ದೇಶ

ಮಹಾಕುಂಭಮೇಳದಲ್ಲಿ ಕಾಲ್ತುಳಿತ : ಹಲವರು ಸಾವಿಗೀಡಾಗಿರುವ ಶಂಕೆ

ಇಂದಿನ ಪವಿತ್ರ ಸ್ನಾನ ರದ್ದು; ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ಪ್ರಯಾಗ್‌ರಾಜ್‌: ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 10ರಿಂದ 15 ಮಂದಿ ಮೃತರಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಆಸ್ಪತ್ರೆಗೆ 15ಕ್ಕೂ ಹೆಚ್ಚು ಮೃತದೇಹಗಳನ್ನು ತರಲಾಗಿದೆ ಎಂದು ವಿದೇಶ ಮಾಧ್ಯಮವೊಂದು ವರದಿ ಮಾಡಿದೆ.ಇಂದು ಮೌನಿ ಅಮಾವಾಸ್ಯೆಯ ಪವಿತ್ರ ಸ್ನಾನಕ್ಕಾಗಿ ಪ್ರಯಾಗ್‌ರಾಜ್‌ನಲ್ಲಿ ಕೋಟಿಗಟ್ಟಲೆ ಜನರು ಸೇರಿದ್ದರು. ಈ ಸಂದರ್ಭದಲ್ಲಿ ತಡೆಬೇಲಿ ಮುರಿದು ಸ್ನಾನಕ್ಕೆ ಧಾವಿಸಿದವರು ಜನರನ್ನು ತುಳಿದುಕೊಂಡು ಹೋದ ಪರಿಣಾಮವಾಗಿ ಕಾಲ್ತುಳಿತ ಸಂಭವಿಸಿದೆ […]

ಮಹಾಕುಂಭಮೇಳದಲ್ಲಿ ಕಾಲ್ತುಳಿತ : ಹಲವರು ಸಾವಿಗೀಡಾಗಿರುವ ಶಂಕೆ Read More »

ಮಹಾಕುಂಭಮೇಳದಲ್ಲಿ ನೂಕುನುಗ್ಗಲು : ಹಲವು ಮಂದಿಗೆ ಗಾಯ

ಮೌನಿ ಅಮವಾಸ್ಯೆ ಸ್ನಾನಕ್ಕೆ ಸೇರಿರುವ ಕೋಟಿಗಟ್ಟಲೆ ಜನ ಪ್ರಯಾಗ್‌ರಾಜ್‌ : ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇಂದು ನಸುಕಿನ ಹೊತ್ತು ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿ ಹಲವು ಮಂದಿ ಗಾಯಗೊಂಡಿದ್ದಾರೆ. ಕೆಲವ ಸ್ಥಿತಿ ಚಿಂತಾಜನಕವಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಇಂದು ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದು, ನೂಕುನುಗ್ಗಲು ಉಂಟಾಗಿತ್ತು. ಈ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಹಲವು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಹಲವು ಮಂದಿ ಕಾಲಿನಡಿಗೆ ಬಿದ್ದು,

ಮಹಾಕುಂಭಮೇಳದಲ್ಲಿ ನೂಕುನುಗ್ಗಲು : ಹಲವು ಮಂದಿಗೆ ಗಾಯ Read More »

