ದೇಶ

ಹರ್ಯಾಣ, ಜಮ್ಮು-ಕಾಶ್ಮೀರ ಮತ ಎಣಿಕೆ ಇಂದು

ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿ ಕಾಂಗ್ರೆಸ್‌ ಮೈತ್ರಿಕೂಟ ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಹರ್ಯಾಣ ವಿಧಾನಸಭೆ ಚುನಾವಣಾ ಫಲಿತಾಂಶ ಈಂದು ಪ್ರಕಟವಾಗಲಿದೆ. ಮತ ಎಣಿಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಬೆಳಗ್ಗೆ 8 ಗಂಟೆಗೆ ಎಣಿಕೆ ಪ್ರಕ್ರಿಯೆ ಶುರುವಾಗಿದೆ. ಮಂಗಳವಾರ (ಅ.8) ಹೊರಬೀಳಲಿದೆ.ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ಬಳಿಕ ನಡೆದ ಮೊದಲ ವಿಧಾನಸಭಾ ಚುನಾವಣೆಯಾಗಿರುವುದರಿಂದ ಫಲಿತಾಂಶದ ಕುರಿತು ದೇಶಾದ್ಯಂತ ಭಾರಿ ಕುತೂಹಲವಿದೆ. ಬಿಜೆಪಿನಾ, ಎನ್‌ಸಿ-ಕಾಂಗ್ರೆಸ್ ಮೈತ್ರಿಕೂಟನಾ, ಪಿಡಿಪಿಇಲ್ಲಿನ ಕಣದಲ್ಲಿರುವ ಪ್ರಮುಖ ಪಕ್ಷಗಳು.ಜಮ್ಮು- ಕಾಶ್ಮೀರದ 28 ಮತ ಎಣಿಕೆ ಕೇಂದ್ರಗಳಿಗೆ ಅತ್ಯಂತ ಬಿಗು […]

ಹರ್ಯಾಣ, ಜಮ್ಮು-ಕಾಶ್ಮೀರ ಮತ ಎಣಿಕೆ ಇಂದು Read More »

ಕಚೇರಿಗೆ ಅಧಿಕಾರಿಗಳ ಅಕ್ರಮ ಪ್ರವೇಶ : ಮಲ್ಲಿಕಾರ್ಜುನ ಖರ್ಗೆ ಆರೋಪ

ಪೂರ್ವ ಮಾಹಿತಿ ನೀಡದೆ ಅಧಿಕಾರಿಗಳು ಕಚೇರಿಗೆ ಬಂದು ಹೋಗುತ್ತಿದ್ದಾರೆ ಎಂದು ದೂರು ಹೊಸದಿಲ್ಲಿ: ಕೇಂದ್ರ ಲೋಕೋಪಯೋಗಿ ಇಲಾಖೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮತ್ತು ಟಾಟಾ ಪ್ರಾಜೆಕ್ಟ್‌ಗಳ ಅಧಿಕಾರಿಗಳು ತನಗೆ ಮಾಹಿತಿ ನೀಡದೆ ಸಂಸತ್ತಿನ ಕೊಠಡಿಗೆ ಪ್ರವೇಶಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್‌ಕರ್ ಅವರಿಗೆ ಪತ್ರ ಬರೆದಿದ್ದಾರೆ.ಸೆಪ್ಟೆಂಬರ್ 28 ರಂದು ಸಂಸತ್ ಭವನದಲ್ಲಿ ನನ್ನ ಚೇಂಬರ್ ಕೊಠಡಿ ಸಂಖ್ಯೆ ಜಿ-19ನ್ನು CPWD, CISF ಮತ್ತು ಟಾಟಾ ಪ್ರಾಜೆಕ್ಟ್‌ಗಳ ಅಧಿಕಾರಿಗಳು

ಕಚೇರಿಗೆ ಅಧಿಕಾರಿಗಳ ಅಕ್ರಮ ಪ್ರವೇಶ : ಮಲ್ಲಿಕಾರ್ಜುನ ಖರ್ಗೆ ಆರೋಪ Read More »

