ಪುತ್ತೂರು

ಪುತ್ತೂರಿನಲ್ಲಿ ಅಭಿವೃದ್ದಿ ಪರ್ವ ಆರಂಭ : ವಿವಿಧ ಗ್ರಾಮೀಣ ರಸ್ತೆಗಳಿಗೆ 1.70 ಕೋಟಿ ರೂ. ಬಿಡುಗಡೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನವನ್ನು ಕ್ಷೇತ್ರಕ್ಕೆ ತರಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಬಿಡುಗಡೆಯಾದ ಅನುದಾನಗಳ ವಿವರ ಇಂತಿದೆ : ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಕಡಂದೇಲು ಪ.ಜಾತಿ ಕಾಲನಿ ರಸ್ತೆ ಅಭಿವೃದ್ಧಿಗೆ ರೂ 24 ಲಕ್ಷ ರೂ., ಕೆದಿಲ ಗ್ರಾಮದ ಭಗವಂತಕೋಡಿ ಮುರುರ ಪಾಟ್ರುಕೋಡಿ 17 ಲಕ್ಷ ರೂ., ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಕಣಿಯಾರು ಪ.ಜಾತಿ […]

ಪುತ್ತೂರಿನಲ್ಲಿ ಅಭಿವೃದ್ದಿ ಪರ್ವ ಆರಂಭ : ವಿವಿಧ ಗ್ರಾಮೀಣ ರಸ್ತೆಗಳಿಗೆ 1.70 ಕೋಟಿ ರೂ. ಬಿಡುಗಡೆ Read More »

ಬಡವರ ಜೊತೆ ಸಹಭೋಜನ ಮಾಡುವ ಉದ್ದೇಶದಿಂದ ಸಾರಿ ವಿತರಣೆ: ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರಿನಲ್ಲಿ ಈ ಬಾರಿ ಸುಮಾರು 50 ಸಾವಿರ ಮಂದಿಗೆ ವಸ್ತ್ರ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವ ಬಡವರ ಜೊತೆ ಸಹಭೋಜನವನ್ನು ಮಾಡಲಿದ್ದೇನೆ. ಈ ಉದ್ದೇಶದಿಂದಲೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದಲ್ಲಿ ನಡೆದ 19ನೇ ವರ್ಷದ ನವರಾತ್ರಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಇನ್ನೊಬ್ಬರ ಕಷ್ಟಕ್ಕೆ ನೆರವಾಗುವುದೇ ಧರ್ಮ. ಜಾತಿಮತಗಳ ಭೇದವಿಲ್ಲದೆ ಎಲ್ಲರೊಂದಿಗೆ ಸಹೋದರ ಭಾವನೆಯಿಂದ ಬದುಕುವುದು ಮತ್ತು ಧರ್ಮಗಳ ನಡುವೆ

ಬಡವರ ಜೊತೆ ಸಹಭೋಜನ ಮಾಡುವ ಉದ್ದೇಶದಿಂದ ಸಾರಿ ವಿತರಣೆ: ಶಾಸಕ ಅಶೋಕ್ ರೈ Read More »

