ವಿದೇಶ

ರಷ್ಯಾ ಅಧ್ಯಕ್ಷ ಪುಟಿನ್‌ ಕಾರು ಸ್ಫೋಟ : ಜಗತ್ತಿನಾದ್ಯಂತ ಕಳವಳ

ನಡುರಸ್ತೆಯಲ್ಲಿ ಸ್ಫೊಟಿಸಿತು ಜಗತ್ತಿನ ಅತಿ ಬಲಿಷ್ಠ ನಾಯಕನ ಕಾರು ಮಾಸ್ಕೊ: ಜಗತ್ತಿನ ಅತಿ ಬಲಿಷ್ಠ ನಾಯಕರಲ್ಲಿ ಒಬ್ಬರಾಗಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಬಳಸುವ ಗರಿಷೃ ಸುರಕ್ಷತಾ ವ್ಯವಸ್ಥೆಯುಳ್ಳ ಲಿಮೋಸಿನ್‌ ಕಾರು ರಾಜಧಾನಿ ಮಾಸ್ಕೊದ ರಸ್ತೆಯಲ್ಲೇ ಸ್ಫೋಟಗೊಂಡಿದೆ. ಕೆಲವೇ ದಿನಗಳಲ್ಲಿ ಪುಟಿನ್‌ ಸಾವನ್ನಪ್ಪುತ್ತಾರೆ ಎಂದು ಇತ್ತೀಚೆಗಷ್ಟೇ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದರು. ಹೀಗಾಗಿ ಪುಟಿನ್‌ ಹತ್ಯಾ ಯತ್ನ ನಡೆದಿದೆಯೇ ಎಂಬ ಅನುಮಾನ ಉಂಟಾಗಿದೆ.ಮಾಸ್ಕೊ ನಗರದ ಫೈನಾನ್ಶಿಯಲ್‌ ಸ್ಟೆಬಿಲಿಟಿ ಬೋರ್ಡ್‌ ರಹಸ್ಯ ಸೇವಾ ಪ್ರಧಾನ ಕಚೇರಿಯ ಬಳಿ 2,75,000 […]

ರಷ್ಯಾ ಅಧ್ಯಕ್ಷ ಪುಟಿನ್‌ ಕಾರು ಸ್ಫೋಟ : ಜಗತ್ತಿನಾದ್ಯಂತ ಕಳವಳ Read More »

ಮ್ಯಾನ್ಮಾರ್‌ ಭೂಕಂಪ : ನಿರಂತರವಾಗಿ ಏರುತ್ತಿರುವ ಸಾವಿನ ಸಂಖ್ಯೆ

1,600ಕ್ಕೂ ಹೆಚ್ಚು ಮಂದಿ ಬಲಿ, 3,400 ಮಂದಿಗೆ ಗಾಯ ನೇಪಿಟಾವ್: ಮ್ಯಾನ್ಮಾರ್‌ ಮತ್ತು ನೆರೆಯ ಥೈಲ್ಯಾಂಡ್‌ನಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪದಲ್ಲಿ ಸಾವಿನ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. ಎರಡು ದಿನ ಕಳೆದರೂ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹಲವು ಮಂದಿ ಅವಶೇಷಗಳ ಅಡಿಯಿಂದ ಪವಾಡಸದೃಶವಾಗಿ ಬದುಕುಳಿದು ಹೊರಬಂದಿದ್ದಾರೆ. ಶುಕ್ರವಾರ ಬೆಳಗ್ಗೆ 11.50ರ ವೇಳೆಗೆ ಸಂಭವಿಸಿದ ಭೂಕಂಪ ಶನಿವಾರದ ಹೊತ್ತಿಗೆ ಸುಮಾರು 1600ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. 3,400 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಶುಕ್ರವಾರ ಮ್ಯಾನ್ಮಾರ್‌ನಲ್ಲಿ

ಮ್ಯಾನ್ಮಾರ್‌ ಭೂಕಂಪ : ನಿರಂತರವಾಗಿ ಏರುತ್ತಿರುವ ಸಾವಿನ ಸಂಖ್ಯೆ Read More »

