ಸುದ್ದಿ

ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : 8 ಮಂದಿ ಮೃತ್ಯು

ಮುಂಬಯಿ: ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿರುವ ರಕ್ಷಣಾ ಉತ್ಪನ್ನಗಳನ್ನು ತಯಾರಿಸುವ ಆರ್ಡಿನೆನ್ಸ್ ಕಾರ್ಖಾನೆಯಲ್ಲಿ ಶುಕ್ರವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 8 ಮಂದಿ ಮೃತರಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಕಾರ್ಖಾನೆಯಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. 8 ಮಂದಿ ಸಾವನ್ನಪ್ಪಿದ್ದಾರೆ. ಸ್ಫೋಟ ಸಂಭವಿಸುವ ವೇಳೆ ಕಾರ್ಖಾಣೆಯಲ್ಲಿ ಸುಮಾರು 20 ಕಾರ್ಮಿಕರು ಇದ್ದರು. 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲವು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ರಕ್ಷಣಾ ತಂಡಗಳು ಶೋಧ ನಡೆಸುತ್ತಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ […]

ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : 8 ಮಂದಿ ಮೃತ್ಯು Read More »

ಏನೇಕಲ್ ರೈತ ಯುವಕ ಮಂಡಲದ ಸಭಾಭವನಕ್ಕೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಫೆಡನ್ನಲ್ ಫ್ಯಾನ್ ಕೊಡುಗೆ

ಏನೇಕಲ್  : ಏನೇಕಲ್ ರೈತ ಯುವಕ ಮಂಡಲದ ಸಭಾಭವನಕ್ಕೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಫೆಡನ್ನಲ್ ಫ್ಯಾನ್  ಭಾನುವಾರ ನಡೆದ ಸಮಾರಂಭದಲ್ಲಿ ಕೊಡುಗೆಯಾಗಿ ನೀಡಲಾಗಿದೆ. ಏನೇಕಲ್ ರೈತ ಯುವಕ ಮಂಡಲದ ಕಟ್ಟಡ ರಚನಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಮಲ್ಲಾರರು, ಸುಬ್ರಹ್ಮಣ್ಯ ರೋಟರಿ ಕ್ಲಬ್ ಪ್ರಾಯೋಜಕರಾದ ಜೊನಲ್ ಲೆಫ್ಟಿನೆಂಟ್ , ವಿಶ್ವನಾಥ ನಡುತೋಟ ಹಾಗೂ ಸದಸ್ಯ ದಿನೇಶ್ ಎಣ್ಣೆಮಜಲ್ ರವರಿಂದ ಕೊಡುಗೆಯಾಗಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ಪೂರ್ವ ಅಧ್ಯಕ್ಷರುಗಳಾದ ಶಿವರಾಮ

ಏನೇಕಲ್ ರೈತ ಯುವಕ ಮಂಡಲದ ಸಭಾಭವನಕ್ಕೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಫೆಡನ್ನಲ್ ಫ್ಯಾನ್ ಕೊಡುಗೆ Read More »

ಹಿರಿಯ ಪತ್ರಕರ್ತ , ಹೊಸದಿಗಂತ ಪತ್ರಿಕೆಯ ವಿಶೇಷ  ವರದಿಗಾರ ಗುರುವಪ್ಪ ಬಾಳೆಪುಣಿ  ನಿಧನ

ಹಿರಿಯ ಪತ್ರಕರ್ತ , ಹೊಸದಿಗಂತ ಪತ್ರಿಕೆಯ ವಿಶೇಷ  ವರದಿಗಾರ ಗುರುವಪ್ಪ ಬಾಳೆಪುಣಿ  (62)  ಅಲ್ಪಕಾಲದ ಅಸೌಖ್ಯದಿಂದ ಇಂದು ಬಾಳೆಪುಣಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೆಪುಣಿ ಅವರು 26 ವರ್ಷ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರು ಮಿತ್ರ , ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ   ಕಾರ್ಯ ನಿರ್ವಹಿಸಿದ್ದರು. ಹರೇಕಳ ಹಾಜಬ್ಬ ಅವರನ್ನು ಮೊದಲ

ಹಿರಿಯ ಪತ್ರಕರ್ತ , ಹೊಸದಿಗಂತ ಪತ್ರಿಕೆಯ ವಿಶೇಷ  ವರದಿಗಾರ ಗುರುವಪ್ಪ ಬಾಳೆಪುಣಿ  ನಿಧನ Read More »

