ಡಿಕೆಶಿ ಬಗ್ಗೆ ಹೈಕಮಾಂಡ್‌ ಮೃದು ಧೋರಣೆ ತಾಳಿದೆ: ಸತೀಶ್ ಜಾರಕಿಹೊಳಿ

ಬಾಗಲಕೋಟೆ: ರಾಜ್ಯದಲ್ಲಿ ನಡೆಯುವ ಎಲ್ಲಾ ವಿಷಯಗಳು ರಾಹುಲ್ ಗಾಂಧಿಯನ್ನು ತಲುಪುವುದಿಲ್ಲ. ಕೆಲವು ವಿಷಯಗಳಷ್ಟೇ ತಲುಪುತ್ತವೆ. ಎಲ್ಲಾ ವಿಷಯಗಳು ಹೈಕಮಾಂಡ್‌ಗೆ ತಿಳಿಯುವಂತಾಗಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಡಿಕೆಶಿ ಅವರು ಸದನದಲ್ಲಿ RSS ಗೀತೆ ಹಾಡಿರುವುದಕ್ಕೆ ಅವರೇ ಉತ್ತರಿಸಬೇಕು. ನಾನು ಈ ಬಗ್ಗೆ ಮಾತನಾಡಲು ಆಗುವುದಿಲ್ಲ. ಈ ಬಗ್ಗೆ ಸಿ ಎಂ ಸಿದ್ದರಾಮಯ್ಯ, ಪಕ್ಷದ ಹೈಕಮಾಂಡ್ ಚರ್ಚೆ ಮಾಡಬೇಕು. ನಮ್ಮ ಮಟ್ಟದಲ್ಲಿ ಆಗಬೇಕಾದ ಚರ್ಚೆಯಲ್ಲ. ಈ ಎಲ್ಲ ವಿಷಯಗಳನ್ನು ರಾಹುಲ್ ಗಾಂಧಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು […]

ಡಿಕೆಶಿ ಬಗ್ಗೆ ಹೈಕಮಾಂಡ್‌ ಮೃದು ಧೋರಣೆ ತಾಳಿದೆ: ಸತೀಶ್ ಜಾರಕಿಹೊಳಿ Read More »

ನನ್ನ ಗಂಡನ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿಲ್ಲ: ಮಾಸ್ಕ್ ಮ್ಯಾನ್ ಚೆನ್ನಯ್ಯನ ಎರಡನೇ ಪತ್ನಿ ಹೇಳಿಕೆ

ಚಾಮರಾಜನಗರ: ಧರ್ಮಸ್ಥಳ ಪ್ರಕರಣದ ಮಾಸ್ಕ್‌ಮ್ಯಾನ್ ಚೆನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಮಾತನಾಡಿದ್ದು, ನಾನು ಮತ್ತು ನನ್ನ ಗಂಡ ಯಾವುದೇ ಧರ್ಮಕ್ಕೂ ಮತಾಂತರ ಆಗಿಲ್ಲ. ಧರ್ಮಸ್ಥಳದಲ್ಲಿ ಶವ ಹೂಳಿರುವುದಕ್ಕೆ ‌ಸಂಬಂಧಿಸಿದ ಹಾಗೆ ಅವರು ನನ್ನ ಬಳಿ ಏನನ್ನೂ ಹೇಳಿಲ್ಲ. ಅವರ ಹಿಂದೆ ಯಾರಿದ್ದಾರೆ ಎನ್ನುವುದು ತಿಳಿದಿಲ್ಲ ಎಂದು ಹೇಳಿದ್ದಾರೆ. ಚೆನ್ನಯ್ಯ ತನ್ನ ಎರಡನೇ ಪತ್ನಿ ಮಲ್ಲಿಕಾ ಜೊತೆಗೆ ತಮಿಳುನಾಡಿನಲ್ಲಿ ವಾಸವಿದ್ದು, ಕಳೆದ ಎರಡೂವರೆ ತಿಂಗಳ ಹಿಂದೆ ಕೂಲಿ ಕೆಲಸಕ್ಕೆಂದು ಹೋದವನು ಮತ್ತೆ ಬಂದಿರಲಿಲ್ಲ. ಅವರ ಅಣ್ಣ ಕ್ರೈಸ್ತ ಪಾದ್ರಿಯಾಗಿದ್ದು,

ನನ್ನ ಗಂಡನ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿಲ್ಲ: ಮಾಸ್ಕ್ ಮ್ಯಾನ್ ಚೆನ್ನಯ್ಯನ ಎರಡನೇ ಪತ್ನಿ ಹೇಳಿಕೆ Read More »

ದಸರಾ ಉದ್ಘಾಟನೆಗೆ ‌ವಿರೋಧ: ಬಾನು ಮುಷ್ತಾಕ್ ಹೇಳಿದ್ದೇನು?