‘ವಾಲ್ ಆಪ್ ಹ್ಯುಮೆನಿಟಿ’ ಸ್ವಚ್ಚತೆಯೊಂದಿಗೆ ಮಾನವೀಯತೆ

ಪುತ್ತೂರು: ಪ್ರತಿಯೊಬ್ಬರ ಮನೆಯಲ್ಲೂ ಉಪಯೋಗವಾಗದ ವಸ್ತುಗಳು ಇದ್ದೇ ಇರುತ್ತವೆ, ಅದರ ವಿಲೇವಾರಿಯೇ ಕಷ್ಟ. ಹೊಸ ವಸ್ತು ತಂದರೆ ಹಳೆವಸ್ತುಗಳು ಕೆಟ್ಟಿದ್ದರೂ ಅದನ್ನು ಎಸೆಯಲು ಮನಸ್ಸು ಬರುವುದಿಲ್ಲ ಅನಗತ್ಯ ಶೇಖರಣೆಯೂ ಅಸಾಧ್ಯ. ಇವೆಲ್ಲ ಚಿಂತೆಗಳನ್ನು ದೂರ ಮಾಡಲು, ಪರಿಹಾರ ಕಂಡುಕೊಳ್ಳಲು, ಇತ್ಯಾದಿಗಳಿಗೆ ಪರಿಹಾರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ  ಕಳೆದ 5 ವರ್ಷಗಳಿಂದ ಸದ್ದಿಲ್ಲದೆ ಸೇವೆ ನೀಡುತ್ತಿರುವ ವ್ಯವಸ್ಥೆಯೇ ‘ವಾಲ್ ಆಪ್ ಹ್ಯುಮೆನಿಟಿ’ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿಯವರ ಕನಸಿಸ ಯೋಜನೆ ಇದಾಗಿದೆ.

‘ವಾಲ್ ಆಪ್ ಹ್ಯುಮೆನಿಟಿ’ ಸ್ವಚ್ಚತೆಯೊಂದಿಗೆ ಮಾನವೀಯತೆ Read More »

ಪುತ್ತೂರರ್ದ ಪಿಲಿರಂಗ್ ಸೀಸನ್ 2ನಲ್ಲಿ ಸ್ಥಳೀಯ ವೇಷಧಾರಿಗಳಿಗೂ ಗೌರವ!

ಪುತ್ತೂರು: ಶಕುಂತಳಾ ಟಿ. ಶೆಟ್ಟಿ ಸಾರಥ್ಯದಲ್ಲಿ ಕಿಲ್ಲೆ ಮೈದಾನದಲ್ಲಿ ಪುತ್ತೂರ್ದ ಪಿಲಿರಂಗ್ ಸೀಸನ್ 2 ನಡೆಯುತ್ತಿದೆ. ಬೆಳಿಗ್ಗೆ ಗಣಹೋಮ ನಡೆದು, ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ತುಳು ಧ್ವಜ ಅನಾವರಣಗೊಳಿಸಿದರು. ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟನೆಗೊಳಿಸಿದರು. ಪಿಲಿರಂಗ್ ಕ್ರೀಡಾ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ತಂಡಗಳು ಕಿಲ್ಲೆ ಮೈದಾನದ ನಡುವಿನಲ್ಲಿ ಹಾಕಿರುವ ವಿಶಾಲ ವೇದಿಕೆಯಲ್ಲಿ ತಮ್ಮ ನೈಪುಣ್ಯವನ್ನು ಪ್ರದರ್ಶಿಸುತ್ತಿವೆ. ಇದರ ನಡುವೆ ಪುತ್ತೂರು

ಪುತ್ತೂರರ್ದ ಪಿಲಿರಂಗ್ ಸೀಸನ್ 2ನಲ್ಲಿ ಸ್ಥಳೀಯ ವೇಷಧಾರಿಗಳಿಗೂ ಗೌರವ! Read More »

