ಲೇಖನ

ಜಗತ್ತಿಗೆ ಜ್ಞಾನದ ಬೆಳಕು ನೀಡಿದ ವಿವೇಕಾನಂದ

ಇಂದು ವಿವೇಕಾನಂದ ಜಯಂತಿ – ರಾಷ್ಟ್ರೀಯ ಯುವ ದಿನ ಭಾರತವನ್ನು ಓದಬೇಕೆಂದರೆ ವಿವೇಕಾನಂದರನ್ನು ಓದಿ ಎಂದರು ರಾಷ್ಟ್ರಕವಿ ರವೀಂದ್ರನಾಥ ಠಾಗೋರರು. ಪ್ರತಿವರ್ಷ ಜನವರಿ 12 ಬಂತು ಅಂದರೆ ವಿವೇಕಾನಂದರ ಬಗ್ಗೆ ಮರು ಓದು ಆರಂಭ ಆಗುತ್ತದೆ. ನಮ್ಮ ದೇಶದ ಬಲಿಷ್ಠ ಯುವಜನತೆಗೆ ಹಿಂದೆ, ಇಂದು ಮತ್ತು ಮುಂದು ಕೂಡ ಅವರೇ ನಿಜವಾದ ಐಕಾನ್. ಅವರು ಭೌತಿಕವಾಗಿ ನಮ್ಮನ್ನು ಅಗಲಿ ಶತಮಾನವೇ ಸಂದರೂ ಅವರ ತತ್ವ, ಬೋಧನೆಗಳು ಸಾರ್ವತ್ರಿಕ ಸತ್ಯವಾಗಿ ಕಣ್ಣ ಮುಂದೆ ಇರುತ್ತವೆ. ಬೆಳಕಿನ ಕಿರಣಗಳನ್ನು ಚೆಲ್ಲುತ್ತವೆ. […]

ಜಗತ್ತಿಗೆ ಜ್ಞಾನದ ಬೆಳಕು ನೀಡಿದ ವಿವೇಕಾನಂದ Read More »

ಪರಮಾದ್ಭುತ ಧಾರ್ಮಿಕ ಕಾರ್ಯಕ್ರಮ ಮಹಾಕುಂಭಮೇಳ

144 ವರ್ಷಗಳ ಬಳಿಕ ನಡೆಯುತ್ತಿರುವ ಮಹಾ ಉತ್ಸವಕ್ಕೆ ನಡೆದ ತಯಾರಿಯೂ ಅದ್ಭುತ ಇಲ್ಲಿದೆ ಪ್ರಯಾಗ್‌ರಾಜ್‌ ಮಹಾಕುಂಭಮೇಳದ ಸಂಪೂರ್ಣ ಚಿತ್ರಣ ಲಖನೌ: ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಮೇಳಕ್ಕೆ ಕ್ಷಣಗಣನೆ ಶುರುವಾಗಿದೆ. ಜ.13ರಂದು ಪ್ರಾರಂಭವಾಗಲಿರುವ ಕುಂಭಮೇಳಕ್ಕಾಗಿ ಪ್ರಯಾಗ್‌ರಾಜ್‌ನಲ್ಲಿ ವರ್ಷದಿಂದಲೇ ತಯಾರಿ ನಡೆಯುತ್ತಿದ್ದು, ಉತ್ತರ ಪ್ರದೆಶ ಸರಕಾರ ಮತ್ತು ಕೇಂದ್ರ ಸರಕಾರ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ.ಇದು 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭಮೇಳ. ವಿಶ್ವಾದ್ಯಂತ ಕೋಟಿಗಟ್ಟಲೆ ಜನರು ಈ ಪರಮಾದ್ಭುತ ಧಾರ್ಮಿಕ ಕಾರ್ಯವನ್ನು ನೋಡಲು ಕಾತರರಾಗಿದ್ದಾರೆ. ಕುಂಭಮೇಳಕ್ಕೆ ಜಗತ್ತಿನ ಅತಿಹೆಚ್ಚು ಸಂಖ್ಯೆಯಲ್ಲಿ ಜನ

