ದೇಶ

ಕೇಂದ್ರ ಸರ್ಕಾರಿ ನೌಕರರಿಗೆ ವೃದ್ಧ ಪೋಷಕರ ಆರೈಕೆಗೆ ವಿಶೇಷ ರಜೆ?

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ವೃದ್ಧ ಪೋಷಕರನ್ನು ‌ನೋಡಿಕೊಳ್ಳುವ ಸಲುವಾಗಿ ಅರ್ಹ ರಜೆಗಳು ಜೊತೆಗೆ ಸೂಕ್ತ ಕಾರಣಗಳನ್ನು ನೀಡಿ ಮತ್ತೆ 30 ದಿನಗ‌ಳ ರಜೆಯನ್ನು ಪಡೆಯುವ ಅವಕಾಶವನ್ನು ನೀಡಲಾಗಿದೆ. ಕೇಂದ್ರ ಸರ್ಕಾರಿ ನೌಕಕರು ವೃದ್ಧ ಪೋಷಕರನ್ನು ನೋಡಿಕೊಳ್ಳುವ ಸಲುವಾಗಿ ವಿಶೇಷ ರಜೆಗಳನ್ನು ಪಡೆಯಲು ಅವಕಾಶ ಇದೆಯೇ ಎಂಬ ಲಿಖಿತ ಪ್ರಶ್ನೆಯೊಂದಕ್ಕೆ ಕೇಂದ್ರ ಸರ್ಕಾರ ರಾಜ್ಯ ಸಭೆಗೆ ಮಾಹಿತಿ ನೀಡಿದೆ. ಕೇಂದ್ರ ನಾಗರಿಕ ಸೇವೆಗಳ ನಿಯಮಾವಳಿ -1972 ಪ್ರಕಾರ ವಯಸ್ಸಾದ ಪೋಷಕರನ್ನು ಆರೈಕೆ ಮಾಡುವ ಸಲುವಾಗಿ ರಜೆ ಪಡೆಯಲು […]

ಕೇಂದ್ರ ಸರ್ಕಾರಿ ನೌಕರರಿಗೆ ವೃದ್ಧ ಪೋಷಕರ ಆರೈಕೆಗೆ ವಿಶೇಷ ರಜೆ? Read More »

ಪಾಕ್‌ನ ಆರು ಡ್ರೋನ್‌ಗಳನ್ನು ಹೊಡೆದುರುಳಿಸಿ, ಪಿಸ್ತೂಲ್, ಮ್ಯಾಗಜೀನ್, ಹೆರಾಯಿನ್ ‌ವಶಪಡಿಸಿಕೊಂಡ BSF

ನವದೆಹಲಿ: ಭಾರತದೊಳಕ್ಕೆ ಅಂತರಾಷ್ಟ್ರೀಯ ಗಡಿಯ ಮೂಲಕ ಪಾಕಿಸ್ತಾನದಿಂದ ಬರುತ್ತಿದ್ದ ಆರು ಡ್ರೋನ್‌ಗಳನ್ನು BSF ಯೋಧರು ಹೊಡೆದುರುಳಿಸಿದ್ದಾರೆ. ಅಮೃತಸರ್‌ನ ಮೋಧೆ ಗ್ರಾಮದಲ್ಲಿ 5 ಡ್ರೋನ್‌ಗಳು ಮತ್ತು ಅಟ್ಟಾರಿ ‌ಗ್ರಾಮದ ಬಳಿ ಮತ್ತೊಂದು ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ. ಹೊಡೆದುರುಳಿಸಲಾದ ಡ್ರೋನ್‌ಗಳಿಂದ ಮೂರು ಪಿಸ್ತೂಲ್‌ಗಳು, ಮೂರು ಮ್ಯಾಗಜೀನ್‌ಗಳು, ಕೆಜಿಗೂ ಹೆಚ್ಚು ತೂಕದ ನಾಲ್ಕು ಪ್ಯಾಕೆಟ್ ಹೆರಾಯಿನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಗುರುವಾರ ಮುಂಜಾನೆ ಹೊಡೆದುರುಳಿಸಲಾದ ಒಂದು ಡ್ರೋನ್‌ನಿಂದ ಎರಡು ಮ್ಯಾಗಜೀನ್ ‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಪಾಕ್‌ನ ಆರು ಡ್ರೋನ್‌ಗಳನ್ನು ಹೊಡೆದುರುಳಿಸಿ, ಪಿಸ್ತೂಲ್, ಮ್ಯಾಗಜೀನ್, ಹೆರಾಯಿನ್ ‌ವಶಪಡಿಸಿಕೊಂಡ BSF Read More »