ಪ್ರತಿಷ್ಠಿತ  ಶ್ರೀ  ಕೃಷ್ಣ ಭವನ  ಹೋಟೆಲನ್ನು  ಉದ್ಘಾಟಣೆಗೊಳಿಸಿದ  ಸಂಜೀವ ಮಠಂದೂರು | 41 ವರ್ಷದಿಂದ  ಹೋಟೆಲ್  ಸೇವೆಯನ್ನು  ನೀಡಿದ  ಯಶಸ್ವಿ  ಉದ್ಯಮಿ ಕೃಷ್ಣಪ್ಪ  ಗೌಡ : ಅರುಣ್‍ ಕುಮಾರ್ ಪುತ್ತಿಲ

ಪುತ್ತೂರು  : ಕೃಷ್ಣಪ್ಪ  ಗೌಡ  ಮಾಲಿಕತ್ವದ  ಪುತ್ತೂರಿನ  ನೆಹರು  ನಗರದಲ್ಲಿರುವ  ಹೋಟೆಲ್  ಶ್ರೀಕೃಷ್ಣ ಭವನವು  ಸುಮಾರು  20   ವರುಷಗಳಿಂದಲೂ   ಅಧಿಕ   ಸಮಯದಿಂದ   ನೆಹರು   ನಗರದಲ್ಲಿನ ಪುತ್ತೂರು- ಮಂಗಳೂರು   ಹೆದ್ದಾರಿ   ರಸ್ತೆ   ಬದಿಯ   ಅಶ್ವಿನಿ   ಕಾಂಪ್ಲೆಕ್ಸ್’ನಲ್ಲಿ   ಕಾರ್ಯಾಚರಿಸುತ್ತಿದ್ದು,   ಇದೀಗ  ಹೋಟೆಲ್   ಶ್ರೀಕೃಷ್ಣ  ಭವನ   ಪಟ್ಲ  ಕಾಂಪ್ಲೆಕ್ಸ್’ಗೆ  ಜ. 24ರಂದು  ಸ್ಥಳಾoತರಗೊಂಡಿದೆ. ಈ  ಸಂದರ್ಭದಲ್ಲಿ  ಲಕ್ಷ್ಮೀ   ಪೂಜೆಯೊಂದಿಗೆ   ಹೋಟೆಲ್   ಶ್ರೀ  ಕೃಷ್ಣ ಭವನ  ಪಟ್ಲ  ಕಾಂಪ್ಲೆಕ್ಸ್’ ನ ನೂತನ   ಕಟ್ಟಡ   ಶುಭಾರಂಭಗೊಂಡಿದೆ.   ನೂತನ   ಹೋಟೆಲನ್ನು   ಪುತ್ತೂರು   ಮಾಜಿ   ಶಾಸಕ  ಸಂಜೀವ

ಪ್ರತಿಷ್ಠಿತ  ಶ್ರೀ  ಕೃಷ್ಣ ಭವನ  ಹೋಟೆಲನ್ನು  ಉದ್ಘಾಟಣೆಗೊಳಿಸಿದ  ಸಂಜೀವ ಮಠಂದೂರು | 41 ವರ್ಷದಿಂದ  ಹೋಟೆಲ್  ಸೇವೆಯನ್ನು  ನೀಡಿದ  ಯಶಸ್ವಿ  ಉದ್ಯಮಿ ಕೃಷ್ಣಪ್ಪ  ಗೌಡ : ಅರುಣ್‍ ಕುಮಾರ್ ಪುತ್ತಿಲ Read More »

ನಾಪತ್ತೆಯಾದ ಬಾಲಕ ಪತ್ತೆ

ಸುಳ್ಯ  :  ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಶಾಂತಿ ಮಜಲಿನಿಂದ ನಾಪತ್ತೆಯಾಗಿದ್ದ ಅನ್ವಿತ್ ಎನ್ನುವ ಬಾಲಕ ಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ಈತ ಅಜ್ಜಾವರದ ಭಜನಾ ಮಂದಿರದಲ್ಲಿ ಜ.23ರ ಗುರುವಾರ ಮುಂಜಾನೆ ಪತ್ತೆಯಾಗಿದ್ದಾನೆ. ಅಡಂಗಾಯ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅನ್ವಿತ್‍ ಜ.22ರ ಬುಧವಾರ ಮಧ್ಯಾಹ್ನ ನಂತರ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಅನ್ವಿತ್ ಮೂಲತ ಪುತ್ತೂರು ತಾಲೂಕಿನ ಈಶ್ವರಮಂಗಳ ನಿವಾಸಿಯಾಗಿದ್ದು, ತನ್ನ ಅಜ್ಜಿ ಮನೆಯಾದ ಶಾಂತಿಮೂಲೆಯಿಂದ ಶಾಲೆಗೆ ಹೋಗುತ್ತಿದ್ದಾನೆ. ಬಾಲಕ ನಾಪತ್ತೆಯಾಗಿರುವ ಬಗ್ಗೆ ಸುಳ್ಯ

ನಾಪತ್ತೆಯಾದ ಬಾಲಕ ಪತ್ತೆ Read More »

ಸೈಫ್‌ ಅಲಿ ಖಾನ್‌ ಹಲ್ಲೆ ಪ್ರಕರಣದಲ್ಲಿ ಬಂಧಿಸಿರುವ ಆರೋಪಿ ನಕಲಿ

ಇಡೀ ಬಂಧನ ಪ್ರಕ್ರಿಯೆ ಮುಂಬಯಿ ಪೊಲೀಸರ ಕಟ್ಟುಕತೆ ಎಂದ ಆರೋಪಿಯ ತಂದೆ ಮುಂಬಯಿ: ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲಾಗಿರುವ ದಾಳಿಯ ಬಗ್ಗೆಯೇ ಹಲವು ಅನುಮಾನಗಳು ಸೃಷ್ಟಿಯಾಗಿರುವ ಬೆನ್ನಿಗೆ ಪೊಲೀಸರು ಬಂಧಿಸಿರುವುದು ನಕಲಿ ಆರೋಪಿ ಎಂಬ ಆರೋಪ ಕೇಳಿಬಂದಿದೆ. ಪೊಲೀಸ್ ವಶದಲ್ಲಿರುವ ಆರೋಪಿ ಮೊಹಮ್ಮದ್ ಶರೀಫುಲ್‌ ಇಸ್ಲಾಂನ ತಂದೆ ಶರೀಫುಲ್ ಫಕೀರ್, ತನ್ನ ಮಗನನ್ನು ವಿನಾಕಾರಣ ಬಂಧಿಸಲಾಗಿದೆ. ಆತ ಸೈಫ್ ಮೇಲೆ ದಾಳಿ ಮಾಡಿದ ವ್ಯಕ್ತಿಯಲ್ಲ. ಇದು ವ್ಯವಸ್ಥಿತಿ ಷಡ್ಯಂತ್ರ ಎಂದು ಹೇಳಿದ್ದಾರೆ. ಮುಂಬಯಿ ಪೊಲೀಸರು

ಸೈಫ್‌ ಅಲಿ ಖಾನ್‌ ಹಲ್ಲೆ ಪ್ರಕರಣದಲ್ಲಿ ಬಂಧಿಸಿರುವ ಆರೋಪಿ ನಕಲಿ Read More »

ಸೆಹವಾಗ್‌ ದಾಂಪತ್ಯದಲ್ಲಿ ಬಿರುಕು?

ಹಲವಾರು ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಗಂಡ-ಹೆಂಡತಿ ಹೊಸದಿಲ್ಲಿ: ಭಾರತದ ಮಾಜಿ ಡ್ಯಾಶಿಂಗ್‌ ಓಪನರ್‌ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ದಾಂಪತ್ಯದಲ್ಲೂ ಬಿರುಕು ಕಾಣಿಸಿಕೊಂಡಿದೆ ಎಂಬ ಸುದ್ದಿ ಸೆಹವಾಗ್‌ ಅಭಿಮಾನಿಗಳನ್ನು ವಿಚಲಿತಗೊಳಿಸಿದೆ. ಸೆಹವಾಗ್‌ ಮತ್ತು ಪತ್ನಿ ಆರತಿ ಅಹ್ಲಾವತ್ 20 ವರ್ಷಗಳ ದಾಂಪತ್ಯ ಜೀವನ ಮುಕ್ತಾಯ ಹಂತದಲ್ಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.ಸೆಹ್ವಾಗ್ ಮತ್ತು ಆರತಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದು, ಶೀಘ್ರವೇ ವಿಚ್ಛೇದನ ನೀಡಲಿದ್ದಾರೆ ಎಂದು ವರದಿಯಾಗಿದೆ. 2004ರಲ್ಲಿ ಮದುವೆಯಾದ ಸೆಹ್ವಾಗ್‌ ಮತ್ತು ಆರತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ಹಲವಾರು

ಸೆಹವಾಗ್‌ ದಾಂಪತ್ಯದಲ್ಲಿ ಬಿರುಕು? Read More »

