ಹಸುವಿನ ಕೆಚ್ಚಲು ಕೊಯ್ದು ವಿಕೃತಿ : ಹಸು ಸಾವು, ದೂರು ದಾಖಲು

ಬೆಂಗಳೂರು: ಹಸುವಿನ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ಕ್ರೌರ್ಯ ಮೆರೆದ ಘಟನೆ ಬೆಂಗಳೂರು ದಕ್ಷಿಣದ ಸೂಲಿವಾರ ಗ್ರಾಮದಲ್ಲಿ ನಡೆದಿದೆ. ಹಾಲಿನ ಡೈರಿ ಅಧ್ಯಕ್ಷ ಮರಿಬಸವಯ್ಯ ಎನ್ನುವವರಿಗೆ ‌ಸೇರಿದ ಹಸುವಿನ ಕೆಚ್ಚಲು ಕೊಯ್ದಿದ್ದು, ಗಾಯಾಳು ಹಸು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಚಿದೆ. ಗುರುಸಿದ್ದಪ್ಪ ಎನ್ನುವವರು ಹಳೇ ವೈಷಮ್ಯದ ಕಾರಣಕ್ಕೆ ಅವರ ಜಮೀನಿಗೆ ಮೇವು ತಿನ್ನಲು ಬಂದ ಹಸುವಿನ ಕೆಚ್ಚಲು ಕೊಯ್ದಿದ್ದಾರೆ ಎಂದು ಹಸುವಿನ ಮಾಲೀಕರು ಆರೋಪಿಸಿದ್ದಾರೆ. ಈ ಹಿಂದೆ ಡೈರಿಯ ಅಧ್ಯಕ್ಷ ಚುನಾವಣೆಯ ಸಂದರ್ಭದಲ್ಲಿ ಮರಿ ಬಸವಯ್ಯ ಮತ್ತು ಗುರು ಸಿದ್ದಪ್ಪ […]

ಹಸುವಿನ ಕೆಚ್ಚಲು ಕೊಯ್ದು ವಿಕೃತಿ : ಹಸು ಸಾವು, ದೂರು ದಾಖಲು Read More »

ನಗರಸಭಾ ಸದಸ್ಯ ಶೀನಪ್ಪ ನಾಯ್ಕ ನಿಧನ

ಪುತ್ತೂರು: ನಗರಸಭಾ ಸದಸ್ಯ ಶೀನಪ್ಪ ನಾಯ್ಕ ಅನಾರೋಗ್ಯದಿಂದ ಶನಿವಾರ ನಿಧನರಾದರು. ಮುಕ್ರಂಪಾಡಿ ಆನಂದಾಶ್ರಮ ನಿವಾಸಿಯಾಗಿದ್ದ ಶೀನಪ್ಪ ನಾಯ್ಕರು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ನಗರಸಭಾ ಸದಸ್ಯ ಶೀನಪ್ಪ ನಾಯ್ಕ ನಿಧನ Read More »

ಕುದ್ಮಾರು ಶಾಲೆಗೆ ಸುಸಜ್ಜಿತ ಧ್ವಜಸ್ತಂಭದ ಕೊಡುಗೆ

ಪುತ್ತೂರು: ಕಡಬ ತಾಲೂಕು ಕುದ್ಮಾರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವಾ ನಿವೃತ್ತಿ ಪಡೆದ ಕುಶಾಲಪ್ಪ ಬರೆಮೇಲು ಅವರು ಶಾಲೆಗೆ ಸುಸಜ್ಜಿತ ಧ್ವಜಸ್ತಂಭವೊಂದನ್ನು ಕೊಡುಗೆಯಾಗಿ ನೀಡಿದರು. ಸುಸಜ್ಜಿತ ಧ್ವಜಸ್ತಂಭಸುಮಾರು 85,000/- ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಧ್ವಜಸ್ತಂಭವು ಮೂರು ಹಂತಗಳ ಮೆಟ್ಟಿಲುಗಳನ್ನು ಹೊಂದಿದ್ದು ರಾಷ್ಟ್ರ ಧ್ವಜದ ತ್ರಿವರ್ಣಗಳಿಂದ ಕಂಗೊಳಿಸುತ್ತಿದೆ. ಸುಮಾರು 50 ಚದರ ಅಡಿಗಳಷ್ಟು ವಿಶಾಲವಾಗಿರುವ ಪೀಠಕ್ಕೆ ನಾಲ್ಕು ಸುತ್ತುಗಳಿಂದಲೂ ಸ್ಟೈನ್’ಲೆಸ್ ಸ್ಟೀಲ್ ಕಂಬಿಗಳನ್ನು ಬಳಸಿ ನಿರ್ಮಿಸಿದ, ಗೇಟ್ ಸಹಿತವಾದ ತಡೆ ಬೇಲಿ ಇದೆ. ಇದರಿಂದಾಗಿ ನಾಯಿ ಇತ್ಯಾದಿ

