ಸುಳ್ಯದ ಗುರುಂಪಿನಲ್ಲಿ ಬರೆ ಕುಸಿತ: ಮಣ್ಣಿನಡಿ ಸಿಲುಕಿದ್ದ 3 ಮೃತದೇಹ ಪತ್ತೆ
ಸುಳ್ಯ: ಹೃದಯವಿದ್ರಾವಕ ಘಟನೆಯಲ್ಲಿ ಸುಳ್ಯದ ಗುರುಂಪು ಬಳಿ ಬರೆ ಕುಸಿತ ಪ್ರಕರಣದಲ್ಲಿ ಮಣ್ಣಿನಡಿ ಸಿಲುಕಿದ್ದ ಮೂವರ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ. ಶನಿವಾರ ಮಧ್ಯಾಹ್ನ ಅಬೂಬಕ್ಕರ್ ಎಂಬವರ ಮನೆ ಸಮೀಪ ಘಟನೆ ಸಂಭವಿಸಿದೆ. ಬರೆಗೆ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದಾಗ ದುರ್ಘಟನೆ ಘಟಿಸಿದೆ. ಕಾಮಗಾರಿಯಲ್ಲಿ ನಿರತರಾಗಿದ್ದ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ. ಮೃತಪಟ್ಟವರಲ್ಲಿ ಗದಗ ಮುಂಡರಗಿ ಮೂಲದ ಸೋಮಶೇಖರ, ಶಾಂತಾ ದಂಪತಿ ಇದ್ದರು ಎಂದು ಗುರುತಿಸಲಾಗಿದೆ. ಬರೆ ಕುಸಿದ ತಕ್ಷಣ […]
ಸುಳ್ಯದ ಗುರುಂಪಿನಲ್ಲಿ ಬರೆ ಕುಸಿತ: ಮಣ್ಣಿನಡಿ ಸಿಲುಕಿದ್ದ 3 ಮೃತದೇಹ ಪತ್ತೆ Read More »