ದೇಶ

ಪೊಲೀಸ್‌ ಠಾಣೆಯಲ್ಲಿ ಭೀಕರ ಸ್ಫೋಟ : ಏಳು ಪೊಲೀಸರ ಸಾವು; 30 ಮಂದಿಗೆ ಗಾಯ

ಫರಿದಾಬಾದ್‌ನಿಂದ ವಶಪಡಿಸಿಕೊಂಡ ಸ್ಫೋಟಕ ವಸ್ತು ಸ್ಫೋಟಿಸಿ ಭೀಕರ ಅನಾಹುತ ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ತಡರಾತ್ರಿ ಭಾರಿ ಸ್ಫೋಟ ಸಂಭವಿಸಿದೆ. ಹರಿಯಾಣದ ಫರಿದಾಬಾದ್‌ನಲ್ಲಿ ವಶಪಡಿಸಿಕೊಂಡಿದ್ದ ಸ್ಫೋಟಕ ವಸ್ತು ಸ್ಫೋಟಿಸಿ 7 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ ಮತ್ತು 30 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಫೋಟದ ತೀವ್ರತೆಗೆ ಪೊಲೀಸ್ ಠಾಣೆಯಿಂದ ಭಾರಿ ಪ್ರಮಾಣದ ಹೊಗೆ ಮತ್ತು ಜ್ವಾಲೆಗಳು ಹೊರಬರುತ್ತಿರುವುದು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಲ್ಲಿ ಕಾಣಿಸಿವೆ. ಗಾಯಗೊಂಡ […]

ಪೊಲೀಸ್‌ ಠಾಣೆಯಲ್ಲಿ ಭೀಕರ ಸ್ಫೋಟ : ಏಳು ಪೊಲೀಸರ ಸಾವು; 30 ಮಂದಿಗೆ ಗಾಯ Read More »

ಕೆಂಪುಕೋಟೆ ಸ್ಫೋಟದ ಆರೋಪಿ ಡಾ.ಉಮರ್‌ನ ಮನೆ ಧ್ವಂಸ

ಬುಡೋಜರ್‌ ನುಗ್ಗಿಸಿ ಮನೆಯನ್ನು ಕೆಡವಿ ಹಾಕಿದ ಭದ್ರತಾ ಪಡೆಗಳು ಶ್ರೀನಗರ : ದೆಹಲಿಯ ಕೆಂಪುಕೋಟೆಯ ಬಳಿ ಕಳೆದ ಸೋಮವಾರ ಸಂಭವಿಸಿದ್ದ ಕಾರು ಬಾಂಬ್‌ ಸ್ಫೋಟದ ಪ್ರಮುಖ ಆರೋಪಿ ಡಾ.ಉಮರ್ ನಬಿ ಅಲಿಯಾಸ್‌ ಡಾ. ಮೊಹಮ್ಮದ್‌ ಉಮರ್‌ನ ಮನೆಯನ್ನು ಭದ್ರತಾ ಪಡೆ ಧ್ವಂಸಗೊಳಿಸಿದೆ. ಈ ಸ್ಫೋಟದಲ್ಲಿ ಅತ್ಮಾಹುತಿ ಬಾಂಬರ್‌ ಆಗಿದ್ದ ಡಾ. ಉಮರ್‌ ಸತ್ತಿರುವುದು ಡಿಎನ್‌ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ. ದೆಹಲಿ ಸ್ಫೋಟದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಉಗ್ರರ ಹಿಂದಿನ ರಹಸ್ಯ ಒಂದೊಂದಾಗಿಯೇ ಹೊರಬರುತ್ತಿದೆ. ಡಾ.ಉಮರ್ ನಬಿ ತಾಯಿಯ ಡಿಎನ್‌ಎ ಪರೀಕ್ಷೆ

ಕೆಂಪುಕೋಟೆ ಸ್ಫೋಟದ ಆರೋಪಿ ಡಾ.ಉಮರ್‌ನ ಮನೆ ಧ್ವಂಸ Read More »

ಬಿಹಾರ ಫಲಿತಾಂಶ: ಅಭೂತಪೂರ್ವ ಗೆಲುವಿನತ್ತ ಮುನ್ನುಗ್ಗುತ್ತಿರುವ ಎನ್‌ಡಿಎ; ಮಹಾಘಟಬಂಧನ್‌ ಮಹಾಪತನದತ್ತ