ಕುದ್ಮಾರು ಶಾಲೆಗೆ ಸುಸಜ್ಜಿತ ಧ್ವಜಸ್ತಂಭದ ಕೊಡುಗೆ Read More »

ಜು.12 : ರಾಷ್ಟ್ರೀಯ ಲೋಕ ಅದಾಲತ್‍ | ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶ : ಪತ್ರಿಕಾಗೋಷ್ಠಿಯಲ್ಲಿ ಪ್ರಕೃತಿ ಕಲ್ಯಾಣ್ ಪುರ

ಪುತ್ತೂರು:, ರಾಜೀ ಸಂದಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶವಿದೆ ಎಂದು ತಾಲೂಕು ಕಾನೂನು ಸಮಿತಿ ಚೇರ್ಮೆನ್‍, ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯದ ನ್ಯಾಯಧೀಶರಾದ ಪ್ರಕೃತಿ ಕಲ್ಯಾಣ್ ಪುರ ತಿಳಿಸಿದ್ದಾರೆ. ಅವರು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್ ನ್ನು ಪುತ್ತೂರು ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಪುತ್ತೂರು ನ್ಯಾಯಾಲಯದಲ್ಲಿ ನಡೆಯಲಿದ್ದು, ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು

ಜು.12 : ರಾಷ್ಟ್ರೀಯ ಲೋಕ ಅದಾಲತ್‍ | ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶ : ಪತ್ರಿಕಾಗೋಷ್ಠಿಯಲ್ಲಿ ಪ್ರಕೃತಿ ಕಲ್ಯಾಣ್ ಪುರ Read More »

ಎವಿಜಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ | ಶಾರೀರಿಕ, ಬೌದ್ಧಿಕ , ಮಾನಸಿಕ ಸ್ವಾಸ್ಥ್ಯಕ್ಕೆ ಯೋಗ ಅತಿ ಅವಶ್ಯಕ :ಕರುಣಾಕರ ಉಪಾಧ್ಯಾಯ

ಪುತ್ತೂರು:  ಯೋಗ ಎನ್ನುವುದು ಮಾನವನ ಶಾರೀರಿಕ ,ಬೌದ್ಧಿಕ, ಮತ್ತು ಮಾನಸಿಕ ವಿಕಾಸಕ್ಕೆ ಅತಿ ಅವಶ್ಯಕವಾಗಿದ್ದು, ಅದು ಅತಿ ಹಿಂದಿನ ಕಾಲದಲ್ಲಿ ರೂಢಿಯಲ್ಲಿತ್ತು ಎಂದು ಪುತ್ತೂರು ಓಂಕಾರ ಯೋಗ ಕೇಂದ್ರದ ಮುಖ್ಯಸ್ಥ ಕರುಣಾಕರ ಉಪಾಧ್ಯಾಯ ಹೇಳಿದರು. ಅವರು ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಮಾತನಾಡಿದರು. ಆರೋಗ್ಯವೆಂದರೆ ಏಕ ಸೂತ್ರದಲ್ಲಿ ಕೆಲಸ ಮಾಡುವುದು. ನಾವು ಮಾಡುವ ಕರ್ಮಗಳಲ್ಲಿ ಏಕ ಚಿತ್ತದಿಂದ ತಲ್ಲಿನರಾದಾಗ ನಮ್ಮ ಮನಸ್ಸು ಆರೋಗ್ಯ

ಎವಿಜಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ | ಶಾರೀರಿಕ, ಬೌದ್ಧಿಕ , ಮಾನಸಿಕ ಸ್ವಾಸ್ಥ್ಯಕ್ಕೆ ಯೋಗ ಅತಿ ಅವಶ್ಯಕ :ಕರುಣಾಕರ ಉಪಾಧ್ಯಾಯ Read More »

