ಪುತ್ತೂರು

ಆನಡ್ಕ –ಪುತ್ತೂರು ಬಸ್‍ ಸ್ಥಗಿತ | ವಿದ್ಯಾರ್ಥಿಗಳ ಪರದಾಟ| ನಾಳೆಯೇ ಪ್ರತಿಭಟನೆ ಮಾಡುತ್ತೇವೆ : ಸಾರ್ವಜನಿಕರ ಎಚ್ಚರಿಕೆ

ಪುತ್ತೂರು : ಶಾಂತಿಗೋಡು ಗ್ರಾಮದ ಆನಡ್ಕಕ್ಕೆ ಬೆಳಿಗ್ಗಿನ ಹೊತ್ತು ಇರುವುದೊಂದೇ ಸರಕಾರಿ ಬಸ್. ದಿನದಲ್ಲಿ ಒಂದು ಸರಕಾರಿ ಬಸ್ ಒಡಾಟ. ಅದೂ ಬೆಳಗ್ಗಿನ ಹೊತ್ತು ಮಾತ್ರ. ಆದರೆ ಕೇವಲ ಒಂದೇ ಬಸ್ ಇದ್ದರೂ ಬರುವುದು ಮಾತ್ರ ವಾರಕ್ಕೊಮ್ಮೆ. ಬಂದರೆ ಬಂತು ಇಲ್ಲದಿದ್ದರೆ ಇಲ್ಲ. ಪರಿಣಾಮ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಈ ಭಾಗಕ್ಕೆ ಬೆಳಗ್ಗೆ 8:00 ಗಂಟೆಗೆ ಬಸ್ ಒಡಾಟ ನಡೆಯುತ್ತಿದೆ. ಈ ಭಾಗದಿಂದ ಸುಮಾರು 80 ರಿಂದ 100 ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದಾರೆ. […]

ಆನಡ್ಕ –ಪುತ್ತೂರು ಬಸ್‍ ಸ್ಥಗಿತ | ವಿದ್ಯಾರ್ಥಿಗಳ ಪರದಾಟ| ನಾಳೆಯೇ ಪ್ರತಿಭಟನೆ ಮಾಡುತ್ತೇವೆ : ಸಾರ್ವಜನಿಕರ ಎಚ್ಚರಿಕೆ Read More »

ವಿವಿಧ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಮುಂಡೂರು ವಲಯದ ಆತಿಥ್ಯದಲ್ಲಿ ಪುತ್ತೂರು ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ-2025 | ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಚನ

ಪುತ್ತೂರು: ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಮಾರ್ಗದರ್ಶನದಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಮುಂಡೂರು ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಆತಿಥ್ಯದಲ್ಲಿ ಒಕ್ಕಲಿಗ ಗೌಡ ಮಹಿಳಾ ಸಂಘ, ಒಕ್ಕಲಿಗ ಗೌಡ ಸ್ವಸಹಾಯ ಟ್ರಸ್ಟ್ ಸಹಯೋಗದೊಂದಿಗೆ ಪುತ್ತೂರು ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ-2025 ಭಾನುವಾರ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾ ಸಂಭ್ರಮದ ಅಂಗವಾಗಿ ಬೆಳಗ್ಗೆ ಮುಕ್ವೆ ಮಹಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಿಂದ ವಾಹನ ಜಾಥಾದೊಂದಿಗೆ ಕ್ರೀಡಾಜ್ಯೋತಿ

ವಿವಿಧ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಮುಂಡೂರು ವಲಯದ ಆತಿಥ್ಯದಲ್ಲಿ ಪುತ್ತೂರು ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ-2025 | ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಚನ Read More »

ಕಲಾಶ್ರೀ ಎ.ಜೆ. ಮತ್ತು ಸುಮಂತ್ ಕೆ.ಎಚ್. ಜೋಡಿಯ ನಿಶ್ಚಿತಾರ್ಥ

ಪುತ್ತೂರು: ಕಲಾಶ್ರೀ ಎಜೆ ಮತ್ತು ಸುಮಂತ್ ಕೆಎಚ್ ಅವರ ನಿಶ್ಚಿತಾರ್ಥ ಫೆ.೨ರಂದು ಅನ್ಯಾಡಿ ಮನೆ, ಕುದ್ಮಾರಿನಲ್ಲಿ ನಡೆಯಿತು. ಕಲಾಶ್ರೀ ಎಜೆ ಹಾಗೂ ಸುಮಂತ್ ಕೆ.ಎಚ್‌ರವರ ಕುಟುಂಬಸ್ಥರು, ಬಂಧುಬಳಗ ಆಗಮಿಸಿ ಶುಭ ಹಾರೈಸಿದರು.

