ಲೇಖನ

ಪ್ರಮುಖ ಘಟನೆಗಳ ಮೆಲುಕಿನೊಂದಿಗೆ ಹೊಸ ವರ್ಷಕ್ಕೆ ಸ್ವಾಗತ

2024ರ ಟಾಪ್ 26 ಸುದ್ದಿಗಳು (ಮುಂದುವರಿದ ಭಾಗ)14) ದಿಲ್ಲಿ ಸಿಎಂ ಕೇಜ್ರಿವಾಲ್ ಅರೆಸ್ಟ್ ಭ್ರಷ್ಟಾಚಾರದ ಆರೋಪದಲ್ಲಿ ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ED ಮತ್ತು ಸಿಬಿಐ ಬಂಧಿಸಿ ವಿಚಾರಣೆ ಮಾಡಿ ಸೆರೆಮನೆಗೆ ಕಳುಹಿಸಿದ್ದು ಬಹು ದೊಡ್ಡ ಸುದ್ದಿ (ಮಾರ್ಚ್ 21). ಅವರು ಜೈಲಿನ ಒಳಗೆ ಕೂತು ಅಧಿಕಾರವನ್ನು ಚಲಾಯಿಸಿದ್ದು ಇನ್ನೂ ದೊಡ್ಡ ಸುದ್ದಿ. 15) ಇಸ್ರೇಲ್ ಕದನ ಕುತೂಹಲ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಇನ್ನೂ ಮುಂದುವರಿಯುತ್ತಿದ್ದು ಮೂರನೇ ಮಹಾಯುದ್ಧದ […]

ಪ್ರಮುಖ ಘಟನೆಗಳ ಮೆಲುಕಿನೊಂದಿಗೆ ಹೊಸ ವರ್ಷಕ್ಕೆ ಸ್ವಾಗತ Read More »

2024ರ ಟಾಪ್ 26 ಮೆಗಾ ಸುದ್ದಿಗಳು

ಗತಿಸಿ ಹೋದ ವರ್ಷ ಬಿಟ್ಟುಹೋದದ್ದು ವಿವಾದಗಳನ್ನು, ನೋವುಗಳನ್ನು ಮತ್ತು ಒಂದಷ್ಟು ಸಂತಸದ ಕ್ಷಣಗಳನ್ನು… 2024ರ ವರ್ಷ ಇಂದು ರಾತ್ರಿ ಇತಿಹಾಸದ ಭಾಗವಾಗಿ ನೇಪಥ್ಯಕ್ಕೆ ಸರಿದು 2025ಕ್ಕೆ ದಾರಿ ಮಾಡಿಕೊಡುತ್ತಾ ಇದೆ. ಒಮ್ಮೆ ಹಿಂತಿರುಗಿ 2024ರ ಮಹತ್ವದ ಘಟನೆಗಳನ್ನು ಇಣುಕಿ ನೋಡುತ್ತಾ ಹೋದಾಗ ‘ಕಭಿ ಖುಷ್‌ ಕಭಿ ಗಮ್’ ಹಾಡು ನೆನಪಾಗುತ್ತದೆ. ಇಡೀ ವರ್ಷ ವಿವಾದಗಳು, ನೋವುಗಳು ಮತ್ತು ಒಂದಿಷ್ಟು ಸಂತಸಗಳು ಈ ವರ್ಷದಲ್ಲಿ ನಡೆದಿವೆ. ಅವುಗಳ ಒಂದು ಇಣುಕು ನೋಟ ಇಲ್ಲಿದೆ. 1) ದೋಮ್ಮರಾಜು ಗುಕೇಶ್ ಚೆಸ್ಸಿನಲ್ಲಿ

2024ರ ಟಾಪ್ 26 ಮೆಗಾ ಸುದ್ದಿಗಳು Read More »