ಮ್ಯಾನ್ಮಾರ್‌ನಲ್ಲಿ ತಡರಾತ್ರಿ ಮತ್ತೆ ಭೂಕಂಪ : ಸಾವಿನ ಸಂಖ್ಯೆ 700ಕ್ಕೇರಿಕೆ

10 ಸಾವಿರ ಜನ ಬಲಿಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ ಅಮೆರಿಕ ಮ್ಯಾನ್ಮಾರ್‌ : ನಿನ್ನೆ ಭೀಕರ ಭೂಕಂಪ ಸಂಭವಿಸಿ ಅಪಾರ ಪ್ರಮಾಣದಲ್ಲಿ ನಾಶನಷ್ಟ ಉಂಟಾಗಿದ್ದ ಮ್ಯಾನ್ಮಾರ್‌ನಲ್ಲಿ ತಡರಾತ್ರಿ ಮತ್ತೊಮ್ಮೆ ಭೂಮಿ ಕಂಪಿಸಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರೊಂದಿಗೆ ಶುಕ್ರವಾರ ಒಂದೇ ದಿನ ಮೂರು ಬಾರಿ ಭೂಕಂಪ ಸಂಭವಿಸಿದಂತಾಗಿದೆ. ಭೂಕಂಪನದ ತೀವ್ರತೆ 900 ಕಿ.ಮೀ. ದೂರವಿರುವ ಥ್ಯಾಯ್ಲೆಂಡ್‌ನ ಬ್ಯಾಂಕಾಂಕ್ ಮತ್ತು ಬಾಂಗ್ಲಾದೇಶದವರೆಗೂ ವ್ಯಾಪಿಸಿದೆ. ಭೂಕಂಪನದ ಕೇಂದ್ರ ಬಿಂದು ಇದ್ದ ಮ್ಯಾನ್ಮಾರ್‌ನಲ್ಲಿ ಭಾರಿ ಹಾನಿಯಾಗಿದ್ದು, ಈವರೆಗೆ 700ಕ್ಕೂ ಹೆಚ್ಚು

ಮ್ಯಾನ್ಮಾರ್‌ನಲ್ಲಿ ತಡರಾತ್ರಿ ಮತ್ತೆ ಭೂಕಂಪ : ಸಾವಿನ ಸಂಖ್ಯೆ 700ಕ್ಕೇರಿಕೆ Read More »

ಮ್ಯಾನ್ಮಾರ್‌ ಭೂಕಂಪ : ಸಾವಿನ ಸಂಖ್ಯೆ 144ಕ್ಕೇರಿಕೆ; 730 ಮಂದಿಗೆ ಗಾಯ

900 ಕಿ.ಮೀ. ದೂರದಲ್ಲಿರುವ ಕಟ್ಟಡ ಕುಸಿತ ಮ್ಯಾನ್ಮಾರ್‌ : ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ನಂತರ ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ಮುಖ್ಯಸ್ಥರು 144 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 730 ಜನರು ಗಾಯಗೊಂಡಿದ್ದಾರೆ ಎಂದು ಖಚಿತಪಡಿಸಿದ್ದಾರೆ. ತೀವ್ರ ಹಾನಿಗೊಳಗಾದ 2 ನಗರಗಳ ಫೋಟೊಗಳು ಮತ್ತು ವೀಡಿಯೊಗಳು ವ್ಯಾಪಕ ಹಾನಿಯನ್ನು ತೋರಿಸಿವೆ. ನೆರೆಯ ಥೈಲ್ಯಾಂಡ್‌ನಲ್ಲೂ ಭೂಕಂಪನದ ಅನುಭವವಾಗಿದ್ದು, ಥೈಲ್ಯಾಂಡ್ ರಾಜಧಾನಿಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲಿ ನಿರ್ಮಾಣ ಹಂತದಲ್ಲಿದ್ದ ಎತ್ತರದ ಕಟ್ಟಡವೊಂದು ಕುಸಿದಿದೆ. ಮ್ಯಾನ್ಮಾರ್‌ನ ಎರಡನೇ ಅತಿದೊಡ್ಡ ನಗರವಾದ

ಮ್ಯಾನ್ಮಾರ್‌ ಭೂಕಂಪ : ಸಾವಿನ ಸಂಖ್ಯೆ 144ಕ್ಕೇರಿಕೆ; 730 ಮಂದಿಗೆ ಗಾಯ Read More »

ಬೊಲಿವಿಯಾದಲ್ಲಿ 3900 ಚದರ ಕಿಲೋ ಮೀಟರ್‌ ಭೂಮಿ ಒತ್ತುವರಿ ಮಾಡಿಕೊಂಡ ನಿತ್ಯಾನಂದ ಸ್ವಾಮಿ!