ಕಲಾಶ್ರೀ ಎ.ಜೆ. ಮತ್ತು ಸುಮಂತ್ ಕೆ.ಎಚ್. ಜೋಡಿಯ ನಿಶ್ಚಿತಾರ್ಥ Read More »

ಕಲ್ಲಡ್ಕದಲ್ಲಿ ಮುಳಿಯ ಪ್ರಾಪರ್ಟಿ ವತಿಯಿಂದ “ಫಾರ್ಮ್ ಲ್ಯಾಂಡ್ಸ್ “ ಉದ್ಘಾಟನೆ

ಬಂಟ್ವಾಳ: ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಲ್ಲಿ  *ಮುಳಿಯ ಪ್ರಾಪರ್ಟೀಸ್ನವರ 7.5 ಸೆಂಟ್ಸ್  ಮೇಲ್ಪಟ್ಟ ಸುಮಾರು 44 ಪ್ಲಾಟ್‍ ಗಳಿರುವ “ಸದಾಶಿವ ಭಾಗ್” ಫಾರ್ಮುಲಾಂಡ್  ಪ್ರೊಜೆಕ್ಟ್ಟ ಉದ್ಘಾಟನೆಗೊಂಡಿತು. ಹೊಸನಗರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಗಳು ಭೂಮಿ ಪೂಜೆ ನೆರವೇರಿಸಿ, ಆಶೀರ್ವಚನ ನೀಡಿ, ಪ್ರಕೃತಿದತ್ತ ವಸತಿ ವ್ಯವಸ್ಥೆಯೊಂದಿಗೆ ಇಲ್ಲಿ ಗೋಶಾಲೆ ಕೂಡ ಮಾಡುತ್ತಿರುವುದು ಮುಳಿಯ ಮನೆತನದ ಸಾಮಾಜಿಕ -ಧಾರ್ಮಿಕ ಅಭಿರುಚಿಯ ಉನ್ನತೆ ಮತ್ತು ಜವಾಬ್ದಾರಿಯನ್ನು ತಿಳಿಸುತ್ತದೆ ಎಂದರು. ಡಾ. ಕಲ್ಲಡ್ಕ ಪ್ರಭಾಕರ ಭಟ್ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಸನಾತನ

ಕಲ್ಲಡ್ಕದಲ್ಲಿ ಮುಳಿಯ ಪ್ರಾಪರ್ಟಿ ವತಿಯಿಂದ “ಫಾರ್ಮ್ ಲ್ಯಾಂಡ್ಸ್ “ ಉದ್ಘಾಟನೆ Read More »

ಪ್ರಾದೇಶಿಕ ಸಾರಿಗೆ ಆಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಗೆ ಚಾಲನೆ

ಪುತ್ತೂರು: ಅಪಘಾತವೆಂಬುದು ಆಕಸ್ಮಿಕ ಘಟನೆಯಾಗಿದೆ. ರಸ್ತೆ ನಾವು ಹೊರಟ ಜಾಗಕ್ಕೆ ನಮ್ಮನ್ನು ತಲುಪಿಸುವ ಒಂದು ಮಾಧ್ಯಮವಷ್ಟೇ. ರಸ್ತೆಗೆ ನಮ್ಮ ಮೇಲೆ ಯಾವುದೇ ದ್ವೇಷವಿಲ್ಲ. ರಸ್ತೆಯಲ್ಲಿ ಸಾಗುವ ವಾಹನಗಳಿಗೂ ಪರಸ್ಪರ ದ್ವೇಷ ಭಾವನೆ ಇಲ್ಲ. ನಾವು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದಲ್ಲಿ ಅದೇ ನಮ್ಮ ಪಾಲಿಗೆ ಕಂಟಕವಾಗಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ ಅಜಲ ಹೇಳಿದರು. ಬನ್ನೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಜ.೩೦ರಂದು ನಡೆದ ಕರ್ನಾಟಕ ಸರಕಾರ ಸಾರಿಗೆ ಇಲಾಖೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಪುತ್ತೂರು

ಪ್ರಾದೇಶಿಕ ಸಾರಿಗೆ ಆಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಗೆ ಚಾಲನೆ Read More »