ಜಗತ್ತು ಕಂಡ ಶ್ರೇಷ್ಠ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್‌

ವಿದೇಶದಲ್ಲಿ ಓದಿದರೂ ಅವರದ್ದು ಅಪ್ಪಟ ದೇಶಿ ಚಿಂತನೆಯಾಗಿತ್ತು ದೇಶ ಕಂಡ ಅಪ್ರತಿಮ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿರ್ಗಮಿಸಿದ ಸುದ್ದಿ ನಿಜಕ್ಕೂ ಆಘಾತಕಾರಿ. ಅವರಿಗೆ 92 ವರ್ಷಗಳ ಪ್ರಾಯ ಆಗಿತ್ತು. 2024ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ಅವರು ವೀಲ್‌ಚೇರ್ ಮೇಲೆ ಕುಳಿತು ನಿನ್ನೆ ಮೊನ್ನೆ ಸದನಕ್ಕೆ ಬರುತ್ತಿದ್ದ ದೃಶ್ಯಗಳು ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತೆ ಇವೆ. ಸತತವಾಗಿ 10 ವರ್ಷ ಪ್ರಧಾನಮಂತ್ರಿಯಾಗಿ ಅವರು ದೇಶಕ್ಕೆ ಸಲ್ಲಿಸಿದ ಕೊಡುಗೆಗಳು ನಿಜಕ್ಕೂ ಅದ್ಭುತ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ

ಜಗತ್ತು ಕಂಡ ಶ್ರೇಷ್ಠ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್‌ Read More »

ಭಾರತೀಯ ರಾಜಕಾರಣದ ಅಜಾತಶತ್ರು ವಾಜಪೇಯಿ

ಬದುಕಿದ್ದರೆ ಇಂದವರಿಗೆ 100 ತುಂಬುತ್ತಿತ್ತು ‘ನನಗೆ ಅಷ್ಟೊಂದು ಎತ್ತರವನ್ನು ಕೊಡಬೇಡ ದೇವರೇ, ನನ್ನ ಆತ್ಮೀಯರು ನನ್ನನ್ನು ಆಲಂಗಿಸಲು ಆಗದಷ್ಟು!’ಈ ಕವಿತೆಯನ್ನು ಬರೆದ ಸಾತ್ವಿಕ ಕವಿ, ಚತುರಮತಿ ರಾಜಕಾರಣಿ, ಪ್ರಖರ ಭಾಷಣಕಾರ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಹತ್ತಾರು ಬಾರಿ ಬರೆದಿದ್ದೇನೆ. ಎಷ್ಟು ಬರೆದರೂ ಅದು ಮುಗಿದು ಹೋಗುವುದಿಲ್ಲ ಅವರ ಜೀವನ ಸಂದೇಶ.ವಾಜಪೇಯಿ ಬದುಕಿದ ರೀತಿಯೇ ಹಾಗಿತ್ತು. ಅವರ ರಾಜಕೀಯ ವಿರೋಧಿಗಳೂ ಅವರನ್ನು ಟೀಕೆ ಮಾಡಲು ಹಿಂದೆಮುಂದೆ ನೋಡುತ್ತಿದ್ದರು. ಅವರು ಹುಟ್ಟಿದ್ದು 1924 ಡಿಸೆಂಬರ್ 25ರಂದು ಒಬ್ಬ

ಭಾರತೀಯ ರಾಜಕಾರಣದ ಅಜಾತಶತ್ರು ವಾಜಪೇಯಿ Read More »

