ನಕಲಿ ಕೋರ್ಟ್‌ ಸ್ಥಾಪಿಸಿ ತೀರ್ಪು ನೀಡುತ್ತಿದ್ದ ನಕಲಿ ನ್ಯಾಯಾಧೀಶ ಸೆರೆ

ಐದು ವರ್ಷಗಳಿಂದ ಜನರಿಗೆ ಮೋಸ ಮಾಡುತ್ತಿದ್ದ ಈ ಮಹಾಕಿಲಾಡಿ ಅಹ್ಮದಾಬಾದ್‌: ನಕಲಿ ಪೊಲೀಸ್‌, ನಕಲಿ ಡಾಕ್ಟರ್‌ಗಳು ಜನರನ್ನು ಏಮಾರಿಸುವ ಘಟನೆಗಳು ಸಾಮಾನ್ಯ. ಆದರೆ ಗುಜರಾತಿನ ಈ ಕಿಲಾಡಿ ಪಾತಕಿ ಮಾತ್ರ ನ್ಯಾಯಾಧೀಶನ ಸೋಗುಹಾಕಿ ಕಳೆದ 5 ವರ್ಷಗಳಿಂದ ಜನರಿಗೆ ಮೋಸ ಮಾಡುತ್ತಿದ್ದ. ಇದಕ್ಕಾಗಿ ಆತ ನಕಲಿ ನ್ಯಾಯಾಲಯವನ್ನೂ ಸ್ಥಾಪಿಸಿದ್ದ. ಗುಜರಾತಿನ ಗಾಂಧಿನಗದರಲ್ಲಿ ಕಾರ್ಯಾಚರಿಸುತ್ತಿತ್ತು ನಕಲಿ ನ್ಯಾಯಾಧೀಶ ಮೋರಿಸ್‌ ಸಾಮ್ಯುವೆಲ್‌ ಕ್ರಿಶ್ಚಿಯನ್‌ ಎಂಬಾತನ ನ್ಯಾಯಾಲಯ. ಈತ ಮುಖ್ಯವಾಗಿ ಭೂ ವಿವಾದ ಹೊಂದಿರುವವರನ್ನು ಬಲೆಗೆ ಕೆಡವಿಕೊಂಡು ಮೋಸ ಮಾಡುತ್ತಿದ್ದ. ಭೂವಿವಾದ […]

ನಕಲಿ ಕೋರ್ಟ್‌ ಸ್ಥಾಪಿಸಿ ತೀರ್ಪು ನೀಡುತ್ತಿದ್ದ ನಕಲಿ ನ್ಯಾಯಾಧೀಶ ಸೆರೆ Read More »

ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿ ಬಸವರಾಜ ಮುದವಿ ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆ | ಸರಕಾರಿ ನೇಮಕಾತಿಗಳಲ್ಲಿ ಹಂತ ಹಂತವಾದ ಯಶಸ್ಸು  ಉನ್ನತ ಸ್ಥಾನಕ್ಕೇರಿಸುತ್ತದೆ ಎಂಬುದನ್ನು ಸಾಬೀತುಪಡಿಸಿದ ವಿ. ಅಕಾಡೆಮಿಯ ವಿದ್ಯಾರ್ಥಿ

ಪುತ್ತೂರು: ವಿದ್ಯಾಮಾತಾ ಅಕಾಡೆಮಿಯಲ್ಲಿ  ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಗೆ ಪೂರ್ವ ತಯಾರಿ ತರಬೇತಿಯನ್ನು  ಪಡೆದ ಬಸವರಾಜ್ ರವರು ಕರ್ನಾಟಕ ರಾಜ್ಯ ಪೊಲೀಸ್ ನ ಸಬ್ ಇನ್ಸ್ಪೆಕ್ಟರ್ 545 ಹುದ್ದೆಯ ನೇಮಕಾತಿ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ಉತ್ತೀರ್ಣರಾಗಿ ನೇಮಕಾತಿಗೊಂಡಿರುತ್ತಾರೆ. ಮೂಲತಃ  ಬೆಳಗಾವಿ ಜಿಲ್ಲೆಯ ಕಾಗವಡ ತಾಲೂಕಿನ ಕಾತ್ರಾಳ್ ಗ್ರಾಮದ ನಿವಾಸಿಗಳಾದ ಶಂಕರ ಮತ್ತು ಯಮುನವ್ವ ದಂಪತಿ ಪುತ್ರ ಬಸವರಾಜ ಮುದವಿ ರವರು ಪ್ರಸ್ತುತ ಸುಳ್ಯ ಆರಕ್ಷಕ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮುದವಿಯವರು ಈ ಹಿಂದೆ

ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿ ಬಸವರಾಜ ಮುದವಿ ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆ | ಸರಕಾರಿ ನೇಮಕಾತಿಗಳಲ್ಲಿ ಹಂತ ಹಂತವಾದ ಯಶಸ್ಸು  ಉನ್ನತ ಸ್ಥಾನಕ್ಕೇರಿಸುತ್ತದೆ ಎಂಬುದನ್ನು ಸಾಬೀತುಪಡಿಸಿದ ವಿ. ಅಕಾಡೆಮಿಯ ವಿದ್ಯಾರ್ಥಿ Read More »

ಆಕರ್ಷಣ್ ಇಂಡಸ್ಟ್ರೀಸ್ ನ 29ನೇ ʻವರುಷದ ಹರುಷʼ ಮೆಗಾ ಆಫರ್‌ ಸೇಲ್‌ – ದೀಪಾವಳಿ ಆಫರ್‌ – ಕ್ಯಾಶ್ ಡಿಸ್ಕೌಂಟ್ – ʻಹೀರೋ ಬೈಕ್ʼ ಸೇರಿದಂತೆ ಹಲವಾರು ಬಹುಮಾನಗಳು ನಿಮಗಾಗಿ

ಪುತ್ತೂರು: ಇಲ್ಲಿನ ಮುಕ್ರಂಪಾಡಿಯಲ್ಲಿರುವ ಆಕರ್ಷಣ್ ಇಂಡಸ್ಟ್ರೀಸ್ ನ 29 ನೇ ವರ್ಷಾಚರಣೆ ಅಂಗವಾಗಿ ʻವರುಷದ ಹರುಷʼ ಮೆಗಾ ಆಫರ್ ಸೇಲ್, ದೀಪಾವಳಿ ಆಫರ್‌ ಹಾಗೂ ಬಂಪರ್ ಬಹುಮಾನ ಕೂಪನ್ ಬಿಡುಗಡೆ ಕಾರ್ಯಕ್ರಮ ಸೋಮವಾರ ಸಂಸ್ಥೆಯ ಕಚೇರಿಯಲ್ಲಿ ನಡೆಯಿತು. ಕುಂಬ್ರ ವರ್ತಕ ಸಂಘದ ಸ್ಥಾಪಕಾದ್ಯಕ್ಷ ಶ್ಯಾಮ್ ಸುಂದರ್ ರೈ ಕೊಪ್ಪಳ ಪ್ರಥಮ ಗ್ರಾಹಕ ಕೂಪನ್ ಸ್ವೀಕರಿಸಿದರು. ಕಾಂಕ್ರೀಟ್ ಉತ್ಪನ್ನಗಳ ಉತ್ಪಾದನಾ ಸಂಸ್ಥೆಯಾಗಿರುವ ಪುತ್ತೂರಿನ ಆಕರ್ಷಣ್ ಇಂಡಸ್ಟ್ರೀಸ್ 29 ನೇ ವರ್ಷಕ್ಕೆ ಪಾದಾರ್ಪಣೆಯ  ಪ್ರಯುಕ್ತ  ಹಾಗೂ ದೀಪಾವಳಿ ಹಬ್ಬದ  ಅಂಗವಾಗಿ  ಸಂಸ್ಥೆಯಲ್ಲಿ

ಆಕರ್ಷಣ್ ಇಂಡಸ್ಟ್ರೀಸ್ ನ 29ನೇ ʻವರುಷದ ಹರುಷʼ ಮೆಗಾ ಆಫರ್‌ ಸೇಲ್‌ – ದೀಪಾವಳಿ ಆಫರ್‌ – ಕ್ಯಾಶ್ ಡಿಸ್ಕೌಂಟ್ – ʻಹೀರೋ ಬೈಕ್ʼ ಸೇರಿದಂತೆ ಹಲವಾರು ಬಹುಮಾನಗಳು ನಿಮಗಾಗಿ Read More »

