ಅಪರಾಧ

ಮಂಗಳೂರಿಗೆ ಬರುತ್ತಿದ್ದ ಬಸ್‌ ತಡೆದು ದಾಂಧಲೆ ಎಸಗಿದ ರೌಡಿ

ಲಾಂಗ್‌ನಿಂದ ಬಸ್‌ನ ಗಾಜು ಒಡೆದು ಹಾಕಿ ಪ್ರಯಾಣಿಕರಿಗೆ ಬೆದರಿಕೆ ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸನ್ನು ವ್ಯಕ್ತಿಯೊಬ್ಬ ಅಡ್ಡಗಟ್ಟಿ ಗಾಜು ಒಡೆದು ಹಾಕಿ ದಾಂಧಲೆ ಎಸಗಿ ಪ್ರಯಾಣಿಕರನ್ನು ಭೀತಿಗೊಳಪಡಿಸಿದ ಘಟನೆ ಇಂದು ನಸುಕಿನ ಹೊತ್ತು ಹಾಸನದ ಬಳಿ ಸಂಭವಿಸಿದೆ. ದಾಂಧಲೆ ಎಸಗಿದ ವ್ಯಕ್ತಿ ಈ ಪರಿಸರದ ಪುಡಿ ರೌಡಿ ಎನ್ನಲಾಗಿದೆ. ಬಸ್‌ ತಡೆದು ಅಟ್ಟಹಾಸ ಮೆರೆದು ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಘಟನೆ ಹಾಸನ ಹೊರವಲಯದ ಬೈಪಾಸ್‌ ರಸ್ತೆಯಲ್ಲಿ ನಡೆದಿದೆ. ಗುರುವಾರ ನಸುಕಿನ ಜಾವ 2 ಗಂಟೆಗೆ […]

ಮಂಗಳೂರಿಗೆ ಬರುತ್ತಿದ್ದ ಬಸ್‌ ತಡೆದು ದಾಂಧಲೆ ಎಸಗಿದ ರೌಡಿ Read More »

ಕರುವಿನ ಬಾಲ ಕತ್ತರಿಸಿದ ಕೃತ್ಯದ ವಿರುದ್ಧ ಹಿಂದು ಸಂಘಟನೆಗಳ ಆಕ್ರೋಶ

ಸೇಲ್ಸ್‌ಮ್ಯಾನ್‌ ಸೋಗಿನಲ್ಲಿ ಬಂದು ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿ ಉಡುಪಿ : ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದಲ್ಲಿ ಸೇಲ್ಸ್​​ಮ್ಯಾನ್ ಸೋಗಿನಲ್ಲಿ ಬಂದ ದುಷ್ಕರ್ಮಿಯೊಬ್ಬ ಅಂಗಳದಲ್ಲಿದ್ದ ಕರುವಿನ ಬಾಲ ಕತ್ತರಿಸಿ ಕ್ರೌರ್ಯ ಮೆರೆದ ಘಟನೆ ಬುಧವಾರ ಸಂಭವಿಸಿದೆ. ರಾಜ್ಯದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಗೋವುಗಳ ಮೇಲೆ ಕ್ರೌರ್ಯ ಮೆರೆದ ಕೆಲವು ಘಟನೆಗಳು ನಡೆದಿದ್ದು, ಇದು ಇದೇ ಮಾದರಿಯ ಇನ್ನೊಂದು ಘಟನೆ ಎಂದು ಹಿಂದು ಸಂಘಟನೆಗಳು ಆಕ್ರೋಶ ವ್ದಯಕ್ತಪಡಿಸಿವೆ.ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಳಿ ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು

ಕರುವಿನ ಬಾಲ ಕತ್ತರಿಸಿದ ಕೃತ್ಯದ ವಿರುದ್ಧ ಹಿಂದು ಸಂಘಟನೆಗಳ ಆಕ್ರೋಶ Read More »