ಬಾಂಗ್ಲಾದೇಶದ ನುಸುಳುಕೋರರಿಗೆ ಆಶ್ರಯ ಒದಗಿಸಿ : ಅಕ್ರಮ ವಲಸಿಗರ ಪರವಾಗಿ ಪಿತ್ರೋಡ ಬ್ಯಾಟಿಂಗ್‌

ಅಕ್ರಮವಾಗಿ ಬರುವವರಿಗೆ ನೆಲೆ ಒದಗಿಸಬೇಕೆಂದು ಹೇಳಿದ ರಾಹುಲ್‌ ಗಾಂಧಿ ಮಾರ್ಗದರ್ಶಕ ಹೊಸದಿಲ್ಲಿ: ಬಾಂಗ್ಲಾದೇಶದ ಅಕ್ರಮ ನುಸುಳುಕೋರರಿಗೆ ಭಾರತದಲ್ಲಿ ನೆಲೆ ಕಲ್ಪಿಸಬೇಕೆಂದು ಹೇಳಿರುವ ರಾಹುಲ್‌ ಗಾಂಧಿಯ ಮಾರ್ಗದರ್ಶಕ ಸ್ಯಾಮ್‌ ಪಿತ್ರೋಡ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಂಗ್ಲಾದೇಶದ ಅಕ್ರಮ ವಲಸಿಗರ ಸಮಸ್ಯೆ ಬಿಗಡಾಯಿಸಿರುವಾಗ ಮತ್ತು ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಿರಂತರ ಹಿಂಸಾಚಾರ ನಡೆಯುತ್ತಿರುವ ಹೊರತಾಗಿಯೋ ಪಿತ್ರೋಡ ಬಾಂಗ್ಲಾದ ಅಕ್ರಮ ವಲಸಿಗರ ಪರವಾಗಿ ಮಾತನಾಡಿರುವುದು ಕಾಂಗ್ರೆಸ್‌ನ ರಹಸ್ಯ ಅಜೆಂಡಾದ ಭಾಗ ಎಂದು ಅನೇಕರು ಟೀಕಿಸಿದ್ದಾರೆ. ಬಾಂಗ್ಲಾ ವಲಸಿಗರು ಒಂದು ವೇಳೆ

ಬಾಂಗ್ಲಾದೇಶದ ನುಸುಳುಕೋರರಿಗೆ ಆಶ್ರಯ ಒದಗಿಸಿ : ಅಕ್ರಮ ವಲಸಿಗರ ಪರವಾಗಿ ಪಿತ್ರೋಡ ಬ್ಯಾಟಿಂಗ್‌ Read More »

ಮಹಾಕುಂಭಮೇಳದಲ್ಲಿ ಪಾಲ್ಗೊಂಡ ಸ್ಪೀಕರ್‌ ಯು.ಟಿ.ಖಾದರ್‌

ಮಂಗಳೂರು : ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪಾಲ್ಗೊಂಡು ಸೌಹಾರ್ದ ಮೆರೆದಿದ್ದಾರೆ. ನದಿಗೆ ಇಳಿದು ಪವಿತ್ರ ನೀರನ್ನು ಚಿಮುಕಿಸಿಕೊಂಡರಲ್ಲದೆ, ದೋಣಿ ವಿಹಾರ ನಡೆಸಿ ಮಹಾಕುಂಭದ ಸೊಬಗನ್ನು ಸವಿದರು. ಉತ್ತರಪ್ರದೇಶದ ಸ್ಪೀಕರ್ ಸತೀಶ್ ಮಹಾನಾ ಅವರ ಆಹ್ವಾನದ ಮೇರೆಗೆ ಶುಕ್ರವಾರ ಕುಂಭಮೇಳದಲ್ಲಿ ಪಾಲ್ಗೊಂಡ ಖಾದರ್, ನಾಗಾಸಾಧುಗಳು ಮತ್ತು ಅಘೋರಿಗಳೊಂದಿಗೆ ಆಧ್ಯಾತ್ಮಿಕತೆ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಅಲಹಾಬಾದ್‌ನಲ್ಲಿ ಹಜರತ್ ಮಖ್ದೂಮ್ ಸಾದತ್ ಚೌಧೋನ್ ಪೀರೋ ದರ್ಗಾ ಶರೀಫ್‌ಗೆ ಭೇಟಿ ನೀಡಿ ನಾಡಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆ

ಮಹಾಕುಂಭಮೇಳದಲ್ಲಿ ಪಾಲ್ಗೊಂಡ ಸ್ಪೀಕರ್‌ ಯು.ಟಿ.ಖಾದರ್‌ Read More »

