ಪುತ್ತೂರು

ಸ್ವಚ್ಛತೆ ಮತ್ತು ಆರೋಗ್ಯ ಸೇವಾ ಕಾರ್ಯಗಳಿಗೆ ಮಹತ್ವ: ಕೆಯ್ಯೂರು ನಾರಾಯಣ ಭಟ್

ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರ್ ಇದರ ಕೇಂದ್ರ ಸಮಿತಿಯ ಸಭೆಯನ್ನುಬೊಳುವಾರು ಬೈಲಿನ ಸೌಭರಿ ನಿವಾಸದಲ್ಲಿ ಸದಾನಂದ ರಾವ್ ಮತ್ತು ವನಿತಾ ಎಸ್ ರಾವ್ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಯ್ಯೂರು ನಾರಾಯಣ ಭಟ್ ಮಾತನಾಡಿ, ಅನಾರೋಗ್ಯದ ಸಂದರ್ಭಗಳಲ್ಲಿ ಚಿಕಿತ್ಸೆ ಪಡೆಯಲು ನಾನಾ ಸೌಲಭ್ಯಗಳಿದ್ದರೂ ಅದನ್ನು ಪಡೆಯುವಲ್ಲಿ ಎದುರಾಗುವ ಸಮಸ್ಯೆಗಳು, ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಟ, ರೋಗಿಯ ಜೀವ ಉಳಿಸಲು ಕುಟುಂಬದ ಸದಸ್ಯರು ಎದುರಿಸುವ ಸಮಸ್ಯೆಗಳನ್ನು ನೋಡಿದಾಗ […]

ಸ್ವಚ್ಛತೆ ಮತ್ತು ಆರೋಗ್ಯ ಸೇವಾ ಕಾರ್ಯಗಳಿಗೆ ಮಹತ್ವ: ಕೆಯ್ಯೂರು ನಾರಾಯಣ ಭಟ್ Read More »

ಅಕ್ಷಯ ಪದವಿ ಕಾಲೇಜು: “ಅಟರ್ನೆಸ್ 2K25” ಪಿಯು ಫೆಸ್ಟ್ ಸಂಪನ್ನ:

ಪುತ್ತೂರು : ಅಕ್ಷಯ ಪದವಿ ಕಾಲೇಜಿನಲ್ಲಿ ದ.ಕ ಹಾಗೂ ಕೊಡಗು ಜಿಲ್ಲಾಮಟ್ಟದ ನಾಲ್ಕನೇ ವರ್ಷದಅಟರ್ನೆಸ್ 2K25 ಪಿಯು ಫೆಸ್ಟ್ ಅತ್ಯುತ್ತಮವಾಗಿ ಸಂಪನ್ನಗೊಂಡಿತು. 18 ಕಾಲೇಜುಗಳಿಂದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಫೆಸ್ಟ್ ನಲ್ಲಿ ಭಾಗವಹಿಸಿದ್ದು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಕಬಡ್ಡಿ ತರಬೇತುದಾರ ಪ್ರಶಾಂತ್ ರೈ ಕೈಕಾರ (ಮ್ಯಾನೇಜರ್, ಬ್ಯಾಂಕ್ ಆಫ್ ಬರೋಡ ಪುತ್ತೂರು) ಆಗಮಿಸಿದ್ದು, ಅವರನ್ನು ಕ್ರೀಡಾ ಸಾಧನೆಗಾಗಿ ಸನ್ಮಾನಿಸಲಾಯಿತು.

ಅಕ್ಷಯ ಪದವಿ ಕಾಲೇಜು: “ಅಟರ್ನೆಸ್ 2K25” ಪಿಯು ಫೆಸ್ಟ್ ಸಂಪನ್ನ: Read More »

ನೇಣು ಬಿಗಿದು ಯುವಕ ಆತ್ಮಹತ್ಯೆ

ಪುತ್ತೂರು: ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಪುರುಷರಕಟ್ಟೆಯ ಇಂದಿರಾನಗರದ ಯುವಕನೊಬ್ಬ ನೇಣು ಬಿಗಿದು‌ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತನನ್ನು ಪ್ರತೀಕ್ ಜೋಗಿ (23) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಶೋ ರೂಮ್ ವರ್ಕ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗಷ್ಟೇ ಊರಿಗೆ ಬಂದಿದ್ದ. ನ. 21 ರಂದು ಮಧ್ಯಾಹ್ನ ಮನೆಯಲ್ಲಿ ಮೊಬೈಲ್ ನೋಡುತ್ತಿದ್ದ, ಬಳಿಕ ಕಾಣೆಯಾಗಿದ್ದ. ಅನುಮಾನಗೊಂಡ ಮನೆ ಮಂದಿ ಆತನನ್ನು ಹುಡುಕಾಡಿದ್ದು, ಈ ವೇಳೆ ಮನೆಯ ಕೋಣೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಈತನ

ನೇಣು ಬಿಗಿದು ಯುವಕ ಆತ್ಮಹತ್ಯೆ Read More »

ಅಟಲ್‌ ವಿರಾಸತ್‌ ಸಂಪನ್ನ : ವಾಜಪೇಯಿ ಪ್ರೇರಕ ಶಕ್ತಿ ಎಂದು ಬಣ್ಣಿಸಿದ ವಿಜಯೇಂದ್ರ

ಅಟಲ್‌ 100ನೇ ಜನ್ಮದಿನದಂಗವಾಗಿ ನಡೆದ ಅಟಲ್‌ ವಿರಾಸತ್‌ನಿಂದ ಪುತ್ತೂರಿನಲ್ಲಿ ಬಿಜೆಪಿಗೆ ನವಚೈತನ್ಯ ಪುತ್ತೂರು : ಅಟಲ್ ಜೀ ಎಂಬುದು ಪ್ರೇರಕ ಶಕ್ತಿ. ಅವರೊಬ್ಬ ಕವಿಹೃದಯಿ, ಬರಹಗಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು. ಪುತ್ತೂರಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೂರನೇ ಜನ್ಮದಿನದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ‘ಅಟಲ್ ವಿರಾಸತ್’ ಬೃಹತ್ ಜಿಲ್ಲಾಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು. ಅವರು ಅಜಾತಶತ್ರು, ಮಾತ್ರವಲ್ಲ; ಅವರೊಬ್ಬ ಅಪ್ಪಟ ದೇಶಭಕ್ತ. ಅಟಲ್‍ಜೀ ಅವರು ಕಟ್ಟಿದ ಬಿಜೆಪಿ ಕಾರ್ಯಕರ್ತರಾಗಿರುವುದೇ ನಮಗೆಲ್ಲರಿಗೂ

ಅಟಲ್‌ ವಿರಾಸತ್‌ ಸಂಪನ್ನ : ವಾಜಪೇಯಿ ಪ್ರೇರಕ ಶಕ್ತಿ ಎಂದು ಬಣ್ಣಿಸಿದ ವಿಜಯೇಂದ್ರ Read More »

ಅಕ್ಷಯ ಕಾಲೇಜಿನಲ್ಲಿ ಆಧುನಿಕ ಉಪಕರಣಗಳ ಮಾಹಿತಿ ಕಾರ್ಯಾಗಾರ

ಪುತ್ತೂರು: ಅಕ್ಷಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ “ಎಲೈಟ್” ಆಂತರಿಕ ವಿನ್ಯಾಸ ಸಂಘ ಹಾಗೂ ಐಕ್ಯೂಎಸಿ ಸಹಭಾಗಿತ್ವದಲ್ಲಿ ಆಂತರಿಕ ವಿನ್ಯಾಸ ವಿಭಾಗದ ವಿದ್ಯಾರ್ಥಿಗಳಿಗೆ “ಆಧುನಿಕ ಉಪಕರಣಗಳು” ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಗಾರ ನಡೆಸಲಾಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ, ಯು-ಮನೆ ಸಂಘದ ಮಾಲಕ ವಾಸ್ತುಶಿಲ್ಪಿ ಅಜೇಯಕೃಷ್ಣಉಪಾಂಗಲ ಇವರು ದೀಪಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ,ಆಧುನಿಕ ಉಪಕರಣಗಳ ಬಗೆಗೆ ಮಾಹಿತಿ, ಪ್ರಾಚೀನ ಮತ್ತು ಈಗಿನ ಆಂತರಿಕ ವಿನ್ಯಾಸ ಶೈಲಿ,

ಅಕ್ಷಯ ಕಾಲೇಜಿನಲ್ಲಿ ಆಧುನಿಕ ಉಪಕರಣಗಳ ಮಾಹಿತಿ ಕಾರ್ಯಾಗಾರ Read More »

ಜಿ. ಎಲ್. ಆಚಾರ್ಯ‌ರ 101ನೇ ಜನ್ಮದಿನ: ರಾಮಕೃಷ್ಣ ಆಶ್ರಮಕ್ಕೆ ಡಬ್ಬಲ್ ಡೆಕ್ಕರ್ ಕಾಟ್‌ಗಳ ಕೊಡುಗೆ