36 ನಕ್ಸಲರು ಎನ್‌ಕೌಂಟರ್‌ಗೆ ಬಲಿ

ರಾಯ್‌ಪುರ: ಛತ್ತೀಸ್‌ಗಢದ ನಾರಾಯಣಪುರ ಮತ್ತು ದಾಂತೇವಾಡ ಪೊಲೀಸ್ ಪಡೆಗಳು ಶುಕ್ರವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 36 ನಕ್ಸಲರು ಬಲಿಯಾಗಿದ್ದಾರೆ. ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ಅಬುಜ್‌ಮದ್ ಪ್ರದೇಶದ ದಟ್ಟ ಅರಣ್ಯದಲ್ಲಿ ಭಾರಿ ಎನ್‌ಕೌಂಟರ್‌ ನಡೆದಿದ್ದು, ಕನಿಷ್ಠ 36 ನಕ್ಸಲರನ್ನು ಸಾಯಿಸಲಾಗಿದೆ. ಅಲ್ಲಿ ಇನ್ನೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.ನಾರಾಯಣಪುರ-ದಾಂತೇವಾಡ ಅಂತರ್‌ಜಿಲ್ಲಾ ಗಡಿಯಲ್ಲಿರುವ ಅಬುಜ್‌ಮದ್ ಅರಣ್ಯದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ನಡೆಯಿತು ಎಂದು

36 ನಕ್ಸಲರು ಎನ್‌ಕೌಂಟರ್‌ಗೆ ಬಲಿ Read More »

ಹರ್ಯಾಣದಲ್ಲಿ ಇಂದು ಮತದಾನ

ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ ಹೋರಾಟದ ಕಣ ಚಂಡೀಗಢ: 90 ಸದಸ್ಯ ಬಲದ ಹರ್ಯಾಣ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಶನಿವಾರ ಬೆಳಗ್ಗಿನಿಂದ ಆರಂಭವಾಗಿದ್ದು, ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಕಾಂಗ್ರೆಸ್‌ನ ಭೂಪಿಂದರ್ ಸಿಂಗ್ ಹೂಡಾ ಮತ್ತು ಕುಸ್ತಿಪಟು ವಿನೇಶ್ ಫೋಗಟ್, ಬಿಜೆಪಿಯ ದುಶ್ಯಂತ್ ಚೌಟಾಲಾ ಸೇರಿ 1031 ಮಂದಿ ಅಭ್ಯರ್ಥಿಗ ಭವಿಷ್ಯ ನಿರ್ಧಾರವಾಗಲಿದೆ.ಆಡಳಿತಾರೂಢ ಬಿಜೆಪಿ ರಾಜ್ಯದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದು, ದಶಕದ ನಂತರ ಕಾಂಗ್ರೆಸ್ ಪುನರಾಗಮನದ ತವಕಲ್ಲಿದೆ. ಅ.8ರಂದು ಮತ ಎಣಿಕೆ ನಡೆಯಲಿದೆ.8,821 ಶತಾಯುಷಿಗಳು ಸೇರಿ 2,03,54,350 ಮತದಾರರಿದ್ದಾರೆ.

ಹರ್ಯಾಣದಲ್ಲಿ ಇಂದು ಮತದಾನ Read More »

ತಿರುಪತಿ ಲಡ್ಡು ವಿವಾದ : ಹೊಸ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ

ಸಿಬಿಐ, ಪೊಲೀಸ್‌, ಎಫ್‌ಎಸ್‌ಎಸ್‌ಎಐ ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ರಚನೆ ಹೊಸದಿಲ್ಲಿ : ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಮತ್ತು ಮೀನಿನ ಕೊಬ್ಬಿನಂಶ ಸೇರಿಸಿರುವ ವಿವಾದದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ ವಿಶ್ವನಾಥನ್ ಅವರ ಪೀಠ ಈ ಪ್ರಕರಣದ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ಆದೇಶಿಸಿ ಸಿಬಿಐ, ರಾಜ್ಯ ಪೊಲೀಸ್ ಮತ್ತು ಎಫ್‌ಎಸ್‌ಎಸ್‌ಎಐ ಅಧಿಕಾರಿಗಳನ್ನು ಒಳಗೊಂಡಿರುವ ಹೊಸ ಐದು-ಸದಸ್ಯರ ಸ್ವತಂತ್ರ ಎಸ್‌ಐಟಿಯನ್ನು ರಚಿಸಲು ಸೂಚಿಸಿದೆ.ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