ಪರಮಾದ್ಭುತ ಧಾರ್ಮಿಕ ಕಾರ್ಯಕ್ರಮ ಮಹಾಕುಂಭಮೇಳ Read More »

ಮೌಲ್ಯಯುತ ಕಾದಂಬರಿಗಳ ಲೇಖಕ ನಾ.ಡಿ.ಸೋಜ

ನೂರಾರು ಶ್ರೇಷ್ಠ ಕೃತಿಗಳನ್ನು ಬರೆದ ಹಿರಿಯ ಸಾಹಿತಿ ಕನ್ನಡದ ಹಿರಿಯ ಸಾಹಿತಿ ಡಾ. ನಾ. ಡಿಸೋಜ (87) ನಿನ್ನೆ ಸಂಜೆ ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಕನ್ನಡ ಮತ್ತು ಮಾತೃಭಾಷೆಯಾದ ಕೊಂಕಣಿಯಲ್ಲಿ ನೂರರಷ್ಟು ಶ್ರೇಷ್ಠ ಕೃತಿಗಳನ್ನು ಶ್ರೀಮಂತವಾಗಿ ಬರೆದವರು ಅವರು. ಒಂದು ಸಣ್ಣ ಗ್ರಾಮದಲ್ಲಿ ಬದುಕಿನ ಉದ್ದಕ್ಕೂ ವಾಸವಾಗಿದ್ದುಕೊಂಡು ಜಾಗತಿಕ ಮಟ್ಟಕ್ಕೆ ಸಂವಾದಿಯಾಗುವ 40 ಮೌಲ್ಯಯುತ ಕಾದಂಬರಿಗಳನ್ನು ಬರೆದದ್ದು ಅವರ ಶ್ರೇಷ್ಠ ಕೊಡುಗೆ ಎಂದು ಖಂಡಿತವಾಗಿ ಹೇಳಬಹುದು. ಪ್ರಕೃತಿಯ ಹಿನ್ನೆಲೆಯ ಶಕ್ತಿಶಾಲಿ ಕಾದಂಬರಿಗಳು ವಿಶೇಷವಾಗಿ ಕಾದಂಬರಿಯ ಕ್ಷೇತ್ರ ಅವರಿಗೆ ಹೃದಯಕ್ಕೆ

ಮೌಲ್ಯಯುತ ಕಾದಂಬರಿಗಳ ಲೇಖಕ ನಾ.ಡಿ.ಸೋಜ Read More »

ಪ್ರಮುಖ ಘಟನೆಗಳ ಮೆಲುಕಿನೊಂದಿಗೆ ಹೊಸ ವರ್ಷಕ್ಕೆ ಸ್ವಾಗತ

2024ರ ಟಾಪ್ 26 ಸುದ್ದಿಗಳು (ಮುಂದುವರಿದ ಭಾಗ)14) ದಿಲ್ಲಿ ಸಿಎಂ ಕೇಜ್ರಿವಾಲ್ ಅರೆಸ್ಟ್ ಭ್ರಷ್ಟಾಚಾರದ ಆರೋಪದಲ್ಲಿ ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ED ಮತ್ತು ಸಿಬಿಐ ಬಂಧಿಸಿ ವಿಚಾರಣೆ ಮಾಡಿ ಸೆರೆಮನೆಗೆ ಕಳುಹಿಸಿದ್ದು ಬಹು ದೊಡ್ಡ ಸುದ್ದಿ (ಮಾರ್ಚ್ 21). ಅವರು ಜೈಲಿನ ಒಳಗೆ ಕೂತು ಅಧಿಕಾರವನ್ನು ಚಲಾಯಿಸಿದ್ದು ಇನ್ನೂ ದೊಡ್ಡ ಸುದ್ದಿ. 15) ಇಸ್ರೇಲ್ ಕದನ ಕುತೂಹಲ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಇನ್ನೂ ಮುಂದುವರಿಯುತ್ತಿದ್ದು ಮೂರನೇ ಮಹಾಯುದ್ಧದ