ಕರ್ನಾಟಕದಿಂದ ಓಡಿಹೋಗಿ ಕೈಲಾಸ ದೇಶ ಸ್ಥಾಪಿಸಿಕೊಂಡಿರುವ ನಿತ್ಯಾನಂದ ನವದೆಹಲಿ: ಭಾರತದಿಂದ ಓಡಿಹೋಗಿ ತನ್ನದೇ ಆದ ಕೈಲಾಸ ದೇಶ ಸ್ಥಾಪಿಸಿರುವ ಬಿಡದಿಯ ನಿತ್ಯಾನಂದ ಸ್ವಾಮಿಯ ವಿರುದ್ಧ ಸುಮಾರು 3,900 ಚದರ ಕಿಲೋಮೀಟರ್‌ ಭೂಮಿ ಒತ್ತುವರಿ ಮಾಡಿಕೊಂಡ ಆರೋಪ ಕೇಳಿಬಂದಿದೆ. ದಕ್ಷಿಣ ಅಮೆರಿಕ ಖಂಡದಲ್ಲಿರುವ ಬೊಲಿವಿಯಾ ದೇಶದಲ್ಲಿ ನಿತ್ಯಾನಂದ ಸ್ವಾಮಿ ಮತ್ತು ಅವರ ಅನುಯಾಯಿಗಳು ಬುಡಕಟ್ಟು ಜನಾಂಗದವರ 3,900 ಚದರ ಕಿಲೋಮೀಟರ್ ಭೂ ಕಬಳಿಕೆ ಮಾಡಿದ್ದಾರೆ ಎನ್ನಲಾಗಿದೆ.ಬೊಲಿವಿಯಾದ ಅಮೆಜಾನ್ ಪ್ರದೇಶದ ಬುಡಕಟ್ಟು ಜನಾಂಗಕ್ಕೆ ಅಸ್ತಿತ್ವದಲ್ಲಿಲ್ಲದ ಕೈಲಾಸ ದೇಶ ವಂಚನೆ ಮಾಡಿರುವುದು

ಬೊಲಿವಿಯಾದಲ್ಲಿ 3900 ಚದರ ಕಿಲೋ ಮೀಟರ್‌ ಭೂಮಿ ಒತ್ತುವರಿ ಮಾಡಿಕೊಂಡ ನಿತ್ಯಾನಂದ ಸ್ವಾಮಿ! Read More »

ಸುನಿತಾ ವಿಲ್ಲಿಯಮ್ಸ್‌ ಪುನರಾಗಮನ : ಜಗತ್ತಿನಾದ್ಯಂತ ಮುಗಿಲು ಮುಟ್ಟಿದ ಹರ್ಷೋದ್ಗಾರ

45 ದಿನಗಳ ಚಿಕಿತ್ಸೆ ಬಳಿಕ ಹೊರ ಜಗತ್ತಿಗೆ ಕಾಲಿಡಲಿದ್ದಾರೆ ಗಗನಯಾತ್ರಿಗಳು ನ್ಯೂಯಾರ್ಕ್‌: ಅಂತರಿಕ್ಷದಲ್ಲಿ 9 ತಿಂಗಳು ಕಳೆದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ವಾಪಸು ಕರೆತರುವ ಕಾರ್ಯಾಚರಣೆ ಕೊನೆಗೂ ಯಶ್ವಿಯಾಗಿ ಮುಗಿದಿದೆ. ನಾಸಾದ ಗಗನಯಾನಿಗಳಾದ ನಿಕ್ ಹೇಗ್ ಮತ್ತು ರಷ್ಯಾದ ಅಲೆಕ್ಸಾಂಡರ್ ಗೊರ್ಶನೋವ್ ಜೊತೆಗೂಡಿ ಸುನಿತಾ ಮತ್ತು ವಿಲ್ಮೋರ್ ಭಾರತೀಯ ಕಾಲಮಾನದ ಪ್ರಕಾರ ಇಂದು ನಸುಕಿನ ಹೊತ್ತು ಯಶಸ್ವಿಯಾಗಿ ಭೂಮಿಗೆ ಬಂದಿದ್ದಾರೆ.ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 10.35ಕ್ಕೆ ಸರಿಯಾಗಿ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ

ಸುನಿತಾ ವಿಲ್ಲಿಯಮ್ಸ್‌ ಪುನರಾಗಮನ : ಜಗತ್ತಿನಾದ್ಯಂತ ಮುಗಿಲು ಮುಟ್ಟಿದ ಹರ್ಷೋದ್ಗಾರ Read More »