ಮುಂಡೂರು  ಶಾಲಾ ರಸ್ತೆಗೆ ಹಾಕಿದ ಸ್ಪೀಡ್ ಬ್ರೇಕರ್ ವೈಟ್ ರೆಡಿಯಂ ಹಂಪ್ಸ್ 

ಪುತ್ತೂರು : ಮುಂಡೂರು  ಶಾಲಾ  ಬಳಿ ಅತೀ ಹೆಚ್ಚು ಅಪಘಾತ ವಾಗುತ್ತಿರುವುದರಿಂದ ಶಾಲಾ ಎಸ್  ಡಿ ಎಂ ಅಧ್ಯಕ್ಷ ರಮೇಶ್ ಪಜಿಮನ್ನು ಇವರು ಮುಂಡೂರು ಕಾಂಗ್ರೆಸ್ ವಲಯ ಅಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು ಇವರಿಗೆ ಸ್ಪೀಡ್ ಬ್ರೇಕರ್ ವೈಟ್ ರೆಡಿಯಂ ಹಂಪ್ಸ್  ಹಾಕಲು ಮನವಿಯನ್ನು ನೀಡಿದ್ದರು.  ಈ ಬಗ್ಗೆ ಪ್ರವೀಣ್ ಆಚಾರ್ಯ ನರಿಮೊಗರು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ರವರಿಗೆ ಮನವಿ ಮಾಡಲಾಯಿತು. ಶಾಸಕರ  ಸೂಚನೆಯಂತೆ  ವಾಹನ ಸವಾರರ  ಮತ್ತು ಶಾಲಾ ಮಕ್ಕಳ ಹಿತ ದೃಷ್ಟಿ

ಮುಂಡೂರು  ಶಾಲಾ ರಸ್ತೆಗೆ ಹಾಕಿದ ಸ್ಪೀಡ್ ಬ್ರೇಕರ್ ವೈಟ್ ರೆಡಿಯಂ ಹಂಪ್ಸ್  Read More »

ಭಾರತದ ಭವಿಷ್ಯವನ್ನು ಆಕರ್ಷಕಗೊಳಿಸುವ 2025ರ ಬಜೆಟ್ : ಕಿಶೋರ್ ಕುಮಾರ್  ಪುತ್ತೂರು

ಪುತ್ತೂರು : ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ದೃಢನಿಶ್ಚಯ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರಭಾವಿ ಆರ್ಥಿಕ ನೀತಿಯ ಫಲವಾಗಿ, 2025ರ ಕೇಂದ್ರ ಬಜೆಟ್ ದೇಶದ ಪ್ರಗತಿಗೆ ಶಕ್ತಿಯುತ ಒತ್ತುವರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ  ಕಿಶೋರ್ ಕುಮಾರ್  ಪುತ್ತೂರು ತಿಳಿಸಿದರು. ಈ ಬಾರಿಯ ಜನಪರ ಬಜೆಟ್ ಮಧ್ಯಮವರ್ಗಕ್ಕೆ ದೊಡ್ಡ ಶ್ರಮಿಕ ಸಮ್ಮಾನ ನೀಡಿದ್ದು, ಆದಾಯ ತೆರಿಗೆ ಮನ್ನಾವನ್ನು ₹12 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಹಣಕಾಸು ಭದ್ರತೆಯನ್ನು ಒದಗಿಸಿದೆ. ರೈತರಿಗಾಗಿ

ಭಾರತದ ಭವಿಷ್ಯವನ್ನು ಆಕರ್ಷಕಗೊಳಿಸುವ 2025ರ ಬಜೆಟ್ : ಕಿಶೋರ್ ಕುಮಾರ್  ಪುತ್ತೂರು Read More »

ಮದುವೆ ಪೋಸ್ಟ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪತಿ| ಕಮೆಂಟ್ಸ್ ನಲ್ಲಿ ಬಯಲಾಯಿತು ಪತ್ನಿಯ ಕಳ್ಳಾಟ | ಕಮೆಂಟ್‌ ಸಾಕ್ಷಿಯಾಗಿ ದೂರು ದಾಖಲು | ವಿಚಾರಣೆ ವೇಳೆ ಬಿಚ್ಚಿಟ್ಟ ಅಸಲಿ ಸತ್ಯ

ಪುತ್ತೂರು : ಯುವ ಬ್ಯಾಂಕ್ ಉದ್ಯೋಗಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದು, ಪೋಸ್ಟ್ ಮೂಲಕ ಪತ್ನಿಯ ಕಳ್ಳಾಟ ಬಯಲಾಗಿ ಅಚ್ಚರಿಯುಂಟು ಮಾಡಿದೆ. ಶಿವಚಂದ್ರನ್ ಎಂಬಾತ ಡಾಕ್ಟರ್ ನಿಶಾಂತಿ ಎಂಬಾಕೆಯನ್ನು ಮದುವೆಯಾದ ಸಂಭ್ರಮದಲ್ಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಕಾಮೆಂಟ್ ಬಾಕ್ಸ್  ನಲ್ಲಿ ಬಂದ ಪ್ರತಿಕ್ರಿಯೆ ನೋಡಿ ಆತನಿಗೆ ಶಾಕ್ ಆಗಿದೆ. ಪುತ್ತೂರಿನ ನೆಪೋಲಿಯನ್ ಎಂಬ ವ್ಯಕ್ತಿ ಫೋಟೋದಲ್ಲಿರುವ ಮಹಿಳೆ ನಿಶಾಂತಿ ಅಲ್ಲ, ನನ್ನ ಹೆಂಡತಿ ಮೀರಾ ಎಂದು ಕಾಮೆಂಟ್ ಮಾಡಿದ್ದರು. 2017 ರಲ್ಲಿ