ಗುರುವಾರ ಪ್ರಚಂಡ ವೇಗದಲ್ಲಿ ಅಪ್ಪಳಿಸಲಿದೆ ಚಂಡಮಾರುತ

ಈ ರಾಜ್ಯಗಳಲ್ಲಿ ಬುಧವಾರದಿಂದಲೇ ಭಾರಿ ಮಳೆಯ ಎಚ್ಚರಿಕೆ ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ಡಾನಾ ಚಂಡಮಾರುತ ಗುರುವಾರ ಬಂಗಾಳಕೊಲ್ಲಿ ತೀರದ ಪ್ರದೇಶಗಳಿಗೆ ಪ್ರಚಂಡ ವೇಗದಲ್ಲಿ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಪೂರ್ವ–ಮಧ್ಯ ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಸಮುದ್ರದ ಉತ್ತರಕ್ಕೆ ವಾಯುಭಾರ ಕುಸಿತ ಉಂಟಾಗಿದೆ. ಇದು ‍ಪಶ್ಚಿಮ–ವಾಯವ್ಯ ದಿಕ್ಕಿನೆಡೆಗೆ ಚಲಿಸಿ ಬುಧವಾರದ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಅಕ್ಟೋಬರ್ 24ರ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ತೀವ್ರಗೊಂಡು ಉತ್ತರ ಬಂಗಾಳ ಕೊಲ್ಲಿಯ ತೀರ

ಗುರುವಾರ ಪ್ರಚಂಡ ವೇಗದಲ್ಲಿ ಅಪ್ಪಳಿಸಲಿದೆ ಚಂಡಮಾರುತ Read More »

ಗಣಿತ – ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವ | ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿನಿ ಸಾನ್ವಿ ಜಿ ರಾಷ್ಟ್ರಮಟ್ಟಕ್ಕೆ  ಆಯ್ಕೆ

ಪುತ್ತೂರು:  ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನದ ವತಿಯಿಂದ ತಲಪಾಡಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ 24ನೇ ಪ್ರಾಂತೀಯ ಗಣಿತ – ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವ ಸ್ಪರ್ಧೆಯಲ್ಲಿ ನಗರದ ಬಪ್ಪಳಿಗೆಯ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾಲಯದ 8ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿ ಜಿ. ಬಾಲ ವರ್ಗದ ಗಣಿತ ವಸ್ತು ಪ್ರದರ್ಶನದಲ್ಲಿ ಕ್ಷೇತ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿರುತ್ತಾಳೆ. ಈಕೆ ಬಂಟ್ವಾಳ

ಗಣಿತ – ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವ | ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿನಿ ಸಾನ್ವಿ ಜಿ ರಾಷ್ಟ್ರಮಟ್ಟಕ್ಕೆ  ಆಯ್ಕೆ Read More »