9 ತಿಂಗಳ ಅಂತರಿಕ್ಷ ವಾಸದ ಬಳಿಕ ಭೂಮಿ ತಾಯಿಯ ಮಡಿಲಿಗೆ ಸುನಿತಾ ವಿಲ್ಲಿಯಮ್ಸ್‌

ಗಗನಯಾತ್ರಿಗಳನ್ನು ಕರೆತರುವ ಮಿಷನ್‌ ಯಶಸ್ವಿ ಸಂಪನ್ನ ಫ್ಲೋರಿಡಾ: ಭಾರತೀಯ ಸಂಜಾತೆ ಗಗನಯಾತ್ರಿ ಸುನಿತಾ ವಿಲ್ಲಿಯಮ್ಸ್‌ ಬರೋಬ್ಬರಿ 9 ತಿಂಗಳ ಕಾಲ ಅಂತರಿಕ್ಷ ವಾಸ ಮುಗಿಸಿ ಇಂದು ಮುಂಜಾನೆ ವೇಳೆ ಭೂಸ್ಪರ್ಶ ಮಾಡಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 286 ದಿನ ಬಾಕಿಯಾಗಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್‌ ವಿಲ್ಮೋರ್‌ ಅವರನ್ನು ಭೂಮಿಗೆ ಕರೆತರುವ ಮಿಷನ್‌ ಯಶಸ್ವಿಯಾಗಿದೆ ಎಂದು ನಾಸಾ ಘೋಷಿಸಿದೆ. ಇಬ್ಬರನ್ನು ಸುರಕ್ಷಿತರವಾಗಿ ಭೂಮಿಗೆ ಕರೆತರಲಾಗಿದೆ. ಸುನೀತಾ ವಿಲಿಯಮ್ಸ್, ಬುಚ್‌ವಿಲ್ಮೋರ್ ಸೇರಿ ನಾಲ್ವರು ಗಗನಯಾತ್ರಿಗಳನ್ನು

9 ತಿಂಗಳ ಅಂತರಿಕ್ಷ ವಾಸದ ಬಳಿಕ ಭೂಮಿ ತಾಯಿಯ ಮಡಿಲಿಗೆ ಸುನಿತಾ ವಿಲ್ಲಿಯಮ್ಸ್‌ Read More »

ಸುಳ್ಯ ಮೂಲದ ಯುವಕ ಬ್ಯಾಂಕಾಕ್‍ ನಲ್ಲಿ ಮೃತ್ಯು

ಈಜಿಪ್ಟ್ ದೇಶದಲ್ಲಿ ಶಿಪ್‌ ಒಂದಕ್ಕೆ ಕೆಲಸಕ್ಕೆ ನೇಮಕಗೊಂಡಿದ್ದ ಸುಳ್ಯ ಮೂಲದ ಯುವಕ ಬ್ಯಾಂಕಾಕ್ ನಲ್ಲಿ ಮೃತಪಟ್ಟ ಘಟನೆ ನಡೆದಿದೆ. ಸುಳ್ಯದ ಪಂಬೆತ್ತಾಡಿಯ ನಿವೃತ್ತ ಯೋಧ ದಿ. ಶಿವರಾಮ ಗೌಡರ ಪುತ್ರ ಲಿಖಿನ್‍ (26) ಎಂದು ಗುರುತಿಸಲಾಗಿದೆ. ಈಜಿಪ್ಟ್ ನಲ್ಲಿ ಶಿಪ್‍ ನಲ್ಲಿ ಉದ್ಯೋಗಕ್ಕೆ ನೇಮಕ ಗೊಂಡು ಅಲ್ಲಿಗೆ ತೆರಳಲು ವಿಮಾನ ಪ್ರಯಾಣಕ್ಕಾಗಿ ಬ್ಯಾಂಕಾಕ್‌ ನಲ್ಲಿ ರೂಮ್ ಮಾಡಿ ತಂಗಿದ್ದರು. ಅಲ್ಲಿ ಅವರು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮೃತರು ತಾಯಿ, ಸಹೋದರನನ್ನು

ಸುಳ್ಯ ಮೂಲದ ಯುವಕ ಬ್ಯಾಂಕಾಕ್‍ ನಲ್ಲಿ ಮೃತ್ಯು Read More »