ಸಾವಿರದ ಹಾಡುಗಳ ಅಮರ ಕವಿ ಶೈಲೇಂದ್ರ

ಅವರು ಬರೆದ 900 ಹಿಂದಿ ಹಾಡುಗಳು ಕೂಡ ಸೂಪರ್ ಹಿಟ್ ಚಿಕ್ಕಂದಿನಿಂದ ಹಿಂದಿ ಸಿನೆಮಾದ ಅತ್ಯಂತ ಮಾಧುರ್ಯದ ಸುಮಧುರ ಗೀತೆಗಳನ್ನು ಕೇಳುತ್ತಾ, ಆರಾಧನೆ ಮಾಡುತ್ತ ಬೆಳೆದಿದ್ದ ನನಗೆ 60-70ರ ದಶಕದ ಕೆಲವು ಅದ್ಭುತವಾದ ಹಾಡುಗಳು ಹುಚ್ಚು ಹಿಡಿಸಿಬಿಟ್ಟಿದ್ದವು. ಆ ಹಾಡುಗಳನ್ನು ಬರೆದ ಕವಿಯ ಕಾವ್ಯಶಕ್ತಿಗೆ ಬೆರಗಾಗದೆ ಇರಲು ಸಾಧ್ಯವೇ ಇರಲಿಲ್ಲ.ಆ ಕವಿ ಯಾರು? ಎಂದು ಹುಡುಕುತ್ತಾ ಹೋದಾಗ ನನಗೆ ವಿಸ್ಮಯವೇ ಮೂಡಿತು. ಅತ್ಯಂತ ಕಡುಬಡತನದಲ್ಲಿ ಜನ್ಮ ತಾಳಿದ ಆ ಕವಿ, ಹಸಿದ ಹೊಟ್ಟೆಯಲ್ಲಿ 17 ವರ್ಷದ ಅವಧಿಯಲ್ಲಿ

ಸಾವಿರದ ಹಾಡುಗಳ ಅಮರ ಕವಿ ಶೈಲೇಂದ್ರ Read More »

ಬಡವರ ಮಕ್ಕಳು ದೊಡ್ಡ ಕನಸು ಕಾಣುವುದು ತಪ್ಪಾ?

ಕೊಳಚೆಗೇರಿಯಲ್ಲಿ ಕೂಡ ಅದ್ಭುತವಾದ ಪ್ರತಿಭೆಗಳು ಇರುತ್ತವೆ ಜಗತ್ತಿನ ಎಲ್ಲ ಮಕ್ಕಳೂ ದೇವರ ಮಕ್ಕಳೇ. ಪ್ರತಿಭೆಗೆ ಬಡವ, ಶ್ರೀಮಂತ ಎಂಬ ಬೇಧ ಖಂಡಿತವಾಗಿ ಇಲ್ಲ ಎನ್ನುವುದು ಸತ್ಯ. ಕೆಳಗೆ ನಾನು ಬರೆದ ಪ್ರತಿ ವಾಕ್ಯಕ್ಕೂ ಅಪವಾದಗಳು ಇವೆ. ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚು ನಮ್ಮ ಹಿರಿಯರು ‘ತುಂಬಾ ಆಸೆ ಪಡಬೇಡ, ಇರೋದರಲ್ಲಿ ನೆಮ್ಮದಿಯಿಂದ ಬದುಕು’ ಎಂಬ ಆಶಯದಲ್ಲಿ ಈ ಮೇಲಿನ ಗಾದೆಯನ್ನು ಹೆಣೆದರು. ಆದರೆ ದೊಡ್ಡ ಕನಸು ಕಾಣುವುದು ಬೇಡ ಎಂದು ಯಾವತ್ತೂ ಹೇಳಲಿಲ್ಲ. ‘ಗುಡಿಸಲಲ್ಲಿ ಪ್ರತಿಭೆಗಳು

ಬಡವರ ಮಕ್ಕಳು ದೊಡ್ಡ ಕನಸು ಕಾಣುವುದು ತಪ್ಪಾ? Read More »

