ವೃತ್ತಿಪರತೆ ಎಂಬ ಶಕ್ತಿಶಾಲಿ ಇಂಧನ

ನೀವೆಷ್ಟು ಪ್ರತಿಭಾವಂತರಾದರೂ ವೃತ್ತಿಪರತೆ ಇಲ್ಲದಿದ್ದರೆ ಗೆಲುವು ಅಸಾಧ್ಯ ಎಷ್ಟೋ ಜನ ಅದ್ಭುತವಾದ ಪ್ರತಿಭಾವಂತರು. ಆದರೆ ಜೀವನದಲ್ಲಿ ಅವರು ಸೋಲಲು ಮುಖ್ಯ ಕಾರಣ ಎಂದರೆ ವೃತ್ತಿಪರತೆಯ ಕೊರತೆ ಎಂದು ನನ್ನ ಭಾವನೆ. ನಿಮ್ಮ ವೃತ್ತಿಪರತೆ (Profesionalism) ಅನ್ನುವುದು ನಿಮ್ಮ ಸಾಧನೆಯ ದಾರಿಯಲ್ಲಿ ಒಂದು ಶಕ್ತಿಶಾಲಿಯಾದ ಇಂಧನ ಅನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಅದನ್ನು ಒಂದಿಷ್ಟು ನಿದರ್ಶನಗಳ ಮೂಲಕ ನಿಮಗೆ ವಿವರಿಸುತ್ತಾ ಹೋಗುತ್ತೇನೆ. 1) ಟೈಟಾನಿಕ್ ಹಡಗು ಮತ್ತು ಅದರಲ್ಲಿ ಅರಳಿದ ಪ್ರೀತಿ ಜೇಮ್ಸ್ ಕ್ಯಾಮರೂನ್ ನಿರ್ದೇಶನ ಮಾಡಿದ 1997ರ […]

ವೃತ್ತಿಪರತೆ ಎಂಬ ಶಕ್ತಿಶಾಲಿ ಇಂಧನ Read More »

ಕೋವಿಡ್ ಮುನ್ನೆಚ್ಚರಿಕೆ ಪಾಲಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ಕೋವಿಡ್ ಸೋಂಕಿನ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.ಚೀನಾ, ಅಮೆರಿಕ ಮೊದಲಾದ ದೇಶಗಳಲ್ಲಿ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ಭಾರತದಲ್ಲೂ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಇದರಂತೆ ದ.ಕ. ಜಿಲ್ಲೆಯಲ್ಲೂ ಮಾರ್ಗಸೂಚಿಯನ್ನು ಪಾಲಿಸುವಂತೆ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಹೊರಡಿಸುವ ಎಲ್ಲಾ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.

ಕೋವಿಡ್ ಮುನ್ನೆಚ್ಚರಿಕೆ ಪಾಲಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ Read More »

ಡಾ. ಕುರುಂಜಿ ವೆಂಕಟರಮಣ ಗೌಡ ಅವರ ೯೪ನೇ ಹುಟ್ಟುಹಬ್ಬ ಆಚರಣೆ

ಸುಳ್ಯ: ಡಾ. ಕುರುಂಜಿ ವೆಂಕಟರಮಣ ಗೌಡ ಅವರ ೯೪ನೇ ಹುಟ್ಟುಹಬ್ಬ ಆಚರಣೆಯು ಡಿ. ೨೬ರಂದು ಸುಳ್ಯ ಕೆವಿಜಿ ಕ್ಯಾಂಪಸ್‌ನಲ್ಲಿ ನಡೆಯಿತು. ಸುಳ್ಯ ಕೆಜಿವಿ ಕ್ಯಾಂಪಸ್‌ನಲ್ಲಿರುವ ಡಾ. ಕುರುಂಜಿ ವೆಂಕಟರಮಣ ಗೌಡ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಅವರಿಗೆ ಗೌರವ ಸೂಚಿಸಲಾಯಿತು. ಬಳಿಕ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ಜರಗಿತು. ಸುಳ್ಯದ ಕರ್ಮ ಯೋಗಿ ಎಂದೇ ಕರೆಯಲ್ಪಡುವ ಡಾ. ಕುರುಂಜಿ ವೆಂಕಟರಮಣ ಗೌಡ ಅವರು, ನವ ಸುಳ್ಯದ ನಿರ್ಮಾತೃರೂ ಹೌದು. ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ವಿದ್ಯಾಲಯವನ್ನು

