ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಅಪಮಾನ | ಪುತ್ತೂರಿನಲ್ಲಿ ಬೃಹತ್ ಜನಾಗ್ರಹ ಸಭೆ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಈಗಾಗಲೇ ಅಪಪ್ರಚಾರ ಇರುವುದರಿಂದ ನೈಜ ಸಂಗತಿ ಹೊರಬರಲು ಈಗಾಗಲೇ ಎಸ್‌ಐಟಿ ತನಿಖೆ ಒಳಪಡಿಸಿದಂತೆ ಎನ್‌ಐಎ ತನಿಖೆಗೂ ಒಳಪಡಿಸಬೇಕು, ಈಗಾಗಲೇ ಜನರಲ್ಲಿ ಕ್ಷೇತ್ರದ ಕುರಿತು ನಕಾರಾತ್ಮಕ ಚಿಂತನೆಗಳಿದ್ದು, ಅವುಗಳನ್ನು ತಮ್ಮ ಮನಸ್ಸಿನಿಂದ ತೆಗೆದು ಹಾಕಬೇಕು, ಸೌಜನ್ಯ ಅತ್ಯಾಚಾರ ಆಗಿರುವುದಂತೂ ನಿಜ ಸೌಜನ್ಯಗಳಿಗೆ ನ್ಯಾಯ ದೊಕಿಸುವ ಕೆಲಸ ಆಗಬೇಕು ಮುಂತಾದ ಆಗ್ರಹಗಳು ಕೇಳಿ ಬಂದವು. ಇದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನಲ್ಲಿ ಪುತ್ತೂರು ತಾಲೂಕು ಶ್ರೀ ಧರ್ಮಸ್ಥಳ ಸಂರಕ್ಷಣಾ ವೇದಿಕೆ ವತಿಯಿಂದ […]

ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಅಪಮಾನ | ಪುತ್ತೂರಿನಲ್ಲಿ ಬೃಹತ್ ಜನಾಗ್ರಹ ಸಭೆ Read More »

ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ ಸ್ವಾಗತಾರ್ಹ: ಗೋಪಾಲಕೃಷ್ಣ ಬೇಳೂರು

ಬೆಂಗಳೂರು: ನಾಡ ಹಬ್ಬ ಮೈಸೂರು ದಸರಾ ಹಬ್ಬವನ್ನು ಬಾನು ಮುಷ್ತಾಕ್ ಉದ್ಘಾಟನೆ ಮಾಡುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ. ದಸರಾ ಹಬ್ಬ ರಾಷ್ಟ್ರೀಯ ಹಬ್ಬ. ಇದನ್ನು ಜಾತ್ಯಾತೀತವಾಗಿ ಆಚರಣೆ ಮಾಡಲಾಗುತ್ತದೆ. ಆದ್ದರಿಂದ ಬಾನು ಮುಷ್ತಾಕ್ ದಸರಾ ಹಬ್ಬ ಉದ್ಘಾಟನೆ ಮಾಡುವ ಸಂಗತಿ ನನಗೆ ಸಂತಸ ತಂದಿದೆ. ಮಹಾರಾಜರು ಸಹ ಇದನ್ನು ಒಪ್ಪಿದ್ದಾರೆ ಎಂದು ಹೇಳಿದ್ದಾರೆ. ಜಾತಿ ಧರ್ಮ ಮರೆತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಬೆರೆಯಬೇಕು. ಇಂತಹ ವಿಷಯಗಳಲ್ಲಿ ಗೊಂದಲ ಸೃಷ್ಟಿ ಮಾಡುವುದನ್ನು ಬಿಜೆಪಿಯವರು

ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ ಸ್ವಾಗತಾರ್ಹ: ಗೋಪಾಲಕೃಷ್ಣ ಬೇಳೂರು Read More »

