ಪುತ್ತೂರು

ತಡರಾತ್ರಿ ಕೆಟ್ಟು ನಿಂತ ಸರಕಾರಿ ಬಸ್: ಪರ್ಯಾಯ ವ್ಯವಸ್ಥೆ ಮಾಡಿಸಿದ ಶಾಸಕರು

ಪುತ್ತೂರು: ಮಂಗಳೂರಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿ ಸಿ ಬಸ್ ತಡ ರಾತ್ರಿ ಕುಂಬ್ರ ಬಳಿ ಕೆಟ್ಟು ನಿಂತಿದ್ದು ಮಾಹಿತಿ ಅರಿತ ಶಾಸಕರು ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ. ಈ ಬಸ್ಸಿನಲ್ಲಿ ಬೆಂಗಳೂರಿನಲ್ಲಿ ಪೊಲೀಸ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳೇ ಅಧಿಕವಾಗಿದ್ದು ಹಠಾತ್ತನೆ ಬಸ್ ಕೆಟ್ಟಿರುವ ಕಾರಣ ಆತಂಕದಲ್ಲಿದ್ದರು. ಸ್ಥಳಕ್ಕೆ ಬಂದ ಸಾರ್ವಜನಿಕರು ತಕ್ಷಣವೇ ಶಾಸಕರಾದ ಅಶೋಕ್ ರೈ ಯವರಿಗೆ ಮಾಹಿತಿ ನೀಡಿದ್ದರು.  ತಕ್ಷಣ ಕಾರ್ಯಪೃವೃತ್ತರಾದ ಶಾಸಕರು ಪುತ್ತೂರು ಡಿಪೋ ಮೂಲಕ ಬದಲಿ ಬಸ್ ವ್ಯವಸ್ಥೆ ಮಾಡಿಸಿದ್ದಾರೆ. […]

ತಡರಾತ್ರಿ ಕೆಟ್ಟು ನಿಂತ ಸರಕಾರಿ ಬಸ್: ಪರ್ಯಾಯ ವ್ಯವಸ್ಥೆ ಮಾಡಿಸಿದ ಶಾಸಕರು Read More »

ಮಹೇಶ್ ಶೆಟ್ಟಿ ತಿಮರೋಡಿಗೆ ಮಾತೃವಿಯೋಗ

ಬೆಳ್ತಂಗಡಿ : ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕ, ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರ ತಾಯಿ ಅಮಣಿ ಶೆಟ್ಟಿ ನಿಧನರಾಗಿದ್ದಾರೆ. 85 ವರ್ಷ ಪ್ರಾಯದ ಅಮಣಿ ಶೆಟ್ಟಿಯವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರು ಪುತ್ರ ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಐವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿಗೆ ಮಾತೃವಿಯೋಗ Read More »

ಡಾ.ಜಯಪ್ರಕಾಶ್ ಅವರ 7ನೇ ಕೃತಿ ಲೋಕಾರ್ಪಣೆ | ಪುತ್ತೂರು ಕನ್ನಡ ಸಾಹಿತ್ಯ ಪರಿಷತ್‍ಗೆ 100 ಪುಸ್ತಕ ಕೊಡುಗೆ

ಪುತ್ತೂರು: ಭಾರತದ ಮಾಜಿ ರಾಷ್ಟ್ರಪತಿಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪಿ ಆರ್ ಓ ಆಗಿ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿಗಳಾದ ಡಾ. ಜಯಪ್ರಕಾಶ್ ಪುತ್ತೂರು ಅವರ 7ನೇ ಕೃತಿ ದಶಕದ ಸಾಹಿತ್ಯದ ಮೊಗಸಾಲೆಯಲ್ಲಿ ಕೃತಿಯನ್ನು ಬೆಂಗಳೂರು ಕ.ಸಾ.ಪಾ. ಸಲಹಾ ಸಮಿತಿ ಸದಸ್ಯ ಡಾ. ಮುರಲೀ ಮೋಹನ್ ಚೂoತಾರು ಲೋಕಾರ್ಪಣೆ ಮಾಡಿದರು.  ಈ ಸಂದರ್ಭದಲ್ಲಿ ಕ ಸಾ ಪಾ -ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಡಾ. ಮುರಲೀ ಮೋಹನ್ ಚೂoತಾರು ಹಾಗೂ ಕೃತಿಕಾರ ಜಯಪ್ರಕಾಶ್ ಪುತ್ತೂರು ಅವರನ್ನು

