ದೇಶ

ಭಾರತ ತಂಡದ ಹೊಣೆ ಹೊಸ ತಲೆಮಾರಿಗೆ ಹಸ್ತಾಂತರ : ಐವರು ದಿಗ್ಗಜರಿಗೆ ಸ್ಥಾನವೇ ಇಲ್ಲ

ಅಕ್ಟೋಬರ್‌ 19ರಿಂದ ಭಾರತ-ಆಸ್ಟ್ರೇಲಿಯಾ ಮಹತ್ವದ ಸರಣಿ ಪ್ರಾರಂಭ ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿ ಅಕ್ಟೋಬರ್ 19ರಿಂದ ಶುರುವಾಗಲಿದ್ದು, ಆಸ್ಟೇಲಿಯಾದಲ್ಲಿ ನಡೆಯಲಿರುವ ಈ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡಗಳನ್ನು ಶುಭ್​ಮನ್ ಗಿಲ್ ಹಾಗೂ ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಆದರೆ ಈ ಸಲ ಆಯ್ಕೆ ಸಮಿತಿ ಮಾಡಿರುವ ಆಯ್ಕೆಗಳು ಮಾತ್ರ ಭಾರಿ ಚರ್ಚೆಗೆ ಗುರಿಯಾಗಿದೆ. ಬಹಳ ಮುಖ್ಯವಾಗಿ ಭಾರತ ತಂಡದ ನಾಯಕನ ಬದಲಾವಣೆ, ಐವರು ಪ್ರಮುಖ ಆಟಗಾರರನ್ನು ಕೈ ಬಿಟ್ಟಿರುವುದು ಹೆಚ್ಚು […]

ಭಾರತ ತಂಡದ ಹೊಣೆ ಹೊಸ ತಲೆಮಾರಿಗೆ ಹಸ್ತಾಂತರ : ಐವರು ದಿಗ್ಗಜರಿಗೆ ಸ್ಥಾನವೇ ಇಲ್ಲ Read More »

ಡಿಜಿಟಲ್‌ ಮೂಲಕ ಟೋಲ್‌ ಪಾವತಿಸಿದರೆ ಸಿಗಲಿದೆ ರಿಯಾಯಿತಿ

ನವಂಬರ್‌ 15ರಿಂದ ಹೊಸ ನಿಯಮ ಜಾರಿಗೆ ಮುಂದಾದ ಕೇಂದ್ರ ಸರ್ಕಾರ ನವದೆಹಲಿ: ರಸ್ತೆ ಟೋಲ್ ಪಾವತಿಗಳಿಗೆ ಸಂಬಂಧಿಸಿದಂತೆ ಡಿಜಿಟಲ್‌ ಪಾವತಿಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಮತ್ತೊಂದು ಹೊಸ ನಿಯಮ ಪರಿಚಯಿಸಿದೆ. ಇದರಿಂದ ಫಾಸ್ಟ್‌ಟ್ಯಾಗ್‌ ಹೊಂದಿಲ್ಲದವರು ಯುಪಿಐ ಪಾವತಿ ಮೂಲಕವೂ ರಿಯಾಯಿತಿ ಗಳಿಸಬಹುದಾಗಿದೆ. ನವೆಂಬರ್‌ 15ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಫಾಸ್ಟ್‌ ಟ್ಯಾಗ್‌ ಇಲ್ಲದಿರುವ ವಾಹನಗಳು ನವೆಂಬರ್ 15ರಿಂದ ನಗದು ರೂಪದಲ್ಲಿ ಟೋಲ್ ಶುಲ್ಕ ಪಾವತಿಸಲು ಬಯಸಿದರೆ ಅವು ಎರಡು ಪಟ್ಟು ಹೆಚ್ಚು ಹಣ

ಡಿಜಿಟಲ್‌ ಮೂಲಕ ಟೋಲ್‌ ಪಾವತಿಸಿದರೆ ಸಿಗಲಿದೆ ರಿಯಾಯಿತಿ Read More »