ಪುತ್ತೂರು: ನಗರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯ ಸಂಸ್ಥೆಯ ಸಂಸ್ಥಾಪಕ ಜಿ. ಎಲ್. ಆಚಾರ್ಯ ಅವರ 101 ನೇ ಜನ್ಮ ದಿನವನ್ನು ನ. 13 ರಂದು ಸಂಸ್ಥೆಯಲ್ಲಿ ಆಚರಣೆ ಮಾಡಲಾಯಿತು. ಈ ಹಿನ್ನೆಲೆ 10 ಡಬ್ಬಲ್ ಡೆಕ್ಕರ್ ಕಾಟ್‌ಗಳನ್ನು ಪುತ್ತೂರಿನ ರಾಮಕೃಷ್ಣ ಆಶ್ರಮಕ್ಕೆ ಕೊಡುಗೆಯಾಗಿ ನೀಡಲಾಯಿತು. ಈ‌ ಸಂದರ್ಭದಲ್ಲಿ ಜ್ಯುವೆಲ್ಲರ್ಸ್‌ನ ಆಡಳಿತ ನಿರ್ದೇಶಕ ಜಿ.ಎಲ್. ಬಲರಾಮ ಆಚಾರ್ಯ, ಆಶ್ರಮದ ಕಾರ್ಯದರ್ಶಿ ಗುಣಪಾಲ್ ಜೈನ್, ಸದಸ್ಯ ಹರೇಕೃಷ್ಣ ಕಡಂಬಳಿತ್ತಾಯ ಮತ್ತು ಜಂಟಿ ಕಾರ್ಯದರ್ಶಿ ವತ್ಸಲ ರಾಜಿ

ಜಿ. ಎಲ್. ಆಚಾರ್ಯ‌ರ 101ನೇ ಜನ್ಮದಿನ: ರಾಮಕೃಷ್ಣ ಆಶ್ರಮಕ್ಕೆ ಡಬ್ಬಲ್ ಡೆಕ್ಕರ್ ಕಾಟ್‌ಗಳ ಕೊಡುಗೆ Read More »

ಭಾರತ್ ಸಿನಿಮಾಸ್‌ನಲ್ಲಿ ‌ನಡೆಯಿತು ಮಾಹಿ ಚಿತ್ರದ ಪ್ರೀಮಿಯರ್ ಶೋ

ಪುತ್ತೂರು: ಮಾಹಿ ಚಿತ್ರದ ಪ್ರಥಮ ಪ್ರಿಮಿಯರ್ ಶೋ ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಭಾನುವಾರ ಮದ್ಯಾಹ್ನ 2:00 ಗಂಟೆಯಿಂದ 7:00 ಗಂಟೆವರೆಗೆ ನಡೆಯಿತು. ಒಟ್ಟು ನಾಲ್ಕು ಶೋ ಗಳು ನಡೆದಿದ್ದು ಇದರಲ್ಲಿ ಎಲ್ಲಾ ಶೋ ಗಳು ಕೂಡ ಭರ್ತಿಯಾಗಿದ್ದವು. ಈ ನಾಲ್ಕೂ ಶೋ ಗಳಲ್ಲಿ ಅತಿಥಿ ಅಭ್ಯಾಗತರಾಗಿ ಅನೇಕ ಗಣ್ಯರು ಆಗಮಿಸಿದ್ದರು. ವಿಜಯ್ ಸಾಮ್ರಾಟ್ ಸಹಜ್ ರೈ, ಹಿಂದೂ ನಾಯಕ ಅರುಣ್ ಪುತ್ತಿಲ, ಪ್ರಸಿದ್ಧ ಚಲನಚಿತ್ರ ನಟ ಎಂ ಕೆ ಮಠ, ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಸ್ಥಾನದ ಅನುವoಶೀಯ

ಭಾರತ್ ಸಿನಿಮಾಸ್‌ನಲ್ಲಿ ‌ನಡೆಯಿತು ಮಾಹಿ ಚಿತ್ರದ ಪ್ರೀಮಿಯರ್ ಶೋ Read More »

ಪಿ ಟಿ ಸಿ ಎ ಟ್ರೋಫಿ: ಆರ್ ಕ್ಯೂಬ್ ಚೆಸ್ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ವಿಟ್ಲ : ಪುತ್ತೂರು ತಾಲೂಕು ಚೆಸ್ ಅಸೋಸಿಯೇಷನ್ (ರಿ) ಮತ್ತು ದ. ಕ. ಜಿಲ್ಲಾ ಚೆಸ್ ಅಸೋಸಿಯೇಷನ್ (ರಿ) ಇವರ ಸಹಯೋಗದೊಂದಿಗೆ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ PTCA TROPHY , ಓಪನ್ ರಾಪಿಡ್ ಚೆಸ್ ಸ್ಪರ್ಧೆಯಲ್ಲಿ, ಆರ್ ಕ್ಯೂಬ್ ಚೆಸ್ ಅಕಾಡೆಮಿ ವಿಟ್ಲ ಇಲ್ಲಿಯ ವಿದ್ಯಾರ್ಥಿಗಳಾದ ಅಭಿನವ್ ರಾಮ್.ಎಸ್, ಅಮೃತ.ಎಸ್, ಮೋಕ್ಷಿತಾ, ಶೃತಿಕ್ ಇವರು ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ರೋಹಿತ್ ಕುಮಾರ್ ಟಿ. ತರಬೇತಿ ನೀಡಿದ್ದಾರೆ. ಆರ್ ಕ್ಯೂಬ್ ಚೆಸ್ ಅಕಾಡೆಮಿಯ