ಯಕ್ಷಗಾನ ಕಲಾವಿದನ ಮೇಲೆ ಇನ್ನೊಂದು ಮೇಳದ ಕಲಾವಿದನಿಂದ ಹಲ್ಲೆ

ಗೆಳೆಯರಾಗಿದ್ದ ಎರಡು ಮೇಳಗಳ ಕಲಾವಿದರ ನಡುವೆ ಹಣಕಾಸಿನ ತಕರಾರು ಪಡುಬಿದ್ರಿ: ಹಣಕಾಸು ವಹಿವಾಟಿನ ತಕರಾರಿನ ಹಿನ್ನೆಲೆಯಲ್ಲಿ ಒಂದು ಮೇಳದ ಯಕ್ಷಗಾನ ಕಲಾವಿದನ ಮೇಲೆ ಇನ್ನೊಂದು ಮೇಳದ ಯಕ್ಷಗಾನ ಕಲಾವಿದ ಬರ್ಬರವಾಗಿ ಹಲ್ಲೆ ಮಾಡಿದ ಸಂಬಂಧ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. ಸಸಿಹಿತ್ಲು ಮೇಳದ ಕಲಾವಿದ ಪಡುಬಿದ್ರಿಯ ನಿತಿನ್‌ ಕುಮಾರ್‌ ಮೇಲೆ ಪಾವಂಜೆ ಮೇಳದ ಕಲಾವಿದ ಸಚಿನ್‌ ಅಮೀನ್‌ ಉದ್ಯಾವರ, ಅವರ ತಂದೆ ಕುಶಾಲಣ್ಣ ಹಾಗೂ ಓರ್ವ ಫೈನಾನ್ಶಿಯರ್‌ ಸೇರಿಕೊಂಡು ಉದ್ಯಾವರದ ಮನೆಯೊಂದರಲ್ಲಿ ಜ.21ರಂದು ಕೂಡಿಹಾಕಿ

ಯಕ್ಷಗಾನ ಕಲಾವಿದನ ಮೇಲೆ ಇನ್ನೊಂದು ಮೇಳದ ಕಲಾವಿದನಿಂದ ಹಲ್ಲೆ Read More »

ಕಾರ್ಕಳ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಪತ್ತೆ : ಕ್ವಾರಂಟೈನ್‌ನಲ್ಲಿಟ್ಟು ಚಿಕಿತ್ಸೆ

ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಲಾದ ಸೋಂಕು ಮಂಗಳೂರು: ದುಬೈಯಿಂದ ಬಂದಿದ್ದ ಕಾರ್ಕಳ ಮೂಲದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್‌ ಪ್ರಕರಣ ಪತ್ತೆಯಾಗಿದೆ. ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ 40 ವರ್ಷದ ಈ ವ್ಯಕ್ತಿಯ ಮಾದರಿಯನ್ನು ಪರೀಕ್ಷೆ ಮಾಡಿ ಮಂಕಿಪಾಕ್ಸ್ (MPox) ಪ್ರಕರಣ ದೃಢಪಡಿಸಿದೆ. ಕಳೆದ 19 ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿರುವ ಈ ವ್ಯಕ್ತಿ ಜನವರಿ 17ರಂದು ಊರಿಗೆ ಆಗಮಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ದದ್ದುಗಳ ಲಕ್ಷಣಗಳು ಕಂಡುಬಂದವು ಮತ್ತು ಜ್ವರ ಕಾಣಿಸಿಕೊಂಡಿತ್ತು. ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಯಲ್ಲಿ

ಕಾರ್ಕಳ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಪತ್ತೆ : ಕ್ವಾರಂಟೈನ್‌ನಲ್ಲಿಟ್ಟು ಚಿಕಿತ್ಸೆ Read More »

ಮರದ ಕೊಂಬೆಗೆ ನೇಣು ಬಿಗಿದು ವ್ಯಕ್ತಿಯೋರ್ವ ಆತ್ಮಹತ್ಯೆ

ಪುತ್ತೂರು : ವ್ಯಕ್ತಿಯೋರ್ವರು ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುವನ್ನೂರು ಗ್ರಾಮದ ಪುಂಡಿಕಾಯಿಯಲ್ಲಿ ನಡೆದಿದೆ. ಪಡುವನ್ನೂರು ಗ್ರಾಮದ ಪುಂಡಿಕಾಯಿ ನಿವಾಸಿ  ವೆಯರಿಂಗ್ ಕೆಲಸ ಮಾಡುತ್ತಿದ್ದ ಮೋಹನ್ (31)ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಮೋಹನ್ ಅವರು ಜ.20ರಂದು ರಾತ್ರಿ ಊಟ ಮಾಡಿ ಮಲಗಿದವರು ಜ.21ರ ಬೆಳಗ್ಗೆ ನಾಪತ್ತೆಯಾಗಿದ್ದರು. ವಿಷಯ ಅರಿತು ಹುಡುಕಾಡಿದಾಗ ಮೋಹನ್ ಅವರು ಮನೆಯ ಪಕ್ಕದ ಪದ್ಮನಾಭ ಭಟ್ ಎಂಬವರ ಜಾಗದ ಕಾಡು

ಮರದ ಕೊಂಬೆಗೆ ನೇಣು ಬಿಗಿದು ವ್ಯಕ್ತಿಯೋರ್ವ ಆತ್ಮಹತ್ಯೆ Read More »

error: Content is protected !!
Scroll to Top