ಮಹಾಕುಂಭಮೇಳ ಕಾಲ್ತುಳಿತ : ಮೃತರ ಕುಟುಂಬಗಳಿಗೆ ತಲಾ 25 ಲ.ರೂ. ಪರಿಹಾರ

ತನಿಖೆಗೆ ನ್ಯಾಯಾಂಗ ಆಯೋಗ ರಚನೆ ; ಒಂದೇ ದಿನ 8 ಕೋಟಿ ಜನ ಭೇಟಿ ಪ್ರಯಾಗರಾಜ್: ಮಹಾಕುಂಭಮೇಳದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನರು ಮೃತಪಟ್ಟು 60 ಮಂದಿ ಗಾಯಗೊಂಡ ಬಳಿಕ ಪ್ರಯಾಗ್‌ರಾಜ್‌ನಲ್ಲಿ ನಿಯಮಗಳನ್ನು ಇನ್ನಷ್ಟು ಬಿಗುಗೊಳಿಸಲಾಗಿದೆ. ಜನಜಂಗುಳಿ ಮತ್ತು ವಾಹನ ದಟ್ಟಣೆ ನಿಭಾಯಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮಾರ್ಗಸೂಚಿ ನೀಡಿದ್ದು, ಸ್ನಾನಕ್ಕೆ ತೆರಳುವವರನ್ನು ತಡೆದಿಡಲು ಅಲ್ಲಲ್ಲಿ ಹೋಲ್ಡಿಂಗ್‌ ಪಾಯಿಂಟ್‌ ರಚಿಸಲು ಮತ್ತು ವಾಹನಗಳ ಓಡಾಟಕ್ಕೆ ನಿರ್ಬಂಧ ಹಾಕಲು ಸೂಚಿಸಿದ್ದಾರೆ. ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ

ಮಹಾಕುಂಭಮೇಳ ಕಾಲ್ತುಳಿತ : ಮೃತರ ಕುಟುಂಬಗಳಿಗೆ ತಲಾ 25 ಲ.ರೂ. ಪರಿಹಾರ Read More »

ಟೇಕಾಫ್‌ಗೆ ರೆಡಿಯಾಗಿದ್ದ ವಿಮಾನದ ಎಮರ್ಜೆನ್ಸಿ ಬಾಗಿಲು ತೆರೆದ ಪ್ರಯಾಣಿಕ

ಬೆಂಗಳೂರು : ಜೋಧ್‌ಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೊ ವಿಮಾನ ಟೇಕಾಫ್‌ ಆಗಲು ತಯಾರಾಗುತ್ತಿದ್ದಂತೆ ಪ್ರಯಾಣಿಕರೊಬ್ಬರು ತುರ್ತು ನಿರ್ಗಮನ ಬಾಗಿಲು ತೆರೆದ ಘಟನೆ ಇಂದು ಬೆಳಗ್ಗೆ ಸಂಭವಿಸದೆ. ವಿಮಾನ ಇನ್ನೇನು ಟೇಕ್​ ಆಫ್​ ಆಗಬೇಕು ಎನ್ನುವ ಹೊತ್ತಲ್ಲಿ ಪ್ರಯಾಣಿಕ ಎಮರ್ಜೆನ್ಸಿ ಎಕ್ಸಿಟ್ ತೆರೆದಿದ್ದಾರೆ.ವಿಮಾನ ಬೆಳಗ್ಗೆ 10.10ಕ್ಕೆ ಹೊರಡಬೇಕಿತ್ತು, ಇದ್ದಕ್ಕಿದ್ದಂತೆ ಪ್ರಯಾಣಿಕರೊಬ್ಬರು ಫ್ಲಾಪ್ ಎಳೆದು ತುರ್ತು ನಿರ್ಗಮನ ದ್ವಾರವನ್ನು ತೆರೆದರು. ವಿಮಾನದಲ್ಲಿ ಗೊಂದಲ, ಭಯ ಸೃಷ್ಟಿಯಾಗಿದ್ದು, ಪ್ರಯಾಣಿಕನನ್ನು ಬಂಧಿಸಿ ಸಿಐಎಸ್‌ಎಫ್‌ಗೆ ಒಪ್ಪಿಸಲಾಗಿದೆ. ಆಕ್ಸಿಸ್ ಬ್ಯಾಂಕ್‌ ಉದ್ಯೋಗಿಯಾಗಿರುವ ಸಿರಾಜ್ ಕಿದ್ವಾಯಿ ತಪ್ಪಾಗಿ