ಡಾ.ಜಯಪ್ರಕಾಶ್ ಅವರ 7ನೇ ಕೃತಿ ಲೋಕಾರ್ಪಣೆ | ಪುತ್ತೂರು ಕನ್ನಡ ಸಾಹಿತ್ಯ ಪರಿಷತ್‍ಗೆ 100 ಪುಸ್ತಕ ಕೊಡುಗೆ Read More »

ಸರಕಾರಿ ಪ್ರೇರಿತವಾಗಿ ಹನುಮಧ್ವಜ ಇಳಿಸಿದ್ದು ಖಂಡನೀಯ : ಬಜರಂಗದಳ

ಪುತ್ತೂರು: ಶ್ರೀರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಕರೆಗೋಡು ಹೋಬಳಿಯಲ್ಲಿ ಎಲ್ಲಾ ಜನರ ಪರವಾಗಿ ಹಾರಿಸಿದ ಹನುಮಧ್ವಜವನ್ನು ಸರಕಾರಿ ಪ್ರೇರಿತವಾಗಿ ಇಳಿಸಿದ ಘಟನೆ ಖಂಡನೀಯ ಎಂದು ಬಜರಂಗದಳ ಪ್ರಾಂತ ಸಂಯೋಜಕರಾದ ಸುನೀಲ್‍ ಕೆ.ಆರ್., ಮುರಳೀಕೃಷ್ಣ ಹಸಂತಡ್ಕ ತಿಳಿಸಿದ್ದಾರೆ. ಪ್ರತಿಕಾ ಪ್ರಕಟಣೆ ನೀಡಿರುವ ಅವರು, ಸಾವಿರಾರು ಜನರ, ತಾಯಂದಿರ ಪ್ರತಿಭಟನೆಯ ನಡುವೆಯೂ ಸರಕಾರಿ ಪ್ರೇರಿತವಾಗಿ ಇಳಿಸಿದಂತಹ ಘಟನೆ ಅತ್ಯಂತ ದುರದೃಷ್ಟಕರ. ಹಿಂದೂ ಸಮಾಜದ ಭಾವನೆಗಳಿಗೆ, ನಂಬಿಕೆಗಳಿಗೆ ಯಾವುದೇ ಬೆಲೆಕೊಡದ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಎಂದು

ಸರಕಾರಿ ಪ್ರೇರಿತವಾಗಿ ಹನುಮಧ್ವಜ ಇಳಿಸಿದ್ದು ಖಂಡನೀಯ : ಬಜರಂಗದಳ Read More »

ಮೋದಿ ಮತ್ತೊಮ್ಮೆ ಗೋಡೆ ಬರಹಕ್ಕೆ ಚಾಲನೆ

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮೋದಿ ಮತ್ತೊಮ್ಮೆ ಗೋಡೆ ಬರಹಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಪುತ್ತೂರಿನ ಹಲವೆಡೆ ಮೋದಿ ಮತ್ತೊಮ್ಮೆ ಎಂದು ಬರೆದು, ಬಿಜೆಪಿಯ ಕಮಲ ಚಿಹ್ನೆಯನ್ನು ಅಂಟಿಸಲಾಯಿತು.  ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ ಜಗನ್ನೀವಾಸ್ ರಾವ್, ಮಾಜಿ ಶಾಸಕ ಸಂಜೀವ ಮಠಂದೂರು, ಗೋಡೆ ಬರಹ ಜಿಲ್ಲಾ ಸಹ ಸಂಚಾಲಕ ದಯಾನಂದ ಶೆಟ್ಟಿ, ಮಂಡಲದ ಗೋಡೆ ಬರಹ ಪ್ರಮುಖ ಸುರೇಶ್ ಅತ್ರಮಜಲು, ರಾಜೇಶ್