192 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ; ಕಾಂಗ್ರೆಸ್ಸಿನ ನಿರಾಶದಾಯಕ ಪ್ರದರ್ಶನ ಮುಂದುವರಿಕೆ ಪಾಟ್ನಾ : ಬಿಹಾರದಲ್ಲಿ ಚುನಾವಣೋತ್ತರ ಸಮೀಕ್ಷೆಗಳು ನಿಜವಾಗುತ್ತಿರುವಂತೆ ಕಾಣುತ್ತಿದೆ. ಎಲ್ಲ ಲೆಕ್ಕಾಚಾರಗಳನ್ನು ಮೀರಿ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ನಿಚ್ಚಳ ಬಹುಮತದತ್ತ ಮುನ್ನಗ್ಗುತ್ತಿದ್ದು, ನಿರಾಯಾಸವಾಗಿ ಅಧಿಕಾರವನ್ನು ಉಳಿಸುಕೊಳ್ಳುವತ್ತ ಹೆಜ್ಜೆಯನ್ನು ಹಾಕುತ್ತಿದೆ. ಇದುವರೆಗಿನ ಟ್ರೆಂಡ್ ಪ್ರಕಾರ ಎನ್‌ಡಿಎ ಮೈತ್ರಿಕೂಟ ಪ್ರಚಂಡ ಗೆಲುವಿನತ್ತ ಸಾಗುತ್ತಿದೆ. ಇನ್ನೊಂದು ಕಡೆ, ಮಹಾಘಟಬಂಧನ್, ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್ಸಿನ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಎನ್‌ಡಿ 192 ಕ್ಷೇತ್ರಗಳಲ್ಲಿ ಮುನ್ನಡೆ

ಬಿಹಾರ ಫಲಿತಾಂಶ: ಅಭೂತಪೂರ್ವ ಗೆಲುವಿನತ್ತ ಮುನ್ನುಗ್ಗುತ್ತಿರುವ ಎನ್‌ಡಿಎ; ಮಹಾಘಟಬಂಧನ್‌ ಮಹಾಪತನದತ್ತ Read More »

ಇಂದು ಬಿಹಾರ ಫಲಿತಾಂಶ : ರಾಷ್ಟ್ರವ್ಯಾಪಿ ಭಾರಿ ಕುತೂಹಲ

ಎನ್‌ಡಿಎ ಮತ್ತೆ ಗೆಲುವಿನ ಹಾರ ಧರಿಸುತ್ತಾ?; ಮಹಾಘಟಬಂಧನ್‌ ಅಧಿಕಾರದ ಕನಸು ನನಸಾಗುತ್ತಾ? ಪಾಟ್ನಾ: ಜಿದ್ದಾಜಿದ್ದಿನ ಹೋರಾಟ ಕಂಡ ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದ್ದು, ಇಡೀ ದೇಶ ಈ ಫಲಿತಾಂಶವನ್ನು ಕುತೂಹಲದಿಂದ ಎದುರು ನೋಡುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತು ಆರ್‌ಜೆಡಿ-ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧನ್‌ ಗ್ಯಾರಂಟಿಗಳ ಮಹಾಪೂರವನ್ನೇ ಹರಿಸಿ ಮತದಾರರ ಮನಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಿವೆ. ಚುನಾವಣೋತ್ತರ ಸಮೀಕ್ಷೆಗಳೆಲ್ಲ ಎನ್‌ಡಿಎ ಮೈತ್ರಿಕೂಟಕ್ಕೆ ಬಿಹಾರದ ಗೆಲುವಿನ ಹಾರ ಎಂದು ಭವಿಷ್ಯ ನುಡಿದಿದ್ದರೂ ಮಹಾಘಟಬಂಧನ್‌ ಕೂಡ

ಇಂದು ಬಿಹಾರ ಫಲಿತಾಂಶ : ರಾಷ್ಟ್ರವ್ಯಾಪಿ ಭಾರಿ ಕುತೂಹಲ Read More »

