ಅಪರಾಧ

ಬಿಸಿಯೂಟಕ್ಕಾಗಿ ನೂಕುನುಗ್ಗಲು: ಬೆರಳು ಕಳೆದುಕೊಂಡ ಬಾಲಕಿ

ತುಮಕೂರು: ಬಿಸಿಯೂಟ ಸೇವಿಸಲು ಸರತಿ‌ ಸಾಲಿನಲ್ಲಿ ನಿಂತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳ ನಡುವೆ ನೂಕುನುಗ್ಗಲು ಸಂಭವಿಸಿದ್ದು, ಇದರಿಂದಾಗಿ ಒಂದನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಕೈ ಬೆರಳುಗಳು ಕಬ್ಬಿಣದ ಬಾಗಿಲಿಗೆ ಸಿಲುಕಿ ತುಂಡಾದ ಘಟನೆ ಗೂಳೂರು ಸ.ಹಿ.ಪ್ರಾ. ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿನಿ ಚಿನ್ಮಯಿದೇವಿ ಎಂಬ ಮಗು ಈ ಘಟನೆಯಲ್ಲಿ ತನ್ನ ಕೈಯ ಎರಡು ಬೆರಳುಗಳನ್ನು ಕಳೆದುಕೊಂಡಿದೆ. ತಳ್ಳಾಟ ನೂಕಾಟದ ನಡುವೆ ತಾನು ಬೀಳುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಬಾಲಕಿ ಕಬ್ಬಿಣದ ಬಾಗಿಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಈ ವೇಳೆ ಹಿಂದಿದ್ದ ವಿದ್ಯಾರ್ಥಿಗಳು ಬಾಗಿಲನ್ನು ನೂಕಿದ್ದು, […]

ಬಿಸಿಯೂಟಕ್ಕಾಗಿ ನೂಕುನುಗ್ಗಲು: ಬೆರಳು ಕಳೆದುಕೊಂಡ ಬಾಲಕಿ Read More »

ಕಾರಿನಲ್ಲಿ ಡ್ರಗ್ಸ್ ಮಾರಾಟ: ಐವರು ಆರೋಪಿಗಳ ಬಂಧನ

ಹಾಸನ: ಕಾರಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಶಿವಮೊಗ್ಗ ಮೂಲದ ಫರ್ವೀಜ್, ಸುಹೇಲ್, ಅಬ್ದುಲ್ ಯಾಸಿನ್, ಇಬ್ರತ್ ಖಾನ್ ಮತ್ತು ಹಾಸನದ ಸೈಯದ್ ಯೂಸಫ್ ಎಂದು ಗುರುತಿಸಲಾಗಿದೆ. ಹಾಸನದ ರಾಜ್‌ಕುಮಾರ್ ರಸ್ತೆಯ ಚೆಕ್ ಪೋಸ್ಟ್ ಬಳಿಯಲ್ಲಿ ಸುಮಾರು 2 ಲಕ್ಷ ರೂ. ಮೌಲ್ಯದ 40 ಗ್ರಾಂ ಗಳಷ್ಟು ಎಂಡಿಎಂಎ ಪತ್ತೆಯಾಗಿದೆ. ಪೊಲೀಸರು ಕರು ಮತ್ತು ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ.

ಕಾರಿನಲ್ಲಿ ಡ್ರಗ್ಸ್ ಮಾರಾಟ: ಐವರು ಆರೋಪಿಗಳ ಬಂಧನ Read More »

ಸುಳ್ಯ : ಜನವಸತಿಯಿಲ್ಲದ ಮನೆಯ ಶೌಚಾಲಯದಲ್ಲಿ ಯುವಕನ ಶವಪತ್ತೆ

ಮದ್ಯದ ಅಮಲಿನಲ್ಲಿ ತನ್ನದೇ ಮನೆಗೆ ಬೆಂಕಿ ಹಚ್ಚಿ ಓಡಿಹೋಗಿದ್ದ ಯುವಕ ಸುಳ್ಯ: ಮನೆಗೆ ಬೆಂಕಿಹಚ್ಚಿ ಓಡಿಹೋಗಿದ್ದ ಯುವಕನ ಮೃತದೇಹ ಜನವಸತಿಯಿಲ್ಲದ ಮನೆಯ ಶೌಚಾಲಯದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸುಳ್ಯದ ಗುತ್ತಿಗಾರು ಗ್ರಾಮದ ಅಡ್ಡನಪಾರೆಯಲ್ಲಿ ಗುರುವಾರ ಸಂಭವಿಸಿದೆ. ಅಡ್ಡನಪಾರೆ ಗೋಪಾಲ ನಾಯ್ಕ ಎಂಬವರ ಪುತ್ರ ಮಹಾಬಲ ನಾಯ್ಕ (27) ಮೃತಪಟ್ಟಿರುವ ಯುವಕ. ಮಹಾಬಲ ಕಳೆದ ಫೆ.4ರಂದು ಮದ್ಯದ ಅಮಲಿನಲ್ಲಿ ಬಂದು ತನ್ನ ಮನೆಗೇ ಬೆಂಕಿಹಚ್ಚಿ ಅಲ್ಲಿಂದ ಓಡಿಹೋಗಿದ್ದ. ಮನೆಗೆ ಬೆಂಕಿಹಚ್ಚಿದ ಕುರಿತು ಗೋಪಾಲ ನಾಯ್ಕ ಮಗನ ವಿರುದ್ಧ