ಮೋದಿ ಮತ್ತೊಮ್ಮೆ ಗೋಡೆ ಬರಹಕ್ಕೆ ಚಾಲನೆ Read More »

ಕೊಂಡಾಟದ ಕೋಣಗಳಿಂದ ದೇವರಿಗೆ ನಮನ; ಕರೆಗಿಳಿದ ಕೋಣಗಳಿಗೆ ಕಂಬಳಾಭಿಮಾನಿಗಳ ಸ್ವಾಗತ | ಹೀಗೆ ನೀಡಲಾಯ್ತು ಪುತ್ತೂರು ಕಂಬಳಕ್ಕೆ ಚಾಲನೆ

ಪುತ್ತೂರು: ಐತಿಹಾಸಿಕ ಪುತ್ತೂರು ಕೋಟಿ – ಚೆನ್ನಯ ಜೋಡುಕರೆ ಕಂಬಳಕ್ಕೆ ಶನಿವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. ದೇವರಮಾರು ಗದ್ದೆಯಲ್ಲಿ ನಿರ್ಮಿಸಲಾದ ಅಚ್ಚುಕಟ್ಟಿನ ಕೋಟಿ – ಚೆನ್ನಯ ಕರೆಯಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಎರಡು ದಿನದ ಹೊನಲು ಬೆಳಕಿನ ಕಂಬಳ ಉದ್ಘಾಟನೆಗೊಂಡಿತು. ಇನ್ನೊಂದೆಡೆ ಕಂಬಳಕ್ಕೆ ಆಗಮಿಸುತ್ತಿದ್ದ ಕೋಣಗಳನ್ನು ಶ್ರೀ ಮಹಾಲಿಂಗೇಶ್ವರ ದೇವರ ಮುಂಭಾಗಕ್ಕೆ ಕೊಂಡೊಯ್ದು, ದೇವರಿಗೆ ನಮಿಸಿ ಪ್ರಾರ್ಥನೆ ಸಲ್ಲಿಸುವ ದೃಶ್ಯ ಕಂಡುಬರುತ್ತಿದೆ. ಕೋಣಗಳು ಎರಡು ಮೊಣಕಾಲುಗಳನ್ನು ಊರಿ ದೇವರಿಗೆ ನಮಿಸುವುದನ್ನು ನೋಡುವುದೇ ಚಂದ. ಉದ್ಘಾಟನೆ ಬಳಿಕ ಕಂಬಳ

ಕೊಂಡಾಟದ ಕೋಣಗಳಿಂದ ದೇವರಿಗೆ ನಮನ; ಕರೆಗಿಳಿದ ಕೋಣಗಳಿಗೆ ಕಂಬಳಾಭಿಮಾನಿಗಳ ಸ್ವಾಗತ | ಹೀಗೆ ನೀಡಲಾಯ್ತು ಪುತ್ತೂರು ಕಂಬಳಕ್ಕೆ ಚಾಲನೆ Read More »

ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ: ಐ.ಆರ್.ಸಿ.ಎಂ.ಡಿ. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ 12 ಪ್ರಶಸ್ತಿ