ನವದೆಹಲಿ ಬ್ಲಾಸ್ಟ್: ಉಗ್ರರ ಡೈರಿ ಪತ್ತೆ ಹಚ್ಚಿದ NIA ಅಧಿಕಾರಿಗಳು

ನವದೆಹಲಿ: ಕೆಂಪು ಕೋಟೆಯ ಸಮೀಪ ಸ್ಪೋಟ ನಡೆಸಿದ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ NIA ಅಧಿಕಾರಿಗಳು ಉಗ್ರರ ಡೈರಿಯನ್ನು ಪತ್ತೆ ಮಾಡಿದ್ದು, ಇದರಲ್ಲಿ ಮಹತ್ವದ ಹಲವಾರು ಅಂಶಗಳು, ಸ್ಪೋಟಕ ಮಾಹಿತಿಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಈ ಡೈರಿ ಉಗ್ರರಾದ ‌ಮುಜಾಮಿಲ್ ಮತ್ತು ಉಮರ್‌ಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಹಲವಾರು ಕೋಡ್‌ವರ್ಡ್‌ಗಳು, ಷಡ್ಯಂತ್ರಗಳು ಹೊರಬಿದ್ದಿವೆ ಎಂದು ಮಾಹಿತಿ ಇದೆ. ಡೈರಿಯಲ್ಲಿ ಹಲವು ಬಾರಿ ಆಪರೇಷನ್ ಪದವನ್ನು ಉಗ್ರರು ಬಳಕೆ ಮಾಡಿದ್ದು, ಉಕಾಸ (ಜೇಡ) ಎಂಬ ಹ್ಯಾಂಡ್ಲರ್ ಹೆಸರು ಕೂಡ ಡೈರಿಯಲ್ಲಿ ಪತ್ತೆಯಾಗಿದೆ.

ನವದೆಹಲಿ ಬ್ಲಾಸ್ಟ್: ಉಗ್ರರ ಡೈರಿ ಪತ್ತೆ ಹಚ್ಚಿದ NIA ಅಧಿಕಾರಿಗಳು Read More »

ಕೆಂಪುಕೋಟೆ ಸ್ಫೋಟಕ್ಕೆ ಇನ್ನೂ ಒಂದು ಕಾರು ಬಳಕೆ

ಮೂರನೇ ಕಾರನ್ನು ಹುಡುಕುತ್ತಿರುವ ಪೊಲೀಸರು ನವದೆಹಲಿ: ಕೆಂಪುಕೋಟೆ ಮೆಟ್ರೊ ನಿಲ್ದಾಣದ ಬಳಿ ಸೋಮವಾರ ಸಂಭವಿಸಿದ ಕಾರು ಸ್ಫೋಟಕ್ಕೆ ಇನ್ನೂ ಒಂದು ಕಾರು ಬಳಕೆಯಾಗಿರುವ ಕುರಿತು ತನಿಖಾಧೀಕಾರಿಗಳಿಗೆ ಮಾಹಿತಿ ಸಿಕ್ಕಿದ್ದು, ಈ ಮೂರನೇ ಕಾರನ್ನು ಹಲವು ಭದ್ರತಾ ಸಂಸ್ಥೆಗಳು ಹುಡುಕುತ್ತಿವೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ. ಸೋಮವಾರ ಸಂಜೆ ಕೆಂಪುಕೋಟೆ ಮೆಟ್ರೊ ನಿಲ್ದಾಣದ ಬಳಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹನ್ನೆರಡು ಜನರು ಸಾವಿಗೀಡಾಗಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ. ತನಿಖಾಧಿಕಾರಿಗಳು ಶಂಕಿತ

ಕೆಂಪುಕೋಟೆ ಸ್ಫೋಟಕ್ಕೆ ಇನ್ನೂ ಒಂದು ಕಾರು ಬಳಕೆ Read More »