ಹಾಸನ: ಯಾರು ಏನು ಬೇಕಾದರೂ ಮಾತನಾಡಲಿ, ನಾನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದು ದಸರಾ ಉದ್ಘಾಟನೆಗೆ ಸಂಬಂಧಿಸಿದ ಹಾಗೆ ಎದ್ದಿರುವ ಗೊಂದಲಗಳಿಗೆ ಪ್ರತಿಷ್ಟಿತ ಬುಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ತಿಳಿಸಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ ತಮ್ಮನ್ನು ಆಮಂತ್ರಿಸಿರುವ ಬಗ್ಗೆ ಎದ್ದಿರುವ ವಿರೋಧಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ನಾನು ಈ ಹಿಂದೆ ಏನು ಮಾತನಾಡಿದ್ದೇನೆ ಎನ್ನುವುದನ್ನು ತಿಳಿದುಕೊಂಡು ಮಾತನಾಡಲಿ. ಯಾರದ್ದೋ ವಿರೋಧಕ್ಕೆ ನಾನು ಪ್ರತಿಕ್ರಿಯೆ ನೀಡುವ ಅಗತ್ಯ ಇಲ್ಲ. ಮಾತನಾಡುವವರು ಮಾತನಾಡಲಿ.

ದಸರಾ ಉದ್ಘಾಟನೆಗೆ ‌ವಿರೋಧ: ಬಾನು ಮುಷ್ತಾಕ್ ಹೇಳಿದ್ದೇನು? Read More »

ತಿಮರೋಡಿ ಮನೆಯಲ್ಲಿ ಚಿನ್ನಯ್ಯನ ಮೊಬೈಲ್‌, ಬಟ್ಟೆ ಪತ್ತೆ

ಸಿಸಿಟಿವಿ ಹಾರ್ಸ್‌ ಡಿಸ್ಕ್‌ ವಶಪಡಿಸಿಕೊಂಡು ಸ್ಥಳ ಮಹಜರು ಮಾಡಿದ ಎಸ್‌ಐಟಿ ತಂಡ ಉಜಿರೆ: ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲಿ ಎಸ್‌ಐಟಿ ಶೋಧದ ವೇಳೆ ಸಿಸಿಟಿವಿ ಮತ್ತು ಚಿನ್ನಯ್ಯ ಬಳಸುತ್ತಿದ್ದ ಮೊಬೈಲ್‌ ಫೋನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬುರುಡೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚಿನ್ನಯ್ಯನ್ನು ಎಸ್‌ಐಟಿ ಪೊಲೀಸರು ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದ್ದಾರೆ. ಎಸ್‌ಐಟಿ ಉತ್ಖನನ ನಡೆಸಿದ ಬಳಿಕ ತಾನು ತಿಮರೋಡಿಯ ನಿವಾಸಕ್ಕೆ ಹೋಗುತ್ತಿದ್ದೆ. ಅಲ್ಲಿ ನನಗೆ ಒಂದು ಕೊಠಡಿಯನ್ನು ನೀಡಲಾಗಿತ್ತು. ಅಲ್ಲಿ ನಾನು ಬಟ್ಟೆ, ಬ್ಯಾಗ್ ಇಟ್ಟಿದ್ದೇನೆ.

ತಿಮರೋಡಿ ಮನೆಯಲ್ಲಿ ಚಿನ್ನಯ್ಯನ ಮೊಬೈಲ್‌, ಬಟ್ಟೆ ಪತ್ತೆ Read More »

ಧರ್ಮಸ್ಥಳ ಕೇಸ್‌ : ತಿಮರೋಡಿ ಮನೆಯಲ್ಲಿ ಎಸ್‌ಐಟಿ ಶೋಧ

ಸರ್ಚ್‌ ವಾರಂಟ್‌ನೊಂದಿಗೆ ಹೋಗಿ ಮನೆ ಶೋಧಿಸುತ್ತಿರುವ ಎಸ್‌ಐಟಿ ತಂಡ ಬೆಳ್ತಂಗಡಿ: ಧರ್ಮಸ್ಥಳ ಕೇಸಿನ ಬುರುಡೆಮ್ಯಾನ್‌ ಸಿ.ಎನ್‌.ಚಿನ್ನಯ್ಯ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲಿ ಕೆಲದಿನ ತಂಗಿದ್ದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ತಿಮರೋಡಿ ಮತ್ತು ಅವರ ಸಹೋದರನ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡಿದ್ದ ಚಿನ್ನಯ್ಯ ಈಗ ಎಸ್‌ಐಟಿ ಬಂಧನದಲ್ಲಿದ್ದು, ವಿಚಾರಣೆ ವೇಳೆ ತಾನು ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಆಶ್ರಯ ಪಡೆದಿದ್ದೆ ಎಂದು ಹೇಳಿಕೆ ನೀಡಿದ್ದ. ಈ