ಯೆಸ್‌ ಬ್ಯಾಂಕ್‌ 3 ಸಾವಿರ ಕೋ.ರೂ. ಸಾಲ ವಂಚನೆ ಪ್ರಕರಣ : ರಿಲಯನ್ಸ್‌ ಗ್ರೂಪ್‌ನ 50 ಕಂಪನಿಗಳ ಮೇಲೆ ಇ.ಡಿ ದಾಳಿ

ಅನಿಲ್‌ ಅಂಬಾನಿಗೆ ಸೇರಿದ 35 ಸ್ಥಳಗಳಲ್ಲಿ ಇ.ಡಿ. ಅಧಿಕಾರಿಗಳಿಂದ ಪರಿಶೋಧನೆ ಮುಂಬೈ: ಯೆಸ್ ಬ್ಯಾಂಕ್‌ಗೆ 3,000 ಕೋಟಿ ಸಾಲ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಪ್ರತಿಷ್ಠಿತ ಉದ್ಯಮಿ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಗ್ರೂಪ್​ಗೆ ಸೇರಿದ ಹಲವು ಕಂಪನಿಗಳ ಮೇಲೆ ಇಂದು ದಾಳಿ ಮಾಡಿದೆ. ಅನಿಲ್‌ ಅಂಬಾನಿಯ ಕಂಪನಿಗೆ ಸಂಬಂಧಪಟ್ಟ 35ಕ್ಕೂ ಹೆಚ್ಚು ಸ್ಥಳಗಳು, ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್‌ನ 50 ಕಂಪನಿಗಳ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ

ಯೆಸ್‌ ಬ್ಯಾಂಕ್‌ 3 ಸಾವಿರ ಕೋ.ರೂ. ಸಾಲ ವಂಚನೆ ಪ್ರಕರಣ : ರಿಲಯನ್ಸ್‌ ಗ್ರೂಪ್‌ನ 50 ಕಂಪನಿಗಳ ಮೇಲೆ ಇ.ಡಿ ದಾಳಿ Read More »

ಬ್ರಹ್ಮಪುತ್ರ ನದಿಗೆ ಚೀನಾದಿಂದ ಅಣೆಕಟ್ಟು: ನದಿ ನೀರು ಬಳಸುವ ರಾಷ್ಟ್ರಗಳಿಗೆ ತೊಂದರೆಯಾಗದಂತೆ‌ ಕ್ರಮ ವಹಿಸಲು ಭಾರತ ಸೂಚನೆ

ನವದೆಹಲಿ: ಚೀನಾ ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ಮೆಗಾ ಅಣೆಕಟ್ಟು ನಿರ್ಮಾಣ ‌ಮಾಡುತ್ತಿದ್ದು, ಈ ಸಂಬಂಧ ಭಾರತ ಮೌನ ಮುರಿದಿದೆ. ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದು, ಅಣೆಕಟ್ಟು ನಿರ್ಮಾಣ ವಿಷಯದಲ್ಲಿ ಕೆಳಭಾಗದಲ್ಲಿ ಬರುವ ದೇಶಗಳ ಹಿತಾಸಕ್ತಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸುವಂತೆ ಚೀನಾಗೆ‌ ಸೂಚಿಸಿದೆ. ಹಾಗೆಯೇ ನಮ್ಮ ಹಿತಾಸಕ್ತಿಯ ರಕ್ಷಣೆಯ ಹಿನ್ನೆಲೆ ಮೇಲ್ವಿಚಾರಣೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಚೀನಾದ ಈ ಬೃಹತ್ ಅಣೆಕಟ್ಟಿನಿಂದ ಅಸ್ಸಾಂ ಮತ್ತು

ಬ್ರಹ್ಮಪುತ್ರ ನದಿಗೆ ಚೀನಾದಿಂದ ಅಣೆಕಟ್ಟು: ನದಿ ನೀರು ಬಳಸುವ ರಾಷ್ಟ್ರಗಳಿಗೆ ತೊಂದರೆಯಾಗದಂತೆ‌ ಕ್ರಮ ವಹಿಸಲು ಭಾರತ ಸೂಚನೆ Read More »