ಕೆಂಪುಕೋಟೆ ಸ್ಫೋಟಕ್ಕೆ ಟರ್ಕಿ ಲಿಂಕ್‌

ಟರ್ಕಿಯ ವ್ಯಕ್ತಿ ಉಗ್ರರ ಹ್ಯಾಂಡ್ಲರ್‌ ನವದೆಹಲಿ: ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಬಾಂಬ್‌ ಸ್ಫೋಟಕ್ಕೆ ಟರ್ಕಿ ಜತೆ ಲಿಂಕ್‌ ಇರುವುದು ತನಿಖೆ ವೇಳೆ ಯಿಳಿದುಬಂದಿದೆ. ಬಂಧಿತ ಶಂಕಿತರು ಟರ್ಕಿಯ ರಾಜಧಾನಿ ಅಂಕಾರಾದಿಂದ ಕಾರ್ಯನಿರ್ವಹಿಸುತ್ತಿದ್ದ ಓರ್ವ ಹ್ಯಾಂಡ್ಲರ್‌ ಜೊತೆ ಸಂಪರ್ಕದಲ್ಲಿದ್ದರು ಎನ್ನುವುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. Ukasa ಎಂಬ ಕೋಡ್‌ವರ್ಡ್‌ನಿಂದ ಗುರುತಿಸಲ್ಪಟ್ಟ ಹ್ಯಾಂಡ್ಲರ್ ಜೊತೆ ಎನ್‌ಕ್ರಿಪ್ಟ್ ಮಾಡಿದ ಸಂದೇಶ ವೇದಿಕೆಯಾದ Session ಅಪ್ಲಿಕೇಶನ್ ಬಳಸಿ ಉಗ್ರರು ಸಂಪರ್ಕ ನಡೆಸುತ್ತಿದ್ದರು. Ukasa ಎಂದರೆ ಅರೇಬಿಕ್ ಭಾಷೆಯಲ್ಲಿ ʼಜೇಡʼ ಎಂದು ಅರ್ಥ. ವ್ಯಕ್ತಿಯ

ಕೆಂಪುಕೋಟೆ ಸ್ಫೋಟಕ್ಕೆ ಟರ್ಕಿ ಲಿಂಕ್‌ Read More »

ಕಾರು ಬಾಂಬ್‌ ಸ್ಫೋಟಿಸಿದ್ದು ಡಾ.ಉಮರ್‌ : ಡಿಎನ್‌ಎ ಪರೀಕ್ಷೆಯಲ್ಲಿ ದೃಢ

ಕಾರು ಚಲಾಯಿಸಿದ ವ್ಯಕ್ತಿಯ ಡಿಎನ್‌ಎ ಕುಟುಂಬವರೊಂದಿಗೆ ಮ್ಯಾಚ್‌ ನವದೆಹಲಿ: ಕೆಂಪುಕೋಟೆ ಬಳಿ ಕಾರ್ ಬಾಂಬ್‌ ಸ್ಫೋಟ ಮಾಡಿದ್ದು ಡಾ. ಉಮರ್ ನಬಿ ಎನ್ನುವುದು ಡಿಎನ್‌ಎ ಪರೀಕ್ಷೆಯಲ್ಲಿ ದೃಢಡಪಟ್ಟಿದೆ. ಐ20 ಕಾರನ್ನು ಚಲಾಯಿಸಿದ ವ್ಯಕ್ತಿ ಡಾ.ಉಮರ್‌ ಎಂದು ತನಿಖಾಧಿಕಾರಿಗಳು ಶಂಕಿಸಿದ್ದರು. ಹೀಗಿದ್ದರೂ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡುವಾಗ ಮೃತ ವ್ಯಕ್ತಿ ಉಮರ್‌ ಎನ್ನುವುದಕ್ಕೆ ವೈಜ್ಞಾನಿಕ ದಾಖಲೆಯ ಅಗತ್ಯ ಇತ್ತು. ಈ ಕಾರಣಕ್ಕೆ ಪುಲ್ವಾಮಾದಲ್ಲಿರುವ ಉಮರ್‌ ಕುಟುಂಬಸ್ಥರ ಡಿಎನ್‌ಎ ಸಂಗ್ರಹಿಸಲಾಗಿತ್ತು. ಸ್ಫೋಟದ ನಂತರ ಡಾ.ಉಮರ್‌ ಕಾಲು ಸ್ಟಿಯರಿಂಗ್ ವೀಲ್ ಮತ್ತು ಆಕ್ಸಿಲರೇಟರ್