ದ.ಕ.ಜಿಲ್ಲೆಯ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತುಳು ಭಾಷೆ ಬಳಕೆ ಮಾಡುವಂತಿಲ್ಲ | ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ನಿರ್ದೇಶನ ನೀಡಲು ಸರಕಾರದಿಂದ ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಗಳಲ್ಲಿ ನಡೆಯುವ  ಸಾಮಾನ್ಯ ಸಭೆಗಳಲ್ಲಿ ಚರ್ಚೆಗೆ ತುಳು ಭಾಷೆ ಬಳಸದಂತೆ ಸೂಚನೆ ನೀಡಲಾಗಿದ್ದು, ಪರಿಣಾಮ ಇದೀಗ ತುಳು ಭಾಷಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಪಂ ಸಾಮಾನ್ಯ ಸಭೆಗಳಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತುಳು ಭಾಷೆ ಬಳಕೆ ಮಾಡದಂತೆ ಮತ್ತು ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ನಿರ್ದೇಶನ ನೀಡಲು ಉಲ್ಲೇಖ (1)ರಂತೆ ಮನವಿ ಸಲ್ಲಿಸಿರುತ್ತಾರೆ. ಸದ್ದಿ_ಉಲ್ಲೇಖಿತ ಮನವಿಯನ್ನು ಈ ಪತ್ರದೊಂದಿಗೆ ಲಗತ್ತಿಸುತ್ತಾ, ಮನವಿಯ ಕುರಿತು ನಿಯಮಾನುಸಾರ

ದ.ಕ.ಜಿಲ್ಲೆಯ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತುಳು ಭಾಷೆ ಬಳಕೆ ಮಾಡುವಂತಿಲ್ಲ | ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ನಿರ್ದೇಶನ ನೀಡಲು ಸರಕಾರದಿಂದ ಸೂಚನೆ Read More »

ಪ್ರಗತಿ ಪ್ಯಾರಾ ಮೆಡಿಕಲ್‍ ಆಂಡ್‍ ಅಲೈಡ್‍ ಹೆಲ್ತ್ ಸೈನ್ಸಸ್‍ ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಪುತ್ತೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನೂ ಪ್ರಗತಿ ಪಾರಾ ಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ ಶನಿವಾರ ಆಚರಿಸಲಾಯಿತು. ಪ್ರಗತಿ ಹಾಸ್ಪಿಟಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ ಯು ಶ್ರೀಪತಿ ರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಗಾಭ್ಯಾಸ ಯೋಗ ದಿನವಾದ ಇಂದಿಗೆ ಮಾತ್ರ ಸೀಮಿತವಾಗದೆ ಎಲ್ಲ ದಿನಗಳಲ್ಲಿ ಅಭ್ಯಾಸ ಮಾಡುವಂತಾಗಬೇಕು. ಯೋಗ ಮನುಷ್ಯ ಅರೋಗ್ಯವನ್ನು ಕಾಪಿಡುವಲ್ಲಿ ಬಹಳ ಮುಖ್ಯವಾದದ್ದು. ದಿನನಿತ್ಯ ಯೋಗ ಆಚರಣೆಯಿಂದ ಈಗಿನ ಯುವ ಪೀಳಿಗೆಯನ್ನು ಕಾಡುತ್ತಿರುವ ಅತಿಯಾದ ದೇಹದ ತೂಕ, ಅತಿಯಾದ ರಕ್ತದೊತ್ತಡ ಸೇರಿದಂತೆ

ಪ್ರಗತಿ ಪ್ಯಾರಾ ಮೆಡಿಕಲ್‍ ಆಂಡ್‍ ಅಲೈಡ್‍ ಹೆಲ್ತ್ ಸೈನ್ಸಸ್‍ ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ Read More »

ಬಿಜೆಪಿ ಗ್ರಾಮಾಂತರ, ನಗರ ಮಂಡಲದಿಂದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಪುತ್ತೂರು :ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿನ ಜನರ ಆರೋಗ್ಯದ ದೃಷ್ಟಿಯಿಂದ ಜೂನ್ 21ರಂದು ಜಗತ್ತಿಗೆ ಮತ್ತೊಮ್ಮೆ ಯೋಗವನ್ನು ಪರಿಚಯಿದ್ದು, 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪುತ್ತೂರು ಗ್ರಾಮಂತರ ಹಾಗೂ ನಗರಮಂಡಲದ ಯುವ ಮೋರ್ಚಾ ವತಿಯಿಂದ ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಶನಿವಾರ ಆಚರಿಸಲಾಯಿತು.. ಯೋಗ ಶಿಕ್ಷಕರಾಗಿ ತಾಲೂಕು ಶಿಕ್ಷಣ ಪ್ರಮುಖ, ಎಸ್ ಪಿ ವೈ ಎಸ್ ಎಸ್ ಸಮಿತಿಯ ತಾಲೂಕು ಶಿಕ್ಷಣ ಪ್ರಮುಖ ವಸಂತ ಸುವರ್ಣ, ಯೋಗದ ಕುರಿತು ಮಾಹಿತಿ ನೀಡಿ, ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. ಈ

