ಪಿಎಸ್ ಐ ಪರಶುರಾಮ ಹಠಾತ್ ಮೃತ್ಯು | ನಿಯಮಬಾಹಿರ ವರ್ಗಾವಣೆ ಆರೋಪ ಮಾಡಿರುವ ಕುಟುಂಬಸ್ಥರು

ಬೆಂಗಳೂರು : ಪಿಎಸ್‌ಐ ಆಗಿ ಯಾದಗಿರಿ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸ್ತಿದ್ದ ಪರಶುರಾಮ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪಿಎಸ್‌ಐ ಪರಶುರಾಮ್ ಅವರು ಸೈಬರ್ ಕ್ರೈಮ್ ಪಿಎಸ್‌ಐ ಆಗಿ ವರ್ಗಾವಣೆಗೊಂಡಿದ್ದರು. ಮೊನ್ನೆ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ನಿನ್ನೆ ಸಂಜೆ ಪೊಲೀಸ್‌ ಕ್ವಾಟರ್ಸ್‌ ನಿವಾಸದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪಿಎಸ್‌ಐ ಪರಶುರಾಮ ಸಾವಿನ ಸುತ್ತ ಅನುಮಾನಗಳು ಶುರುವಾಗಿದ್ದು, ಯಾದಗಿರಿ ನಗರದ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನಗರದ ಖಾಸಗಿ ಆಸ್ಪತ್ರೆ ಬಳಿ ವಿವಿಧ ಸಂಘಟನೆಯ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. […]

ಪಿಎಸ್ ಐ ಪರಶುರಾಮ ಹಠಾತ್ ಮೃತ್ಯು | ನಿಯಮಬಾಹಿರ ವರ್ಗಾವಣೆ ಆರೋಪ ಮಾಡಿರುವ ಕುಟುಂಬಸ್ಥರು Read More »

ಡಾ.ಕಿಶಾನ್‍ ರಾವ್ ಬಾಳಿಲರಿಗೆ ಸೇವಾರತ್ನ ಪ್ರಶಸ್ತಿ

ಪುತ್ತೂರು: ಮ್ಯಾಕ್ಸ್ ಲೈಫ್‍ ಇನ್ಸೂರೆನ್ಸ್ ಹಾಗೂ ಆಕ್ಸಿಸ್ ಬ್ಯಾಂಕ್‍ ವತಿಯಿಂದ ಜಿಲ್ಲಾ ಮಟ್ಟದ ಸೇವಾರತ್ನ ಪ್ರಶಸ್ತಿಯನ್ನು ಡಾ.ಕಿಶಾನ್‍ ರಾವ್ ಬಾಳಿಲ ಅವರಿಗೆ ನೀಡಿ ಗೌರವಿಸಲಾಯಿತು. ಡಾ.ಕಿಶಾನ್‍ ರಾವ್ ಅವರು ಸುಳ್ಯ ತಾಲೂಕಿನ ಕಳೆಂಜ ಗ್ರಾಮದ ಅಯ್ಯನಕಟ್ಟೆಯಲ್ಲಿರುವ ಗೋಕುಲ ಸಂಕೀರ್ಣದಲ್ಲಿ ಆರೋಗ್ಯಧಾಮ ಮಲ್ಟಿ ಸ್ಪೆಶಾಲಿಟಿ ಮೆಡಿಕಲ್ ಸೆಂಟರ್‍ ಹೊಂದಿದ್ದಾರೆ. ಸಂಸ್ಥೆ ವಿಶೇಷವಾಗಿ ಅತ್ಯಾಧುನಿಕ ಕ್ಲಿನಿಕ್‍ ನ್ನು ಹೊಂದಿದ್ದು, ಕಡಿಮೆ ದರದಲ್ಲಿ, ಉತ್ತಮ ಗುಣಮಟ್ಟದ ಎಲ್ಲಾ ಸೇವೆಯನ್ನು ಗ್ರಾಮೀಣ ಭಾಗದ ಜನರಿಗೆ ನೀಡುತ್ತಿದ್ದಾರೆ.

ಡಾ.ಕಿಶಾನ್‍ ರಾವ್ ಬಾಳಿಲರಿಗೆ ಸೇವಾರತ್ನ ಪ್ರಶಸ್ತಿ Read More »