ಪ್ರಮುಖ ಘಟನೆಗಳ ಮೆಲುಕಿನೊಂದಿಗೆ ಹೊಸ ವರ್ಷಕ್ಕೆ ಸ್ವಾಗತ Read More »

2024ರ ಟಾಪ್ 26 ಮೆಗಾ ಸುದ್ದಿಗಳು

ಗತಿಸಿ ಹೋದ ವರ್ಷ ಬಿಟ್ಟುಹೋದದ್ದು ವಿವಾದಗಳನ್ನು, ನೋವುಗಳನ್ನು ಮತ್ತು ಒಂದಷ್ಟು ಸಂತಸದ ಕ್ಷಣಗಳನ್ನು… 2024ರ ವರ್ಷ ಇಂದು ರಾತ್ರಿ ಇತಿಹಾಸದ ಭಾಗವಾಗಿ ನೇಪಥ್ಯಕ್ಕೆ ಸರಿದು 2025ಕ್ಕೆ ದಾರಿ ಮಾಡಿಕೊಡುತ್ತಾ ಇದೆ. ಒಮ್ಮೆ ಹಿಂತಿರುಗಿ 2024ರ ಮಹತ್ವದ ಘಟನೆಗಳನ್ನು ಇಣುಕಿ ನೋಡುತ್ತಾ ಹೋದಾಗ ‘ಕಭಿ ಖುಷ್‌ ಕಭಿ ಗಮ್’ ಹಾಡು ನೆನಪಾಗುತ್ತದೆ. ಇಡೀ ವರ್ಷ ವಿವಾದಗಳು, ನೋವುಗಳು ಮತ್ತು ಒಂದಿಷ್ಟು ಸಂತಸಗಳು ಈ ವರ್ಷದಲ್ಲಿ ನಡೆದಿವೆ. ಅವುಗಳ ಒಂದು ಇಣುಕು ನೋಟ ಇಲ್ಲಿದೆ. 1) ದೋಮ್ಮರಾಜು ಗುಕೇಶ್ ಚೆಸ್ಸಿನಲ್ಲಿ

2024ರ ಟಾಪ್ 26 ಮೆಗಾ ಸುದ್ದಿಗಳು Read More »

ಜಗತ್ತು ಕಂಡ ಶ್ರೇಷ್ಠ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್‌

ವಿದೇಶದಲ್ಲಿ ಓದಿದರೂ ಅವರದ್ದು ಅಪ್ಪಟ ದೇಶಿ ಚಿಂತನೆಯಾಗಿತ್ತು ದೇಶ ಕಂಡ ಅಪ್ರತಿಮ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿರ್ಗಮಿಸಿದ ಸುದ್ದಿ ನಿಜಕ್ಕೂ ಆಘಾತಕಾರಿ. ಅವರಿಗೆ 92 ವರ್ಷಗಳ ಪ್ರಾಯ ಆಗಿತ್ತು. 2024ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ಅವರು ವೀಲ್‌ಚೇರ್ ಮೇಲೆ ಕುಳಿತು ನಿನ್ನೆ ಮೊನ್ನೆ ಸದನಕ್ಕೆ ಬರುತ್ತಿದ್ದ ದೃಶ್ಯಗಳು ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತೆ ಇವೆ. ಸತತವಾಗಿ 10 ವರ್ಷ ಪ್ರಧಾನಮಂತ್ರಿಯಾಗಿ ಅವರು ದೇಶಕ್ಕೆ ಸಲ್ಲಿಸಿದ ಕೊಡುಗೆಗಳು ನಿಜಕ್ಕೂ ಅದ್ಭುತ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ

ಜಗತ್ತು ಕಂಡ ಶ್ರೇಷ್ಠ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್‌ Read More »