ಪ್ರಧಾನಿ ಮೋದಿ ಅವರಿಗೆ ಬ್ರಿಟನ್ನಿನಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಿದ ಪ್ರಧಾನಿ ಕೀರ್ ‌ಸ್ಟಾಮರ್

ನವದೆಹಲಿ: ಪ್ರಧಾನಿ ಮೋದಿ ಅವರು ನಾಲ್ಕು ದಿನಗಳ ಲಂಡನ್, ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದು, ತಡರಾತ್ರಿ ಬ್ರಿಟನ್‌ಗೆ ಬಂದಿಳಿದಿದ್ದಾರೆ. ಬ್ರಿಟನ್ ಪ್ರಧಾನಿ ಕೀರ್ ‌ಸ್ಟಾಮರ್ ಅವರು ಪ್ರಧಾನಿ ಮೋದಿ ಅವರಿಗೆ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತ ಕೋರಿದ್ದಾರೆ. ಬ್ರಿಟನ್ನಿನ ಭಾರತೀಯ ಸಮುದಾಯವನ್ನು ಭೇಟಿಯಾದ ಪ್ರಧಾನಿ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದಿನ ಎರಡು ದಿನಗಳ ಬ್ರಿಟನ್ ಭೇಟಿಯಲ್ಲಿ ಪ್ರಧಾನಿ ಮೋದಿ ಅವರು ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದ್ದಾರೆ. ಅಲ್ಲಿನ ಪ್ರಧಾನಿಯ ಜೊತೆಗೆ ಅವರು ಈ

ಪ್ರಧಾನಿ ಮೋದಿ ಅವರಿಗೆ ಬ್ರಿಟನ್ನಿನಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಿದ ಪ್ರಧಾನಿ ಕೀರ್ ‌ಸ್ಟಾಮರ್ Read More »

8 ತಿಂಗಳ ಮಗುವನ್ನು ತಲೆಕೆಳಗಾಗಿ ಹಿಡಿದು ಊರು ಸುತ್ತಿದ ಕ್ರೂರಿ ತಂದೆ

ಹೆಂಡತಿ ವರದಕ್ಷಿಣೆ ತರಲಿಲ್ಲ ಎಂಬ ಸಿಟ್ಟಿನಲ್ಲಿ ಎಸಗಿದ ಕೃತ್ಯ ಲಖನೌ: ಉತ್ತರ ಪ್ರದೇಶದ ರಾಂಪುರದಲ್ಲಿ ಕ್ರೂರಿ ತಂದೆಯೊಬ್ಬ ಹೆಂಡತಿ ಮೇಲಿನ ಸಿಟ್ಟಿಗೆ ತನ್ನ ಎಂಟು ತಿಂಗಳು ಪ್ರಾಯದ ಹಸುಗೂಸನ್ನು ತಲೆಕೆಳಗಾಗಿ ಹಿಡಿದುಕೊಂಡು ಊರಿಡೀ ಸುತ್ತುಹಾಕಿದ ಅಮಾನವೀಯ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ. ವರದಕ್ಷಿಣೆಗಾಗಿ ಪತ್ನಿ ಜತೆ ಜಗಳವಾಡಿದ ಬಳಿಕ ಈ ಪಾಪಿ ತಂದೆ ತನ್ನ ಮಗುವನ್ನು ತಲೆ ಕೆಳಗಾಗಿಸಿ ಹಿಡಿದುಕೊಂಡು ಊರಿಡೀ ತಿರುಗಾಡಿದ್ದಾನೆ. ಆರೋಪಿಯನ್ನು ಸಂಜು ಎಂದು ಗುರುತಿಸಲಾಗಿದೆ. ಸುಮನ್‌ ಎಂಬ

8 ತಿಂಗಳ ಮಗುವನ್ನು ತಲೆಕೆಳಗಾಗಿ ಹಿಡಿದು ಊರು ಸುತ್ತಿದ ಕ್ರೂರಿ ತಂದೆ Read More »