ಬೇರಿಕೆಯಲ್ಲಿ ಗುಡ್ಡ ಕುಸಿತ | ಸೇಡಿಯಾಪು-ಬೇರಿಕೆ- ಪಡ್ನೂರು ಸಂಪರ್ಕ ರಸ್ತೆ ತಾತ್ಕಾಲಿಕ ಬಂದ್

ಪುತ್ತೂರು: ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಪಡ್ನೂರು ಗ್ರಾಮದ ಬೇರಿಕೆ ಎಂಬಲ್ಲಿ ಗುಡ್ಡ ಜರಿದಿದೆ. ಈ ನಿಟ್ಟಿನಲ್ಲಿ ಸೇಡಿಯಾಪು-ಬೇರಿಕೆ- ಪಡ್ನೂರು ಸಂಪರ್ಕ ರಸ್ತೆಯನ್ನು ತಾತ್ಕಾಲಿಕ ಮುಚ್ಚಲಾಗಿದೆ. ಗುಡ್ಡ ಜರಿದ ಪರಿಣಾಮ ಅಲ್ಲಿಯ ಮೂರು ಕುಟುಂಬಗಳನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಗುಡ್ಡ ಕುಸಿದಿರುವ ಇನ್ನೊಂದು ಭಾಗದಲ್ಲಿ ಅಂದರೆ ಬಂಟ್ವಾಳ ತಾಲೂಕಿನ ಪೆರ್ನೆಗೆ ಸಂಪರ್ಕಿಸುವ ರಸ್ತೆಯನ್ನೂ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಪರ್ಯಾಯವಾಗಿ ಉಪ್ಪಿನಂಗಡಿ-ಪುತ್ತೂರು ಸಂಪರ್ಕ ರಸ್ತೆಯಲ್ಲಿ ಸಂಚರಿಸುವಂತೆ, ಈ ಕುರಿತು ಅಗತ್ಯ ಕ್ರಮ ವಹಿಸುವಂತೆ ಗ್ರಾಮ ಪಂಚಾಯತ್ ಹಾಗೂ ಪೊಲೀಸ್

ಬೇರಿಕೆಯಲ್ಲಿ ಗುಡ್ಡ ಕುಸಿತ | ಸೇಡಿಯಾಪು-ಬೇರಿಕೆ- ಪಡ್ನೂರು ಸಂಪರ್ಕ ರಸ್ತೆ ತಾತ್ಕಾಲಿಕ ಬಂದ್ Read More »

ಕಾಲು ಜಾರಿ ಬಾವಿಗೆ ಬಿದ್ದು ಮಹಿಳೆ ಮೃತ್ಯು

ಬೆಳ್ತಂಗಡಿ : ಮಹಿಳೆಯೊಬ್ಬರು ಬಾವಿಗೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿ ಕೃಷಿ ಇಲಾಖೆಯ ಸೀಡ್ ಫಾರ್ಮ್‍ ರಸ್ತೆ ಬಳಿ ನಡೆದಿದೆ. ನಿವೃತ್ತ ಬ್ಯಾಂಕ್ ಉದ್ಯೋಗಿ ಜೀವಂದರ್ ಪಡಿವಾಳ ಅವರ ಪತ್ನಿ ಸುಮಾಲಿನಿ ಜೈನ್ (63) ಮೃತಪಟ್ಟ ಮಹಿಳೆ. ಮೃತರು ಪತಿ, ಪುತ್ರ, ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲು ಜಾರಿ ಬಾವಿಗೆ ಬಿದ್ದು ಮಹಿಳೆ ಮೃತ್ಯು Read More »

ಜ್ಯೋತಿಷಿ ಶಿವಪ್ರಸಾದ್ ಭಾರದ್ವಾಜರಿಗೆ ಸೇವಾರತ್ನ ಪ್ರಶಸ್ತಿ

ಪುತ್ತೂರು: ಮ್ಯಾಕ್ಸ್ ಲೈಫ್‍ ಇನ್ಸೂರೆನ್ಸ್ ಹಾಗೂ ಆಕ್ಸಿಸ್ ಬ್ಯಾಂಕ್‍ ವತಿಯಿಂದ ಜಿಲ್ಲಾ ಮಟ್ಟದ ಸೇವಾರತ್ನ ಪ್ರಶಸ್ತಿಯನ್ನು ಪುತ್ತೂರಿನ ಜ್ಯೋತಿಷಿ ಶಿವಪ್ರಸಾದ್ ಭಾರದ್ವಾಜ್ ರಿಗೆ ನೀಡಿ ಗೌರವಿಸಲಾಯಿತು. ಶಿವಪ್ರಸಾದ್‍ ಅವರು ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ಅಲ್ಫಾ ಕಾಂಪ್ಲೆಕ್ಸ್ ನಲ್ಲಿ ಶ್ರೀ ಸಾಯಿ ಜ್ಯೋತಿಷಾಲಯ ನಡೆಸುತ್ತಿದ್ದಾರೆ. ಅವರು ಮೈಸೂರಿನ ಶ್ರೀ ಲಗಧ ಮಹರ್ಷಿ ಜ್ಯೋತಿರ್ವಿಜ್ಞಾನ ಸಂಸ್ಥೆಯಿಂದ ತರಬೇತು ಪಡೆದಿರುತ್ತಾರೆ.