ಭಾರತೀಯ ರಾಜಕಾರಣದ ಅಜಾತಶತ್ರು ವಾಜಪೇಯಿ

ಬದುಕಿದ್ದರೆ ಇಂದವರಿಗೆ 100 ತುಂಬುತ್ತಿತ್ತು ‘ನನಗೆ ಅಷ್ಟೊಂದು ಎತ್ತರವನ್ನು ಕೊಡಬೇಡ ದೇವರೇ, ನನ್ನ ಆತ್ಮೀಯರು ನನ್ನನ್ನು ಆಲಂಗಿಸಲು ಆಗದಷ್ಟು!’ಈ ಕವಿತೆಯನ್ನು ಬರೆದ ಸಾತ್ವಿಕ ಕವಿ, ಚತುರಮತಿ ರಾಜಕಾರಣಿ, ಪ್ರಖರ ಭಾಷಣಕಾರ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಹತ್ತಾರು ಬಾರಿ ಬರೆದಿದ್ದೇನೆ. ಎಷ್ಟು ಬರೆದರೂ ಅದು ಮುಗಿದು ಹೋಗುವುದಿಲ್ಲ ಅವರ ಜೀವನ ಸಂದೇಶ.ವಾಜಪೇಯಿ ಬದುಕಿದ ರೀತಿಯೇ ಹಾಗಿತ್ತು. ಅವರ ರಾಜಕೀಯ ವಿರೋಧಿಗಳೂ ಅವರನ್ನು ಟೀಕೆ ಮಾಡಲು ಹಿಂದೆಮುಂದೆ ನೋಡುತ್ತಿದ್ದರು. ಅವರು ಹುಟ್ಟಿದ್ದು 1924 ಡಿಸೆಂಬರ್ 25ರಂದು ಒಬ್ಬ

ಭಾರತೀಯ ರಾಜಕಾರಣದ ಅಜಾತಶತ್ರು ವಾಜಪೇಯಿ Read More »

ಸಾವಿರದ ಹಾಡುಗಳ ಅಮರ ಕವಿ ಶೈಲೇಂದ್ರ

ಅವರು ಬರೆದ 900 ಹಿಂದಿ ಹಾಡುಗಳು ಕೂಡ ಸೂಪರ್ ಹಿಟ್ ಚಿಕ್ಕಂದಿನಿಂದ ಹಿಂದಿ ಸಿನೆಮಾದ ಅತ್ಯಂತ ಮಾಧುರ್ಯದ ಸುಮಧುರ ಗೀತೆಗಳನ್ನು ಕೇಳುತ್ತಾ, ಆರಾಧನೆ ಮಾಡುತ್ತ ಬೆಳೆದಿದ್ದ ನನಗೆ 60-70ರ ದಶಕದ ಕೆಲವು ಅದ್ಭುತವಾದ ಹಾಡುಗಳು ಹುಚ್ಚು ಹಿಡಿಸಿಬಿಟ್ಟಿದ್ದವು. ಆ ಹಾಡುಗಳನ್ನು ಬರೆದ ಕವಿಯ ಕಾವ್ಯಶಕ್ತಿಗೆ ಬೆರಗಾಗದೆ ಇರಲು ಸಾಧ್ಯವೇ ಇರಲಿಲ್ಲ.ಆ ಕವಿ ಯಾರು? ಎಂದು ಹುಡುಕುತ್ತಾ ಹೋದಾಗ ನನಗೆ ವಿಸ್ಮಯವೇ ಮೂಡಿತು. ಅತ್ಯಂತ ಕಡುಬಡತನದಲ್ಲಿ ಜನ್ಮ ತಾಳಿದ ಆ ಕವಿ, ಹಸಿದ ಹೊಟ್ಟೆಯಲ್ಲಿ 17 ವರ್ಷದ ಅವಧಿಯಲ್ಲಿ

ಸಾವಿರದ ಹಾಡುಗಳ ಅಮರ ಕವಿ ಶೈಲೇಂದ್ರ Read More »

ಬಡವರ ಮಕ್ಕಳು ದೊಡ್ಡ ಕನಸು ಕಾಣುವುದು ತಪ್ಪಾ?