ಪಾಪಿ ತಂದೆಯಿಂದಲೇ 5 ವರ್ಷದ ಮಗಳ ಮೇಲೆ ಅತ್ಯಾಚಾರ: ದೂರು ದಾಖಲಿಸಿದ ತಾಯಿ

ವಿಜಯಪುರ: ಪಾಪಿ ತಂದೆಯಿಂದಲೇ ಐದು ವರ್ಷದ ಮಗುವೊಂದು ಅತ್ಯಾಚಾರಕ್ಕೆ ಒಳಗಾದ ಘಟನೆ ವಿಜಯಪುರ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸುಮಾರು 2 ವರ್ಷಗಳಿಂದ ಇಂಡಿ ತಾಲೂಕಿನ ದಂಪತಿ ತಮ್ಮಿಬ್ಬರು ಹೆಣ್ಣು ಮಕ್ಕಳ ಜೊತೆ ವಿಜಯಪುರದಲ್ಲಿ ವಾಸವಿದ್ದಾರೆ. ಪತಿ, ಪತ್ನಿ ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದು, ಆಗಾಗ ಇವರಿಬ್ಬರ ಮಧ್ಯೆ ವೈಮನಸ್ಸು ಮೂಡುತ್ತಿತ್ತು. ಆ.30ರಂದು ರಾತ್ರಿ 8 ಗಂಟೆ ಸುಮಾರಿಗೆ ಇಬ್ಬರು ಮಕ್ಕಳು ಗಣಪತಿ ನೋಡಲು ಹೋಗಿದ್ದರು. ಮರಳಿ ಬರಬೇಕಾದರೆ

ಪಾಪಿ ತಂದೆಯಿಂದಲೇ 5 ವರ್ಷದ ಮಗಳ ಮೇಲೆ ಅತ್ಯಾಚಾರ: ದೂರು ದಾಖಲಿಸಿದ ತಾಯಿ Read More »

SIT ತನಿಖೆಯಿಂದ ‌ಸತ್ಯ ಬಯಲಾಗುತ್ತಿದೆ: ಡಾ. ಡಿ. ವೀರೇಂದ್ರ ಹೆಗ್ಗಡೆ

ಉಜಿರೆ: ಸತ್ಯದ ಸತ್ವ ಪರೀಕ್ಷೆಯ ಕಾಲ ಇದಾಗಿದ್ದು, ಹಲವಾರು ನ್ಯಾಯಯುತವಾದ ಸಂಗತಿಗಳು SIT ತನಿಖೆಯಿಂದ ಹೊರ ಬರುತ್ತಿವೆ. ಸತ್ಯದ ಸಾಕ್ಷಾತ್ಕಾರ ಆಗುತ್ತಿರುವುದು ಸಂತಸದ ವಿಷಯ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಜೈನ ಸಮುದಾಯದವರು ಬೆಳ್ತಂಗಡಿ ತಾಲ್ಲೂಕು ಜೈನಸಮಾಜದ ಆಶ್ರಯದಲ್ಲಿ ಧರ್ಮಸ್ಥಳಕ್ಕೆ ನಡೆದ ವಾಹನ ಜಾಥಾವನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. ಧರ್ಮಸ್ಥಳದಲ್ಲಿ ಹುಟ್ಟಿದ ನಮ್ಮ ಕುಟುಂಬಸ್ಥರು ಭಾಗ್ಯವಂತರು. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ, ಚಂದ್ರ ನಾಥ ಸ್ವಾಮಿ, ಧರ್ಮದೇವತೆಗಳ

SIT ತನಿಖೆಯಿಂದ ‌ಸತ್ಯ ಬಯಲಾಗುತ್ತಿದೆ: ಡಾ. ಡಿ. ವೀರೇಂದ್ರ ಹೆಗ್ಗಡೆ Read More »