ಹಳಿ ತಪ್ಪುತ್ತಿದೆ ಕನ್ನಡ ಶಾಲೆಗಳ ವಾರ್ಷಿಕೋತ್ಸವ

ಇರಲಿ ವಾರ್ಷಿಕೋತ್ಸವಗಳಿಗೊಂದು ಸಂಹಿತೆಯ ಚೌಕಟ್ಟು ಕಳೆದ ಹತ್ತಾರು ವರ್ಷಗಳಿಂದ ನೂರಾರು ಕನ್ನಡ ಶಾಲೆಗಳ ವಾರ್ಷಿಕೋತ್ಸವದ ಕಾರ್ಯಕ್ರಮಗಳನ್ನು ನೋಡುತ್ತಾ ಬಂದಿರುವ ನನಗೆ ಇತ್ತೀಚೆಗೆ ಹೆಚ್ಚು ನಿರಾಸೆ ಕಾಡುತ್ತಿದೆ. ಕನ್ನಡದ ಸತ್ವವನ್ನು ಜಗತ್ತಿಗೆ ತೋರಿಸುವ ವಾರ್ಷಿಕೋತ್ಸವವನ್ನು ಮಾಡುವ ಶಾಲೆಗಳೂ ಇವೆ. ಅವರಿಗೆ ನಮ್ಮ ಅಭಿನಂದನೆ ಇರಲಿ. ವಾರ್ಷಿಕೋತ್ಸವ ಕಾರ್ಯಕ್ರಮಗಳ ಉದ್ದೇಶ ಏನು? ಈ ಮಕ್ಕಳ ಉತ್ಸವಗಳ ಉದ್ದೇಶ ಸಫಲ ಆಗ್ತಾ ಇದೆಯಾ? ಈ ಉಸಿರು ಕಟ್ಟುವ ಪ್ರೋಟೋಕಾಲ್ ಕಾರ್ಯಕ್ರಮಗಳಿಂದ ನಮ್ಮ ದೇವರಂತಹ ಮುಗ್ಧ ಮಕ್ಕಳ ನಿಜವಾದ ಪ್ರತಿಭೆ ಅರಳುತ್ತಿವೆಯಾ? ಯೋಚನೆ

ಹಳಿ ತಪ್ಪುತ್ತಿದೆ ಕನ್ನಡ ಶಾಲೆಗಳ ವಾರ್ಷಿಕೋತ್ಸವ Read More »

ವಾ ಉಸ್ತಾದ್ – ಝಾಕೀರ್ ಹುಸೇನ್ ನಿರ್ಗಮನ

ತಬಲಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಪ್ರತಿಭಾವಂತ ತಬಲಾ ಸಾಮ್ರಾಟ್ ಉಸ್ತಾದ್ ಝಾಕೀರ್ ಹುಸೇನ್ ನಿಧನರಾದ ಸುದ್ದಿ ಸಂಗೀತಪ್ರೇಮಿಗಳಿಗೆ ನಿಜಕ್ಕೂ ಆಘಾತಕಾರಿ. ಆ ಶೂನ್ಯವನ್ನು ತುಂಬಿಸುವ ಇನ್ನೊಬ್ಬ ತಬಲಾ ಕಲಾವಿದ ಇಲ್ಲ ಅನ್ನುವುದು ಅವರ ತಾಕತ್ತು. ಅವರಿಗೆ 73 ವರ್ಷ ವಯಸ್ಸು ಆಗಿತ್ತು.12ನೆಯ ವಯಸ್ಸಿಗೇ ತಬಲಾ ಸೋಲೋ ಕಛೇರಿಯನ್ನು ನಡೆಸಿದ ಕೀರ್ತಿ ಅವರದ್ದು. ಅಂದಿನಿಂದಲೂ ತಬಲಾ ಅವರನ್ನು ಬಿಟ್ಟು ಹೋದದ್ದೇ ಇಲ್ಲ. ಅವರ ಮತ್ತು ತಬಲಾ ಗೆಳೆತನ 61 ವರ್ಷಗಳದ್ದು. ತಬಲಾ ಅಂದಕೂಡಲೇ ಜಗತ್ತು ನೆನಪಿಸಿಕೊಳ್ಳುವುದು, ಕನವರಿಸುವುದು ಉಸ್ತಾದರನ್ನೇ.

ವಾ ಉಸ್ತಾದ್ – ಝಾಕೀರ್ ಹುಸೇನ್ ನಿರ್ಗಮನ Read More »

ಗಾಂಧೀಜಿಯ ಕನಸಿನ ಸ್ವಚ್ಛ ಭಾರತಕ್ಕೆ ನಾವೇ ಅಡ್ಡಿ!