ಗಣರಾಜ್ಯೋತ್ಸವ : ಕಣ್ಮನ ತಣಿಸಿದ ಪಥ ಸಂಚಲನ; ರೋಮಾಂಚಕ ಸೇನೆಯ ಸಾಹಸ ಪ್ರದರ್ಶನ

ಆಕರ್ಷಣೆಯ ಕೇಂದ್ರವಾದ ಕರ್ನಾಟಕದ ಲಕ್ಕುಂಡಿ ಬ್ರಹ್ಮ ಜಿನಾಲಯ ದೇವಾಲಯದ ಟ್ಯಾಬ್ಲೊ ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ 76ನೇ ಗಣರಾಜ್ಯೋತ್ಸವ ಸಂಭ್ರಮದಿಂದ ಜರುಗಿದ್ದು, ಕರ್ತವ್ಯ ಪಥದಲ್ಲಿ ನಡೆದ ಪಥಸಂಚಲನ ಗಮನ ಸೆಳೆಯಿತು. ಭಾರತೀಯ ಸಂವಿಧಾನ ಜಾರಿಗೆ ಬಂದ 75 ವರ್ಷಗಳು ಪೂರ್ತಿಯಾದ ನಿಮಿತ್ತ ಈ ಬಾರಿ ʻಸುವರ್ಣ ಭಾರತ, ಪರಂಪರೆ ಮತ್ತು ಅಭಿವೃದ್ಧಿʼ ಥೀಮ್‌ನಲ್ಲಿ ಗಣರಾಜೋತ್ಸವ ಆಚರಣೆ ಮಾಡಲಾಯಿತು. ಸೇನಾ ಪರೇಡ್‌ನಲ್ಲಿ ಇಬ್ಬರು ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರು, ಕಾರ್ಗಿಲ್‌ ಯುದ್ಧ ವೀರರು ಹಾಗೂ ಓರ್ವ ಅಶೋಕ ಚಕ್ರ ಪುರಸ್ಕೃತರು

ಗಣರಾಜ್ಯೋತ್ಸವ : ಕಣ್ಮನ ತಣಿಸಿದ ಪಥ ಸಂಚಲನ; ರೋಮಾಂಚಕ ಸೇನೆಯ ಸಾಹಸ ಪ್ರದರ್ಶನ Read More »

ಸೈಫ್‌ ಹಲ್ಲೆ ಪ್ರಕರಣ : ಆರೋಪಿಯ ಗುರುತು ದೃಢಪಡಿಸಲು ವೈಜ್ಞಾನಿಕ ಪರೀಕ್ಷೆ

ಎಲ್ಲ ತಂದೆಯಂದಿರೂ ಮಗ ಅಪರಾಧಿಯಲ್ಲ ಎಂದೇ ವಾದಿಸುತ್ತಾರೆ, ತಂದೆಯ ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ ಮುಂಬಯಿ: ನಟ ಸೈಫ್‌ ಅಲಿ ಖಾನ್‌ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದು ತನ್ನ ಮಗನಲ್ಲ ಎಂದಿರುವ ಆರೋಪಿ ಮೊಹಮ್ಮದ್‌ ಶೆರಿಫುಲ್ಲ ಷೆಹಜಾದ್‌ನ ತಂದೆಯ ಹೇಳಿಕೆಯನ್ನು ಮುಂಬಯಿ ಪೊಲೀಸರು ಅಲ್ಲಗಳೆದಿದ್ದಾರೆ. ಆರೋಪಿ ಬಾಂಗ್ಲಾದೇಶದ ಅಕ್ರಮ ನುಸುಳುಕೋರನಾಗಿದ್ದು, ಸೈಫ್‌ ಮನೆಯಲ್ಲಿ ಸಿಕ್ಕಿರುವ ಬೆರಳಚ್ಚು ಮಾದರಿಗಳು ಅವನ ಬೆರಳಚ್ಚಿಗೆ ಹೋಲಿಕೆಯಾಗುತ್ತಿವೆ. ಎಲ್ಲ ತಂದೆಯಂದಿರೂ ತಮ್ಮ ಮಗ ಅಪರಾಧಿಯಲ್ಲ ಎಂದೇ ವಾದಿಸುತ್ತಾರೆ. ಹೀಗಾಗಿ ಆರೋಪಿಯ ತಂದೆಯ ಮಾತಿಗೆ

