ದೇಶ

ಸೇನಾ ವಾಹನ ಕಮರಿಗೆ ಉರುಳಿದ ಆಘಾತಕಾರಿ ಘಟನೆ | ಹುತಾತ್ಮರಾದ ಐವರು ಯೋಧರಲ್ಲಿ ಮೂವರು ಕನ್ನಡಿಗರು

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ನಿನ್ನೆ ಸಂಜೆ ಸೇನಾ ವಾಹನ 300 ಅಡಿ ಆಳದ ಕಂದಕಕ್ಕೆ ಉರುಳಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ  ಐವರು ಸೈನಿಕರಲ್ಲಿ ಮೂವರು ಕನ್ನಡಿಗರೆಂದು ತಿಳಿದು ಬಂದಿದೆ. ಸೇನಾ ವಾಹನಲ್ಲಿ 18 ಯೋಧರು ಪ್ರಯಾಣಿಸುತ್ತಿದ್ದು, ಇವರಲ್ಲಿ 5 ಮಂದಿ ಹುತಾತ್ಮರಾಗಿದ್ದಾರೆ. ಉಳಿದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತದಲ್ಲಿ  ಮೃತಪಟ್ಟ ಯೋಧ ಕರ್ನಾಟಕ ಮೂಲದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಬಿಜಾಡಿಯ ಯೋಧ ಅನೂಪ್ […]

ಸೇನಾ ವಾಹನ ಕಮರಿಗೆ ಉರುಳಿದ ಆಘಾತಕಾರಿ ಘಟನೆ | ಹುತಾತ್ಮರಾದ ಐವರು ಯೋಧರಲ್ಲಿ ಮೂವರು ಕನ್ನಡಿಗರು Read More »

ಬಾಸ್‌ ಜೊತೆ ಹೋಗಲೊಪ್ಪದ ಪತ್ನಿಗೆ ತಲಾಕ್‌ ಕೊಟ್ಟ ಗಂಡ

ಮುಂಬಯಿ : ತನ್ನ ಬಾಸ್ ಜತೆ ಮಲಗಲು ಒಪ್ಪದ ಎರಡನೇ ಹೆಂಡತಿಗೆ ಗಂಡ ತ್ರಿವಳಿ ತಲಾಕ್‌ ನೀಡಿದ ಘಟನೆ ಮುಂಬಯಿ ಸಮೀಪ ಕಲ್ಯಾಣ್‌ನಲ್ಲಿ ಸಂಭವಿಸಿದ್ದು, ಗಂಡನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿಸೆಂಬರ್ 19ರಂದು ಕಂಪನಿಯ ಪಾರ್ಟಿ ನಡೆದಿದ್ದು, ಇದಕ್ಕೆ ಆರೋಪಿ 45 ವರ್ಷದ ವ್ಯಕ್ತಿ ತನ್ನ 28 ವರ್ಷದ ಎರಡನೇ ಹೆಂಡತಿಯನ್ನು ಕರೆದುಕೊಂಡು ಹೋಗಿದ್ದ. ಪಾರ್ಟಿಯ ಮಧ್ಯೆ ಈತ ಬಾಸ್‌ ಜೊತೆಗೆ ಹೋಗುವಂತೆ ಹೆಂಡತಿಗೆ ಹೇಳಿದ್ದಾನೆ. ಇದಕ್ಕೆ ಆಕೆ ಒಪ್ಪಿರಲಿಲ್ಲ. ಮನೆಗೆ ಬಂದ ಕೂಡಲೇ ಈ

ಬಾಸ್‌ ಜೊತೆ ಹೋಗಲೊಪ್ಪದ ಪತ್ನಿಗೆ ತಲಾಕ್‌ ಕೊಟ್ಟ ಗಂಡ Read More »