ಮಹಿಳಾ ವಿಶ್ವಕಪ್‌ನಲ್ಲೂ ಪಾಕಿಸ್ತಾನ ಜೊತೆ ನೋ ಹ್ಯಾಂಡ್‌ ಶೇಕ್‌

ಇಂದಿನ ಮುಖಾಮುಖಿಯಲ್ಲಿ ಹ್ಯಾಂಡ್‌ಶೇಕ್‌ ಮಾಡದಂತೆ ಬಿಸಿಸಿಐ ಸೂಚನೆ ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡಗಳ ನಡುವಿನ ನೋ ಹ್ಯಾಂಡ್‌ಶೇಕ್‌ ನಿಲುವು ಪ್ರಸ್ತುತ ನಡೆಯುತ್ತಿರುವ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಕೂಟಕ್ಕೂ ಮುಂದುವರಿದಿದೆ. ಭಾರತದ ಮಹಿಳಾ ತಂಡ 2025ರ ವಿಶ್ವಕಪ್‌ನಲ್ಲಿ ಈಗಾಗಲೇ ಸೆಪ್ಟೆಂಬರ್ 30 ರಂದು ನಡೆದಿದ್ದ ಶ್ರೀಲಂಕಾ ವಿರುದ್ಧ ಗೆಲುವಿನ ಆರಂಭ ಪಡೆದಿದೆ. ಇಂದು ಪಾಕಿಸ್ತಾನದ ವಿರುದ್ಧ ಎರಡನೇ ಪಂದ್ಯವಾಡಲಿದೆ. ಈ ಪಂದ್ಯಕ್ಕೂ ಮುನ್ನ ಬಿಸಿಸಿಐ ಭಾರತೀಯ ಆಟಗಾರ್ತಿಯರು ಪಾಕಿಸ್ತಾನಿ ಆಟಗಾರ್ತಿಯರೊಂದಿಗೆ ಕೈಕುಲುಕದಂತೆ ಸ್ಪಷ್ಟ ಆದೇಶ ನೀಡಿದೆ.

ಮಹಿಳಾ ವಿಶ್ವಕಪ್‌ನಲ್ಲೂ ಪಾಕಿಸ್ತಾನ ಜೊತೆ ನೋ ಹ್ಯಾಂಡ್‌ ಶೇಕ್‌ Read More »

ಕಾಂಗ್ರೆಸ್, RJD ವಿರುದ್ದ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ಬಿಹಾರದಲ್ಲಿ ಶಿಕ್ಷಣ ಪದ್ಧತಿ ವಿನಾಶಕಾರಿಯಾಗಲು ಕಾಂಗ್ರೆಸ್ ಮತ್ತು RJD ಪಕ್ಷಗಳೇ ಕಾರಣ. ಇದರಿಂದಾಗಿಯೇ ಇಲ್ಲಿನ ಜನತೆ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮತ್ತು RJD ಆಡಳಿತದಲ್ಲಿ ಬಿಹಾರದಲ್ಲಿ ಶಾಲೆಗಳನ್ನು ತೆರೆಯಲಾಗಿಲ್ಲ. ಜೊತೆಗೆ ಯಾವುದೇ ನೇಮಕಾತಿ ಪ್ರಕ್ರಿಯೆಗಳು ನಡೆದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡೂವರೆ ದಶಕಗಳ ಹಿಂದೆ ಬಿಹಾರದಲ್ಲಿ ಶಿಕ್ಷಣದ ಗುಣಮಟ್ಟ ಹೇಗಿತ್ತು ಎನ್ನುವುದರ ಅರಿವು ಈ ಪೀಳಿಗೆಗೆ ಇಲ್ಲದೇ ಇರಬಹುದು. ನೇಮಕಾತಿಗಳು ನಡೆಯುತ್ತಿರಲಿಲ್ಲ.

ಕಾಂಗ್ರೆಸ್, RJD ವಿರುದ್ದ ಪ್ರಧಾನಿ ಮೋದಿ ವಾಗ್ದಾಳಿ Read More »

2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್‌ ನೀಡದಂತೆ ಕೇಂದ್ರ ಸೂಚನೆ

ಕಫ್‌ ಸಿರಪ್‌ ಸೇವಿಸಿ 13 ಮಕ್ಕಳು ಸಾವಿಗೀಡಾದ ಬಳಿಕ ಆತಂಕ ನವದೆಹಲಿ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್‌ ಸೇವಿಸಿದ 12 ಮಕ್ಕಳು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಸಂಭವಿಸಿದ ಬಳಿಕ ಕಫ್‌ ಸಿರಫ್‌ ದೇಶಾದ್ಯಂತ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್‌ ನೀಡದಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ. ಮಧ್ಯಪ್ರದೇಶದ ಛಿಂದ್‌ವಾರಾ ಜಿಲ್ಲೆಯಲ್ಲಿ 9 ಮಕ್ಕಳು ಮತ್ತು ರಾಜಸ್ಥಾನದ ಭರತ್ ಹಾಗೂ ಸಿಕರ್‌ನಲ್ಲಿ 3 ಮಕ್ಕಳು ಸೇರಿ ಒಟ್ಟು 12 ಕಂದಮ್ಮಗಳು

2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್‌ ನೀಡದಂತೆ ಕೇಂದ್ರ ಸೂಚನೆ Read More »

