ನೀವು ಸೌಲಭ್ಯಕ್ಕೆ ಎಲಿಜಿಬಲ್ ಅಲ್ಲ | ಗ್ರಾಹಕನಿಗೆ ಬ್ಯಾಂಕ್ ಅಧಿಕಾರಿಯಿಂದ ಸಮಜಾಯಿಸಿ | ಮೌನ ಪ್ರತಿಭಟನೆಯಲ್ಲಿ ನಿರತನಾದ ಗ್ರಾಹಕ
ಸುಳ್ಯ : ತನಗೆ ಅನ್ಯಾಯವಾಗಿದೆ ಎಂದು ವ್ಯಕ್ತಿಯೊಬ್ಬರು ಏಕಾಂಗಿಯಾಗಿ ಬ್ಯಾಂಕ್ ಒಳಗಡೆಯೇ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ. ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕೆನರಾ ಬ್ಯಾಂಕ್ ಒಳಗೆ ಗ್ರಾಹಕ ಒಂಟಿಯಾಗಿ ಮೌನ ಪ್ರತಿಭಟನೆಗೆ ಶರಣಾಗಿದ್ದಾರೆ. ಈ ಅಪರೂಪದ ಘಟನೆ ಇಂದು ನಡೆದಿದೆ. ಕಾರ್ಮಿಕ ಸಂಘಟನೆಯ ಮುಂಚೂಣಿ ನಾಯಕ ಜಾನಿ ಕೆ.ಪಿ. ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದವರು. ಜನಪರ ಧ್ವನಿಯಾಗಿದ್ದವರು. ಸಮಾಜ ಮುಖಿಯಾಗಿರುವ ಅವರು 2016ರಲ್ಲಿ ವಿದ್ಯಾರ್ಥಿನಿಯೊಬ್ಬಳ ಶೈಕ್ಷಣಿಕ ಸಾಲಕ್ಕೆ ಜಾಮೀನು ಸಹಿ ಮಾಡಿದ್ದರು. ಆಕೆಯ ವಿದ್ಯೆ […]










