಕರ ಸುದ್ದಿ ಬಿತ್ತರ: ನಗರ ಠಾಣೆಗೆ ದೂರು Read More »

ಪೆರೋಲ್’ನಲ್ಲಿ ಹೊರಬಂದು ದರೋಡೆ ಎಸಗಿದ, ಪೊಲೀಸರ ಕೈಗೆ ಸಿಗುವ ಮೊದಲೇ ಜೈಲು ಸೇರಿದ!! | ಪಡುವನ್ನೂರು ಗುರುಪ್ರಸಾದ್ ರೈ ಮನೆ ದರೋಡೆ ಪ್ರಕರಣದ ಎಲ್ಲಾ 7 ಆರೋಪಿಗಳ ಬಂಧನ | ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ವಿವರ ಬಿಚ್ಚಿಟ್ಟ ಎಸ್ಪಿ ಸಿ.ಬಿ. ರಿಷ್ಯಂತ್

ಪುತ್ತೂರು: ತಾಲೂಕಿನ ಪಡುವನ್ನೂರು ಗ್ರಾಮದಲ್ಲಿ ಸೆ.9ರಂದು ಮನೆಯೊಂದಕ್ಕೆ ನುಗ್ಗಿದ ದರೋಡೆಕೋರರ ತಂಡ ತಾಯಿ-ಮಗನನ್ನು ಕಟ್ಟಿ ಹಾಕಿ ಚಿನ್ನ ಹಾಗೂ ನಗದು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಏಳನೇ ಪ್ರಮುಖ ಆರೋಪಿ ರವಿ ಪೆರೋಲ್ನಲ್ಲಿ ಹೊರಗೆ ಬಂದು ಈ ಕೃತ್ಯದಲ್ಲಿ ಭಾಗಿಯಾಗಿ ಮತ್ತೆ ಜೈಲಿನಲ್ಲಿದ್ದಾನೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷ್ಯಂತ್ ಸಿ.ಬಿ. ತಿಳಿಸಿದರು. ಶುಕ್ರವಾರ ಪುತ್ತೂರು ಡಿವೈಎಸ್ಪಿ ಕಚೇರಿಯಲ್ಲಿ ಪತ್ರಿಕಾಗೊಷ್ಠಿಯಲ್ಲಿ ಪ್ರಕರಣದ ವಿವರ ನೀಡಿದ ಅವರು, ಸೆ. 7ರಂದು ಬೆಳಗ್ಗಿನ ಜಾವ 2

ಪೆರೋಲ್’ನಲ್ಲಿ ಹೊರಬಂದು ದರೋಡೆ ಎಸಗಿದ, ಪೊಲೀಸರ ಕೈಗೆ ಸಿಗುವ ಮೊದಲೇ ಜೈಲು ಸೇರಿದ!! | ಪಡುವನ್ನೂರು ಗುರುಪ್ರಸಾದ್ ರೈ ಮನೆ ದರೋಡೆ ಪ್ರಕರಣದ ಎಲ್ಲಾ 7 ಆರೋಪಿಗಳ ಬಂಧನ | ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ವಿವರ ಬಿಚ್ಚಿಟ್ಟ ಎಸ್ಪಿ ಸಿ.ಬಿ. ರಿಷ್ಯಂತ್ Read More »

ಕೇರಳದಿಂದ ಬಂದವರಿಗೆ ಎಕರೆಗಟ್ಟಲೆ ಸರಕಾರಿ ಜಾಗ ಮಂಜೂರು, ಇಲ್ಲೇ ಇರುವ ಬಡವರಿಗೆ ಡಿ.ಸಿ.ಮನ್ನಾ ಜಾಗದಲ್ಲೂ ಮನೆ ಕಟ್ಟಲು ಅವಕಾಶವಿಲ್ಲ | ತಾಲೂಕು ಮಟ್ಟದ ಎಸ್‍ಸಿ-ಎಸ್‍ಟಿ ಕುಂದುಕೊರತೆ ಸಭೆಯಲ್ಲಿ ಭಾರೀ ಚರ್ಚೆ

