ಶಿರಾಡಿ ಘಾಟ್ ಚತುಷ್ಪಥ | 1976.15 ಕೋಟಿ ರೂ.ನ ಯೋಜನೆಗೆ ಕೇಂದ್ರ ಅಸ್ತು | ಅಡ್ಡಹೊಳೆ – ಮಾರೇನಹಳ್ಳಿ ಹೆದ್ದಾರಿ ಅಭಿವೃದ್ಧಿ
ಪುತ್ತೂರು: ಹಾಸನ – ಮಾರೇನಹಳ್ಳಿ ನಡುವಿನ ಚತುಷ್ಪಥ ಕಾಮಗಾರಿಯನ್ನು ಮುಂದುವರಿಸಲು ಅನುಮೋದಿಸಿರುವ ಕೇಂದ್ರ ಸರಕಾರ, ಮುಂದಿನ ಹಂತದಲ್ಲಿ ಮಾರೇನಹಳ್ಳಿಯಿಂದ ಅಡ್ಡಹೊಳೆವರೆಗಿನ ರಸ್ತೆ ಅಗಲೀಕರಣ ಹಾಗೂ ಚತುಷ್ಪಥಗೊಳಿಸಲು ಮುಂದಾಗಿದೆ. ಎನ್.ಎಚ್.75 ಅಡಿ ಬರುವ ಶಿರಾಡಿಘಾಟಿನ ಮಾರೇನಹಳ್ಳಿಯಿಂದ ಅಡ್ಡಹೊಳೆವರೆಗೆ ಈ ಚತುಷ್ಪಥ ಕಾಮಗಾರಿ ನಡೆಯಲಿದೆ. ಇದಕ್ಕಾಗಿ ಕೇಂದ್ರ ಸರಕಾರ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ 1976.15 ಕೋಟಿ ರೂ. ಬಿಡುಗಡೆ ಮಾಡಿದೆ. ಫೆ. 2ರ ಮೊದಲು ಕಾಮಗಾರಿಗೆ ಬಿಡ್ ಆಹ್ವಾನಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ಎರಡು ವರ್ಷದಲ್ಲಿ ಅಡ್ಡಹೊಳೆಯಿಂದ […]