5, 8ನೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಫೇಲ್‌ ಮಾಡಬಹುದು

ನೋ ಡಿಟೆನ್ಶನ್‌ ನಿಯಮ ರದ್ದು ಮಾಡಿದ ಕೇಂದ್ರ ಹೊಸದಿಲ್ಲಿ : 5 ಮತ್ತು 8ನೇ ತರಗತಿಗೆ ಇದ್ದ ನೋ ಡಿಟೆನ್ಶನ್‌ ನಿಯಮವನ್ನು ರದ್ದುಗೊಳಿಸುವ ಮೂಲಕ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇಷ್ಟರ ತನಕ ನೋ ಡಿಟೆನ್ಶನ್‌ ನಿಯಮದ ಪ್ರಕಾರ ವಿದ್ಯಾರ್ಥಿ ಕಲಿಯುವುದರಲ್ಲಿ ಎಷ್ಟೇ ಹಿಂದೆ ಇದ್ದರೂ ಅವನನ್ನು ಅನುತ್ತೀರ್ಣಗೊಳಿಸುವಂತಿರಲಿಲ್ಲ. ಈ ನಿಯಮವನ್ನು ರದ್ದು ಮಾಡಿರುವ ಕೇಂದ್ರ 5 ಮತ್ತು 8ರಲ್ಲಿ ವಿದ್ಯಾರ್ಥಿಗಳನ್ನು ಫೇಲ್‌ ಮಾಡಲು ಅವಕಾಶ ಕೊಟ್ಟಿದೆ. ಉಚಿತ ಮತ್ತು ಕಡ್ಡಾಯ

5, 8ನೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಫೇಲ್‌ ಮಾಡಬಹುದು Read More »

ಶಿರಾಡಿ ಘಾಟಿ ಸುರಂಗ ಮಾರ್ಗದ ಡಿಪಿಆರ್‌ಗೆ ಕೇಂದ್ರ ಒಪ್ಪಿಗೆ

3.8 ಕಿಲೋಮೀಟರ್ ಸುರಂಗ ಮಾರ್ಗ, 10 ಕಿ.ಮೀ ವಯಡಕ್ಟ್‌ ನಿರ್ಮಿಸುವ ಯೋಜನೆ ಹೊಸದಿಲ್ಲಿ: ಮಂಗಳೂರು-ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್‌ನಲ್ಲಿ ಸುರಂಗ, ಗ್ರೀನ್‌ಫೀಲ್ಡ್ ಮಾರ್ಗ ನಿರ್ಮಾಣ ಸಂಬಂಧ ಸಮಗ್ರ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಸುರಂಗ ನಿರ್ಮಾಣಕ್ಕೆ ಭಾರಿ ಮೊತ್ತ ಬೇಕಾಗುತ್ತದೆ. ಜೊತೆಗೆ ಇದು ಕಾರ್ಯಸಾಧು ಅಲ್ಲ ಎಂದು 2022ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ಉತ್ತರ ನೀಡಿದ್ದರು. ಆದರೆ ಸುರಂಗ ನಿರ್ಮಾಣಕ್ಕೆ ಒಪ್ಪಿಗೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ 3

ಶಿರಾಡಿ ಘಾಟಿ ಸುರಂಗ ಮಾರ್ಗದ ಡಿಪಿಆರ್‌ಗೆ ಕೇಂದ್ರ ಒಪ್ಪಿಗೆ Read More »

ಟೀಮ್ ಇಂಡಿಯಾಕ್ಕೆ ಆಯ್ಕೆಯಾದ ಕಾಪು ಮೂಲದ ಹುಡುಗ ತನುಷ್ ಕೋಟ್ಯಾನ್

ರವಿಚಂದ್ರನ್‌ ಅಶ್ವಿನ್‌ ನಿವೃತ್ತಿಯಿಂದಾಗಿ ಸಿಕ್ಕಿದ ಅವಕಾಶ ಮುಂಬಯಿ: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ತನುಷ್ ಕೋಟ್ಯಾನ್ ಎಂಬ ಯುವ ಆಟಗಾರ ಆಯ್ಕೆ ಆಗಿದ್ದಾರೆ. ಈ ಹಿಂದೆ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಮುಂಬಯಿ ಆಟಗಾರ ಇದೀಗ ರವಿಚಂದ್ರನ್ ಅಶ್ವಿನ್ ಅವರ ನಿವೃತ್ತಿಯಿಂದ ತೆರವಾದ ಸ್ಥಾನದಲ್ಲಿ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ತನುಷ್‌ ಕೋಟ್ಯಾನ್‌ ಹೆತ್ತವರು ಉಡುಪಿಯ ಕಾಪು ಮೂಲದವರು. ತನುಷ್‌ ಕೋಟ್ಯಾನ್‌ ಹುಟ್ಟಿ ಬೆಳೆದದ್ದೆಲ್ಲ ಮುಂಬಯಿಯಲ್ಲಿ. ತನುಷ್ ಕೋಟ್ಯಾನ್ ವಯಸ್ಸು ಕೇವಲ 26. ಬಲಗೈ