ಟೇಕಾಫ್‌ಗೆ ರೆಡಿಯಾಗಿದ್ದ ವಿಮಾನದ ಎಮರ್ಜೆನ್ಸಿ ಬಾಗಿಲು ತೆರೆದ ಪ್ರಯಾಣಿಕ Read More »

ಭೀಕರ ಅಗ್ನಿ ಅವಘಡ : 50ಕ್ಕೂ ಹೆಚ್ಚು ವಾಹನಗಳು ನಾಶ

ಪೊಲೀಸರು ಜಪ್ತಿ ಮಾಡಿ ಮೈದಾನದಲ್ಲಿಟ್ಟಿದ್ದ ವಾಹನಗಳಿಗೆ ಹತ್ತಿಕೊಂಡ ಬೆಂಕಿ ಬೆಂಗಳೂರು: ಬೆಂಗಳೂರಿನಲ್ಲಿ ಜೆಡಿಎಸ್ ಕಚೇರಿ ಪಕ್ಕದ ಮೈದಾನದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ 50ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿಯಾಗಿವೆ.ಜಪ್ತಿ ಮಾಡಿದ್ದ ವಾಹನಗಳನ್ನು ಪೊಲೀಸರು ಶೇಷಾದ್ರಿಪುರಂ ಬಳಿಯ ಜಕ್ಕರಾಯನ ಕೆರೆ ಗ್ರೌಂಡ್‌ನಲ್ಲಿ ಪಾರ್ಕ್ ಮಾಡಿದ್ದರು. ಈ ಜಾಗಕ್ಕೆ ಇಂದು ಬೆಳಗ್ಗೆ ಬೆಂಕಿ ಬಿದ್ದಿದೆ. ಐದು ಕಾರು, ಐದು ಆಟೋ, 50 ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಹೋಗಿವೆ. ಮತ್ತಷ್ಟು ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದು ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ

ಭೀಕರ ಅಗ್ನಿ ಅವಘಡ : 50ಕ್ಕೂ ಹೆಚ್ಚು ವಾಹನಗಳು ನಾಶ Read More »

ಹೆದ್ದಾರಿ ಬದಿ ನಿಲ್ಲಿಸಿದ್ದ ಕಾರಿನಲ್ಲಿತ್ತು ಕಂತೆ ಕಂತೆ ನೋಟು

ನಿರ್ಜನ ಪ್ರದೇಶದಲ್ಲಿ ಉಪೇಕ್ಷಿಸಿ ಹೋದ ಕಾರಿನ ನಂಬರ್‌ ಪ್ಲೇಟ್‌ ನಕಲಿ ಕಾರವಾರ: ಅಂಕೋಲಾ ಸಮೀಪ ರಾಮನಗುಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ನಿರ್ಜನ ಪ್ರದೇಶದಲ್ಲಿ ಉಪೇಕ್ಷಿಸಿ ಹೋಗಿದ್ದ ಕ್ರೆಟಾ ಕಾರಿನೊಳಗೆ ಕಂತೆ ಕಂತೆ ಹಣ ಪತ್ತೆಯಾಗಿದೆ. ಅಂಕೋಲಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಕಾರನ್ನು ಪೊಲೀಸ್‌ ಠಾಣೆಗೆ ಒಯ್ದಿದ್ದಾರೆ. ಕಾರು ಮಂಗಳೂರು ಮೂಲದ್ದು ಎಂಬ ಸಂಶಯ ವ್ಯಕ್ತವಾಗಿದೆ.ಕಾರಿನ ನಂಬರ್‌ ಪ್ಲೇಟ್‌ ನಕಲಿಯಾಗಿದ್ದು, ಹೀಗಾಗಿ ಈ ಕಾರು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕಾರಿನೊಳಗಿದ್ದ ಬ್ಯಾಗಿನಲ್ಲಿ 1,14,99,500 ರೂಪಾಯಿ