ಕೊಳಚೆಗೇರಿಯಲ್ಲಿ ಕೂಡ ಅದ್ಭುತವಾದ ಪ್ರತಿಭೆಗಳು ಇರುತ್ತವೆ ಜಗತ್ತಿನ ಎಲ್ಲ ಮಕ್ಕಳೂ ದೇವರ ಮಕ್ಕಳೇ. ಪ್ರತಿಭೆಗೆ ಬಡವ, ಶ್ರೀಮಂತ ಎಂಬ ಬೇಧ ಖಂಡಿತವಾಗಿ ಇಲ್ಲ ಎನ್ನುವುದು ಸತ್ಯ. ಕೆಳಗೆ ನಾನು ಬರೆದ ಪ್ರತಿ ವಾಕ್ಯಕ್ಕೂ ಅಪವಾದಗಳು ಇವೆ. ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚು ನಮ್ಮ ಹಿರಿಯರು ‘ತುಂಬಾ ಆಸೆ ಪಡಬೇಡ, ಇರೋದರಲ್ಲಿ ನೆಮ್ಮದಿಯಿಂದ ಬದುಕು’ ಎಂಬ ಆಶಯದಲ್ಲಿ ಈ ಮೇಲಿನ ಗಾದೆಯನ್ನು ಹೆಣೆದರು. ಆದರೆ ದೊಡ್ಡ ಕನಸು ಕಾಣುವುದು ಬೇಡ ಎಂದು ಯಾವತ್ತೂ ಹೇಳಲಿಲ್ಲ. ‘ಗುಡಿಸಲಲ್ಲಿ ಪ್ರತಿಭೆಗಳು

ಬಡವರ ಮಕ್ಕಳು ದೊಡ್ಡ ಕನಸು ಕಾಣುವುದು ತಪ್ಪಾ? Read More »

ಹಳಿ ತಪ್ಪುತ್ತಿದೆ ಕನ್ನಡ ಶಾಲೆಗಳ ವಾರ್ಷಿಕೋತ್ಸವ

ಇರಲಿ ವಾರ್ಷಿಕೋತ್ಸವಗಳಿಗೊಂದು ಸಂಹಿತೆಯ ಚೌಕಟ್ಟು ಕಳೆದ ಹತ್ತಾರು ವರ್ಷಗಳಿಂದ ನೂರಾರು ಕನ್ನಡ ಶಾಲೆಗಳ ವಾರ್ಷಿಕೋತ್ಸವದ ಕಾರ್ಯಕ್ರಮಗಳನ್ನು ನೋಡುತ್ತಾ ಬಂದಿರುವ ನನಗೆ ಇತ್ತೀಚೆಗೆ ಹೆಚ್ಚು ನಿರಾಸೆ ಕಾಡುತ್ತಿದೆ. ಕನ್ನಡದ ಸತ್ವವನ್ನು ಜಗತ್ತಿಗೆ ತೋರಿಸುವ ವಾರ್ಷಿಕೋತ್ಸವವನ್ನು ಮಾಡುವ ಶಾಲೆಗಳೂ ಇವೆ. ಅವರಿಗೆ ನಮ್ಮ ಅಭಿನಂದನೆ ಇರಲಿ. ವಾರ್ಷಿಕೋತ್ಸವ ಕಾರ್ಯಕ್ರಮಗಳ ಉದ್ದೇಶ ಏನು? ಈ ಮಕ್ಕಳ ಉತ್ಸವಗಳ ಉದ್ದೇಶ ಸಫಲ ಆಗ್ತಾ ಇದೆಯಾ? ಈ ಉಸಿರು ಕಟ್ಟುವ ಪ್ರೋಟೋಕಾಲ್ ಕಾರ್ಯಕ್ರಮಗಳಿಂದ ನಮ್ಮ ದೇವರಂತಹ ಮುಗ್ಧ ಮಕ್ಕಳ ನಿಜವಾದ ಪ್ರತಿಭೆ ಅರಳುತ್ತಿವೆಯಾ? ಯೋಚನೆ

ಹಳಿ ತಪ್ಪುತ್ತಿದೆ ಕನ್ನಡ ಶಾಲೆಗಳ ವಾರ್ಷಿಕೋತ್ಸವ Read More »

error: Content is protected !!
Scroll to Top