ಧರ್ಮಸ್ಥಳ ಕೇಸ್‌ : ತಿಮರೋಡಿ ಮನೆಯಲ್ಲಿ ಎಸ್‌ಐಟಿ ಶೋಧ Read More »

ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಅರಂತೋಡಿನ ಸುಶ್ಮಿತಾ ಬಿ.ಎಸ್.ಎಫ್. ಗೆ ಆಯ್ಕೆ

ಪುತ್ತೂರು: ಅತ್ಯುತ್ತಮ ತರಬೇತಿಯ ಮೂಲಕ ಭಾರತೀಯ ಸೇನೆಗೆ ಗ್ರಾಮೀಣ ಪ್ರದೇಶದ ಯುವಕ ಯುವತಿಯರು ನಿರಂತರವಾಗಿ ಸೇರ್ಪಡೆಗೊಳ್ಳಲು ಕಾರಣವಾಗಿರುವ ಕರಾವಳಿ ಭಾಗದ ಪ್ರತಿಷ್ಠಿತ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ನಿರಂತರವಾಗಿ ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ಪ್ರಯತ್ನಿಸುತ್ತಾ ಅಂತಿಮವಾಗಿ ಭಾರತೀಯ ಗಡಿ ರಕ್ಷಣಾ ಪಡೆ ( BSF )ಗೆ ಸಿಬ್ಬಂದಿ ನೇಮಕಾತಿ ಆಯೋಗ ( SSC )ನಡೆಸಿದ ಪರೀಕ್ಷೆಯಲ್ಲಿ ಸುಳ್ಯ ತಾಲೂಕಿನ ಸುಶ್ಮಿತಾ ಆಯ್ಕೆಯಾಗಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು  ಗ್ರಾಮದ ಬೆದ್ರಪಣೆಯ

ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಅರಂತೋಡಿನ ಸುಶ್ಮಿತಾ ಬಿ.ಎಸ್.ಎಫ್. ಗೆ ಆಯ್ಕೆ Read More »

ಲ್ಯಾಂಡಿಂಗ್‌ ಸಮಸ್ಯೆ : ಬೆಂಗಳೂರಿಗೆ ಹೋದ ಮಂಗಳೂರಿನಲ್ಲಿ ಇಳಿಯಬೇಕಾದ ವಿಮಾನ

ತಾಂತ್ರಿಕ ದೋಷದಿಂದ ಮಂಗಳೂರಿನಲ್ಲಿ ಇಳಿಯಲು ಸಾಧ್ಯವಾಗದೆ ಪ್ರಯಾಣಿಕರು ಹೈರಾಣ ಮಂಗಳೂರು: ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಬೆಂಗಳೂರಲ್ಲಿ ಲ್ಯಾಂಡ್‌ ಆದ ಘಟನೆ ಸೋಮವಾರ ಸಂಭವಿಸಿದೆ. ಮಂಗಳೂರಿನಲ್ಲಿ ಮೂರು ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಪಟ್ಟರೂ ವಿಫಲವಾದ ಬಳಿಕ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ವಿಮಾನದಲ್ಲಿ 157 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ದುಬೈನಿಂದ ಮಂಗಳೂರಿಗೆ ಭಾನುವಾರ ರಾತ್ರಿ ಹೊರಟಿತ್ತು.

ಲ್ಯಾಂಡಿಂಗ್‌ ಸಮಸ್ಯೆ : ಬೆಂಗಳೂರಿಗೆ ಹೋದ ಮಂಗಳೂರಿನಲ್ಲಿ ಇಳಿಯಬೇಕಾದ ವಿಮಾನ Read More »

ಸನಿಹಾ ಕೆಮ್ಮಿಂಜೆಗೆ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಶೇ.96

ಪುತ್ತೂರು: ಸನಿಹಾ ಕೆಮ್ಮಿಂಜೆ ಅವರು ಮೈಸೂರಿನ ಕರ್ನಾಟಕ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ವಿಶ್ವವಿದ್ಯಾಲಯ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ 96% ಅಂಕಗಳನ್ನು ಗಳಿಸಿ ವಿಶಿಷ್ಟ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಯಶಸ್ಸನ್ನು ಸಾಧಿಸಿದ್ದಾರೆ. ಅವರು ಮಂಗಳೂರಿನ ಕಲಾಭಾರತಿ ನೃತ್ಯ ಶಾಲೆಯ ಗುರು ಪ್ರಣತಿ ಸತೀಶ್ ಭಟ್ ಅವರ ಶಿಷ್ಯೆ. ಸನಿಹಾ ಕೆಮ್ಮಿಂಜೆ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿ ಮತ್ತು ವಿನೋದ್ ಕುಮಾರ್ ಕೆ ಮತ್ತು ಡಾ. ಸಿಂಧು ಬೇಕಲ್ ಅವರ