ಹೆದ್ದಾರಿ ಬದಿ ನಿಲ್ಲಿಸಿದ್ದ ಕಾರಿನಲ್ಲಿತ್ತು ಕಂತೆ ಕಂತೆ ನೋಟು Read More »

ಮೈಕ್ರೊ ಫೈನಾನ್ಸ್‌ ಕಿರುಕುಳ : ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ

ಬರೀ ಒಂದು ಕಂತು ಬಾಕಿಯಿಟ್ಟದ್ದಕ್ಕೆ ಶಿಕ್ಷಕ ದಂಪತಿಯನ್ನು ಪೀಡಿಸಿದ್ದ ಮೈಕ್ರೊ ಫೈನಾನ್ಸ್‌ ಸಿಬ್ಬಂದಿ ಬೆಂಗಳೂರು: ಮೈಕ್ರೊ ಫೈನಾನ್ಸ್‌ನವರ ಕಿರುಕುಳ ತಾಳಲಾರದೆ ದಾವಣಗೆರೆಯ ಶಿಕ್ಷಕಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಎರಡು ದಿನಗಳ ಬಳಿ ಅವರ ಶವ ಇಂದು ಪತ್ತೆಯಾಗಿದೆ. ಮೈಕ್ರೊ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಸರ್ಕಾರಿ ಶಾಲೆಯ ಶಿಕ್ಷಕಿ ಪುಷ್ಪಲತಾ ಎರಡು ದಿನಗ ಹಿಂದೆ ತುಂಗಭದ್ರಾ ನದಿಗೆ ಹಾರಿದ್ದರು. ಮೃತದೇಹ ಇಂದು ಬೆಳಗ್ಗೆ ನದಿಯಲ್ಲಿ ಪತ್ತೆಯಾಗಿದೆ. ಹೊನ್ನಾಳಿ ಪಟ್ಟಣದ ನಿವಾಸಿ ಪುಷ್ಪಲತಾ ಹಾಗೂ ಆಕೆಯ ಪತಿ ಶಿಕ್ಷಕ

ಮೈಕ್ರೊ ಫೈನಾನ್ಸ್‌ ಕಿರುಕುಳ : ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ Read More »

ಹುಲಿಯ ಹೊಟ್ಟೆಯಲ್ಲಿತ್ತು ಮಹಿಳೆಯ ಕಿವಿಯೋಲೆ, ಕೂದಲು

ನರಭಕ್ಷಕ ವ್ಯಾಘ್ರ ನಿಗೂಢವಾಗಿ ಸಾವು ವಯನಾಡು : ಕೇರಳದಲ್ಲಿ ಎರಡು ದಿನಗಳ ಹಿಂದೆ ಮಹಿಳೆಯೊಬ್ಬರನ್ನು ಕೊಂದಿದ್ದ ನರಭಕ್ಷಕ ಹುಲಿ ಶವವಾಗಿ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹುಲಿಯ ಹೊಟ್ಟೆಯಲ್ಲಿ ಮಹಿಳೆಯ ಕೂದಲು, ಬಟ್ಟೆ, ಕಿವಿಯೋಲೆ ಪತ್ತೆಯಾಗಿದೆ. ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಕಾಫಿ ಬೀಜ ಸಂಗ್ರಹಿಸಲು ತೆರಳಿದ್ದ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿತ್ತು. ನಾಲ್ಕರಿಂದ ಐದು ವರ್ಷ ವಯಸ್ಸಿನ ಹೆಣ್ಣು ಹುಲಿಯನ್ನು ಸೋಮವಾರ ಬೆಳಗ್ಗೆ ವನ್ಯಜೀವಿ ಸಿಬ್ಬಂದಿ ಗುರುತಿಸಿ ಬೆನ್ನಟ್ಟಿದ್ದರು. ಆಗ ತಪ್ಪಿಸಿಕೊಂಡಿದ್ದ ಹುಲಿ ನಂತರ ಪಿಲಕಾವು