ಸುಳ್ಯ : ಜನವಸತಿಯಿಲ್ಲದ ಮನೆಯ ಶೌಚಾಲಯದಲ್ಲಿ ಯುವಕನ ಶವಪತ್ತೆ Read More »

ಪೆಟ್ರೋಲು ತುಂಬಿಸಿ ಹಣ ಕೊಡದೆ ಪರಾರಿಯಾದ ಚಾಲಕ

ಸುಳ್ಯ : ಕಾರು ಚಾಲಕನೊಬ್ಬ ಪೆಎಟ್ರೋಲು ಪಂಪ್‌ನಲ್ಲಿ ಟ್ಯಾಂಕ್‌ ಪೆಟ್ರೋಲ್‌ ತುಂಬಿಸಿಕೊಂಡ ನಂತರ ಹಣ ಪಾವತಿಸದೆ ಪರಾರಿಯಾದ ಘಟನೆ ಅರಂತೋಡುನ ನಯಾರ ಪೆಟ್ರೋಲ್ ಪಂಪ್‌ನಲ್ಲಿ ಶುಕ್ರವಾರ ನಡೆದಿದೆ. ಕೇರಳದ ಕಾಸರಗೋಡಿನ ನೋಂದಣಿ ಹೊಂದಿದ ಕಾರು ಪೆಟ್ರೋಲ್ ಪಂಪ್‌ಗೆ ಬಂದು ವಾಹನಕ್ಕೆ 2,510 ರೂ. ಮೌಲ್ಯದ ಪೆಟ್ರೋಲ್ ಹಾಕಿಸಿಕೊಂಡಿದೆ. ಬಳಿಕ ಸಿಬ್ಬಂದಿ ಹಣ ಪಾವತಿಸಿ ಎಂದು ಕೇಳಿದಾಗ ಚಾಲಕ ಇದ್ದಕ್ಕಿದ್ದಂತೆ ಕಾರನ್ನು ಸ್ಟಾರ್ಟ್ ಮಾಡಿ ವೇಗವಾಗಿ ಪರಾರಿಯಾಗಿದ್ದಾನೆ. ಗಾಬರಿಗೊಂಡ ಪಂಪ್ ಸಿಬ್ಬಂದಿ ತಕ್ಷಣ ಜಾಲ್ಸೂರು ಚೆಕ್‌ಪೋಸ್ಟ್ ಮತ್ತು ಸ್ಥಳೀಯ

ಪೆಟ್ರೋಲು ತುಂಬಿಸಿ ಹಣ ಕೊಡದೆ ಪರಾರಿಯಾದ ಚಾಲಕ Read More »

ಸರಕಿನಂತೆ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಪ್ರಕರಣ : ಚಾಲಕರ ವಿರುದ್ಧ ಕೇಸ್‌ ದಾಖಲು

ಬಳೆಂಜ ಶಾಲೆಯ ಮಕ್ಕಳನ್ನು ಟಿಪ್ಪರ್‌, ಪಿಕಪ್‌ನಲ್ಲಿ ಪ್ರವಾಸಕ್ಕೆ ಕರೆದೊಯ್ದಿದ್ದ ಶಿಕ್ಷಕರು ಬೆಳ್ತಂಗಡಿ: ಟಿಪ್ಪರ್‌ನಲ್ಲಿ ಶಾಲಾ ಮಕ್ಕಳನ್ನು ಸರಕು ಸಾಗಿಸುವ ವಾಹನಗಳಲ್ಲಿ ಅಧ್ಯಯನ ಪ್ರವಾಸಕ್ಕೆ ಕೊಂಡೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಶಿಕ್ಷಕರನ್ನು ಅಮಾನತುಗೊಳಿಸಿದ ಬಳಿಕ ಇದೀಗ ಟಿಪ್ಪರ್ ಹಾಗೂ ಪಿಕಪ್ ವಾಹನ ಚಾಲಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಳೆದ ಗುರುವಾರ ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದಲ್ಲಿ ಜೇನು ಕೃಷಿ ಅಧ್ಯಯನ ಪ್ರವಾಸಕ್ಕೆ ಶಾಲಾ ಮಕ್ಕಳನ್ನು ತೆರೆದ ಪಿಕಪ್ ಮತ್ತು ಟಿಪ್ಪರ್‌ನಲ್ಲಿ ಅಪಾಯಕಾರಿ ರೀತಿ ಕರೆದೊಯ್ಯಲಾಗಿತ್ತು. ಬಳೆಂಜ ಗ್ರಾಮದ ಹಿರಿಯ