ತಿರುಪತಿ ಲಡ್ಡು ವಿವಾದ : ಹೊಸ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ Read More »

ಮಂಗಳೂರಿನಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಳ : ಹಸಿರು ಪೀಠದಿಂದ ನೋಟಿಸ್‌

ಕರ್ನಾಟಕದ ಮೂರು ನಗರಗಳು ಅಪಾಯಕಾರಿ ಎಂದು ಗುರುತಿಸಿದ ಗ್ರೀನ್‌ಪೀಸ್‌ ವರದಿ ಮಂಗಳೂರು: ಅತಿಹೆಚ್ಚು ಮಾಲಿನ್ಯವಿರುವ ನಗರಗಳಲ್ಲಿ ಮಂಗಳೂರು ಕೂಡ ಸೇರಿದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.ದಕ್ಷಿಣ ಭಾರತದ ಇತರ ನಗರಗಳಿಗೆ ಹೋಲಿಸಿದರೆ ಕರ್ನಾಟಕದ ಮಹಾನಗರಗಳಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ ಎಂಬ ಗ್ರೀನ್‌ಪೀಸ್ ಸಂಸ್ಥೆ ವರದಿ ಅಧರಿಸಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಪ್ರಧಾನ ಪೀಠ ನೋಟಿಸ್‌ ನೀಡಿದೆ. ಬೆಂಗಳೂರು, ಮೈಸೂರು ಮತ್ತು ಮಂಗಳೂರು ಕರ್ನಾಟಕದಲ್ಲಿ ಅತಿ ಹೆಚ್ಚು ಮಾಲಿನ್ಯವಿರುವ ನಗರಗಳು ಎಂದು ಗುರುತಿಸಲಾಗಿದೆ.

ಮಂಗಳೂರಿನಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಳ : ಹಸಿರು ಪೀಠದಿಂದ ನೋಟಿಸ್‌ Read More »

ವಿದೇಶಿ ನೆರವಿನೊಂದಿಗೆ ನಡೆಯುತ್ತಿದೆ ಲವ್‌ ಜಿಹಾದ್‌ : ನ್ಯಾಯಾಲಯವೇ ಹೇಳಿದ ಸತ್ಯ

ದೇಶದ ಜನಸಂಖ್ಯೆಯ ಸ್ವರೂಪ ಬದಲಾಯಿಸುವ ಷಡ್ಯಂತ್ರ ಎಂದ ನ್ಯಾಯಾಧೀಶರು ಲಖನೌ: ಭಾರತದಲ್ಲಿ ಲವ್‌ ಜಿಹಾದ್‌ ನಡೆಯುತ್ತಿದೆ ಮತ್ತು ಇದಕ್ಕೆ ವಿದೇಶಗಳಿಂದ ಹಣಕಾಸಿನ ನೆರವು ಸಿಗುತ್ತಿದೆ ಎಂದು ನ್ಯಾಯಾಲಯವೇ ಹೇಳಿದೆ. ಉತ್ತರ ಪ್ರದೇಶದ ಬರೇಲಿಯ ನ್ಯಾಯಾಲಯ ಬಲವಂತದ ಮದುವೆ ಮತ್ತು ಮತಾಂತರದ ಪ್ರಕರಣವೊಂದರ ತೀರ್ಪು ನೀಡುವಾಗ ಭಾರತದಲ್ಲಿ ಲವ್‌ ಜಿಹಾದ್‌ ನಡೆಯುತ್ತಿರುವುದು ನಿಜ ಮತ್ತು ದೇಶದ ಜನಸಂಖ್ಯೆಯ ಸ್ವರೂಪವನ್ನು ಬದಲಾಯಿಸುವ ಉದ್ದೇಶ ಇದರ ಹಿಂದೆ ಇರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿಬೇಕೆಂದು ಹೇಳಿ ಪ್ರಕರಣದ ಆರೋಪಿಗೆ ಆಜೀವ ಕಾರಾಗೃಹ ವಾಸದ