ಕನ್ವರ್ ‌ಯಾತ್ರಾ ಮಾರ್ಗದ ಹೊಟೇಲ್‌ಗಳಿಗೆ QR ಕೋಡ್‌‌ ಕಡ್ಡಾಯ ಆದೇಶಕ್ಕೆ ತಡೆಯಾಜ್ಞೆ ‌ನೀಡಲು ಸುಪ್ರೀಂ ನಕಾರ

ಲಕ್ನೋ: ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಕನ್ವರ್ ಯಾತ್ರಿಗಳ ಅನುಕೂಲಕ್ಕಾಗಿ ಮಾರ್ಗದಲ್ಲಿರುವ ಹೊಟೇಲ್‌ಗಳಿಗೆ ಕ್ಯೂ‌ಆರ್ ಕೋಡ್ ಕಡ್ಡಾಯ ಎಂದು ಆದೇಶ ಹೊರಡಿಸಿದ್ದು, ಇದಕ್ಕೆ ತಡೆಯಾಜ್ಞೆ ಹೊರಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪನ್ನು ನೀಡಿರುವುದಾಗಿದೆ. ಈ ಅರ್ಜಿದಾರರ ಪರ ವಕೀಲರು, ಸರ್ಕಾರದ ಈ ಆದೇಶ‌ ವ್ಯಾಪಾರಿಗಳಲ್ಲಿ ಒತ್ತಡ ಉಂಟು ಮಾಡುತ್ತಿದೆ. ಗೌಪ್ಯತೆಯ ಉಲ್ಲಂಘನೆಗೂ ಕಾರಣವಾಗುತ್ತದೆ

ಕನ್ವರ್ ‌ಯಾತ್ರಾ ಮಾರ್ಗದ ಹೊಟೇಲ್‌ಗಳಿಗೆ QR ಕೋಡ್‌‌ ಕಡ್ಡಾಯ ಆದೇಶಕ್ಕೆ ತಡೆಯಾಜ್ಞೆ ‌ನೀಡಲು ಸುಪ್ರೀಂ ನಕಾರ Read More »

ದೊಡ್ಡ ಮೊತ್ತದ ದೇಣಿಗೆ ಮೇಲೆ ತೆರಿಗೆ ವಿನಾಯಿತಿ ಕೋರಿದ ಕಾಂಗ್ರೆಸ್ ಮನವಿಯನ್ನು ತಿರಸ್ಕರಿಸಿದ ITAT

ನವದೆಹಲಿ: ಕಾಂಗ್ರೆಸ್ ಬೃಹತ್ ಮೊತ್ತದ ದೇಣಿಗೆಗಳ ‌ಮೇಲೆ ತೆರಿಗೆ ವಿನಾಯಿತಿ ಕೋರಿ ಮಾಡಿದ್ದ ಮನವಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ತಿರಸ್ಕರಿಸಿದೆ. 2018-19 ನೇ ವರ್ಷಕ್ಕೆ ಸಂಬಂಧಿಸಿದ 199.15 ಕೋಟಿ ರೂ. ಆದಾಯಕ್ಕೆ ತೆರಿಗೆ ವಿನಯಿತಿಗಾಗಿ ಕಾಂಗ್ರೆಸ್ ಪಕ್ಷ ಮನವಿ ಮಾಡಿಕೊಂಡಿತ್ತು. ಈ ಮನವಿಯನ್ನು ITAT ತಿರಸ್ಕರಿಸಿದೆ. ಕಾಂಗ್ರೆಸ್ ತಡವಾಗಿ ಐಟಿ ರಿಟರ್ನ್ಸ್‌ಗಳನ್ನು ಸಲ್ಲಿಕೆ ಮಾಡಿದ್ದು, ಜೊತೆಗೆ ನಗದು ದೇಣಿಗೆ ಮಿತಿಗಳ ಉಲ್ಲಂಘನೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಲ್ಲಿಸಿದ್ದ ತೆರಿಗೆ ವಿನಾಯಿತಿ ಅರ್ಜಿಯನ್ನು ವಜಾ ಮಾಡಿರುವುದಾಗಿದೆ.

