ವಿವೇಕಾನಂದ ಕಾಲೇಜಿನಲ್ಲಿ ಉದ್ಯೋಗ ಸೇತು ನೋಂದಣಿ ಕಾರ್ಯಾಗಾರ
ಪುತ್ತೂರು: ವಿದ್ಯಾರ್ಥಿಗಳು ವಿಷಯ ಜ್ಞಾನದ ಜೊತೆಗೆ ಔದ್ಯೋಗಿಕ ರಂಗಕ್ಕೆ ಬೇಕಾದ ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕು. ಉದ್ಯೋಗಾಕಾಂಕ್ಷಿ ವಿದ್ಯಾರ್ಥಿ ಸಮೂಹವನ್ನು ಉದ್ಯಮರಂಗಕ್ಕೆ ಜೋಡಿಸುವ ಕೆಲಸವನ್ನು ಉದ್ಯೋಗ ಸೇತು ಆಪ್ ಮಾಡುತ್ತದೆ ಎಂದು ಬೆಂಗಳೂರಿನ ಕೋ-ವರ್ಕ್ಸ ಸೊಲ್ಯುಷನ್ ಪ್ರೈ.ಲಿಮಿಟೆಡ್ ನ ರಾಹುಲ್ ಜಾದವ್ ಹೇಳಿದರು. ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ(ಸ್ವಾಯತ್ತ) ಕಾಲೇಜಿನ ಗಣಕ ಶಾಸ್ತ್ರ ವಿಭಾಗ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿ ಮಾತಾನಾಡಿದ ಕಾಲೇಜು ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, […]
ವಿವೇಕಾನಂದ ಕಾಲೇಜಿನಲ್ಲಿ ಉದ್ಯೋಗ ಸೇತು ನೋಂದಣಿ ಕಾರ್ಯಾಗಾರ Read More »