ಹುಲಿಯ ಹೊಟ್ಟೆಯಲ್ಲಿತ್ತು ಮಹಿಳೆಯ ಕಿವಿಯೋಲೆ, ಕೂದಲು Read More »

ಇನ್ಫೋಸಿಸ್‌ ಸಹಸಂಸ್ಥಾಪಕರ ಮೇಲೆ ದಲಿತ ದೌರ್ಜನ್ಯ ಕೇಸ್‌

ಬೆಂಗಳೂರು: ಇನ್ಫೋಸಿಸ್ ಸಹಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್, ಐಐಎಸ್‌ಸಿ ಮಾಜಿ ನಿರ್ದೇಶಕ ಬಲರಾಮ್ ಸೇರಿದಂತೆ 18 ಮಂದಿ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ 71ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನಿರ್ದೇಶನದ ಮೇರೆಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬೋವಿ ಸಮುದಾಯಕ್ಕೆ ಸೇರಿದ ದೂರುದಾರ ದುರ್ಗಪ್ಪ ಭಾರತೀಯ ವಿಜ್ಞಾನ ಸಂಸ್ಥೆಯ ಸುಸ್ಥಿರ ತಂತ್ರಜ್ಞಾನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದರು. 201 ರಲ್ಲಿ ತನ್ನನ್ನು ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿಸಿ ವಜಾ ಮಾಡಲಾಗಿದೆ. ಕ್ರಿಸ್

ಇನ್ಫೋಸಿಸ್‌ ಸಹಸಂಸ್ಥಾಪಕರ ಮೇಲೆ ದಲಿತ ದೌರ್ಜನ್ಯ ಕೇಸ್‌ Read More »

ಲಂಚ : ಇಬ್ಬರು ಪೊಲೀಸರು ಲೋಕಾಯುಕ್ತ ಬಲೆಗೆ

ಮಂಗಳೂರು: ಸ್ಕೂಟರ್ ಬಿಡಿಸಲು ಲಂಚ ಕೇಳಿದ ಆರೋಪದ ಮೇಲೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಠಾಣಾಧಿಕಾರಿಯೊಬ್ಬರ ವಿರುದ್ಧ ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗವು ಪ್ರಕರಣ ದಾಖಲಿಸಿದೆ. ದೂರುದಾರರು ಪೊಲೀಸರು ವಶಪಡಿಸಿಕೊಂಡಿದ್ದ ಸ್ಕೂಟರನ್ನು ಬಿಡುಗಡೆ ಮಾಡಲು ನ್ಯಾಯಾಲಯ ಆದೇಶಿಸಿತ್ತು. ಆ ಪ್ರಕಾರ್‌ ದೂರುದಾರ ಸ್ಕೂಟರನ್ನು ಬಿಡುಗಡೆ ಮಾಡಲು ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಷರೀಫ್ ಅವರನ್ನು ಸಂಪರ್ಕಿಸಿದ್ದರು. ಷರೀಫ್‌ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ದೂರುದಾರ ಸ್ವಲ್ಪ ಕಡಿಮೆ ಮಾಡಲು

ಲಂಚ : ಇಬ್ಬರು ಪೊಲೀಸರು ಲೋಕಾಯುಕ್ತ ಬಲೆಗೆ Read More »

error: Content is protected !!
Scroll to Top