ಪಿ ಟಿ ಸಿ ಎ ಟ್ರೋಫಿ: ಆರ್ ಕ್ಯೂಬ್ ಚೆಸ್ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ Read More »

ವೀರಮಂಗಲ ಪಿಎಂಶ್ರೀ ಶಾಲಾ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ

ವೀರಮಂಗಲ: ಇಲ್ಲಿನ ಪಿಎಂಶ್ರೀ ಶಾಲಾ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟವು ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಹಿರಿಯ ವಿದ್ಯಾರ್ಥಿ, ನಿವೃತ್ತ ಸೈನಿಕ ಮನಮೋಹನ ಗುತ್ತು ನೆರವೇರಿಸಿ ಪ್ರಾಥಮಿಕ ಶಿಕ್ಷಣ ನೀಡಿದ ವೀರಮಂಗಲ ಶಾಲೆಯು ನಮ್ಮ ಬದುಕಿನ ಭದ್ರ ಬುನಾದಿಯಾಗಿದೆ. ಅಂದಿನ ಸಿಹಿ ನೆನಪುಗಳು ಈ ಶಾಲೆಗೆ ಬರುವಾಗ ಮರುಕಳಿಸುತ್ತದೆ ಎಂದರು. ಮುಖ್ಯ ಅತಿಥಿ ನಿವೃತ್ತ ಮುಖ್ಯಗುರುಗಳಾದ ಮೋನಪ್ಪ ಗೌಡ ಇವರು ಶುಭಹಾರೈಸಿದರು . ಹಿರಿಯ ವಿದ್ಯಾರ್ಥಿ ಪ್ರಸ್ತುತ ಉಡುಪಿಯ ಆನಂದ ತೀರ್ಥ ವಿದ್ಯಾಲಯದ ದೈಹಿಕ ಶಿಕ್ಷಣ

ವೀರಮಂಗಲ ಪಿಎಂಶ್ರೀ ಶಾಲಾ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ Read More »

ಬನ್ನೂರು: ಕ್ಯಾಂಪ್ಕೋ ನಿವೃತ್ತ ನೌಕರ ಈಶ್ವರ ಗೌಡ ಅವರಿಗೆ ಅಲುಂಬುಡ ಸೇವಾ ಪ್ರತಿಷ್ಠಾನದಿಂದ ಸನ್ಮಾನ

ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಫ್ಯಾಕ್ಟರಿಯಲ್ಲಿ ಸುದೀರ್ಘ ೩೫ ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಈಶ್ವರ ಗೌಡ ಬಾರಿಂಜ ಅವರಿಗೆ ಬನ್ನೂರು ಅಲುಂಬುಡ ಸೇವಾ ಪ್ರತಿಷ್ಠಾನದ ವತಿಯಿಂದ ಸನ್ಮಾನ ಕಾರ್ಯಕ್ರಮ ನ.೫ರಂದು ಅಲುಂಬುಡ ತರವಾಡು ಮನೆಯಲ್ಲಿ ನಡೆಯಿತು. ಸನ್ಮಾನಿಸಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು, ಗೌಡ ಸಮಾಜ ಸಜ್ಜನ ಸಮಾಜ. ಹಿರಿಯರು ಮಾಡಿದ ಕಾಯಕದಿಂದಾಗಿ ಈಗಿನ ತಲೆಮಾರಿನವರನ್ನು ಮನೆತನದಿಂದ ಗುರುತಿಸುವಂತೆ ಆಗಿದೆ. ಗೌಡರದ್ದು ೧೦ ಕುಟುಂಬ ೧೮ ಗೋತ್ರ ಸಂಪ್ರದಾಯ. ನಮ್ಮದೇ ಆದ ಆಚಾರ, ವಿಚಾರಗಳಿವೆ.

ಬನ್ನೂರು: ಕ್ಯಾಂಪ್ಕೋ ನಿವೃತ್ತ ನೌಕರ ಈಶ್ವರ ಗೌಡ ಅವರಿಗೆ ಅಲುಂಬುಡ ಸೇವಾ ಪ್ರತಿಷ್ಠಾನದಿಂದ ಸನ್ಮಾನ Read More »

error: Content is protected !!
Scroll to Top