ಭಯೋತ್ಪಾದನೆ ವಿರುದ್ಧ SCO ಸದಸ್ಯರ ಅಧಿವೇಶನದಲ್ಲಿ ಪ್ರಧಾನಿ ಮೋದಿ ಮಾತು

ಟಿಯಾಂಜಿನ್: ಪ್ರಧಾನಿ ನರೇಂದ್ರ ಮೋದಿ ಅವರು ಶಾಂಘೈ ಸಹಕಾರ‌ ಸಂಸ್ಥೆ ಸದಸ್ಯರ ಅಧಿವೇಶನದಲ್ಲಿ ಭಯೋತ್ಪಾದನೆಯ ವಿರುದ್ಧ ತಮ್ಮ ಬಲವಾದ ಸಂದೇಶವನ್ನು ಸಾರಿದ್ದಾರೆ. ಉಗ್ರವಾದವನ್ನು ಇಡೀ ಮಾನವೀಯತೆಗೆ ಸವಾಲು ಎಂದು ಅವರು ಹೇಳಿದ್ದು, ಈ ಅಪಾಯದಿಂದ ಯಾವುದೇ ದೇಶ ಸುರಕ್ಷಿತವಾಗಿದೆ ಎಂದು ತೀರ್ಮಾನಿಸಲು ಅಸಾಧ್ಯ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಾವೆಲ್ಲರೂ ಸರ್ವಾನುಮತದಿಂದ ಭಯೋತ್ಪಾದನೆಯ ಬಗ್ಗೆ ದ್ವಂದ್ವ ಮಾನದಂಡ ಸ್ವೀಕಾರಾರ್ಹ ಅಲ್ಲ ಎಂದು ಹೇಳಬೇಕಾಗಿದೆ. ಪ್ರತ್ಯೇಕವಾದ, ಉಗ್ರ ವಾದ, ಉಗ್ರರಿಗೆ ಹಣಕಾಸು ಬೆಂಬಲ ನೀಡುವುದರ ವಿರುದ್ಧ ಒಗ್ಗಟ್ಟಾಗಿ SCO ರಾಷ್ಟ್ರಗಳು

ಭಯೋತ್ಪಾದನೆ ವಿರುದ್ಧ SCO ಸದಸ್ಯರ ಅಧಿವೇಶನದಲ್ಲಿ ಪ್ರಧಾನಿ ಮೋದಿ ಮಾತು Read More »

250 ಕೋಟಿ ಜಿ-ಮೇಲ್‌ ಬಳಕೆದಾರರ ಮಾಹಿತಿ ಸೋರಿಕೆ : ಪ್ರಪಂಚದ ಅತಿದೊಡ್ಡ ಸೈಬರ್‌ ಅಟ್ಯಾಕ್‌

ಶೈನಿಹಂಟರ್ಸ್ ಹ್ಯಾಕರ್‌ ಗುಂಪಿನ ಕೃತ್ಯದಿಂದ ಜಿ-ಮೇಲ್‌ ಬಳಕೆದಾರರ ಡೇಟಾಗಳಿಗೆ ಭಾರಿ ಅಪಾಯ ಬೆಂಗಳೂರು: ಪ್ರಪಂಚಾದ್ಯಂತ ಎಲ್ಲರೂ ಸಾಮಾನ್ಯವಾಗಿ ಬಳಕೆ ಮಾಡುತ್ತಿರುವ ಜಿಮೇಲ್‌ನ ಸುಮಾರು 250 ಕೋಟಿ ಬಳಕೆದಾರರ ಡೇಟಾ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಕೋಟ್ಯಂತರ ಬಳಕೆದಾರರ ವೈಯಕ್ತಿಕ ಮಾಹಿತಿಗೆ ಅಪಾಯ ಬಂದೊದಗಿದೆ. ಇದರ ಬೆನ್ನಲ್ಲೇ ಗೂಗಲ್ ತನ್ನ ಜಿಮೇಲ್ ಬಳಕೆದಾರರಿಗೆ ಪಾಸ್‌ವರ್ಡ್‌ಗಳನ್ನು ಬದಲಾಯಿಸಲು ಮತ್ತು ಎರಡು-ಹಂತದ ಪರಿಶೀಲನೆಯನ್ನು (2SV) ಸಕ್ರಿಯಗೊಳಿಸಲು ಒತ್ತಾಯಿಸಿದೆ. ಈ ಪಾಸ್​ವರ್ಡ್ ಬಳಸಿಕೊಂಡು ಹ್ಯಾಕರ್‌ಗಳು ದೊಡ್ಡ ಗೋಲ್‌ಮಾಲ್‌ ಮಾಡಬಹುದು. ಇದು ಇಲ್ಲಿಯವರೆಗೆ ಗೂಗಲ್ ಡೇಟಾಬೇಸ್‌ನಲ್ಲಿ ನಡೆದ