ಸರಕಿನಂತೆ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಪ್ರಕರಣ : ಚಾಲಕರ ವಿರುದ್ಧ ಕೇಸ್‌ ದಾಖಲು Read More »

ಡ್ರಗ್ಸ್ ಮಾರಾಟ: ಆರೋಪಿಗಳು ಪೊಲೀಸ್ ಬಲೆಗೆ

ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಮಾದಕ ದ್ರವ್ಯ ತಂದು ಅದನ್ನು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ‌ಪೊಲೀಸರು ಬಂಧಿಸಿದ್ದು, ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ಉಳ್ಳಾಲದ ಮುಸ್ತಫಾ ಸೀದಿಯಬ್ಬ, ಮೈಯದ್ದಿ, ಮೊಹಮ್ಮದ್ ಶಿಫಾನ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ನಿಷೇಧಿತ ಎಂಡಿಎಂಎ ಮಾದಕ ವಸ್ತುವನ್ನು ಬೂದು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ತಂದು, ಉಳ್ಳಾಲ ತಾಲೂಕಿನ ತಲಪಾಡಿ ಪರಿಸರದಲ್ಲಿ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ

ಡ್ರಗ್ಸ್ ಮಾರಾಟ: ಆರೋಪಿಗಳು ಪೊಲೀಸ್ ಬಲೆಗೆ Read More »

ಹೆತ್ತ ತಾಯಿಗೆ ಚಟ್ಟ ಕಟ್ಟಿದ ಮಗಳು ಈಗ ಪೊಲೀಸರ ಅತಿಥಿ

ತುಮಕೂರು: ಅಳಿಯ ಮತ್ತು ಮಗಳ ಜೊತೆಗೆ ವಾಸವಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರು ಹೃದಯಾಘಾತದಿಂದ ಸಾವನ್ನಪ್ಪಿಲ್ಲ ಬದಲಾಗಿ ಮಗಳೇ ಅವರನ್ನು ಹತ್ಯೆ ಮಾಡಿದ್ದಾಳೆ ಎನ್ನುವ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ಸದ್ಯ ಆರೋಪಿ ಪುತ್ರಿ ಮತ್ತು ಆಕೆಯ ಪತಿ ಕ್ಯಾತಸಂದ್ರ ಪೊಲೀಸರ ವಶದಲ್ಲಿದ್ದಾರೆ. ಬಂಡೇಪಾಳ್ಯ ಸಮೀಪದ ಶ್ರೀನಗರದ ಪುಷ್ಪಲತಾ ಅವರೇ ಮೃತ ದುರ್ದೈವಿ. ಮಗಳು ಸುಚಿತ್ರಾಳೇ ತನ್ನ ಪತಿ ಸುರೇಶ್ ಸಹಾಯದೊಂದಿಗೆ ಹೆತ್ತ ಅಮ್ಮನನ್ನೇ ಕೊಂದ ಪಾಪಿ. ಈ ಸಂಬಂಧ ಪೊಲೀಸರು ವಿಚಾರಣೆ ನಡೆಸಿದ್ದು, ಆರೇಪು ಸುಚಿತ್ರಾ ದೊಡ್ಡ ಕಥೆಯೊಂದನ್ನೇ

ಹೆತ್ತ ತಾಯಿಗೆ ಚಟ್ಟ ಕಟ್ಟಿದ ಮಗಳು ಈಗ ಪೊಲೀಸರ ಅತಿಥಿ Read More »