ಟೀಮ್ ಇಂಡಿಯಾಕ್ಕೆ ಆಯ್ಕೆಯಾದ ಕಾಪು ಮೂಲದ ಹುಡುಗ ತನುಷ್ ಕೋಟ್ಯಾನ್ Read More »

ಉತ್ತರ ಪ್ರದೇಶದಲ್ಲಿ ಮೂವರು ಭಯೋತ್ಪಾದಕರು ಎನ್‌ಕೌಂಟರ್‌ಗೆ ಬಲಿ

ನಿಷೇಧಿತ ಖಲಿಸ್ಥಾನ್‌ ಕಮಾಂಡೊ ಫೋರ್ಸ್‌ಗೆ ಸೇರಿದ ಉಗ್ರರು ಲಖನೌ: ನಿಷೇಧಿತ ಖಲಿಸ್ತಾನ್‌ ಕಮಾಂಡೊ ಫೋರ್ಸ್‌ನ (ಖಲಿಸ್ತಾನ್‌ ಜಿಂದಾಬಾದ್‌ ಫೋರ್ಸ್‌) ಸಂಘಟನೆಯ ಮೂವರು ಭಯೋತ್ಪಾದಕರನ್ನು ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಸಾಯಿಸಿದ್ದಾರೆ. ಸೋಮವಾರ ಮುಂಜಾನೆ ಈ ಎನ್‌ಕೌಂಟರ್‌ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಹತರಾದ ಖಲಿಸ್ಥಾನಿ ಭಯೋತ್ಪಾದಕರನ್ನು ಗುರ್ವಿಂದರ್ ಸಿಂಗ್ (25), ವೀರೇಂದ್ರ ಸಿಂಗ್ ಅಲಿಯಾಸ್ ರವಿ (23), ಮತ್ತು ಜಸ್ಪ್ರೀತ್ ಸಿಂಗ್ ಅಲಿಯಾಸ್ ಪ್ರತಾಪ್ ಸಿಂಗ್ (18) ಎಂದು ಗುರುತಿಸಲಾಗಿದೆ. ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ

ಉತ್ತರ ಪ್ರದೇಶದಲ್ಲಿ ಮೂವರು ಭಯೋತ್ಪಾದಕರು ಎನ್‌ಕೌಂಟರ್‌ಗೆ ಬಲಿ Read More »

ಮಹಾಕುಂಭಮೇಳಕ್ಕೆ ಎಐ, ಡಿಜಿಟಲ್‌ ಸ್ಪರ್ಶ

ಸಾರಿಗೆ, ಭದ್ರತೆ, ವಸತಿ, ಪಾರ್ಕಿಂಗ್‌, ಸಾರಿಗೆ ಎಲ್ಲದಕ್ಕೂ ಆಧುನಿಕ ತಂತ್ರಜ್ಞಾನ ಬಳಕೆ ಪ್ರಯಾಗ್‌ರಾಜ್‌ : ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳಕ್ಕೆ ಪ್ರಯಾಗ್‌ರಾಜ್‌ ನಗರ ಸಜ್ಜಾಗುತ್ತಿದೆ. ಉತ್ತರ ಪ್ರದೇಶ ಸರಕಾರ ಕಳೆದ ಐದಾರು ತಿಂಗಳಿನಿಂದಲೇ ಕುಂಭಮೇಳಕ್ಕಾಗಿ ತಯಾರಿ ನಡೆಸುತ್ತಿದ್ದು, ಈ ಸಲದ ಕುಂಭಮೇಳ ಸಂಪೂರ್ಣವಾಗಿ ಡಿಜಿಟಲ್‌ ತಂತ್ರಜ್ಞಾನದ ಸ್ಪರ್ಶದೊಂದಿಗೆ ನಡೆಯುತ್ತಿರುವುದು ವಿಶೇಷ. ಭಕ್ತರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಸೌಲಭ್ಯ ಕಲ್ಪಿಸಲು ಸರಕಾರ ಸಿದ್ಧತೆ ಮಾಡಿಕೊಂಡಿದೆ. ಸಾರಿಗೆ, ಭದ್ರತೆ, ವಸತಿ, ಪಾರ್ಕಿಂಗ್‌… ಹೀಗೆ ಪ್ರತಿಯೊಂದನ್ನು ಕೂಡ ಅತ್ಯಾಧುನಿಕ ತಂತ್ರಜ್ಞಾನ ಬಳಸಿ