ಕಾರು ಬಾಂಬ್‌ ಸ್ಫೋಟಿಸಿದ್ದು ಡಾ.ಉಮರ್‌ : ಡಿಎನ್‌ಎ ಪರೀಕ್ಷೆಯಲ್ಲಿ ದೃಢ Read More »

ಗಣರಾಜ್ಯೋತ್ಸವ ಉಗ್ರರ ಟಾರ್ಗೆಟ್‌

ಜ.26ರಂದು ದಿಲ್ಲಿಯಲ್ಲಿ ಭಾರಿ ವಿಧ್ವಂಸಕ ಕೃತ್ಯ ಎಸಗಲು ಸಂಚು ಮಾಡಿದ್ದರು ಉಗ್ರರು ನವದೆಹಲಿ : ಜನವರಿ 26ರಂದು ಗಣರಾಜ್ಯೋತ್ಸವದ ದಿನ ಕೆಂಪುಕೋಟೆ ಸೇರಿದಂತೆ ದೆಹಲಿಯಲ್ಲಿ ಬೃಹತ್‌ ಮಟ್ಟದ ಸ್ಫೋಟ ನಡೆಸುವುದು ಉಗ್ರರ ಸಂಚಾಗಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಕೆಂಪುಕೋಟೆ ಸಮೀಪ ನವೆಂಬರ್ 10ರಂದು ಕಾರಿನಲ್ಲಿದ್ದ್‌ ಬಾಂಬ್‌ ಸ್ಫೋಟ ಗೊಂಡು 10ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎನ್​ಐಎ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಇಬ್ಬರು ಶಂಕಿತರ ವಿಚಾರಣೆ ನಡೆಸುವಾಗ ಹಲವು ವಿಚಾರಗಳು ಬಹಿರಂಗಗೊಂಡಿವೆ. ದೆಹಲಿ ಸ್ಫೋಟ ಪ್ರಕರಣದಲ್ಲಿ

ಗಣರಾಜ್ಯೋತ್ಸವ ಉಗ್ರರ ಟಾರ್ಗೆಟ್‌ Read More »

ಟೆರರ್‌ ಡಾಕ್ಟರ್‌ ಡಾ.ಶಾಹೀನ್‌ ಕೃತ್ಯದಿಂದ ತಂದೆಗೆ ಆಘಾತ

2900 ಕೆಜಿ ಸ್ಫೋಟಕ ಪ್ರಕರಣದಲ್ಲಿ ಸೆರೆಯಾಗಿರುವ ಡಾ.ಶಾಹೀನ್‌ ನವದೆಹಲಿ: ಸ್ಫೋಟಕ ಸಾಗಣೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ಲಖನೌ ಮೂಲದ ವೈದ್ಯೆ ಡಾ. ಶಾಹೀನ್‌ಳ ಕೃತ್ಯ ತಂದೆ ಸೈಯದ್‌ ಅಹ್ಮದ್‌ ಅನ್ಸಾರಿಗೆ ಆಘಾತವುಂಟುಮಾಡಿದೆ. ಸೈಯದ್‌ ಅಹ್ಮದ್‌ ಅನ್ಸಾರಿಗೆ 3 ಮಕ್ಕಳು. ಶೊಯೇಬ್, ಶಾಹೀನ್ ಮತ್ತು ಪರ್ವೇಜ್. ಹಿರಿಯ ಪುತ್ರ ಶೊಯೇಬ್ ಜೊತೆ ಈಗ ವಾಸವಾಗಿದ್ದಾರೆ. ಎರಡನೆಯವಳು ಶಾಹೀನ್. ಮೂರನೇಯವನು ಪರ್ವೇಜ್ ಅನ್ಸಾರಿ. ಶಾಹೀನ್‌ಗೆ ಮಹಾರಾಷ್ಟ್ರದ ವ್ಯಕ್ತಿಯ ಜೊತೆ ಮದುವೆಯಾಗಿತ್ತು. ಆಕೆ ಫರೀದಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಳು. ನನ್ನ ಮಗಳು ಇಂತಹ

ಟೆರರ್‌ ಡಾಕ್ಟರ್‌ ಡಾ.ಶಾಹೀನ್‌ ಕೃತ್ಯದಿಂದ ತಂದೆಗೆ ಆಘಾತ Read More »

error: Content is protected !!
Scroll to Top