ಭಯೋತ್ಪಾದಕರ ದಾಳಿಗೆ ಹೆದರಿ ಸೇನೆ ತೊರೆಯುತ್ತಿರುವ ಪಾಕ್‌ ಯೋಧರು

ಒಂದೇ ವಾರದಲ್ಲಿ 2500 ಸೈನಿಕರ ರಾಜೀನಾಮೆ ಇಸ್ಲಾಮಾಬಾದ್‌: ಬಲೂಚಿಸ್ಥಾನ ಪ್ರತ್ಯೇಕವಾದಿ ಹೋರಾಟಗಾರರು ಇತ್ತೀಚೆಗೆ ಬೆನ್ನುಬೆನ್ನಿಗೆ ನಡೆಸಿದ ಎರಡು ದಾಳಿಗಳಿಂದ ಕಂಗೆಟ್ಟಿರುವ ಪಾಕಿಸ್ಥಾನದ ಸೈನಿಕರು ಈಗ ಸೈನ್ಯವನ್ನೇ ಬಿಟ್ಟು ಹೋಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಬಂಡುಕೋರರು ಒಂದಿಡೀ ರೈಲನ್ನೇ ಅಪಹರಿಸಿ ಒತ್ತೆಸೆರೆಯಲ್ಲಿಟ್ಟಿದ್ದರು. ಈ ಕಾರ್ಯಾಚರಣೆಯಲ್ಲಿ ಪ್ರಯಾಣಿಕರ ಜೊತೆ ಅನೇಕ ಯೋಧರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ಎರಡೇ ದಿನದಲ್ಲಿ ಸೇನೆಯ ವಾಹನಗಳ ಮೇಲೆ ದಾಳಿ ಮಾಡಿ 90 ಯೋಧರನ್ನು ಕೊಂದಿದ್ದರು. ಈ ಎರಡು ಘಟನೆಗಳು ಪಾಕಿಸ್ಥಾನ ಸೇನೆಯ ಜಂಘಾಬಲವನ್ನು

ಭಯೋತ್ಪಾದಕರ ದಾಳಿಗೆ ಹೆದರಿ ಸೇನೆ ತೊರೆಯುತ್ತಿರುವ ಪಾಕ್‌ ಯೋಧರು Read More »

ಸುನೀತಾ ವಿಲ್ಲಿಯಮ್ಸ್‌ ಭೂಮಿಗೆ ಆಗಮಿಸುವ ಪ್ರಕ್ರಿಯೆ ಶುರು

ಭಾರತದ ಕಾಲಮಾನ ಪ್ರಕಾರ ಬುಧವಾರ ಬೆಳಗ್ಗೆ 3.27ಕ್ಕೆ ಫ್ಲೋರಿಡಾ ಕರಾವಳಿಯಲ್ಲಿ ಭೂಸ್ಪರ್ಶ ನ್ಯೂಯಾರ್ಕ್‌: ಕಳೆದ 9 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಜ್ ವಿಲ್ಮೋರ್ ಅವರ ಭೂಮಿಗೆ ಮರಳುವ ಪ್ರಯಾಣ ಶುರುವಾಗಿದ್ದು, ನಾಸಾ ಇದನ್ನು ನೇರ ಪ್ರಸಾರ ಮಾಡುತ್ತಿದೆ. ಅಮೆರಿಕ ಕಾಲಮಾನ ಪ್ರಕಾರ ಮಂಗಳವಾರ ಸಂಜೆ ಸುನೀತಾ ವಿಲ್ಲಿಯಮ್ಸ್‌ ಹೊತ್ತ ಗಗನನೌಕೆ ಭೂಸ್ಪರ್ಶ ಮಾಡಲಿದೆ. ಈ ಇಬ್ಬರು ಗಗನಯಾತ್ರಿಗಳು ಫ್ಲೋರಿಡಾ ಕರಾವಳಿಯಲ್ಲಿ ಇಳಿಯಲಿದ್ದು, ಈ ಅಪರೂಪದ ಕ್ಷಣಗಳನ್ನು ನಾಸಾ ನೇರಪ್ರಸಾರ

ಸುನೀತಾ ವಿಲ್ಲಿಯಮ್ಸ್‌ ಭೂಮಿಗೆ ಆಗಮಿಸುವ ಪ್ರಕ್ರಿಯೆ ಶುರು Read More »

error: Content is protected !!
Scroll to Top