ನಮ್ಮ ಸಾಮರ್ಥ್ಯವನ್ನು ಅರಿತುಕೊಂಡರೆ ನಾವೂ ʼಸ್ವಯಂಮೇವ ಮೃಗೇಂದ್ರತಾʼ

ನಾವು ಒಳಗಿನಿಂದ ಹೊರಗೆ ಬೆಳೆಯುತ್ತಾ ಹೋಗಬೇಕು ಕಾಡಿನಲ್ಲಿ ಸಿಂಹಕ್ಕೆ ಯಾರೂ ಪಟ್ಟಾಭಿಷೇಕವನ್ನು ಮಾಡುವುದಿಲ್ಲ. ಯಾರೂ ಕಿರೀಟ ಧಾರಣೆ ಮಾಡುವುದಿಲ್ಲ. ಸಿಂಹ ತನ್ನ ಸ್ವಯಂ ಸಾಮರ್ಥ್ಯಗಳನ್ನು ಉದ್ದೀಪನ ಮಾಡಿಕೊಂಡು ‘ಮೃಗಗಳ ರಾಜ’ ಎಂದು ಎಲ್ಲರಿಂದಲೂ ಕರೆಸಿಕೊಳ್ಳುತ್ತದೆ. ಹೀಗೆಂದು ಹೇಳುತ್ತದೆ ಒಂದು ಸಂಸ್ಕೃತದ ಸುಭಾಷಿತ. ಕಾಡಿನಲ್ಲಿ ಸಿಂಹಕ್ಕಿಂತ ಬಲಿಷ್ಠವಾದ ಅದೆಷ್ಟೋ ಪ್ರಾಣಿಗಳು ಇವೆ. ಆದರೂ ಸಿಂಹವು ತನ್ನ ಗತ್ತು, ಗೈರತ್ತು, ಗಾಂಭೀರ್ಯ, ನಡಿಗೆ ಮತ್ತು ನೋಟಗಳಿಂದ ‘ಕಾಡಿನ ರಾಜ’ ಎಂದು ಕರೆಸಿಕೊಳ್ಳುತ್ತದೆ. ನಾವೂ ನಮ್ಮ ಸಾಮರ್ಥ್ಯಗಳ ಅರಿವನ್ನು ಮೂಡಿಸಿಕೊಂಡರೆ ಖಂಡಿತವಾಗಿ

ನಮ್ಮ ಸಾಮರ್ಥ್ಯವನ್ನು ಅರಿತುಕೊಂಡರೆ ನಾವೂ ʼಸ್ವಯಂಮೇವ ಮೃಗೇಂದ್ರತಾʼ Read More »

ನ.2 : ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಅಶೋಕ ಜನ-ಮನ-2024’ ವಸ್ತ್ರ ವಿತರಣಾ ಕಾರ್ಯಕ್ರಮ | ಚಪ್ಪರ ಮುಹೂರ್ತ

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ.2 ರಂದು ದೀಪಾವಳಿ ಪ್ರಯುಕ್ತ ವಸ್ತ್ರ ವಿತರಣೆ ಅಂಗವಾಗಿ ನಡೆಯಲಿರುವ ‘ಅಶೋಕ ಜನ-ಮನ-2024’ ಕಾರ್ಯಕ್ರಮದ ಚಪ್ಪರ ಮುಹೂರ್ತ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ದೀಪಾವಳಿಯಂದು ಪ್ರತೀ ವರ್ಷ ನಡೆಯುವಂತೆ ಈ ಬಾರಿ 12ನೇ ವರ್ಷದ ವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ. ಕಳೆದ ಕೆಲವು ವರ್ಷಗಳಿಂದ ಕೋಡಿಂಬಾಡಿಯಲ್ಲಿರುವ ನಮ್ಮ ಮನೆಯಲ್ಲಿ ನಡೆಯುತ್ತಿತ್ತು.

ನ.2 : ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಅಶೋಕ ಜನ-ಮನ-2024’ ವಸ್ತ್ರ ವಿತರಣಾ ಕಾರ್ಯಕ್ರಮ | ಚಪ್ಪರ ಮುಹೂರ್ತ Read More »

ಜ್ಞಾನ-ವಿಜ್ಞಾನ ಮೇಳ : ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ ನಿಖಿಲ್‍ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರೀಯ ವತಿಯಿಂದ ಮಂಗಳೂರು ತಲಪಾಡಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ ನಲ್ಲಿ ನಡೆದ ಮಧ್ಯ ಕ್ಷೇತ್ರೀಯ ಮಟ್ಟದ ಗಣಿತ-ವಿಜ್ಞಾನ ಮೇಳ ಮತ್ತು ಸಂಸ್ಕೃತಿ  ಮಹೋತ್ಸವ ಸ್ಪರ್ಧೆಯ ಕ್ಲೇ ಮಾಡೆಲಿಂಗ್ ನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ನಿಖಿಲ್ ಪ್ರಥಮ ಸ್ಥಾನ ಪಡೆದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ. ವಿದ್ಯಾರ್ಥಿಗೆ ಶಾಲಾ ಚಿತ್ರಕಲಾ ಶಿಕ್ಷಕ ರುಕ್ಮಯ ತರಬೇತಿ ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿಯನ್ನು ಶಾಲಾ