ಪುತ್ತೂರು ನಿವಾಸಿಗೆ 2.37 ಲ.ರೂ. ವಂಚಿಸಿದವ ಸೆರೆ

ವಿಮಾ ಪ್ರಕ್ರಿಯೆ ರದ್ದುಪಡಿಸುವ ನೆಪದಲ್ಲಿ ವಂಚನೆ ಪುತ್ತೂರು: ಪುತ್ತೂರಿನ ನಿವಾಸಿಯೊಬ್ಬರಿಗೆ ಆನ್‌ಲೈನ್ ಮೂಲಕ 2.37 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯು ಮೂಲತಃ ಮಹಾರಾಷ್ಟ್ರದವನಾಗಿದ್ದು, ಸದ್ಯ ಮಂಡ್ಯದ ಕೃಷ್ಣರಾಜಪೇಟೆಯಲ್ಲಿ ವಾಸವಿರುವ ಅವಿನಾಶ್ ರಮೇಶ್ ಗೌಡ (24) ಎಂದು ಗುರುತಿಸಲಾಗಿದೆ. ಪುತ್ತೂರಿನ ನಿವಾಸಿ ಯಶೋಧರ ಎಂಬವರು ನೀಡಿದ ದೂರಿನ ಪ್ರಕಾರ, ಅಪರಿಚಿತ ವ್ಯಕ್ತಿಯೊಬ್ಬ ವಿಮಾ ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಂಡು ವಿವಿಧ ಮೊಬೈಲ್ ಸಂಖ್ಯೆಗಳಿಂದ

ಪುತ್ತೂರು ನಿವಾಸಿಗೆ 2.37 ಲ.ರೂ. ವಂಚಿಸಿದವ ಸೆರೆ Read More »

ಬೆಳ್ತಂಗಡಿ: ಸರಕು ಸಾಗಿಸುವ ವಾಹನದಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಹೆಡ್‌ಮಾಸ್ಟ್ರು!

ಶತಮಾನೋತ್ಸವ ಅಚರಿಸಿದ ಶಾಲಾ ಮುಖ್ಯಶಿಕ್ಷಕರ ನಡೆಗೆ ಪೋಷಕರ ತೀವ್ರ ಆಕ್ರೋಶ ಬೆಳ್ತಂಗಡಿ : ಸರಕುಗಳನ್ನು ಸಾಗಿಸುವ ಪಿಕಪ್‌ ವಾಹನ ಮತ್ತು ಟಿಪ್ಪರ್‌ನಲ್ಲಿ ಶಾಲಾ ಮಕ್ಕಳನ್ನು ಅಧ್ಯಯನ ಪ್ರವಾಸಕ್ಕೆ ಕರೆದುಕೊಂಡು ಹೋದ ಶಾಲೆಯ ಮುಖ್ಯಶಿಕ್ಷಕರೊಬ್ಬರ ನಡೆಗೆ ಪಾಲಕರಿಂದ ಅಕ್ರೋಶ ವ್ಯಕ್ತವಾಗಿದೆ. ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದಲ್ಲಿ ಸರಕುಗಳಂತೆ ಶಾಲಾ ಮಕ್ಕಳನ್ನು ವಾಹನಗಳಿಗೆ ತುಂಬಿಸಿ ಜೇನು ಕೃಷಿ ಅಧ್ಯಯನ ಮಾಡಲು ತೆರೆದ ಪಿಕಪ್ ಮತ್ತು ಟಿಪ್ಪರ್ ನಲ್ಲಿ ಕರೆದುಕೊಂಡು ಹೋದ ಈ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಿದ

ಬೆಳ್ತಂಗಡಿ: ಸರಕು ಸಾಗಿಸುವ ವಾಹನದಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಹೆಡ್‌ಮಾಸ್ಟ್ರು! Read More »

ಪುತ್ರನಿಂದಲೇ ತಂದೆ-ತಾಯಿಯ ಬರ್ಬರ ಕೊಲೆ

ಕ್ಷುಲ್ಲಕ ಕಾರಣಕ್ಕೆ ಅಪ್ಪ-ಅಮ್ಮನನ್ನು ಚಾಕುವಿನಿಂದ ಇರಿದು ಕೊಂದ ಟೆಕ್ಕಿ ಪುತ್ರ ಬೆಂಗಳೂರು : ಟೆಕ್ಕಿ ಪುತ್ರನೇ ತನ್ನ ಹೆತ್ತ ತಂದೆ ಹಾಗೂ ತಾಯಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ನವೀನ್ ಚಂದ್ರ ಭಟ್(60) ಮತ್ತು ಡಾ.ಶ್ಯಾಮಲಾ ಭಟ್(55) ಕೊಲೆಯಾದವರು. ಕೊಲೆಯಾದ ನವೀನ್ ಚಂದ್ರ ಭಟ್ ನೌಕಾಪಡೆಯ ನಿವೃತ್ತ ಕ್ಯಾಪ್ಟನ್‌ ಆಗಿದ್ದರೆ, ಡಾ.ಶ್ಯಾಮಲಾ ಭಟ್ ದಂತ ವೈದ್ಯೆಯಾಗಿದ್ದರು. ಕೌಟುಂಬಿಕ ವಿಚಾರಕ್ಕೆ ಪುತ್ರ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ

ಪುತ್ರನಿಂದಲೇ ತಂದೆ-ತಾಯಿಯ ಬರ್ಬರ ಕೊಲೆ Read More »

error: Content is protected !!
Scroll to Top