ವಿದೇಶಿ ನೆರವಿನೊಂದಿಗೆ ನಡೆಯುತ್ತಿದೆ ಲವ್‌ ಜಿಹಾದ್‌ : ನ್ಯಾಯಾಲಯವೇ ಹೇಳಿದ ಸತ್ಯ Read More »

ಪುತ್ತೂರು: ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯಲ್ಲಿ ಸಾಕಾರಗೊಂಡ ವಂದೇ ಭಾರತ್ ರೈಲು | ರೈಲು ಸೇವೆ ಆಧುನೀಕರಣದಲ್ಲಿ ಭಾರತದ ದಾಪುಗಾಲಿನ ಓಟ : ಸುಕೇಶ್ ಎನ್‌. ರಾವ್ ಬೈಲೂರು

ಭಾರತದ ಅಭಿವೃದ್ಧಿಯಲ್ಲಿ ಭಾರತೀಯ ರೈಲ್ವೆಯ ಸೇವೆ ಸದಾ ಮಂಚೂಣಿಯಲ್ಲಿ ಇದೆ. ಆದರೆ ಭಾರತದ ರೈಲ್ವೆಯಲ್ಲಿ ಬಹಳ ವರ್ಷಗಳಿಂದ ಹಳೆ ಮಾದರಿಯ ರೈಲುಗಳ ಓಡಾಟ, ನಿಧಾನಗತಿಯಲ್ಲಿ ಸಾಗುತ್ತಿದ್ದ  ಸುಧಾರಣೆಗಳು, ಅಭಿವೃದ್ಧಿ ಯೋಜನೆಗಳಿಂದ  ಜನರು ಬೇಸತ್ತು ಇನ್ನೂ ಹೆಚ್ಚಿನ ಸುಧಾರಣೆಯ ಅಗತ್ಯ, ಅಭಿವೃದ್ಧಿ ಆಗಬೇಕು, ಅಂತಾರಾಷ್ಟ್ರೀಯ ದರ್ಜೆಯ ರೈಲುಗಳು ನಮ್ಮಲ್ಲೂ ಬರಬೇಕು, ಜನಸಾಮನ್ಯರಿಗೆ ಉತ್ತಮ ಸೇವೆ ಸಿಗಬೇಕು, ನಿಲ್ದಾಣಗಳ ಗುಣಮಟ್ಟ, ಸುರಕ್ಷತೆ, ವಿನ್ಯಾಸ, ಎಲ್ಲವೂ ಚೆನ್ನಾಗಿರಬೇಕು ಎಂಬುದು ಹಲವಾರು ವರ್ಷಗಳಿಂದ ನಾವೆಲ್ಲರೂ ಬಯಸುತ್ತಿದ್ದೆವು. ಅದೀಗ ಸಾಕಾರಗೊಳ್ಳುತ್ತಿದೆ. ಭಾರತದಲ್ಲಿ ರೈಲ್ವೆ ಇಲಾಖೆಯಲ್ಲಿ

ಪುತ್ತೂರು: ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯಲ್ಲಿ ಸಾಕಾರಗೊಂಡ ವಂದೇ ಭಾರತ್ ರೈಲು | ರೈಲು ಸೇವೆ ಆಧುನೀಕರಣದಲ್ಲಿ ಭಾರತದ ದಾಪುಗಾಲಿನ ಓಟ : ಸುಕೇಶ್ ಎನ್‌. ರಾವ್ ಬೈಲೂರು Read More »