250 ಕೋಟಿ ಜಿ-ಮೇಲ್‌ ಬಳಕೆದಾರರ ಮಾಹಿತಿ ಸೋರಿಕೆ : ಪ್ರಪಂಚದ ಅತಿದೊಡ್ಡ ಸೈಬರ್‌ ಅಟ್ಯಾಕ್‌ Read More »

ರಷ್ಯಾದಿಂದ ಭಾರತ ತೈಲ ಖರೀದಿಸಿದರೆ ಬ್ರಾಹ್ಮಣರು ಶ್ರೀಮಂತರಾಗುತ್ತಾರಂತೆ!

ಎಡಬಿಡಂಗಿ ಹೇಳಿಕೆ ನೀಡಿದ ಟ್ರಂಟ್‌ ಸಲಹೆಗಾರ ಪೀಟರ್ ನವರೊ ವಾಷಿಂಗ್ಟನ್‌: ರಷ್ಯಾ-ಉಕ್ರೇನ್‌ ಯುದ್ಧವನ್ನು ಮೋದಿ ಯುದ್ಧ ಎಂದು ಕರೆದಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಾಣಿಜ್ಯ ಸಲಹೆಗಾರ ಪೀಟರ್ ನವರೊ ಈಗ ಭಾರತದವರನ್ನು ಪ್ರಚೋದಿಸಲು ಜಾತಿ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ ಬ್ರಾಹ್ಮಣರು ಭಾರತೀಯ ಜನರ ವೆಚ್ಚದಲ್ಲಿ ಶ್ರೀಮಂತರಾಗುತ್ತಿದ್ದಾರೆ ಎಂದು ಎಡಬಿಡಂಗಿ ಹೇಳಿಕೆ ನೀಡಿದ್ದಾರೆ. ಚೀನದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಮೋದಿ, ಪುಟಿನ್‌, ಕ್ಸಿ ಜಿನ್‌ಪಿಂಗ್‌ ಮಾತುಕತೆ ನಡೆಸುತ್ತಿರುವ

ರಷ್ಯಾದಿಂದ ಭಾರತ ತೈಲ ಖರೀದಿಸಿದರೆ ಬ್ರಾಹ್ಮಣರು ಶ್ರೀಮಂತರಾಗುತ್ತಾರಂತೆ! Read More »

ಮಂಗಳೂರು : ಕಾರು ಡಿಕ್ಕಿಯಾಗಿ ಸ್ಕೂಟರ್‌ ಸವಾರ ಸಾವು

ಡಿಕ್ಕಿಯ ರಭಸಕ್ಕೆ 50 ಮೀಟರ್‌ ದೂರ ಎಸೆಯಲ್ಪಟ್ಟ ಸವಾರ ಸುರತ್ಕಲ್: ಕಾರು ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಾಯಗೊಂಡಿರುವ ಘಟನೆ ಸುರತ್ಕಲ್‌ ಸಮೀಪ ಮುಕ್ಕ ಜಂಕ್ಷನ್‌ನಲ್ಲಿ ಭಾನುವಾರ ನಡೆದಿದೆ. ಮೃತರನ್ನು ಚೇಳಾಯರು ನಿವಾಸಿ ಕರುಣಾಕರ ಶೆಟ್ಟಿ (61) ಎಂದು ಗುರುತಿಸಲಾಗಿದೆ. ಚೇಳಾಯರಿನ ಹನುಮಂತ ಎಂಬವರ ಮಗ ವಿಶ್ವನಾಥ (16) ಗಾಯಗೊಂಡು ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ಎಸಗಿದ ಕಾರು ಚಾಲಕ ಹಳೆಯಂಗಡಿ ನಿವಾಸಿ ಮುಹಮ್ಮದ್ ತೌಫೀಕ್ ಎಂಬಾತನನ್ನು ಪೊಲೀಸರು