ಮಹಾಕುಂಭಮೇಳಕ್ಕೆ ಎಐ, ಡಿಜಿಟಲ್‌ ಸ್ಪರ್ಶ Read More »

ಪೆರ್ಲ ಅಂಗಡಿ ಕಟ್ಟಡವೊಂದರಲ್ಲಿ ತಡ ರಾತ್ರಿ ಅಗ್ನಿ ಅವಘಡ | ಹೊತ್ತಿ ಉರಿದ ಐದು ಅಂಗಡಿಗಳು

ಪೆರ್ಲ : ಪೇಟೆಯ ಕಟ್ಟಡವೊಂದಕ್ಕೆ ನಿನ್ನೆ ತಡ ರಾತ್ರಿ ಬೆಂಕಿ ಹೊತ್ತಿದ್ದು, ಐದು ಅಂಗಡಿಗಳು ಸಂಪೂರ್ಣವಾಗಿ  ಉರಿದು ನಾಶವಾದ ಘಟನೆ ನಡೆದಿದೆ. ಇಲ್ಲಿನ ಬದಿಯಡ್ಕ ಪುತ್ತೂರು ರಸ್ತೆಯ ಎಡಭಾಗದಲ್ಲಿರುವ ಪೂಜಾ ಫ್ಯಾನ್ಸಿ, ಪೈಗಳ ಕ್ಲೋತ್ ಸ್ಟೋರ್ ಸಹಿತ ಪೇಪರ್ ವಿತರಣ ಸೆಂಟರ್,ಪ್ರವೀಣ್ ಆಟೋಮೊಬೈಲ್ಸ್,ಸದಾತ್ ಸ್ಟೋರ್, ಗೌತಮ್ ಕೋಲ್ಡ್ ಹೌಸ್ ಎಂಬಿ ಅಂಗಡಿ ಮುಂಗಟ್ಟು ಈ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದೂ ಸಂಪೂರ್ಣ ಬೆಂಕಿಗೆ ಅಹುತಿಯಾಗಿದೆ. ಮಧ್ಯರಾತ್ರಿ 12 ಗಂಟೆಯ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ಸೇರಿದ ಬಳಿಕ ಅಗ್ನಿಶಾಮಕ ದಳಕ್ಕೆ

ಪೆರ್ಲ ಅಂಗಡಿ ಕಟ್ಟಡವೊಂದರಲ್ಲಿ ತಡ ರಾತ್ರಿ ಅಗ್ನಿ ಅವಘಡ | ಹೊತ್ತಿ ಉರಿದ ಐದು ಅಂಗಡಿಗಳು Read More »