ಬೈಕ್‌-ಕಾರು ತೂಕದ ಉದಾಹರಣೆ ನೀಡಿ ನಗೆಪಾಟಲಿಗೀಡಾದ ರಾಹುಲ್‌ ಗಾಂಧಿ

ವಿದೇಶದಲ್ಲಿ ರಾಗಾ ಮತ್ತೆ ಅಪ್ರಬುದ್ಧ ಭಾಷಣ ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ವಿದೇಶದಲ್ಲಿ ಮತ್ತೊಮ್ಮೆ ತನ್ನ ಅಪ್ರಬುದ್ಧ ಭಾಷಣದಿಂದ ನಗೆಪಾಟಲಿಗೀಡಾಗಿದ್ದಾರೆ. ಕಾರು ಮತ್ತು ಬೈಕ್‌ಗಳ ತೂಕದ ಕುರಿತು ಅವರು ನೀಡಿದ ಉದಾಹರಣೆ ಸಿಕ್ಕಾಪಟ್ಟೆ ಲೇವಡಿಗೆ ಗುರಿಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಲಕ್ಷಾಂತರ ಜನರು ಇದಕ್ಕೆ ನಾನಾ ಪ್ರತಿಕ್ರಿಯೆ ನೀಡಿ ರಾಹುಲ್‌ ಮತ್ತು ಕಾಂಗ್ರೆಸ್‌ನ ಕಾಲೆಲೆದಿದ್ದಾರೆ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯ ಲಾಭಗಳ ಕುರಿತು ಕೊಲಂಬಿಯಾ ವಿವಿಯ ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಿಗೆ ವಿವರಿಸಲು ಲೋಕಸಭೆ

ಬೈಕ್‌-ಕಾರು ತೂಕದ ಉದಾಹರಣೆ ನೀಡಿ ನಗೆಪಾಟಲಿಗೀಡಾದ ರಾಹುಲ್‌ ಗಾಂಧಿ Read More »

ವಿದೇಶದಲ್ಲಿ ನಿಂತು ಭಾರತ, RSS ವಿರುದ್ಧ ನಾಲಿಗೆ ಹರಿಯಬಿಟ್ಟ ರಾಹುಲ್ ಗಾಂಧಿ

ನವದೆಹಲಿ: ವಿದೇಶಿ ನೆಲದಲ್ಲಿ ನಿಂತು ಭಾರತವನ್ನು ಟೀಕೆ ಮಾಡುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ವಿವಾದ ಸೃಷ್ಟಿ ಮಾಡಿದ್ದಾರೆ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಪ್ರಜಾಪ್ರಭುತ್ವದ ಮೇಲೆ ತೀವ್ರ ದಾಳಿ ನಡೆಸುತ್ತಿದ್ದು, ಇದು ದೇಶಕ್ಕೆ ಎದುರಾಗಿರುವ ಬಹುದೊಡ್ಡ ಬೆದರಿಕೆ ಎಂದು ನಾಲಿಗೆ ಹರಿಯ ಬಿಟ್ಟಿದ್ದು, ಆ ಮೂಲಕ ಭಾರತೀಯರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಭಾರತದ ವ್ಯವಸ್ಥೆಯಲ್ಲಿ ಹಲವಾರು ಸಮಸ್ಯೆಗಳಿವೆ. ಈ ಅಪಾಯಗಳಿಂದ ದೇಶ ಹೊರಬರಬೇಕಿದೆ. ಅದರಲ್ಲಿ

ವಿದೇಶದಲ್ಲಿ ನಿಂತು ಭಾರತ, RSS ವಿರುದ್ಧ ನಾಲಿಗೆ ಹರಿಯಬಿಟ್ಟ ರಾಹುಲ್ ಗಾಂಧಿ Read More »

ಮೋದಿಯನ್ನು ರಾವಣ ಎಂದು ಕರೆದ ಕಾಂಗ್ರೆಸ್‌ ನಾಯಕ

ಮೋದಿಯನ್ನು ಸುಡಬೇಕೆಂದು ವಿವಾದಿತ ಹೇಳಿಕೆ ನೀಡಿದ ಉದಿತ್‌ ರಾಜ್‌ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಧುನಿಕ ರಾವಣನ ಸಂಕೇತ ಎಂದು ಕಾಂಗ್ರೆಸ್‌ ನಾಯಕ ಉದಿತ್‌ ರಾಜ್‌ ವಿವಾದಿತ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಆಧುನಿಕ ರಾವಣನ ಸಂಕೇತ. ಅವರು ತಮ್ಮ ಚಿನ್ನದ ಅರಮನೆಯನ್ನು ನಿರ್ಮಿಸುತ್ತಿದ್ದಾರೆ. ಒಮ್ಮೆ ಅದನ್ನು ಪ್ರವೇಶಿಸಿದ ನಂತರ ಅದೇ ಚಿನ್ನದ ಅರಮನೆ ಉರಿದು ಹೋಗುವುದನ್ನು ನೋಡುತ್ತಾರೆ ಎಂದು ನಾಲಗೆ ಹರಿಬಿಟ್ಟಿದ್ದಾರೆ. ದೆಹಲಿಯ ರಾವಣನನ್ನು ಸುಡಬೇಕು. ದೆಹಲಿಯ ರಾವಣನನ್ನು ಸುಡುವ ದಿನ ಹತ್ತಿರದಲ್ಲಿದೆ ಎಂದು

