ಐರ್ಲೆಂಡಿನಲ್ಲಿ ಕಡಬದ ಯುವಕನ ಸಾವು: ಸಮಗ್ರ ತನಿಖೆಗೆ ಆಗ್ರಹಿಸಿ ಹುಟ್ಟೂರಿನಲ್ಲಿ ಕ್ಯಾಂಡಲ್ ಹಿಡಿದು ಪ್ರತಿಭಟನೆ
ಕಡಬ: ತಾಲೂಕಿನ ಕುಟ್ರುಪ್ಪಾಡಿಯ ಯುವಕ ಸ್ಯಾಂಜೋ ಸುನಿಲ್ ಕೆಲ ದಿನಗಳ ಹಿಂದಷ್ಟೇ ಐರ್ಲೆಂಡಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಅವರ ಸಾವಿಗೆ ಸಂಬಂಧಿಸಿದ ಹಾಗೆ ಸಮಗ್ರ ರೀತಿಯಲ್ಲಿ ತನಿಖೆ ನಡೆಯಬೇಕು ಎಂದು ಕಡಬದಲ್ಲಿ ನಿನ್ನೆ ನೂರಾರು ಮಂದಿ ಕ್ಯಾಂಡಲ್ ಹಿಡಿದು ಪ್ರತಿಭಟನೆ ನಡೆಸಿದರು. ಕಡಬದ ಕ್ರಿಶ್ಚಿಯನ್ ಲೈಟ್ನಿಂಗ್ ಕ್ಲಬ್ ಮತ್ತು ಮಲಯಾಳಿ ಸಂಘಟನೆಗಳ ನೇತೃತ್ವದಲ್ಲಿ ಅನುಗ್ರಹ ಸಭಾಭವನದಿಂದ ಸೈಂಟ್ ಜೋಕಿಮ್ಸ್ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾ ನಿರತರು, ಈ ಸಾವಿನ ಹಿಂದಿನ ಸತ್ಯಗಳು ಅನಾವರಣವಾಗಬೇಕು ಎಂದು ಆಗ್ರಹಿಸಿದರು. ಸಾಂಜೋ […]