ಜ್ಯೋತಿಷಿ ಶಿವಪ್ರಸಾದ್ ಭಾರದ್ವಾಜರಿಗೆ ಸೇವಾರತ್ನ ಪ್ರಶಸ್ತಿ Read More »

‘ಡೆಲ್ಲಿ ಬಾಬು’ ರಕ್ಷಣೆ, ಪುನರ್ವಸತಿ  ಕೇಂದ್ರಕ್ಕೆ ಸೇರ್ಪಡೆ | ನಗರ ಪೊಲೀಸ್ ಠಾಣೆ ಹಾಗೂ ಪುತ್ತೂರು ಉಮೇಶ್ ನಾಯಕ್ ನೇತೃತ್ವ

ಪುತ್ತೂರು, ಕಳೆದ ಒಂದು ವಾರದಿಂದ ಪುತ್ತೂರಿನ ಮುರ ಜಂಕ್ಷನ್ ಬಳಿಯ ಹೋಟೆಲ್ ನ್ಯೂ ವಿಶಾಲ್ ಪಕ್ಕದಲ್ಲಿ ಅನಾಥ ಹಾಗೂ ಅಸಹಾಯಕ ಸ್ಥಿತಿಯಲ್ಲಿ ವಾಸವಿದ್ದು, ಇಲ್ಲೇ ಮಲಮೂತ್ರ ವಿಸರ್ಜನೆ ಮಾಡಿ  ಪರಿಸರವನ್ನು ಮಾಲಿನ್ಯ  ಮಾಡುತ್ತಿದ್ದ ಸುಮಾರು 70 ವರ್ಷ ವಯೋಮಾನದ   ‘ಬಾಬು’ ಎಂಬವರನ್ನು  ಸ್ಥಳೀಯರ ದೂರಿನ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ  ಪುತ್ತೂರು ನಗರ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ವಸಂತಗೌಡ  ಎನ್ ಹಾಗೂ ರೋಟರಿ ಕ್ಲಬ್ ಪುತ್ತೂರು ಇದರ ಮಾಜಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ಮಂಗಳೂರಿನ

‘ಡೆಲ್ಲಿ ಬಾಬು’ ರಕ್ಷಣೆ, ಪುನರ್ವಸತಿ  ಕೇಂದ್ರಕ್ಕೆ ಸೇರ್ಪಡೆ | ನಗರ ಪೊಲೀಸ್ ಠಾಣೆ ಹಾಗೂ ಪುತ್ತೂರು ಉಮೇಶ್ ನಾಯಕ್ ನೇತೃತ್ವ Read More »

ಬೆದ್ರಾಳ ತೋಡಿಗೆ ಗುಡ್ಡ ಕುಸಿದು ಬಿದ್ದು ತೋಟಗಳು ಜಲಾವೃತ, ಮನೆ ಅಪಾಯದ ಅಂಚಿನಲ್ಲಿ

ಪುತ್ತೂರು : ಕೆಮ್ಮಿಂಜೆ ಗ್ರಾಮದ ಪುತ್ತೂರಮೂಲೆ ಮತ್ತು ಕೆಮ್ಮಿಂಜೆ ಬೈಲು ಎಂಬಲ್ಲಿರುವ ಬೆದ್ರಾಳ ತೋಡಿಗೆ ಗುಡ್ಡೆ ಜರಿದ ಪರಿಣಾಮ ಪಕ್ಕದ ತೋಟಗಳಿಗೆ ನೀರು ನುಗ್ಗಿ ಜಲಾವೃತವಾಗಿದೆ. ಬೆದ್ರಾಳ ತೋಡಿಗೆ ಗುಡ್ಡೆ ಕುಸಿದ ಪರಿಣಾಮ ನೀರು ಹರಿಯಲಾಗದೆ ಪಕ್ಕದ ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಇಂಜಿನಿಯರ್ ಸಚಿನ್ ಹಾಗೂ ಮುತ್ತುಶೆಟ್ಟಿ ಸಹಿತ ಹಲವರ ತೋಟ ಜಲಾವೃತಗೊಂಡಿದೆ. ಪಕ್ಕದ ಯಶೋಧರ ಎಂಬವರ ಮನೆ ಅಪಾಯದ ಅಂಚಿನಲ್ಲಿದೆ. ಸ್ಥಳಕ್ಕೆ ನಗರಸಭೆ ಸದಸ್ಯ ಬಾಲಚಂದ್ರ, ಪೌರಾಯುಕ್ತ ಮಧು ಎಸ್.ಮನೋಹರ್, ಅಧಿಕಾರಿಗಳು ತೆರಳಿದ್ದಾರೆ. ಆದರೂ ಸ್ಥಳಕ್ಕೆ ಜೆಸಿಬಿ

