ಈಜಲು ನದಿಗಿಳಿದ ಬಾಲಕ ಮುಳುಗಿ ಸಾವು
ಬೆಳ್ತಂಗಡಿ: ಈಜಲು ನದಿಗಿಳಿದ 14 ವರ್ಷದ ಬಾಲಕನೊಬ್ಬ ಮುಳುಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಅಂತರಾಯ ಪಲ್ಕೆಯಲ್ಲಿ ಶನಿವಾರ ಸಂಜೆ ನಡೆದಿದೆ. ಉಜಿರೆ ಗ್ರಾಮದ ಕುಂಟಿನಿ ನಿವಾಸಿ ಹಸನಬ್ಬ ಎಂಬವರ ಪುತ್ರ ಮೊಹಮ್ಮದ್ ಹಫೀಜ್ ಮೃತ ಬಾಲಕ. ನೇತ್ರಾವತಿ ನದಿಯ ಅಂತ್ರಾಯ ಕೊಳದಲ್ಲಿ ನಾಲ್ವರು ಮಕ್ಕಳು ಈಜಲು ಇಳಿದಿಗಿದ್ದ ಹಫೀಜ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಅಲ್ಲಿದ್ದವರು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಾಲಕನ ಮೃತದೇಹವನ್ನು ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ತನಿಖೆ ನಡೆಯುತ್ತಿದೆ.
ಈಜಲು ನದಿಗಿಳಿದ ಬಾಲಕ ಮುಳುಗಿ ಸಾವು Read More »