ಇರಾನ್‌-ಇಸ್ರೇಲ್‌ ಸಮರ: ಬೆಂಗಳೂರಿಗೆ ಬರುತ್ತಿದ್ದ ವಿಮಾನ ಇಸ್ತಾಂಬುಲ್‌ನಲ್ಲಿ ಬಾಕಿ

ವಾಯುಮಾರ್ಗ ಮುಚ್ಚಿದ ಕಾರಣ ವಿಮಾನದಲ್ಲೇ ಉಳಿದ 300 ಪ್ರಯಾಣಿಕರು ಇಸ್ತಾಂಬುಲ್‌ : ಇಸ್ರೇಲ್ ಮೇಲೆ ಇರಾನ್‌ ಕ್ಷಿಪಣಿ ಮಳೆಗರೆದು ದಾಳಿ ನಡೆಸಿದ ಪರಿಣಾಮವಾಗಿ ಬೆಂಗಳೂರಿಗೆ ಬರುತ್ತಿದ್ದ ಸುಮಾರು 300 ಪ್ರಯಾಣಿಕರು ವಿಮಾನದಲ್ಲೇ ಬಾಕಿಯಾಗಿದ್ದಾರೆ. ಸ್ವಿಜರ್‌ಲ್ಯಾಂಡ್‌ನ ರಾಜಧಾನಿ ಜ್ಯೂರಿಕ್‌ನಿಂದ ದುಬೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಕನ್ನಡಿಗರು ಸೇರಿ 300 ಮಂದಿ ಪ್ರಯಾಣಿಕರು ಬರುತ್ತಿದ್ದರು. ಈ ವೇಳೆ ಇಸ್ರೇಲ್‌ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ.ಕ್ಷಿಪಣಿ ದಾಳಿಯ ಬೆನ್ನಲ್ಲೇ ಬೆಂಗಳೂರಿಗೆ ಬರುತ್ತಿದ್ದ ವಿಮಾನವನ್ನು ಟರ್ಕಿಯ ಇಸ್ತಾಂಬುಲ್‌ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌

ಇರಾನ್‌-ಇಸ್ರೇಲ್‌ ಸಮರ: ಬೆಂಗಳೂರಿಗೆ ಬರುತ್ತಿದ್ದ ವಿಮಾನ ಇಸ್ತಾಂಬುಲ್‌ನಲ್ಲಿ ಬಾಕಿ Read More »

56 ವರ್ಷದ ಹಿಂದೆ ಪತನಗೊಂಡಿದ್ದ ವಿಮಾನದಲ್ಲಿದ್ದವರ ನಾಲ್ಕು ಶವ ಪತ್ತೆ

ರೋಹತಂಗ್‌ ಪಾಸ್‌ ದುರ್ಗಮ ಬೆಟ್ಟದಲ್ಲಿ ಪತನಗೊಂಡಿದ್ದ ವಾಯುಪಡೆ ವಿಮಾನ ಹೊಸದಿಲ್ಲಿ : ಹಿಮಾಚಲ ಪ್ರದೇಶದ ರೋಹತಂಗ್‌ ಪಾಸ್‌ನ ದುರ್ಗಮ ಬೆಟ್ಟದಲ್ಲಿ 56 ವರ್ಷದ ಹಿಂದೆ ಪತನಗೊಂಡಿದ್ದ ವಾಯುಪಡೆ ವಿಮಾನದಲ್ಲಿದ್ದ ನಾಲ್ವರ ಮೃತದೇಹಗಳು ನಿನ್ನೆ ಪರ್ವತಾರೋಹಿಗಳ ತಂಡವೊಂದಕ್ಕೆ ಸಿಕ್ಕಿದೆ.1968 ಫೆಬ್ರವರಿ 7ರಂದು 102 ಪ್ರಯಾಣಿಕರಿದ್ದ ಎಎನ್‌-12 ಎಂಬ ವಾಯುಪಡೆಯ ವಿಮಾನ ಚಂಡೀಗಢದಿಂದ ಪ್ರಯಾಣ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಹಿಮಾಚಲ ಪ್ರದೇಶದ ರೋಹತಂಗ್‌ ಪಾಸ್‌ ಸಮೀಪ ದುರ್ಗಮ ಬೆಟ್ಟದಲ್ಲಿ ಪತನಗೊಂಡಿತ್ತು. ವಿಮಾನದ ಅವಶೇಷ ಮತ್ತು ಅದರಲ್ಲಿದ್ದ ಪ್ರಯಾಣಿಕರು ಹಿಮರಾಶಿಯೊಳಗೆ ಸಮಾಧಿಯಾಗಿದ್ದರು.

56 ವರ್ಷದ ಹಿಂದೆ ಪತನಗೊಂಡಿದ್ದ ವಿಮಾನದಲ್ಲಿದ್ದವರ ನಾಲ್ಕು ಶವ ಪತ್ತೆ Read More »

error: Content is protected !!
Scroll to Top