ಡಾ. ಕುರುಂಜಿ ವೆಂಕಟರಮಣ ಗೌಡ ಅವರ ೯೪ನೇ ಹುಟ್ಟುಹಬ್ಬ ಆಚರಣೆ Read More »

ಡಿ. 27, 28, 29ರಂದು ಕಾರ್ಪಾಡಿ ದೇವಸ್ಥಾನದಲ್ಲಿ ದೊಡ್ಡ ರಂಗಪೂಜೆ, ಕಿರುಷಷ್ಠಿ ಉತ್ಸವ, ನೇಮೋತ್ಸವ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೊಡ್ಡ ರಂಗಪೂಜೆ, ಶ್ರೀ ದೇವರ ಕಿರುಷಷ್ಠಿ ಉತ್ಸವ ಮತ್ತು ಶ್ರೀ ವ್ಯಾಘ್ರ ಚಾಮುಂಡಿ ನೇಮೋತ್ಸವ ಡಿ. 27, 28, 29ರಂದು ನಡೆಯಲಿದೆ. ಡಿ. 27ರಂದು ಬೆಳಗ್ಗಿನಿಂದ ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಉಗ್ರಾಣ ಪೂಜೆ, ಸಂಜೆ 6ಕ್ಕೆ ಗಣೇಶ ಪ್ರಾರ್ಥನೆ, ಬಳಿಕ ದೀಪಾರಾಧನೆ, ದೊಡ್ಡ ರಂಗಪೂಜೆ ನಡೆಯಲಿದೆ. ಡಿ. 28ರಂದು ಬೆಳಿಗ್ಗೆ ಗಣಪತಿ ಹೋಮ, ಶ್ರೀ ಸುಬ್ರಹ್ಮಣ್ಯ ದೇವರಿಗೆ ಪವಮಾನಾಭಿಷೇಕ, ನಾಗದೇವರಿಗೆ ಆಶ್ಲೇಷ ಹೋಮ, ಆಶ್ಲೇಷ ಬಲಿ,

ಡಿ. 27, 28, 29ರಂದು ಕಾರ್ಪಾಡಿ ದೇವಸ್ಥಾನದಲ್ಲಿ ದೊಡ್ಡ ರಂಗಪೂಜೆ, ಕಿರುಷಷ್ಠಿ ಉತ್ಸವ, ನೇಮೋತ್ಸವ Read More »

ಶಿರಾಡಿ ಘಾಟ್ ಚತುಷ್ಪಥ | 1976.15 ಕೋಟಿ ರೂ.ನ ಯೋಜನೆಗೆ ಕೇಂದ್ರ ಅಸ್ತು | ಅಡ್ಡಹೊಳೆ – ಮಾರೇನಹಳ್ಳಿ ಹೆದ್ದಾರಿ ಅಭಿವೃದ್ಧಿ