ಮೋದಿಯನ್ನು ರಾವಣ ಎಂದು ಕರೆದ ಕಾಂಗ್ರೆಸ್‌ ನಾಯಕ Read More »

ಬೇಡಿಕೆಗಳಿಗೆ ಮಣಿಯುವ ರಾಷ್ಟ್ರವಲ್ಲ ಭಾರತ: ಅಮೆರಿಕಾಗೆ ರಷ್ಯಾ ಅಧ್ಯಕ್ಷರ ಟಾಂಗ್

ನವದೆಹಲಿ: ಭಾರತದ ಮೇಲೆ ರಷ್ಯಾದಿಂದ ಕಚ್ಚಾ ತೈಲ ವ್ಯಾಪಾರ ವಹಿವಾಟು ಸ್ಥಗಿತ ಮಾಡುವಂತೆ ಅಮೆರಿಕಾ ಒತ್ತಡ ಹೇರುತ್ತಿದ್ದು, ಇದನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಖಂಡಿಸಿದ್ದಾರೆ. ಭಾರತ ಅಂತಹ ಒತ್ತಡಗಳಿಗೆ ಎಂದಿಗೂ ಮಣಿಯಲು ಸಾಧ್ಯವಿಲ್ಲ. ಹಾಗೆಯೇ ಭಾರತವನ್ನು ಯಾರ ಮುಂದೆಯೂ ಅವಮಾನಕ್ಕೆ ಒಳಗಾಗುವಂತೆ ಮಾಡಲು ರಷ್ಯಾ ಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದು ಆರ್ಥಿಕ ಲೆಕ್ಕಾಚಾರ ಅಷ್ಟೇ. ಇದರಲ್ಲಿ ರಾಜಕೀಯ ಇಲ್ಲ. ಭಾರತ ನಮ್ಮ ಇಂಧನ ಲೆಕ್ಕಾಚಾರಗಳನ್ನು ನಿರಾಕರಿಸಿದರೆ

ಬೇಡಿಕೆಗಳಿಗೆ ಮಣಿಯುವ ರಾಷ್ಟ್ರವಲ್ಲ ಭಾರತ: ಅಮೆರಿಕಾಗೆ ರಷ್ಯಾ ಅಧ್ಯಕ್ಷರ ಟಾಂಗ್ Read More »

ವಂದೇ ಮಾತರಂ ಹಾಡಿಗೆ 150 ವರ್ಷ : ರಾಷ್ಟ್ರಾದ್ಯಂತ ಆಚರಣೆಗೆ ಕೇಂದ್ರ ನಿರ್ಧಾರ

ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ತೋರಿಸಿದ್ದ ಹಾಡು ನವದೆಹಲಿ : ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂಚಲನ ಮೂಡಿಸಿದ ವಂದೇ ಮಾತರಂ ಗೀತೆಗೆ ಈಗ 150ನೇ ವರ್ಷದ ಸಂಭ್ರಮ. ಈ ಸಂಭ್ರಮವನ್ನು ದೇಶಾದ್ಯಂತ ಆಚರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಬಂಕಿಮಚಂದ್ರ ಚಟರ್ಜಿಯವರು ದೇಶಕ್ಕೆ ರಾಷ್ಟ್ರಗೀತೆಯಾಗಿ ರಚಿಸಿ ಗೀತೆ ವಂದೇಮಾತರಂ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಂದೇ ಮಾತರಂ ಗೀತೆ ಪ್ರತಿಯೊಬ್ಬರಲ್ಲಿ ಕಿಚ್ಚು ಮೂಡಿಸಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಸ್ವರೂಪ ಬದಲಿಸಿತ್ತು. ದೇಶ ಒಗ್ಗಟ್ಟಾಗಿ ಹೋರಾಟ ಮಾಡಲು ಈ

ವಂದೇ ಮಾತರಂ ಹಾಡಿಗೆ 150 ವರ್ಷ : ರಾಷ್ಟ್ರಾದ್ಯಂತ ಆಚರಣೆಗೆ ಕೇಂದ್ರ ನಿರ್ಧಾರ Read More »

error: Content is protected !!
Scroll to Top