ಬಿಜೆಪಿ ಗ್ರಾಮಾಂತರ, ನಗರ ಮಂಡಲದಿಂದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ Read More »

ಮಂಗಳೂರು – ಬೆಂಗಳೂರು ನಡುವಿನ ರೈಲ್ವೆ ಹಳಿ ಮೇಲೆ ಬಿದ್ದ ಬಂಡೆ ತೆರವು | ರೈಲು ಸಂಚಾರ ಪುನರಾರಂಭ

ಸಕಲೇಶಪುರ: ಬೆಂಗಳೂರು – ಮಂಗಳೂರು ನಡುವಿನ ರೈಲು ಹಳಿಯ ಮೇಲೆ ಬಿದ್ದ ಮೂರು ಬಂಡೆಗಳನ್ನು ತೆರವು ಮಾಡಲಾಗಿದ್ದು, ರೈಲು ಸಂಚಾರ ಪುನರಾರಂಭವಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಗುಡ್ಡ ಕುಸಿತದ ಕಾರಣಕ್ಕೆ ಈ ಘಟನೆ ಸಂಭವಿಸಿದೆ ಎಂದು ಭಾವಿಸಲಾಗಿತ್ತಾದರೂ ಆ ಬಳಿಕ ರೈಲ್ವೆ ವ್ಯಾಗನ್‌ನಲ್ಲಿ ಸಾಗಿಸುತ್ತಿದ್ದ ಬಂಡೆಗಳು ಉರುಳಿ ಬಿದ್ದು ಈ ಘಟನೆ ನಡೆದಿರುವುದು ತಿಳಿದು ಬಂದಿದ್ದಾಗಿಯೂ ಇಲಾಖೆ ಹೇಳಿದೆ. ಇಂದು (ಜೂ. 21) ಬೆಳಗ್ಗೆ ಸುಮಾರು 4 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದ್ದು,

ಮಂಗಳೂರು – ಬೆಂಗಳೂರು ನಡುವಿನ ರೈಲ್ವೆ ಹಳಿ ಮೇಲೆ ಬಿದ್ದ ಬಂಡೆ ತೆರವು | ರೈಲು ಸಂಚಾರ ಪುನರಾರಂಭ Read More »

ನಿವೃತ್ತ ಮುಖ್ಯ ಗುರು ಕುಶಾಲಪ್ಪ ಬರೆಮೇಲು ಅವರಿಗೆ ನ್ಯೂಸ್ ಪುತ್ತೂರು ವತಿಯಿಂದ ಅಭಿನಂದನೆ

ಪುತ್ತೂರು: ಕುದ್ಮಾರು ಸ. ಹಿ. ಪ್ರಾ. ಶಾಲಾ ಮುಖ್ಯಗುರುಗಳಾಗಿದ್ದು ವಯೋನಿವೃತ್ತಿ ಹೊಂದಿದ ಬರೆಮೇಲು ಕುಶಾಲಪ್ಪರಿಗೆ ನ್ಯೂಸ್ ಪುತ್ತೂರು ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ನ್ಯೂಸ್ ಪುತ್ತೂರು ಇದರ ಅಧ್ಯಕ್ಷ ಸೀತಾರಾಮ ಕೇವಳ ಮತ್ತು ನಿರ್ದೇಶಕ ನಾಗೇಶ್ ಕೆಡೆಂಜಿಯವರು ಶಾಲು ಅರ್ಪಿಸಿ ಹೂ ಗುಚ್ಛ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕುಶಾಲಪ್ಪರ ಪತ್ನಿ, ಬೊಬ್ಬೇಕೇರಿ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ಡಿ. ವೇದಿಕೆಯಲ್ಲಿದ್ದರು. ರಾಕೇಶ್ ರೈ ಕೆಡೆಂಜಿಯವರು ಶಾಲು ಹೊದಿಸಿ ಸನ್ಮಾನಿಸಿದರು.  ಕುದ್ಮಾರು ಶಾಲಾ ಮುಖ್ಯೋಪಾಧ್ಯಾಯಿನಿ

ನಿವೃತ್ತ ಮುಖ್ಯ ಗುರು ಕುಶಾಲಪ್ಪ ಬರೆಮೇಲು ಅವರಿಗೆ ನ್ಯೂಸ್ ಪುತ್ತೂರು ವತಿಯಿಂದ ಅಭಿನಂದನೆ Read More »

error: Content is protected !!
Scroll to Top