ಪುತ್ತೂರು: ಹಾಸನ – ಮಾರೇನಹಳ್ಳಿ ನಡುವಿನ ಚತುಷ್ಪಥ ಕಾಮಗಾರಿಯನ್ನು ಮುಂದುವರಿಸಲು ಅನುಮೋದಿಸಿರುವ ಕೇಂದ್ರ ಸರಕಾರ, ಮುಂದಿನ ಹಂತದಲ್ಲಿ ಮಾರೇನಹಳ್ಳಿಯಿಂದ ಅಡ್ಡಹೊಳೆವರೆಗಿನ ರಸ್ತೆ ಅಗಲೀಕರಣ ಹಾಗೂ ಚತುಷ್ಪಥಗೊಳಿಸಲು ಮುಂದಾಗಿದೆ. ಎನ್.ಎಚ್.75 ಅಡಿ ಬರುವ ಶಿರಾಡಿಘಾಟಿನ ಮಾರೇನಹಳ್ಳಿಯಿಂದ ಅಡ್ಡಹೊಳೆವರೆಗೆ ಈ ಚತುಷ್ಪಥ ಕಾಮಗಾರಿ ನಡೆಯಲಿದೆ. ಇದಕ್ಕಾಗಿ ಕೇಂದ್ರ ಸರಕಾರ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ 1976.15 ಕೋಟಿ ರೂ. ಬಿಡುಗಡೆ ಮಾಡಿದೆ. ಫೆ. 2ರ ಮೊದಲು ಕಾಮಗಾರಿಗೆ ಬಿಡ್ ಆಹ್ವಾನಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ಎರಡು ವರ್ಷದಲ್ಲಿ ಅಡ್ಡಹೊಳೆಯಿಂದ

ಶಿರಾಡಿ ಘಾಟ್ ಚತುಷ್ಪಥ | 1976.15 ಕೋಟಿ ರೂ.ನ ಯೋಜನೆಗೆ ಕೇಂದ್ರ ಅಸ್ತು | ಅಡ್ಡಹೊಳೆ – ಮಾರೇನಹಳ್ಳಿ ಹೆದ್ದಾರಿ ಅಭಿವೃದ್ಧಿ Read More »

ಕುಂದಾಪುರದ ಬಾಲಕನಿಗೆ ನೆರವಾದ ಪುತ್ತೂರಿನ ಲೋಕಸೇವಾ ಟ್ರಸ್ಟ್

ಪುತ್ತೂರು: ಕರ್ನಾಟಕ ಸಹಾಯಹಸ್ತ ಲೋಕ ಸೇವಾ ಟ್ರಸ್ಟ್, ನೊಂದವರ ಪಾಲಿಗೆ ಆಸರೆ ವತಿಯಿಂದ ಮಲ್ಪೆ ವಡಬಾಂಡೇಶ್ವರ ಪವಿತ್ರ ರಥೋತ್ಸವ ಸಂದರ್ಭ ಭವತಿ ಭಿಕ್ಷಾಂ ದೇಹಿ ಕಾರ್ಯಕ್ರಮ ಆಯೋಜಿಸಲಾಯಿತು. ಕುಂದಾಪುರ ತಾಲೂಕು ಕಟ್ ಬೆಲ್ತೂರು ಗ್ರಾಮದ ಗುರುಚರಣ್ ಶ್ಯಾಮಲಾ ದಂಪತಿಯ 4 ವರ್ಷದ ಪುತ್ರ ಪವನ್ ಕುಮಾರ್ ಎಂಬ ಬಾಲಕನ ಚಿಕಿತ್ಸೆಗಾಗಿ 40 ಲಕ್ಷ ರೂ. ಅಗತ್ಯವಿದ್ದು, ಹಣ ಸಂಗ್ರಹಿಸುವ ಉದ್ದೇಶದಿಂದ ಯೋಜನೆ ಹಮ್ಮಿಕೊಳ್ಳಲಾಯಿತು. ದಾನಿಗಳಿಂದ ಸಂಗ್ರಹವಾದ 40100 ರೂ.ವನ್ನು ಮಲ್ಪೆ ಪೊಲೀಸ್ ಠಾಣೆಯಲ್ಲಿ ಮಗುವಿಗೆ ಹಸ್ತಾಂತರಿಸಲಾಯಿತು. ಮಲ್ಪೆ ಠಾಣಾ ಪಿ.ಎಸ್.ಐ ಸುಷ್ಮಾ ಭಂಡಾರಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಈಶ್ವರ್ ಮಲ್ಪೆ

ಕುