ಸುದ್ದಿ

ಖ್ಯಾತ ಸೀರಿಯಲ್‌ ನಟಿಗೆ ಕಿರುಕುಳ : ಆರೋಪಿ ಅರೆಸ್ಟ್‌

ಸೋಷಿಯಲ್‌ ಮೀಡಿಯಾದಲ್ಲಿ ಅಸಭ್ಯ ವಿಡಿಯೋ ಕಳುಹಿಸಿ ವಿಕೃತಿ ಬೆಂಗಳೂರು : ಖ್ಯಾತ ಸೀರಿಯಲ್‌ ನಟಿಯೊಬ್ಬರಿಗೆ ಕಾಮುಕನೊಬ್ಬ ಕೊಲೆಯಾದ ರೇಣುಕಾಸ್ವಾಮಿ ರೀತಿ ಸೋಷಿಯಲ್‌ ಮೀಡಿಯಾದಲ್ಲಿ ಅಶ್ಲೀಲ ವಿಡಿಯೋ ಕಳಿಸಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ತೆಲುಗು ಹಾಗೂ ಕನ್ನಡ ಧಾರವಾಹಿಗಳಲ್ಲಿ ಸಂತ್ರಸ್ತೆ ನಟಿಸಿ ಪ್ರಸಿದ್ಧರಾಗಿರುವ ನಟಿಗೆ ಫೇಸ್‌ಬುಕ್‌ನಲ್ಲಿ ಗುಪ್ತಾಂಗದ ವಿಡಿಯೋ ಕಳಿಸಿ ಕಿರುಕುಳ ನೀಡಿದ್ದಾನೆ. ಆರೋಪಿ ಕಳೆದ 3 ತಿಂಗಳಿನಿಂದ ನಟಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಆರೋಪಿ ಮೊದಲು ಫೇಸ್‌ಬುಕ್‌ನಲ್ಲಿ ʻNAVEENZʼ ಎಂಬ ಖಾತೆಯಿಂದ ಫ್ರೆಂಡ್ […]

ಖ್ಯಾತ ಸೀರಿಯಲ್‌ ನಟಿಗೆ ಕಿರುಕುಳ : ಆರೋಪಿ ಅರೆಸ್ಟ್‌ Read More »

Dr. RP ಕುರುಂಜಿಯವರಿಂದ ಬೆಳ್ಳಿ ರಥ ಸ್ವೀಕಾರ

ಕುಂಭಾಶಿ: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಸುಳ್ಯದ ರೇಣುಕಾಪ್ರಸಾದ್ ಕುರುಂಜಿ ಮತ್ತು ಕುಟುಂಬದವರು ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ದೇವರಿಗೆ ಸರ್ಪಿಸಲಿರುವ 18 ಆಡಿ ಎತ್ತರ ಮತ್ತು ಸುಮಾರು ಎರಡು ಸಾವಿರ ಕೆ.ಜಿ. ಭಾರದ ಬೆಳ್ಳಿರಥವನ್ನು ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜಗೋಪಾಲಾಚಾರ್ಯ ಅವರಿಂದ ಸ್ವೀಕಾರ ಮಾಡಿದರು. ಉಡುಪಿ ಜಿಲ್ಲಾ ಕುಂಭಾಶಿಯ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ನಿನ್ನೆ ದಿನಾಂಕ ನವೆಂಬರ್ 3ರಂದು ರಾತ್ರಿ ಗಂಟೆ 8ಕ್ಕೆ ಶಾಸ್ತ್ರೋಕ್ತ ಪೂಜಾ ವಿಧಿ ವಿಧಾನಗಳ ಬಳಿಕ ರಥಕ್ಕೆ ಕುತ್ತಿಪೂಜೆ ನಡೆದ

Dr. RP ಕುರುಂಜಿಯವರಿಂದ ಬೆಳ್ಳಿ ರಥ ಸ್ವೀಕಾರ Read More »

ತೆಲಂಗಾಣ ಅಪಘಾತದಲ್ಲಿ ಮೂವರು ಒಡಹುಟ್ಟಿದ ಸಹೋದರಿಯರು ಸಾವು

ಜಲ್ಲಿ ಸಾಗಿಸುತ್ತಿದ್ದ್‌ ಟ್ರಕ್‌ ಬಸ್ಸಿನ ಮೇಲೆ ಮಗುಚಿಬಿದ್ದು ಸಂಭವಿಸಿದ ಭೀಕರ ದುರಂತ ಹೈದರಾಬಾದ್ : ತೆಲಂಗಾಣದಲ್ಲಿ ಸೋಮವಾರ ಬೆಳಗ್ಗೆ ಜಲ್ಲಿ ಸಾಗಿಸುತ್ತಿದ್ದ ಟ್ರಕ್‌ ಬಸ್ಸಿನ ಮೇಲೆ ಮಗುಚಿಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಒಡಹುಟ್ಟಿದ ಮೂವರು ಸಹೋದರಿಯರು ಕೂಡ ಸಾವನ್ನಪ್ಪಿದ್ದಾರೆ. ಮನೆಗೆ ಬೆಳಕಾಗಿದ್ದ ಮೂವರು ಹೆಣ್ಣುಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತಾಗಿದೆ. ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಈ ಅಪಘಾತದಲ್ಲಿ 20 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಯಲ್ಲಯ್ಯ ಗೌಡ ಎಂಬವರ ಮೂವರು ಹೆಣ್ಣುಮಕ್ಕಳು

ತೆಲಂಗಾಣ ಅಪಘಾತದಲ್ಲಿ ಮೂವರು ಒಡಹುಟ್ಟಿದ ಸಹೋದರಿಯರು ಸಾವು Read More »

ಆನ್‌ಲೈನ್‌ ಟ್ರೇಡಿಂಗ್‌ ನೆಪದಲ್ಲಿ 32 ಲ. ರೂ. ವಂಚನೆ

ಮಂಗಳೂರು : ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೆಚ್ಚು ಲಾಭ ದೊರೆಯುವುದಾಗಿ ನಂಬಿಸಿ 32.06 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಸೆ.9ರಂದು ಫೇಸ್‌ಬುಕ್ ನೋಡುತ್ತಿರುವಾಗ ಕಾವ್ಯ ಶೆಟ್ಟಿ ಹೆಸರಿನಲ್ಲಿ ಫ್ರೆಂಡ್ಸ್ ರಿಕ್ವೆಸ್ಟ್ ಬಂದಿದೆ. ಅದನ್ನು ಅಕ್ಸೆಪ್ಟ್ ಮಾಡಿ ಅವರೊಂದಿಗೆ ಚಾಟ್ ಮಾಡಿದ್ದಾರೆ. ಆಕೆ ತಾನು ಮುಂಬಯಿನಲ್ಲಿ ಟ್ರೇಡಿಂಗ್ ಕೆಲಸ ಮಾಡಿಕೊಂಡಿದ್ದು, ಅದರಿಂದ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿದ್ದಾಳೆ. ಇದರಿಂದ ಆಸಕ್ತಿಗೊಂಡು ಟ್ರೇಡಿಂಗ್‌ನಲ್ಲಿ ಕೆಲಸ ಮಾಡಲು ಒಪ್ಪಿದ ದೂರುದಾರಿಗೆ

ಆನ್‌ಲೈನ್‌ ಟ್ರೇಡಿಂಗ್‌ ನೆಪದಲ್ಲಿ 32 ಲ. ರೂ. ವಂಚನೆ Read More »

ಜಾತಿ ಗಣತಿ ಮಾಹಿತಿ ಸಂಗ್ರಹಕ್ಕೆ ಹೊಸ ಪ್ಲಾನ್‌

ಸಮೀಕ್ಷೆಯಿಂದ ಹೊರಗುಳಿದವರ ಮಾಹಿತಿ ಸಂಗ್ರಹಕ್ಕೆ ಹೊಸ ಪ್ಲಾನ್‌ ಮಾಡಿದ ಆಯೋಗ ಬೆಂಗಳೂರು : ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮುಕ್ತಾಯಗೊಂಡಿದ್ದು, ನವೆಂಬರ್​​ 10ರ ವರೆಗೆ ಆನ್​ಲೈನ್​ನಲ್ಲಿ ಸ್ವಯಂಪ್ರೇರಿತರಾಗಿ ಭಾಗಿ ಆಗಲು ಅವಕಾಶವಿದೆ. ಮನೆ ಮನೆ ಸಮೀಕ್ಷೆ ವೇಳೆ ಸಾಕಷ್ಟು ಮಂದಿ ಗೊಂದಲ, ರಾಜಕೀಯ ಕೆಸರೆರೆಚಾಟದ ಹಿನ್ನೆಲೆಯಲ್ಲಿ ಮಾಹಿತಿ ನೀಡಲು ನಿರಾಕರಿಸಿದ್ದರು. ಆದರೂ1.46 ಕೋಟಿ ಕುಟುಂಬಗಳ 6 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಸಮೀಕ್ಷೆ ಕವರ್​​ ಮಾಡಿದೆ. ಇನ್ನು ಮನೆ ಮನೆ

ಜಾತಿ ಗಣತಿ ಮಾಹಿತಿ ಸಂಗ್ರಹಕ್ಕೆ ಹೊಸ ಪ್ಲಾನ್‌ Read More »

ಕಾಂಗ್ರೆಸ್‌ ಹೆಣೆಯುವ ಜಾಲಕ್ಕೆ ಬೀಳಬೇಡಿ : ಬಿಜೆಪಿ ನಾಯಕರಿಗೆ ಆರ್‌ಎಸ್‌ಎಸ್‌ ಪಾಠ

ಆತುರದ, ಉದ್ವೇಗದ ಹೇಳಿಕೆ ನೀಡಿ ಕಾಂಗ್ರೆಸ್ ಜಾಲದಲ್ಲಿ ಸಿಕ್ಕಿಬೀಳಬೇಡಿ ಎಂದು ಸಲಹೆ ಬೆಂಗಳೂರು: ಆತುರದ, ಉದ್ವೇಗದ ಹೇಳಿಕೆ ನೀಡಿ ಕಾಂಗ್ರೆಸ್ ಹೆಣೆಯುವ ಜಾಲದಲ್ಲಿ ಸಿಕ್ಕಿಬೀಳಬೇಡಿ ಎಂದು ಬಿಜೆಪಿ ನಾಯಕರಿಗೆ ಆರ್‌ಎಸ್‌ಎಸ್‌ ಪಾಠ ಮಾಡಿದೆ. ಪಥ ಸಂಚಲನ ಜಟಾಪಟಿ ನಡುವೆ ಬಿಜೆಪಿ ನಾಯಕರ ಜೊತೆ ಆರ್‌ಎಸ್‌ಎಸ್ ಸೋಮವಾರ ಬೆಂಗಳೂರಿನ ರೇಸ್​ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾ ಭವನದಲ್ಲಿ ಪ್ರಸಕ್ತ ವಿದ್ಯಮಾನಗಳ ಕುರಿತು ಮಹತ್ವದ ಬೈಠಕ್ ನಡೆಸಿದ್ದು, ಇದರಲ್ಲಿ ರಾಜಕೀಯ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ತಿಳಿಸಿದೆ. ಆರ್‌ಎಸ್‌ಎಸ್ ಮುಖಂಡರಾದ ತಿಪ್ಪೇಸ್ವಾಮಿ,

ಕಾಂಗ್ರೆಸ್‌ ಹೆಣೆಯುವ ಜಾಲಕ್ಕೆ ಬೀಳಬೇಡಿ : ಬಿಜೆಪಿ ನಾಯಕರಿಗೆ ಆರ್‌ಎಸ್‌ಎಸ್‌ ಪಾಠ Read More »

ಮೆಟ್ರೋ ನಿಲ್ದಾಣದಲ್ಲಿ ಬೇರ್ಪಟ್ಟ ಮಗು ಮರಳಿ ತಾಯಿಯ ಮಡಿಲಿಗೆ

ಬೆಂಗಳೂರು: ನಮ್ಮ ಮೆಟ್ರೋ‌ದಲ್ಲಿ ‌ತಾಯಿಯಿಂದ ಬೇರೆಯಾಗಿದ್ದ ‌6 ವರ್ಷದ ಮಗು ಮರಳಿ ತಾಯಿಯ ಮಡಿಲು ಸುರಕ್ಷಿತವಾಗಿ ಸೇರಿದ ಘಟನೆ ನಡೆದಿದೆ. ನ. 1 ರಂದು ಮಧ್ಯಾಹ್ನದ ವೇಳೆಗೆ 6 ವರ್ಷದ ಹೆಣ್ಣು ಮಗುವೊಂದು ಕೆಂಪೇಗೌಡ ಮೆಟ್ರೋ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ‌ತಾಯಿಯಿಂದ ಬೇರ್ಪಟ್ಟಿತ್ತು. ಪ್ರಯಾಣಿಕರೊಬ್ಬರು ಬೇರ್ಪಟ್ಟ ಮಗುವನ್ನು ಭದ್ರತಾ‌ ಸಿಬ್ಬಂದಿಗೆ ಒಪ್ಪಿಸಿದ್ದರು. ಮಗು ಸಿಕ್ಕ ಬಗ್ಗೆ ಮೆಟ್ರೋ ಸಿಬ್ಬಂದಿ ಎಲ್ಲಾ ಮೆಟ್ರೋ ನಿಲ್ದಾಣಗಳಿಗೂ ಮಾಹಿತಿ ನೀಡಿದ್ದು, ಮಗುವನ್ನು ಮೆಟ್ರೋ ನಿಲ್ದಾಣದಲ್ಲೇ ಸುರಕ್ಷಿತವಾಗಿ ಕೂರಿಸಿಕೊಂಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ‌ನಿಲ್ದಾಣ ನಿಯಂತ್ರಕರು

ಮೆಟ್ರೋ ನಿಲ್ದಾಣದಲ್ಲಿ ಬೇರ್ಪಟ್ಟ ಮಗು ಮರಳಿ ತಾಯಿಯ ಮಡಿಲಿಗೆ Read More »

ಪುತ್ತೂರು: ‘ಜ್ಞಾನ ಚಕ್ಷು’ ಸ್ಮರಣಶಕ್ತಿ ಶಿಬಿರದ ಯಶಸ್ವಿ ಸಮಾರೋಪ – ಮಕ್ಕಳ ಪ್ರತಿಭೆಗೆ ಮೆಚ್ಚುಗೆ

ಪುತ್ತೂರು: ಕೇಪುಳು ಶಿರಡಿ ಸಾಯಿ ಮಂದಿರದ ಆವರಣದಲ್ಲಿ ಅಕ್ಟೋಬರ್ 21 ರಂದು ಪ್ರಾರಂಭವಾಗಿದ್ದ, ಮಕ್ಕಳಿಗೆ 10 ದಿನಗಳ ಕಾಲ ಸ್ಮರಣಶಕ್ತಿ ಮತ್ತು ಸಾಮರ್ಥ್ಯ ಹೆಚ್ಚಿಸುವ ‘ಜ್ಞಾನ ಚಕ್ಷು’ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಭಾನುವಾರ, ನವೆಂಬರ್ 02, 2025 ರಂದು ಯಶಸ್ವಿಯಾಗಿ ನೆರವೇರಿತು. ಬೆಳಿಗ್ಗೆ 9:30ಕ್ಕೆ ಪೂಜೆ, ಭಜನೆ ಮತ್ತು ಪೋಷಕರಿಗೆ ವಿಶೇಷ ಉಪನ್ಯಾಸದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಬೆಳಿಗ್ಗೆ 11:30ಕ್ಕೆ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.ಸಮಾರಂಭಕ್ಕೆ ಡಾ. ಉದಯಕೃಷ್ಣ ಬಿ, ಪ್ರೊ. ಸೀತಾರಾಮ ಕೇವಳ, ಶ್ರೀ ನಾರಾಯಣ

ಪುತ್ತೂರು: ‘ಜ್ಞಾನ ಚಕ್ಷು’ ಸ್ಮರಣಶಕ್ತಿ ಶಿಬಿರದ ಯಶಸ್ವಿ ಸಮಾರೋಪ – ಮಕ್ಕಳ ಪ್ರತಿಭೆಗೆ ಮೆಚ್ಚುಗೆ Read More »

ಕನ್ನಡ, ತುಳು ಭಾಷೆಗಳ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?