ಕಸದ ಕೊಂಪೆ ಆಗುತ್ತಾ ಇದೆ ಭಾರತ ನಮ್ಮ ಪ್ರಧಾನಮಂತ್ರಿ ಮೋದಿಜಿ ಅವರು ಸ್ವಚ್ಛ ಭಾರತದ ಅಭಿಯಾನಕ್ಕೆ ಕರೆ ನೀಡಿದರು. ಅದನ್ನು ಅವರು ನೂರಕ್ಕೆ ನೂರರಷ್ಟು ಪಾಲಿಸಿದರು. ಸ್ವತಃ ಪ್ರಧಾನಿ ರಸ್ತೆಗೆ ಬಂದು ಕಸಬರಿಕೆ ಹಿಡಿದು ಕಸ ಗುಡಿಸಿದರು. ಗಾಂಧೀಜಿಯವರ ಅತಿದೊಡ್ಡ ಕನಸಿನ ಅಭಿಯಾನಕ್ಕೆ ಚಾಲನೆ ನೀಡಿದರು. ಆದರೆ ಭಾರತ ಬದಲಾಯಿತಾ? 1) ಭಾರತದ 120 ಕೋಟಿ ಜನರಲ್ಲಿ ಅರ್ಧಾಂಶ ಜನ ಮಾತ್ರ ಶೌಚಾಲಯ ಬಳಸುತ್ತಾರೆ. 2) ವಾರ್ಷಿಕ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 1.86 ಲಕ್ಷ ಮಕ್ಕಳು

ಗಾಂಧೀಜಿಯ ಕನಸಿನ ಸ್ವಚ್ಛ ಭಾರತಕ್ಕೆ ನಾವೇ ಅಡ್ಡಿ! Read More »

ಮೈತುಂಬ ಗುಂಡುಗಳು ಇದ್ದರೂ ಗಣಿತದ ಆ ಮಹಾತಜ್ಞ ಬರೆಯುತ್ತಲೇ ಇದ್ದ…

21ನೇ ವರ್ಷಕ್ಕೆ ಉಸಿರು ಚೆಲ್ಲಿದ್ದ ಗಣಿತದ ಮೇರು ಪ್ರತಿಭೆಯ ದುರಂತ ಕಥೆ ಫ್ರಾನ್ಸ್ ದೇಶದ ಅತ್ಯಂತ ಪ್ರತಿಭಾವಂತ ಗಣಿತ ತಜ್ಞನ ಬದುಕು ದುರಂತವಾದದ್ದು ಯಾಕೆ? ಆತನ ಕಥೆಯನ್ನು ಓದುತ್ತಾ ಹೋಗಿ.ಅವನ ಹೆಸರು ಎವರೆಸ್ಟ್ ಗಾಲ್ವಾ (Everest Galois). ಆತ ಬದುಕಿದ್ದು 21 ವರ್ಷ ಮಾತ್ರ. ಆದರೆ ಅಷ್ಟರಲ್ಲಿ ಆತ ತಾನೆಷ್ಟು ಪ್ರತಿಭಾವಂತ ಎಂದು ಸಾಬೀತು ಮಾಡಿ ಆಗಿತ್ತು. ಆತನ ಬಾಲ್ಯದ ಒಂದು ಘಟನೆ… ಬಾಲ್ಯದಲ್ಲಿ ಅವನು ಒಂದನೇ ತರಗತಿಯಲ್ಲಿ ಓದುತ್ತಿದ್ದಾಗ ತುಂಬ ತಂಟೆ ಮಾಡುತ್ತಿದ್ದ. ಅದನ್ನು ಸಹಿಸಿಕೊಳ್ಳಲು

ಮೈತುಂಬ ಗುಂಡುಗಳು ಇದ್ದರೂ ಗಣಿತದ ಆ ಮಹಾತಜ್ಞ ಬರೆಯುತ್ತಲೇ ಇದ್ದ… Read More »

error: Content is protected !!
Scroll to Top