ಪುತ್ತೂರು: ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪಂಗಡದ ಕುಂದುಕೊರತೆ ಸಭೆ ಶುಕ್ರವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.ತಹಶೀಲ್ದಾರ್ ಶಿವಶಂಕರ್ ಜೆ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಸರಕಾರಿ ಜಾಗ ಮಂಜೂರಾದ ಕುರಿತು ಭಾರೀ ಚರ್ಚೆಗೆ ಗ್ರಾಸವಾಯಿತು. ಕೇರಳದ ವ್ಯಕ್ತಿಯೊಬ್ಬರಿಗೆ 2022 ರಲ್ಲಿ 2.45 ಎಕ್ರೆ ಸರಕಾರಿ ಜಮೀನು ಮಂಜೂರಾಗಿದೆ. ಆದರೆ ಇಲ್ಲೇ ಇರುವ ಬಡವರಿಗೆ ಡಿ.ಸಿ.ಮನ್ನಾ ಭೂಮಿಯಲ್ಲೂ ಮನೆ ಕಟ್ಟಲು ಅವಕಾಶವಿಲ್ಲ. ಈ ವ್ಯವಸ್ಥೆ ಯಾಕೆ ಎಂದು ಗಿರಿಧರ ನಾಯ್ಕ್ ಸಭೆಯಲ್ಲಿ ಪ್ರಶ್ನಿಸಿದರು. ಈ

ಕೇರಳದಿಂದ ಬಂದವರಿಗೆ ಎಕರೆಗಟ್ಟಲೆ ಸರಕಾರಿ ಜಾಗ ಮಂಜೂರು, ಇಲ್ಲೇ ಇರುವ ಬಡವರಿಗೆ ಡಿ.ಸಿ.ಮನ್ನಾ ಜಾಗದಲ್ಲೂ ಮನೆ ಕಟ್ಟಲು ಅವಕಾಶವಿಲ್ಲ | ತಾಲೂಕು ಮಟ್ಟದ ಎಸ್‍ಸಿ-ಎಸ್‍ಟಿ ಕುಂದುಕೊರತೆ ಸಭೆಯಲ್ಲಿ ಭಾರೀ ಚರ್ಚೆ Read More »

ಏಕಾಏಕಿ ರಸ್ತೆಗೆ ಅಡ್ಡ ಬಂದ ನಾಯಿ: ಧರೆಗೆ ಅಪ್ಪಳಿಸಿದ ಕಾರು

ಪುತ್ತೂರು: ನಾಯಿಯೊಂದು ರಸ್ತೆಗಡ್ಡವಾಗಿ ಬಂದ ಪರಿಣಾಮ ಕಾರು ಧರೆಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದವರು ಗಾಯಗೊಂಡ ಘಟನೆ ಸರ್ವೆ ಭಕ್ತಕೋಡಿಯಲ್ಲಿ ನಡೆದಿದೆ. ಬಾಲಕೃಷ್ಣ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಲ್ಲಿ ಪರಮೇಶ್ವರಿ, ಪತಿ ಬಾಲಸುಬ್ರಹ್ಮಣ್ಯ, ಮೊಮ್ಮಕ್ಕಳಾದ ಭಾವನಾ ಮತ್ತು ಅನಿರುದ್ ಎಂಬವರಿದ್ದು, ಸರ್ವೆ ಗ್ರಾಮದ ಭಕ್ತಕೋಡಿ ಎಂಬಲ್ಲಿ ನಾಯಿಯೊಂದು ಏಕಾಏಕಿ ರಸ್ತೆಗೆ ಅಡ್ಡಲಾಗಿ ಬಂದಿದೆ. ಅಪಘಾತವಾಗುವುದನ್ನು ತಪ್ಪಿಸುವ ಸಲುವಾಗಿ ಒಮ್ಮೆಗೆ ಬ್ರೇಕ್ ಹಾಕಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ. ಪರಿಣಾಮ ಕಾರಿನಲ್ಲಿ

ಏಕಾಏಕಿ ರಸ್ತೆಗೆ ಅಡ್ಡ ಬಂದ ನಾಯಿ: ಧರೆಗೆ ಅಪ್ಪಳಿಸಿದ ಕಾರು Read More »

ರಾಜಶೇಖರ ಕೋಟ್ಯಾನ್ ವೈಯಕ್ತಿಕ ವ್ಯವಹಾರಕ್ಕೂ ಪುತ್ತಿಲ ಪರಿವಾರಕ್ಕೂ ಯಾವುದೇ ಸಂಬಂಧವಿಲ್ಲ | ಸ್ಪಷ್ಟನೆ ನೀಡಿದ ಪುತ್ತಿಲ ಪರಿವಾರ