ಪುತ್ತೂರು: ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ  ಅಬಾಕಸ್ ಸ್ಪರ್ಧೆಯಲ್ಲಿ ಪುತ್ತೂರಿನ  ಐ.ಆರ್.ಸಿ.ಎಂ.ಡಿ. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಪುತ್ತೂರು ಮತ್ತು ಸುಳ್ಯದ ವಿದ್ಯಾರ್ಥಿಗಳು ಒಟ್ಟು ವಿದ್ಯಾರ್ಥಿಗಳು 12 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಇವರೆಲ್ಲರೂ ಐ.ಆರ್.ಸಿ.ಎಂ.ಡಿ. ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಪಡೆದುಕೊಂಡಿದ್ದು, ಸಂಸ್ಥೆಯ ಪ್ರಫುಲ್ಲಾ ಗಣೇಶ್ ಅವರು  ತರಬೇತಿ ನೀಡಿದ್ದಾರೆ. ತುಮಕೂರು ಎಸ್.ಆರ್.ಎಸ್ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು  ಟಿ.ಆರ್.ಎಸ್ ಶಿಕ್ಷಣ ಸಂಸ್ಥೆಯು ಜ. 21ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯನ್ನು ಆಯೋಜಿಸಿತ್ತು. ರಾಜ್ಯದ ವಿವಿಧ

ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ: ಐ.ಆರ್.ಸಿ.ಎಂ.ಡಿ. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ 12 ಪ್ರಶಸ್ತಿ Read More »

ಎವಿಜಿ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ‘ಎವಿಜಿ ಚಿಣ್ಣರೋತ್ಸವ’

ಪುತ್ತೂರು: ಬನ್ನೂರು ಗ್ರಾಮದ ಅಲುಂಬುಡದಲ್ಲಿ ಕಾರ್ಯಾಚರಿಸುತ್ತಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭ “ಎವಿಜಿ ಚಿಣ್ಣರೋತ್ಸವ” ಶುಕ್ರವಾರ ನಡೆಯಿತು. ಸಮಾರಂಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪುತ್ತೂರಿನಲ್ಲಿ ಆಂಗ್ಲ ಮಾಧ್ಯಮ ಶಾಲಾ ಆರಂಭಗೊಳ್ಳುವುದು ಒಳ್ಳೆಯ ವಿಚಾರ. ಮಕ್ಕಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡುವುದು ಪೋಷಕರ ಆಶಯವಾಗಿದೆ. ದಿನದಿಂದ ದಿನಕ್ಕೆ ಶಾಲಾ ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಸರಕಾರಿ ಶಾಲೆಗಳು ಕೆಪಿಎಸ್‍ ಮಾದರಿ ಶಾಲೆಗಳು ಇನ್ನಷ್ಟು ಬರಲಿದೆ. ಇದೀಗ ಈ ಪರಿಸರದ ಮಕ್ಕಳಿಗೆ ಎ.ವಿ.ನಾರಾಯಣ ಅವರು ಒಳ್ಳೆಯ

ಎವಿಜಿ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ‘ಎವಿಜಿ ಚಿಣ್ಣರೋತ್ಸವ’ Read More »

ಸವಣೂರು ಮೆಸ್ಕಾಂ ಶಾಖೆಯಲ್ಲಿ 75ನೇ ಗಣರಾಜ್ಯೋತ್ಸವ

ಸವಣೂರು: 75 ನೇ ಗಣರಾಜೋತ್ಸವನ್ನು ಸವಣೂರು ಮೆಸ್ಕಾಂ ಶಾಖೆಯಲ್ಲಿ ಆಚರಿಸಲಾಯಿತು. ರಾಷ್ಟ್ರಧ್ವಜ ಹಾರಿಸುವ ಮೂಲಕ ಗಣರಾಜ್ಯೋತ್ಸವವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಸವಣೂರು ಮೆಸ್ಕಾಂ ಶಾಖೆಯ ಜೂನಿಯರ್ ಇಂಜಿನಿಯರ್ ರಾಜೇಶ್ ಕುಮಾರ್, ಗುತ್ತಿಗೆದಾರರಾದ ಮೊಹನ್ ರೈ ಕೆರೆಕ್ಕೊಡಿ, ಮೀಟರ್ ರೀಡರ್ ಬಾಲಚಂದ್ರ, ಪಂಚಾಯತ್ ವಾಟರ್ ಮ್ಯಾನ್ ಹಮೀದ್ ಮಾಂತೂರು, ಪವರ್  ಮ್ಯಾನ್ ಗಳಾದ  ಮೌನೇಶ್, ಶಿವಾನಂದ, ಮಹಾದೇವಪ್ಪ, ಸಂತೋಷ್, ಮುಕ್ತಾರ್ ಉಪಸ್ಥಿತರಿದ್ದರು