ಜ್ಞಾನ-ವಿಜ್ಞಾನ ಮೇಳ : ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ ನಿಖಿಲ್‍ ರಾಷ್ಟ್ರಮಟ್ಟಕ್ಕೆ ಆಯ್ಕೆ Read More »

ವಿಧಾನ ಪರಿಷತ್ ಉಪಚುನಾವಣೆ : ಬಿರುಸಿನ ಮತದಾನ

ಪುತ್ತೂರು: ದ.ಕ.ಸ್ಥಳೀಯ ಪ್ರಾಧೀಕಾರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಉಪ ಚುನಾವಣೆ ಇಂದು ಬೆಳಿಗ್ಗೆಯಿಂದ ಆರಂಭಗೊಂಡಿದ್ದು, ಬಿರುಸಿನಿಂದ ಸಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯನ್ನೊಳಗೊಂಡ ಈ ಕ್ಷೇತ್ರದಲ್ಲಿ ಒಟ್ಟು 392 ಮತಗಟ್ಟೆಗಳಿದ್ದು, 6032 ಮಂದಿ ಮತದಾರರಿದ್ದಾರೆ. ಉಭಯ ಜಿಲ್ಲೆಗಳ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಶಾಸಕರು ಹಾಗೂ ಸಂಸದರು ಮತದಾನ ಮಾಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನಿಂದ ಮತದಾನ ಆರಂಭಗೊಂಡಿದ್ದು, ಹಲವೆಡೆ ಬಿಜೆಪಿಯ ಚುನಾಯಿತ ಸದಸ್ಯರನ್ನೊಳಗೊಂಡ ಮತದಾರರು

ವಿಧಾನ ಪರಿಷತ್ ಉಪಚುನಾವಣೆ : ಬಿರುಸಿನ ಮತದಾನ Read More »

ನ.1ರಿಂದ 19ರ ನಡುವೆ ಏರ್‌ ಇಂಡಿಯಾದಲ್ಲಿ ಪ್ರಯಾಣಿಸಬೇಡಿ : ಖಲಿಸ್ಥಾನಿ ಉಗ್ರರ ಬೆದರಿಕೆ

ಹೊಸದಿಲ್ಲಿ : ವಿಮಾನಗಳಿಗೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಬೆದರಿಕೆ ಕರೆಗಳನ್ನು ಮಾಡಿ ಸಂಚಾರವನ್ನು ಅಸ್ತವ್ಯಸ್ತಗೊಳಿಸುತ್ತಿರುವಾಗಲೇ ಈಗ ಖಲಿಸ್ಥಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಏರ್​ ಇಂಡಿಯಾ ವಿಮಾನದಲ್ಲಿ ನವೆಂಬರ್ 1ರಿಂದ 19ರವರೆಗೆ ಪ್ರಯಾಣಿಸಬೇಡಿ ಎಂದು ಬೆದರಿಕೆ ಹಾಕಿದ್ದಾನೆ. ಸಿಖ್ ನರಮೇಧದ 40ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ಸಂಭವಿಸಬಹುದು ಏಂದು ಪನ್ನುನ್‌ ಬೆದರಿಕೆ ಸಂದೇಶದಲ್ಲಿ ಹೇಳಿದ್ದಾನೆ.ಕಳೆದ ವರ್ಷವೂ ಖಲಿಸ್ಥಾನಿ ಉಗ್ರರು ಏರ್‌ ಇಂಡಿಯಾಕ್ಕೆ ಇದೇ ರೀತಿಯ ಬೆದರಿಕೆ ಹಾಕಿದ್ದರು. ದಿಲ್ಲಿಯ ಇಂದಿರಾ

ನ.1ರಿಂದ 19ರ ನಡುವೆ ಏರ್‌ ಇಂಡಿಯಾದಲ್ಲಿ ಪ್ರಯಾಣಿಸಬೇಡಿ : ಖಲಿಸ್ಥಾನಿ ಉಗ್ರರ ಬೆದರಿಕೆ Read More »

error: Content is protected !!
Scroll to Top