ಮಂಗಳೂರು : ಕಾರು ಡಿಕ್ಕಿಯಾಗಿ ಸ್ಕೂಟರ್‌ ಸವಾರ ಸಾವು Read More »

ಮಂಗಳೂರು: ಅಕ್ರಮ ಮದ್ಯ ತಯಾರಿ ಘಟಕ ಪತ್ತೆ; ಇಬ್ಬರ ಬಂಧನ

ಗೋವಾ ಮದ್ಯ ತಯಾರಿಸುತ್ತಿದ್ದ ಆರೋಪಿಗಳು ಮಂಗಳೂರು: ತೊಕ್ಕೊಟ್ಟಿನ ದೇರಳಕಟ್ಟೆ ಸಮೀಪ ಅಕ್ರಮ ಮದ್ಯ ತಯಾರಿ ನಡೆಸುತ್ತಿದ್ದ ಮನೆಗೆ ದಾಳಿ ಮಾಡಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡು ನಿವಾಸಿ ಪ್ರಣವ್ ವಿ ಶೆಣೈ (24) ಮತ್ತು ತಾಳಿಪಡ್ಪು ನಿವಾಸಿ ಅನೂಷ್ ಆರ್ (24)‌ ಎಂದು ಗುರುತಿಸಲಾಗಿದೆ. ಆರೋಪಿಗಳು ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಗ್ರಾಮದ ಕಂಬಳಪದವು ಶ್ರೀ ದುರ್ಗಾಕಾಳಿ ದೇವಸ್ಥಾನದ ರಸ್ತೆಯಲ್ಲಿರುವ ಮನೆಯಲ್ಲಿ ಥೋಮಸ್ ಮತ್ತು ಮಣಿಕುಟ್ಟನ್ ಜೊತೆ ಸೇರಿಕೊಂಡು ಅಕ್ರಮವಾಗಿ ಮದ್ಯ ತಯಾರಿ

ಮಂಗಳೂರು: ಅಕ್ರಮ ಮದ್ಯ ತಯಾರಿ ಘಟಕ ಪತ್ತೆ; ಇಬ್ಬರ ಬಂಧನ Read More »

ಎಲ್‍ ಐಸಿ ಸುವರ್ಣ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿ ವೇತನ ಯೋಜನೆ ಘೋಷಣೆ

ಎಲ್ಐಸಿ ಸುವರ್ಣ ಮಹೋತ್ಸವ್‍ ಪ್ರತಿಷ್ಠಾನವು ಭಾರತದಾದ್ಯಂತ ಎಲ್ ಐಸಿ ಸುವರ್ಣ ಮಹೋತ್ಸವ ಅಂಗವಾಗಿ 2025 ರ ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಿಸಲು ಸಂತೋಷಪಡುತ್ತಿದೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಯಾವುದೇ ವಿಭಾಗದಲ್ಲಿ ವೈದ್ಯಕೀಯ ಎಂಜಿನಿಯರಿಂಗ್ ಪದವಿಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು, ಯಾವುದೇ ಕ್ಷೇತ್ರದಲ್ಲಿ ಸಂಯೋಜಿತ ಕೋರ್ಸ್‌ಗಳು ಅಥವಾ ಇತರ ಸಮಾನ ಪಡೆಗಳಲ್ಲಿ ಡಿಪ್ಲೊಮಾ  ಹಾಗು ITI ಕೋರ್ಸ್ಗಳನ್ನು ಪಡೆಯಲು ಬಯಸುವವರು ಇದರ ಪ್ರಯೋಜನವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಪೋಸ್ಟರನ್ನು ಗಮನಿಸಿ

ಎಲ್‍ ಐಸಿ ಸುವರ್ಣ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿ ವೇತನ ಯೋಜನೆ ಘೋಷಣೆ Read More »

error: Content is protected !!
Scroll to Top