ಪುತ್ತೂರಿನಲ್ಲಿ ಮೇಳೈಸಿದ ಪಿಲಿಗೊಬ್ಬು-2023 | ಜಿಲ್ಲೆಯ ಖ್ಯಾತ 10 ತಂಡಗಳ ಭಾಗವಹಿಸುವಿಕೆ

ಪುತ್ತೂರು: ತುಳುನಾಡ ಹುಲಿಕುಣಿತ ಜನಪದೀಯ ನಂಬಿಕೆಯೊಂದಿಗೆ ಹರಕೆ ರೂಪದಲ್ಲಿರುವ ಒಂದು ಗೊಬ್ಬು. ತುಳುನಾಡಿನ ದೈವಕಲೆ, ಸಂಸ್ಕೃತಿಯ ಭಾಗವಾದ ಹುಲಿ ಕುಣಿತಕ್ಕೆ ರೂಪು, ನಡವಳಿಕೆ, ಚೌಕಟ್ಟು ನೀಡಿ ಪ್ರತಿಭೆಗಳನ್ನು ಗುರುತಿಸುವ ಕೆಲಸ ವಿಜಯ್ ಸಾಮ್ರಾಟ್ ನಿಂದ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಭಾನುವಾರ ಪುತ್ತೂರು ವಿಜಯ್ ಸಾಮ್ರಾಟ್ ಆಶ್ರಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆದ ಪಿಲಿಗೊಬ್ಬು-2023 ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ

ಪುತ್ತೂರಿನಲ್ಲಿ ಮೇಳೈಸಿದ ಪಿಲಿಗೊಬ್ಬು-2023 | ಜಿಲ್ಲೆಯ ಖ್ಯಾತ 10 ತಂಡಗಳ ಭಾಗವಹಿಸುವಿಕೆ Read More »

ವಿಶ್ವ ಬಂಟರ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಅ.28 ಹಾಗೂ 29 ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಸಮಾಲೋಚನಾ ಸಭೆ ಶನಿವಾರ ಸಂಜೆ ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು. ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ವಿಶ್ವ ಬಂಟರ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಲಿ ಎಂದು ಶುಭಹಾರೈಸಿದರು. ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಪುತ್ತೂರಿನಿಂದ ವಿಶ್ವ

ವಿಶ್ವ ಬಂಟರ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಅಡಕೆ ಎಲೆ ಚುಕ್ಕಿ ರೋಗ ಶೀಘ್ರವೇ ಕೃಷಿ ಸಚಿವರ ಜೊತೆ ಮಾತುಕತೆ: ಅಶೋಕ್ ರೈ

ಪುತ್ತೂರು: ಜಿಲ್ಲೆಯಲ್ಲಿ ಅಡಕೆಗೆ ಎಲೆಚುಕ್ಕಿ ರೋಗ ಸುಳ್ಯ ಮತ್ತು ಪಾಣಾಜೆ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದು, ಈ ವಿಚಾರವನ್ನು ತಕ್ಷಣವೇ ಕೃಷಿ ಸಚಿವರ ಗಮನಕ್ಕೆ ತರಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ಇಡ್ಕಿದು ಸೇವಾ ಸಹಕಾರಿ ಸಂಘದ ಕುಳ ಕುಂಡಡ್ಕ ಶಾಖೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಎಲೆ ಚುಕ್ಕಿ ರೋಗ ಬಾಧಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ರೋಗಕ್ಕೆ ಸೂಕ್ತ ಔಷಧಿಯ ವ್ಯವಸ್ಥೆ

ಅಡಕೆ ಎಲೆ ಚುಕ್ಕಿ ರೋಗ ಶೀಘ್ರವೇ ಕೃಷಿ ಸಚಿವರ ಜೊತೆ ಮಾತುಕತೆ: ಅಶೋಕ್ ರೈ Read More »

ನೈಋತ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆ: ಪೂರ್ವಭಾವಿ ಸಭೆ

ಪುತ್ತೂರು: ನೈಋತ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ನ. 6 ಕೊನೆ ದಿನವಾಗಿರುತ್ತದೆ. ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಅರ್ಹರು ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಪದವೀಧರರು ನೋಂದಣಿಗೆ ಹೆಚ್ಚಿನ ಆಸಕ್ತಿಯನ್ನು ತೋರಿಸುವ ಕಾರ್ಯವಾಗಬೇಕಾಗಿದೆ ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು. ಅವರು ಶನಿವಾರ ಸಂಜೆ ಮತದಾರರ ಪಟ್ಟಿ ತಯಾರಿಕೆಯ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದರು. 2017ರ ಚುನಾವಣೆ ಸಂದರ್ಭ 506 ಶಿಕ್ಷಕರು ಹಾಗೂ 1138 ಮಂದಿ ಪದವೀದರರಿದ್ದರು.