ಪುತ್ಯೂರು : 2023ರ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಒತ್ತಾಯದಂತೆ ಪಕ್ಷೇತರರಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರು ಸ್ಪರ್ಧಿಸಿದ್ದು, ಈ ಸಂದರ್ಭದಲ್ಲಿ ಕಾರ್ಯಕರ್ತರಾಗಿ ದುಡಿದಿದ್ದವರಲ್ಲಿ ನೇರಳಕಟ್ಟೆಯ ರಾಜಶೇಖರ್ ಕೋಟ್ಯಾನ್ ಓರ್ವರಾಗಿದ್ದಾರೆ. ಇದೀಗ ರಾಜಶೇಖರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳು ಕೇಳಿ ಬರುತ್ತಿದ್ದು, ಕರ್ನಾಟಕದ ಹಗರಿಬೊಮ್ಮನಹಳ್ಳಿ ಕ್ಷೇತ್ರದ ರಾಷ್ಟ್ರೀಯ ಪಕ್ಷದ ಟಿಕೇಟ್ ವಿಷಯದಲ್ಲಿ ನಾಯಕರ ನಡುವೆ ಚುನಾವಣಾ ಪೂರ್ವ ವ್ಯವಹಾರ ನಡೆದಿದ್ದು, ಈ ವಿಷಯದಲ್ಲಿ ಪುತ್ತಿಲ ಪರಿವಾರ ಹೆಸರು ಕೇಳಿ ಬಂದಿದೆ. ಈ ಕುರಿತು ಸ್ಪಷ್ಟನೆ ನೀಡಿದ

ರಾಜಶೇಖರ ಕೋಟ್ಯಾನ್ ವೈಯಕ್ತಿಕ ವ್ಯವಹಾರಕ್ಕೂ ಪುತ್ತಿಲ ಪರಿವಾರಕ್ಕೂ ಯಾವುದೇ ಸಂಬಂಧವಿಲ್ಲ | ಸ್ಪಷ್ಟನೆ ನೀಡಿದ ಪುತ್ತಿಲ ಪರಿವಾರ Read More »

ಸುಜ್ಞಾನನಿಧಿ ಶಿಷ್ಯವೇತನ, ಮಾಸಾಶನ ವಿತರಣೆ, ಮಲ್ಲಿಗೆ ಕೃಷಿ ಕುರಿತು ಮಾಹಿತಿ

ಪೆರ್ನೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ಪೆರ್ನೆ ವಲಯದ ಕೆದಿಲ ಬಿ ಕಾರ್ಯಕ್ಷೇತ್ರದಲ್ಲಿ ಸುಜ್ಞಾನನಿಧಿ ಶಿಷ್ಯವೇತನ ಹಾಗೂ ಮಾಸಾಶನ ಸೌಲಭ್ಯಗಳ ವಿತರಣೆ ಮತ್ತು ‘ಮಧುರ’ ಜ್ಞಾನವಿಕಾಸ ಕೇಂದ್ರದಲ್ಲಿ ಸೃಜನಶೀಲ ಕಾರ್ಯಕ್ರಮದಡಿ ಸ್ವ ಉದ್ಯೋಗಕ್ಕೆ ಪೂರಕವಾಗಿ ಮಲ್ಲಿಗೆ ಕೃಷಿ ಬಗ್ಗೆ ಮಾಹಿತಿ ಮತ್ತು ಸಸಿ ವಿತರಣೆ ಕಾರ್ಯಕ್ರಮ ನಡೆಯಿತು. ಕೆದಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ವಾಲ್ತಾಜೆ ಕಾರ್ಯಕ್ರಮ ಉದ್ಘಾಟಿಸಿದರು. ಯೋಜನಾಧಿಕಾರಿ ಚೆನ್ನಪ್ಪ ಗೌಡ ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸುಜ್ಞಾನನಿಧಿ ಶಿಷ್ಯವೇತನ, ಮಾಸಾಶನ ವಿತರಣೆ, ಮಲ್ಲಿಗೆ ಕೃಷಿ ಕುರಿತು ಮಾಹಿತಿ Read More »

error: Content is protected !!
Scroll to Top