ಮದುವೆ ಪೋಸ್ಟ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪತಿ| ಕಮೆಂಟ್ಸ್ ನಲ್ಲಿ ಬಯಲಾಯಿತು ಪತ್ನಿಯ ಕಳ್ಳಾಟ | ಕಮೆಂಟ್‌ ಸಾಕ್ಷಿಯಾಗಿ ದೂರು ದಾಖಲು | ವಿಚಾರಣೆ ವೇಳೆ ಬಿಚ್ಚಿಟ್ಟ ಅಸಲಿ ಸತ್ಯ Read More »

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಚಪ್ಪರ ಮುಹೂರ್ತ

ಉಪ್ಪಿನಂಗಡಿ : ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಫೆಬ್ರವರಿ 7ರಂದು ಜರಗಲಿರುವ 5ನೇ ವಾರ್ಷಿಕ ಪ್ರತಿಷ್ಠಾ ದಿನೋತ್ಸವದ ಅಂಗವಾಗಿ  ಗೊನೆ ಮುಹೂರ್ಥ ಮತ್ತು ಚಪ್ಪರ ಮುಹೂರ್ಥ ನಡೆಯಿತು. ಆಡಳಿತ ಸೇವಾ ಟ್ರಸ್ಟ್‍ ನ ಅಧ್ಯಕ್ಷ ಭಾಸ್ಕರ ಬಾರ್ಯ ಮತ್ತು ಅರ್ಚಕರಾದ ಗುರುಪ್ರಸಾದ ನೂರಿತ್ತಾಯರು ವೈದಿಕ ವಿಧಿ ವಿಧಾನಗಳೊಂದಿಗೆ ಚಪ್ಪರ ಮುಹೂರ್ತ ನೆರವೇರಿಸಿಕೊಟ್ಟರು. ಪವಿತ್ರ ಪಾಣಿ  ಸೂರ್ಯನಾರಾಯಣ ಕುದ್ದಣ್ಣಾಯ ಆಡಳಿತ ಸೇವಾ ಟ್ರಸ್ಟ್‍ ನ  ಟ್ರಸ್ಟಿಗಳು ಮತ್ತು ಪದಾಧಿಕಾರಿಗಳಾದ ಪ್ರಶಾಂತ್ ಪೈ, ಮನೋಹರ ಶೆಟ್ಟಿ, ನಾರಾಯಣಗೌಡ,

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಚಪ್ಪರ ಮುಹೂರ್ತ Read More »

ಕುದ್ಮಾರು ಶಾಲೆಯಲ್ಲಿ ನಡೆದ ಹುತಾತ್ಮರ ದಿನಾಚರಣೆ

ಕಾಣಿಯೂರು: ಕುದ್ಮಾರು ನ.ಉ.ಹಿ. ಪ್ರಾ ಶಾಲೆಯಲ್ಲಿ ಹುತಾತ್ಮರ ದಿನಾಚರಣೆಯನ್ನು  ಜ.30ರಂದು ಆಚರಿಸಲಾಯಿತು. ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆಯನ್ನು ಹಾಡಲಾಯಿತು. ಶಿಕ್ಷಕಿ ಪ್ರಿಯಾಂಕ ದಿನದ ಮಹತ್ವದ ಕುರಿತಾಗಿ ಮಾಹಿತಿ ನೀಡಿದರು. ಹುತಾತ್ಮರ ದಿನಾಚರಣೆಯನ್ನು ಆಚರಿಸುವುದರ ಹಿನ್ನೆಲೆ, ಗಾಂಧೀಜಿಯವರ ಜೀವನ ಚರಿತ್ರೆ ಮತ್ತು ಹುತಾತ್ಮರನ್ನು ಸ್ಮರಿಸಲಾಯಿತು. ಬಳಿಕ ಮೌನ ಪ್ರಾರ್ಥನೆಯನ್ನು ಮಾಡಿ ಹುತಾತ್ಮರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.

ಕುದ್ಮಾರು ಶಾಲೆಯಲ್ಲಿ ನಡೆದ ಹುತಾತ್ಮರ ದಿನಾಚರಣೆ Read More »

error: Content is protected !!
Scroll to Top