ನೈಋತ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆ: ಪೂರ್ವಭಾವಿ ಸಭೆ Read More »

ಮುಖ್ಯಮಂತ್ರಿ ಪರಿಹಾರ ನಿಧಿ ವಿತರಣೆ

ಪುತ್ತೂರು: ತಾಲೂಕಿನ ನಾಲ್ಕು ಮಂದಿ ಫಲಾನುಭವಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ ಮೊತ್ತವನ್ನು ಪುತ್ತೂರು ಶಾಸಕರ ಕಚೇರಿಯಲ್ಲಿ ಶನಿವಾರ ಸಂಜೆ ವಿತರಿಸಲಾಯಿತು. ತಾಲೂಕಿನ ಕೋಡಿಂಬಾಡಿ ಗ್ರಾಮದ ಮೋಹನ್ ಕಜೆ ಅವರಿಗೆ 20 ಸಾವಿರ ರೂ., ಬಜತ್ತೂರು ಗ್ರಾಮದ ಜಯರಾಮ ಎಂ. ಅವರಿಗೆ 30 ಸಾವಿರ ರೂ., ಕುಡಿಪ್ಪಾಡಿ ಗ್ರಾಮದ ಇಸ್ಮಾಯಿಲ್ ಅವರಿಗೆ 33,152 ಹಾಗೂ ಆರ್ಯಾಪು ಗ್ರಾಮದ ಹರೀಶ ಅವರಿಗೆ 24 ಸಾವಿರ ರೂ. ಪರಿಹಾರ ನಿಧಿಯನ್ನು ಶಾಸಕ ಅಶೋಕ್ ಕುಮಾರ್ ರೈ ವಿತರಿಸಿದರು. ಈ ಸಂದರ್ಭದಲ್ಲಿ

ಮುಖ್ಯಮಂತ್ರಿ ಪರಿಹಾರ ನಿಧಿ ವಿತರಣೆ Read More »

‘ಪಿಲಿಗೊಬ್ಬು’ಗೆ ಪೂರ್ವಭಾವಿಯಾಗಿ ‘ಫುಡ್ ಫೆಸ್ಟ್’ಗೆ ಚಾಲನೆ

ಪುತ್ತೂರು: ಹೊಸ ಯೋಚನೆ, ಗುಣಮಟ್ಟ, ರುಚಿಯ ಜತೆಗೆ ಪರಿವರ್ತನೆ… ಇವು ಆಹಾರ ಉದ್ಯಮದ ಯಶಸ್ಸಿನ ದಾರಿ ಎಂದು ಉದ್ಯಮಿ, ಬಿಂದು ಸಮೂಹ ಸಂಸ್ಥೆಯ ಸತ್ಯಶಂಕರ್ ಭಟ್ ಹೇಳಿದರು. ಪುತ್ತೂರು ವಿಜಯ ಸಾಮ್ರಾಟ್ ಆಶ್ರಯದಲ್ಲಿ ಪಿಲಿಗೊಬ್ಬು ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಆಯೋಜಿಸಿರುವ ‘ಫುಡ್ ಫೆಸ್ಟ್’ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ ಇದ್ದಷ್ಟು ಆಹಾರ ವೈವಿಧ್ಯತೆಗಳು ಜಗತ್ತಿನ ಬೇರೆ ಯಾವ ದೇಶದಲ್ಲೂ ಇಲ್ಲ. ಈ ನಿಟ್ಟಿನಲ್ಲಿ ಭಾರತದಲ್ಲಿ ಆಹಾರ ಉದ್ಯಮಕ್ಕೆ

‘ಪಿಲಿಗೊಬ್ಬು’ಗೆ ಪೂರ್ವಭಾವಿಯಾಗಿ ‘ಫುಡ್ ಫೆಸ್ಟ್’ಗೆ ಚಾಲನೆ Read More »

error: Content is protected !!
Scroll to Top