ಸನಿಹಾ ಕೆಮ್ಮಿಂಜೆಗೆ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಶೇ.96 Read More »

ಪುತ್ತೂರಿನಲ್ಲಿ 70 ಕೋಟಿ ವೆಚ್ಚದಲ್ಲಿ ಕಾರ್ಮಿಕ ವಸತಿ ಶಾಲೆ ನಿರ್ಮಾಣ

ಪುತ್ತೂರು: ಪುತ್ತೂರಿನ ಆರ್ಯಾಪು ಗ್ರಾಮದ ಕುರಿಯದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ ಮಂಜೂರು ಗೊಂಡಿದ್ದು ಇದಕ್ಕಾಗಿ ಏಳು ಎಕ್ರೆ ಜಾಗವನ್ನು ಕಾರ್ಮಿಕ ಇಲಾಖೆಗೆ ಮಂಜೂರು ಮಾಡಲಾಗಿದೆ. ಸುಮಾರು 70 ಕೋಟಿ ವೆಚ್ಚದಲ್ಲಿ ಆ ವಸತಿ ಶಾಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗುವ ನಿರೀಕ್ಷೆ ಹೊಂದಿದ್ದು ಇದು ಪುತ್ತೂರಿನ ಅಭಿವೃದ್ದಿಗೆ ಮತ್ತೊಂದು ಗರಿಮೆಯಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಸೋಮವಾರ ಶಾಸಕರ ಕಚೇರಿಯಲ್ಲಿ ನಡೆದ ಸರಳಾ ಸಮಾರಂಭದಲ್ಲಿ ಕಾರ್ಮಿಕ ಇಲಾಖೆಗೆ

ಪುತ್ತೂರಿನಲ್ಲಿ 70 ಕೋಟಿ ವೆಚ್ಚದಲ್ಲಿ ಕಾರ್ಮಿಕ ವಸತಿ ಶಾಲೆ ನಿರ್ಮಾಣ Read More »

ಬೆಳಕು ಹರಿಯುವ ಮೊದಲೇ ಎಸ್‌ಐಟಿ ಕಚೇರಿಯಲ್ಲಿ ಹಾಜರಾದ ಸುಜಾತ ಭಟ್‌

ಧರ್ಮಸ್ಥಳ ಪ್ರಕರಣದಲ್ಲಿ ಮತ್ತೊಂದು ಶಾಕ್‌ ನೀಡಿದ ಅಜ್ಜಿ ಧರ್ಮಸ್ಥಳ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ದಿನಕ್ಕೊಂದು ತಿರುವು ನೀಡುತ್ತಿರುವ ವೃದ್ಧೆ ಸುಜಾತ ಭಟ್‌ ಎಸ್‌ಐಟಿ ವಿಚಾರಣೆಗೆ ಹಾಜರಾಗುವ ವಿಚಾರದಲ್ಲೂ ಶಾಕ್‌ ನೀಡಿದ್ದಾರೆ. ಅನನ್ಯಾ ಭಟ್‌ ನಾಪತ್ತೆ ಪ್ರಕರಣದ ಸೃಷ್ಟಿಕರ್ತೆಯಾದ ಸುಜಾತ ಭಟ್‌ ಮಂಗಳವಾರ ಬೆಳ್ಳಂಬೆಳಗ್ಗೆ ವಿಶೇಷ ತನಿಖಾ ತಂಡದ ಕಚೇರಿಗೆ ಆಗಮಿಸಿ ಎಸ್‌ಐಟಿ ಅಧಿಕಾರಿಗಳೇ ಚಕಿತರಾಗುವಂತೆ ಮಾಡಿದ್ದಾರೆ. ಅನನ್ಯಾ ಭಟ್‌ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಪೊಲೀಸರು ಆ.29ರಂದು ವಿಚಾರಣೆಗೆ ಹಾಜರಾಗುವಂತೆ ಸುಜಾತ ಭಟ್‌ಗೆ ನೋಟಿಸ್‌ ನೀಡಿದ್ದರು. ಶುಕ್ರವಾರ

ಬೆಳಕು ಹರಿಯುವ ಮೊದಲೇ ಎಸ್‌ಐಟಿ ಕಚೇರಿಯಲ್ಲಿ ಹಾಜರಾದ ಸುಜಾತ ಭಟ್‌ Read More »

error: Content is protected !!
Scroll to Top