ಉಡುಪಿ: ಕೇಂದ್ರ ವಿತ್ತ ಸಚಿವೆ ‌ನಿರ್ಮಲಾ ಸೀತಾರಾಮನ್ ಅವರು ದಕ್ಷಿಣ ಭಾರತದ ಭಾಷೆಗಳ ಶ್ರೀಮಂತಿಕೆ ಮತ್ತು ಸಾಂಸ್ಕೃತಿಕ ವೈಭವವನ್ನು ಶ್ಲಾಘಿಸಿದ್ದಾರೆ. ವಿಶೇಷವಾಗಿ ಕನ್ನಡ ಮತ್ತು ತುಳು ಭಾಷೆಗಳ ಸಾಂಸ್ಕೃತಿಕ ಶ್ರೀಮಂತಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಖಾಸಗಿ ಮಾಧ್ಯಮದ ಜೊತೆಗೆ ಮಾತನಾಡಿರುವ ಅವರು, ಕನ್ನಡ ಭಾಷಾ ಶಕ್ತಿ ಅದ್ಭುತ. ಕನ್ನಡದ ಆಳವಾದ ಆಧ್ಯಾತ್ಮಿಕತೆಯನ್ನು ದಾಸ ಸಾಹಿತ್ಯ, ಕೀರ್ತನೆಗಳು ಪ್ರತಿಬಿಂಬಿಸುತ್ತವೆ. ನಾನು ತುಳು ಭಾಷೆಯನ್ನು ಸಹ ಇಷ್ಟಪಡುತ್ತಿದ್ದು, ಅದು ಅದರ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಳಿಸಿಕೊಂಡು ಮುನ್ನಡೆಯುತ್ತಿದೆ ಎಂದು ಹೇಳಿದ್ದಾರೆ. ಕನ್ನಡ

ಕನ್ನಡ, ತುಳು ಭಾಷೆಗಳ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು? Read More »

ಕಲಬೆರಕೆ ಶೇಂದಿ ಸೇವನೆ: 15 ಜನರು ಅಸ್ವಸ್ಥ

ತುಮಕೂರು: ಕಲಬೆರಕೆ ಶೇಂದಿ ಸೇವಿಸಿ 15 ಮಂದಿ ಅಸ್ವಸ್ಥರಾದ ಘಟನೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಆಂಧ್ರ ಗಡಿ ಭಾಗದಲ್ಲಿ ನಡೆದಿದೆ. ಅಸ್ವಸ್ಥರಾದವರಲ್ಲಿ ‌ತೆರಿಯೂರು ಗ್ರಾಮದ 10 ಮಂದಿ ಮತ್ತು ಆಂಧ್ರದ ಚೋಳೂರು ಗ್ರಾಮದ 5 ಮಂದಿ ಸೇರಿದ್ದು, ಇವರಲ್ಲಿ ಇಬ್ಬರು ಗಂಭೀರವಾಗಿದ್ದಾರೆ. ಅಸ್ವಸ್ಥರನ್ನು ಹಿರಿಯೂರು ಮತ್ತು ಬೆಂಗಳೂರಿನ ಆಸ್ಪತ್ರೆ ಗಳಿಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಘಟನಾ ‌ಸ್ಥಳಕ್ಕೆ ಕೊಡಿಗೇನಹಳ್ಳಿ ಮತ್ತು ಆಂಧ್ರದ ಚೋಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಲಬೆರಕೆ ಶೇಂದಿ ಸೇವನೆ: 15 ಜನರು ಅಸ್ವಸ್ಥ Read More »

error: Content is protected !!
Scroll to Top