ದೊಡ್ಡ ಮೊತ್ತದ ದೇಣಿಗೆ ಮೇಲೆ ತೆರಿಗೆ ವಿನಾಯಿತಿ ಕೋರಿದ ಕಾಂಗ್ರೆಸ್ ಮನವಿಯನ್ನು ತಿರಸ್ಕರಿಸಿದ ITAT Read More »

ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್‌ ನೀಡಿರುವುದು ರಾಜ್ಯ ಸರ್ಕಾರ : ಕೇಂದ್ರದಿಂದ ಸ್ಪಷ್ಟನೆ

ವಿಶ್ವದ ನಂಬರ್‌ ಒನ್‌ ಪೇಮೆಂಟ್‌ ವ್ಯವಸ್ಥೆ ಯುಪಿಐ ಹದಗೆಡಿಸಲು ಕಾಂಗ್ರೆಸ್‌ ಸಂಚು ನವದೆಹಲಿ: ಸಣ್ಣ ವ್ಯಾಪಾರಿಗಳಿಗೆ ಕರ್ನಾಟಕ ಸರ್ಕಾರ ನೀಡಿರುವ ತೆರಿಗೆ ನೋಟಿಸ್‌ಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ಬಾಕಿ ನೋಟಿಸ್ ಕೊಟ್ಟು, ಇದೀಗ ರಾಜ್ಯ ಸರ್ಕಾರಕ್ಕೂ ಹಾಗೂ ಜಿಎಸ್‌ಟಿ ನೋಟಿಸ್‌ಗೂ ಯಾವುದೇ ಸಂಬಂಧವಿಲ್ಲ ಅಂತ ಹೇಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಹೇಳಿದ್ದಾರೆ.

ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್‌ ನೀಡಿರುವುದು ರಾಜ್ಯ ಸರ್ಕಾರ : ಕೇಂದ್ರದಿಂದ ಸ್ಪಷ್ಟನೆ Read More »

ಇಂದಿನಿಂದ ಮ್ಯಾಚೆಂಸ್ಟರ್​ನಲ್ಲಿ ನಾಲ್ಕನೇ ಟೆಸ್ಟ್‌ ಪಂದ್ಯ : ಭಾರತದ ಪಾಲಿಗೆ ನಿರ್ಣಾಯಕ

ಗೆಲ್ಲುವುದು ಅಥವಾ ಡ್ರಾ ಸಾಧಿಸಿದರಷ್ಟೇ ಟೀಮ್‌ ಇಂಡಿಯಾ ಸರಣಿ ಆಸೆ ಜೀವಂತ ಲಂಡನ್‌ : ಭಾರತ-ಇಂಗ್ಲೆಂಡ್‌ ಐದು ಪಂದ್ಯಗಳ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯ ಇಂದಿನಿಂದ ಮ್ಯಾಚೆಂಸ್ಟರ್​ನಲ್ಲಿ ಪ್ರಾರಂಭವಾಗಲಿದೆ. ನಾಲ್ಕನೇ ಟೆಸ್ಟ್ ಪಂದ್ಯ ಟೀಮ್ ಇಂಡಿಯಾ ಪಾಲಿಗೆ ಅತ್ಯಂತ ನಿರ್ಣಾಯಕ. ಸರಣಿಯಲ್ಲಿ ಇಂಗ್ಲೆಂಡ್ ಈಗಾಗಲೇ 2-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದು, ಹೀಗಾಗಿ ಮ್ಯಾಚೆಂಸ್ಟರ್​ನಲ್ಲಿ ಭಾರತ ತಂಡ ಗೆಲ್ಲುವುದು ಅಥವಾ ಡ್ರಾ ಸಾಧಿಸುವುದು ಅನಿವಾರ್ಯ. ಮೂರನೇ ಟೆಸ್ಟ್‌ನಲ್ಲಿ ಗೆಲ್ಲುವ ಚಿನ್ನದಂಥ ಅವಕಾಶವನ್ನು ಕೈಚೆಲ್ಲಿ ಭಾರತ ಈಗ ಪೇಚಾಡುತ್ತಿದೆ. ಆದರೆ

ಇಂದಿನಿಂದ ಮ್ಯಾಚೆಂಸ್ಟರ್​ನಲ್ಲಿ ನಾಲ್ಕನೇ ಟೆಸ್ಟ್‌ ಪಂದ್ಯ : ಭಾರತದ ಪಾಲಿಗೆ ನಿರ್ಣಾಯಕ Read More »

error: Content is protected !!
Scroll to Top