ಸೈಫ್‌ ಹಲ್ಲೆ ಪ್ರಕರಣ : ಆರೋಪಿಯ ಗುರುತು ದೃಢಪಡಿಸಲು ವೈಜ್ಞಾನಿಕ ಪರೀಕ್ಷೆ Read More »

ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ : ಪ್ರಧಾನಿ ಮೋದಿ ಶುಭಾಶಯ

ಹೊಸದಿಲ್ಲಿ: ದೇಶಾದ್ಯಂತ 76ನೇ ವರ್ಷದ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋದಿ, ದೇಶದ ಎಲ್ಲ ಜನತೆಗೂ ಗಣರಾಜ್ಯೋತ್ಸವದ ಶುಭಾಶಯಗಳು ಎಂದು ಹೇಳಿದ್ದಾರೆ. ಇಂದು ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ನಮ್ಮ ಸಂವಿಧಾನವನ್ನು ರಚಿಸಿದ ಮತ್ತು ನಮ್ಮ ಪ್ರಜಾಪ್ರಭುತ್ವ, ಘನತೆ ಮತ್ತು ಏಕತೆಯಲ್ಲಿ ಬೇರೂರಿದೆ ಎಂದು ಖಚಿತಪಡಿಸಿದ ಎಲ್ಲ ಜನತೆಗೂ ತಲೆಬಾಗಿ ನಮಸ್ಕರಿಸುತ್ತೇನೆ. ಈ ಗಣರಾಜ್ಯೋತ್ಸವ ನಮ್ಮ ಸಂವಿಧಾನದ ಆದರ್ಶಗಳನ್ನು ಸಂರಕ್ಷಿಸುವ, ಬಲಿಷ್ಠ ಮತ್ತು ಸಮೃದ್ಧ

ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ : ಪ್ರಧಾನಿ ಮೋದಿ ಶುಭಾಶಯ Read More »

ಅನಂತ್‌ ನಾಗ್‌ಗೆ ಪದ್ಮಭೂಷಣ ಪ್ರಶಸ್ತಿ : ಕನ್ನಡಿಗರಿಗೆ ಪುಳಕ

ನೀವೇ ನನ್ನ ಸ್ಫೂರ್ತಿ ಎಂದು ಅಭಿನಂದಿಸಿದ ರಿಷಬ್‌ ಶೆಟ್ಟಿ ಬೆಂಗಳೂರು: ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಸುಮಾರು ಐದು ದಶಕಗಳಿಂದ ತೊಡಗಿಸಿಕೊಂಡಿರುವ ಅನಂತ್‌ ನಾಗ್‌ ಅತ್ಯಂತ ಪ್ರತಿಭಾವಂತ ನಟ ಎನ್ನುವುದರಲ್ಲಿ ಅನುಮಾನವಿಲ್ಲ. ಕನ್ನಡವಲ್ಲದೆ ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಮುಂಬಯಿಯ ರಂಗಭೂಮಿಯ ಹಿನ್ನೆಲೆಯಿಂದ ಬಂದ ಅನಂತ್‌ ನಾಗ್‌ ಸಹಜ ಅಭಿನಯಕ್ಕೆ ಖ್ಯಾತರಾದವರು. ಅವರ ಪ್ರತಿಭೆ ಮತ್ತು ಸಾಧನೆಗೆ

ಅನಂತ್‌ ನಾಗ್‌ಗೆ ಪದ್ಮಭೂಷಣ ಪ್ರಶಸ್ತಿ : ಕನ್ನಡಿಗರಿಗೆ ಪುಳಕ Read More »