ಸವಣೂರು ಮೆಸ್ಕಾಂ ಶಾಖೆಯಲ್ಲಿ 75ನೇ ಗಣರಾಜ್ಯೋತ್ಸವ Read More »

‘ಪರೀಕ್ಷಾ ಪೇ ಚರ್ಚಾ-7’ ರಲ್ಲಿ ವೈಜ್ಞಾನಿಕ ಮಾದರಿ ಪ್ರದರ್ಶಿಸಲು ಸುಳ್ಯದ ಅಚಲ್ ಬಿಳಿನೆಲೆ ಆಯ್ಕೆ | ಪ್ರಧಾನಿ ನರೇಂದ್ರ ಮೋದಿಯವರ ವಿಶಿಷ್ಟ ಕಾರ್ಯಕ್ರಮ

ಸುಳ್ಯ: ಪ್ರಧಾನಿ ನರೇಂದ್ರ ಮೋದಿಯವರ ವಿಶಿಷ್ಟ ಕಾರ್ಯಕ್ರಮ ‘ಪರೀಕ್ಷಾ ಪೇ ಚರ್ಚಾ-7’ ದಲ್ಲಿ ವೈಜ್ಞಾನಿಕ ಮಾದರಿ ಪ್ರದರ್ಶಿಸಲು ಸುಳ್ಯದ ಅಚಲ್ ಬಿಳಿನೆಲೆ ಆಯ್ಕೆಯಾಗಿದ್ದಾರೆ. ಅಚಲ್ ಮುಡಿಪು ಜವಾಹರ್ ನವೋದಯ ವಿದ್ಯಾಲಯದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದಾರೆ. ದೇಶದ 600ಕ್ಕೂ ಹೆಚ್ಚು ಜವಾಹರ್ ನವೋದಯ ವಿದ್ಯಾಲಯಗಳ ಪೈಕಿ ಎಂಟು ವಿದ್ಯಾಲಯಗಳಿಗೆ ಈ ಅವಕಾಶ ದೊರಕಿದ್ದು, ಇದರಲ್ಲಿ ಭಾಗವಹಿಸಲು ನವೋದಯ ವಿದ್ಯಾಲಯದ ಹೈದರಾಬಾದ್ ರೀಜನ್ ನ್ನು ಪ್ರತಿನಿಧಿಸುತ್ತಿರುವ ಅಚಲ್ ಬಿಳಿನೆಲೆಯವರು ಜ. 22ರಂದು ದೆಹಲಿ ತೆರಳಿದ್ದಾರೆ. ವಿದ್ಯಾರ್ಥಿಗಳಿಗೆ ಬಹಳ

‘ಪರೀಕ್ಷಾ ಪೇ ಚರ್ಚಾ-7’ ರಲ್ಲಿ ವೈಜ್ಞಾನಿಕ ಮಾದರಿ ಪ್ರದರ್ಶಿಸಲು ಸುಳ್ಯದ ಅಚಲ್ ಬಿಳಿನೆಲೆ ಆಯ್ಕೆ | ಪ್ರಧಾನಿ ನರೇಂದ್ರ ಮೋದಿಯವರ ವಿಶಿಷ್ಟ ಕಾರ್ಯಕ್ರಮ Read More »

error: Content is protected !!
Scroll to Top