ಬೆದ್ರಾಳ ತೋಡಿಗೆ ಗುಡ್ಡ ಕುಸಿದು ಬಿದ್ದು ತೋಟಗಳು ಜಲಾವೃತ, ಮನೆ ಅಪಾಯದ ಅಂಚಿನಲ್ಲಿ Read More »

ಪ್ರವೀಣ್‍ ನೆಟ್ಟಾರು ಹತ್ಯೆ ಪ್ರಕರಣ | ಇಬ್ಬರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು : ಬೆಳ್ಳಾರೆಯ ನೆಟ್ಟಾರಿನ ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ  ಎನ್‍ ಐಎ ಇಬ್ಬರ ವಿರುದ್ಧ ಚಾರ್ಜ್‌ ಶೀಟ್ ಸಲ್ಲಿಸಿದೆ. ಪ್ರಕರಣ ಪ್ರಮುಖ ಆರೋಪಿ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿದ್ದ ಹಿನ್ನೆಲೆ ಮನ್ಸೂರ್ ಪಾಷಾ ಮತ್ತು ಹೆಚ್‌ವೈ ರಿಯಾಜ್ ವಿರುದ್ಧ ಚಾರ್ಜ್‌ ಶೀಟ್ ಸಲ್ಲಿಸಲಾಗಿದೆ. ಸಕಲೇಶಪುರದಲ್ಲಿ ಮುಸ್ತಫಾ ಪೈಚಾರ್‌ಗೆ ಮನ್ಸೂರ್, ರಿಯಾಜ್ ಆಶ್ರಯ ನೀಡಿದ್ದರು. ಮೇ 5ರಂದು ಸಕಲೇಶಪುರದಲ್ಲಿ ಮುಸ್ತಫಾ ನನ್ನು ಬಂಧಿಸಿದ್ದು, ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ ರಿಯಾಜ್ ನನ್ನು ಜೂ.3ರಂದು ಮುಂಬೈ ಏ‌ರ್

ಪ್ರವೀಣ್‍ ನೆಟ್ಟಾರು ಹತ್ಯೆ ಪ್ರಕರಣ | ಇಬ್ಬರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ Read More »

ಬೆಳ್ಳಿಪ್ಪಾಡಿ ಧರೆ ಕುಸಿದ ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ

ಪುತ್ತೂರು : ಬೆಳ್ಳಿಪ್ಪಾಡಿ ಅಂದ್ರಿಗೇರಿಯಲ್ಲಿ ಧರೆ ಕುಸಿದು ಮೂರು ಮನೆಗಳಿಗೆ ಹಾನಿಯುಂಟಾಗಿದ್ದು,ಘಟನಾ ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು. ಮನೆಯವರು ಹಾಗೂ ಸ್ಥಳೀಯರ ಜೊತೆ ಘಟನೆಯ ಕುರಿತು ಮಾಹಿತಿ ಪಡೆದುಕೊಂಡರು. ಧರೆ ಕುಸಿದು ಮೂರು ಮನೆಗಳಿಗೆ ಅಪಾರ ಪ್ರಮಾಣದ ಹಾನಿಯುಂಟಾಗಿದೆ.

ಬೆಳ್ಳಿಪ್ಪಾಡಿ ಧರೆ ಕುಸಿದ ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ Read More »

ನರಿಮೊಗರು ರೈಲ್ವೇ ಟ್ರ್ಯಾಕ್ ಬಳಿಯ ಗುಡ್ಡ ಕುಸಿತ

ಪುತ್ತೂರು : ಪುತ್ತೂರು ಸಮೀಪದ ನರಿಮೊಗರು ರೈಲ್ವೇ ಟ್ರ್ಯಾಕ್ ಬಳಿಯ ಗುಡ್ಡ ಕುಸಿಯುವ ಭೀತಿಯಲ್ಲಿದೆ. ಒಂದು ಬದಿಯ ಗುಡ್ಡ ಈಗಾಗಲೇ ರೈಲ್ವೇ ಟ್ರ್ಯಾಕ್ ಮೇಲೆ ಕುಸಿದು ಬಿದ್ದಿದ್ದು,ತೆರವು ಕಾರ್ಯ ಮಾಡಲಾಗುತ್ತಿದೆ.  ಇದೀಗ ಮತ್ತೊಂದು ಬದಿಯ ಗುಡ್ಡ ಕೂಡಾ ಕುಸಿಯುವ ಭೀತಿಯಲ್ಲಿದ್ದು ನಿರಂತರ ಮಳೆ ಬಂದರೆ ಕುಸಿದು ಬೀಳುವ ಸಂಭವವಿದೆ ಎನ್ನಲಾಗುತ್ತಿದೆ.

ನರಿಮೊಗರು ರೈಲ್ವೇ ಟ್ರ್ಯಾಕ್ ಬಳಿಯ ಗುಡ್ಡ ಕುಸಿತ Read More »

error: Content is protected !!
Scroll to Top