ಮಹಾಕುಂಭಮೇಳದಲ್ಲಿ ಮತ್ತೆ ಅಗ್ನಿ ಅವಘಡ : ಎರಡು ಕಾರುಗಳು ಭಸ್ಮ

ಪ್ರಯಾಗ್‌ರಾಜ್‌ : ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮತ್ತೆ ಬೆಂಕಿ ಅವಘಡ ಸಂಭವಿಸಿದೆ. ರಸ್ತೆ ಬದಿ ನಿಲ್ಲಿಸಿದ್ದ ಎರಡು ಕಾರುಗಳು ಇದ್ದಕ್ಕಿದ್ದಂತೆ ಬೆಂಕಿಹತ್ತಿಕೊಡು ಉರಿದು ಕರಕಲಾಗಿವೆ. ಕಳೆದ ಭಾನುವಾರಷ್ಟೇ ಸಿಲಿಂಡರ್‌ ಸ್ಫೋಟಿಸಿದ ಪರಿಣಾಮ ಬೆಂಕಿಹತ್ತಿಕೊಂಡು ಸುಮಾರು 20 ಟೆಂಟ್‌ಗಳು ಸುಟ್ಟುಹೋಗಿದ್ದವು. ಮಹಾಕುಂಭಮೇಳದ ಸೆಕ್ಟರ್‌ 2ರ ಬಳಿ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿಹತ್ತಿಕೊಡಿದ್ದು, ಕೂಡಲೇ ಅಗ್ನಿಶಾಮಕ ಪಡೆ ಉಳಿದ ಕಾರುಗಳು ಮತ್ತಿತರ ವಾಹನಗಳನ್ನು ದೂರ ಸಾಗಿಸಿದ ಪರಿಣಾಮ ಹೆಚ್ಚಿನ ಅನಾಹುತವಾಗಿಲ್ಲ. ಆದರೆ ಬೆಂಕಿಹತ್ತಿಕೊಂಡ ಎರಡು ಕಾರುಗಳು ಪೂರ್ತಿಯಾಗಿ ಸುಟ್ಟುಹೋಗಿವೆ. ಘಟನೆಯಲ್ಲಿ

ಮಹಾಕುಂಭಮೇಳದಲ್ಲಿ ಮತ್ತೆ ಅಗ್ನಿ ಅವಘಡ : ಎರಡು ಕಾರುಗಳು ಭಸ್ಮ Read More »

ಸೈಫ್‌ ಅಲಿ ಖಾನ್‌ ಹಲ್ಲೆ ಪ್ರಕರಣದಲ್ಲಿ ಬಂಧಿಸಿರುವ ಆರೋಪಿ ನಕಲಿ

ಇಡೀ ಬಂಧನ ಪ್ರಕ್ರಿಯೆ ಮುಂಬಯಿ ಪೊಲೀಸರ ಕಟ್ಟುಕತೆ ಎಂದ ಆರೋಪಿಯ ತಂದೆ ಮುಂಬಯಿ: ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲಾಗಿರುವ ದಾಳಿಯ ಬಗ್ಗೆಯೇ ಹಲವು ಅನುಮಾನಗಳು ಸೃಷ್ಟಿಯಾಗಿರುವ ಬೆನ್ನಿಗೆ ಪೊಲೀಸರು ಬಂಧಿಸಿರುವುದು ನಕಲಿ ಆರೋಪಿ ಎಂಬ ಆರೋಪ ಕೇಳಿಬಂದಿದೆ. ಪೊಲೀಸ್ ವಶದಲ್ಲಿರುವ ಆರೋಪಿ ಮೊಹಮ್ಮದ್ ಶರೀಫುಲ್‌ ಇಸ್ಲಾಂನ ತಂದೆ ಶರೀಫುಲ್ ಫಕೀರ್, ತನ್ನ ಮಗನನ್ನು ವಿನಾಕಾರಣ ಬಂಧಿಸಲಾಗಿದೆ. ಆತ ಸೈಫ್ ಮೇಲೆ ದಾಳಿ ಮಾಡಿದ ವ್ಯಕ್ತಿಯಲ್ಲ. ಇದು ವ್ಯವಸ್ಥಿತಿ ಷಡ್ಯಂತ್ರ ಎಂದು ಹೇಳಿದ್ದಾರೆ. ಮುಂಬಯಿ ಪೊಲೀಸರು

ಸೈಫ್‌ ಅಲಿ ಖಾನ್‌ ಹಲ್ಲೆ ಪ್ರಕರಣದಲ್ಲಿ ಬಂಧಿಸಿರುವ ಆರೋಪಿ ನಕಲಿ Read More »

error: Content is protected !!
Scroll to Top