ಶಬರಿಮಲೆ : ಅಯ್ಯಪ್ಪನ ಪವಿತ್ರ ತಂಗ ಅಂಗಿ ಮೆರವಣಿಗೆ ಆರಂಭ

ಡಿ.25ರಂದು ಮಂಡಲ ಪೂಜೆಗೆ ಸನ್ನಿಧಾನ ತಲುಪಲಿರುವ ಪವಿತ್ರ ಆಭರಣ ಶಬರಿಮಲೆ : ಶಬರಿಮಲೆ ವಾರ್ಷಿಕ ಯಾತ್ರೆಯ ಒಂದು ಪ್ರಮುಖ ಅಂಗವಾಗಿರುವ ತಂಗ ಅಂಗಿಯ ಮೆರವಣಿಗೆ ಇಂದು ಶುರುವಾಗಿದೆ. ಪತ್ತನತಿಟ್ಟಂ ಜಿಲ್ಲೆಯ ಆರಣ್ಮುಲದಲ್ಲಿ ಪಾರ್ಥಸಾರಥಿ ದೇಗುಲದಿಂದ ಸಕಲ ವಿಧಿವಿಧಾನಗಳೊಂದಿಗೆ ಅಯ್ಯಪ್ಪನ ಪವಿತ್ರ ಆಭರಣಗಳನ್ನು ಮಂಡಲ ಪೂಜೆಗಾಗಿ ಶಬರಿಮಲೆಗೆ ತರುವ ಯಾತ್ರೆ ಇದು.ತಂಗ ಅಂಗಿ ಅಥವಾ ಪವಿತ್ರ ಆಭರಣಗಳನ್ನು ಮಂಡಲ ಪೂಜೆ ಸಂದರ್ಭದಲ್ಲಿ ಅಯ್ಯಪ್ಪನಿಗೆ ತೊಡಿಸಿ ಅಲಂಕರಿಸಲಾಗುತ್ತದೆ. ಡಿ.25ರಂದು ಈ ಮೆರವಣಿಗೆ ಸನ್ನಿಧಾನ ತಲುಪಲಿದೆ. ಈ ಒಡವೆಗಳನ್ನು ತೊಡಿಸಿದ ಬಳಿಕ

ಶಬರಿಮಲೆ : ಅಯ್ಯಪ್ಪನ ಪವಿತ್ರ ತಂಗ ಅಂಗಿ ಮೆರವಣಿಗೆ ಆರಂಭ Read More »

ಡಾಗ್‌ ಫೈಟಿಂಗ್‌ ಮೇಲೆ ಬೆಟ್ಟಿಂಗ್‌!

ಫಾರ್ಮ್‌ ಹೌಸ್‌ನಲ್ಲಿ ನಡೆಯುತ್ತಿತ್ತು ನಾಯಿಗಳ ಕಾದಾಟದ ವಿಲಕ್ಷಣ ಪಂದ್ಯ ಜೈಪುರ: ಕೋಳಿಅಂಕ, ಕುದುರೆ ರೇಸ್‌ನಲ್ಲಿ ಬೆಟ್ಟಿಂಗ್‌ ನಡೆಯುವುದು ಗೊತ್ತು, ಆದರೆ ಇಲ್ಲಿ ನಾಯಿಗಳ ಕಾದಾಟದ ಮೇಲೆ ಬೆಟ್ಟಿಂಗ್‌ ಕಟ್ಟುವ ವಿಚಿತ್ರ ಪಂದ್ಯವೊಂದು ನಡೆಯುತ್ತಿದೆ. ರಾಜಸ್ಥಾನದ ಜೈಪುರ ಸಮೀಪ ಇಂಥದ್ದೊಂದು ವಿಲಕ್ಷಣ ಮತ್ತು ಕ್ರೂರ ಪಂಂದ್ಯ ನಡೆದು ಅದರ ಮೇಲೆ ಲಕ್ಷಗಟ್ಟಲೆ ಬೆಟ್ಟಿಂಗ್‌ ನಡೆಸಲಾಗುತ್ತಿತ್ತು. ಈ ಸಂಬಂಧ 80ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಜೈಪುರ ಹನುಮಾನ್‌ಗಢ ಎಂಬಲ್ಲಿ ಫಾರ್ಮ್‌ ಹೌಸ್‌ ಒಂದರಲ್ಲಿ ಡಾಗ್‌ ಫೈಟ್‌ ನಡೆಯುತ್ತಿತ್ತು ಎಂದು ಪೊಲೀಸರು

ಡಾಗ್‌ ಫೈಟಿಂಗ್‌ ಮೇಲೆ ಬೆಟ್ಟಿಂಗ್‌! Read More »

error: Content is protected !!
Scroll to Top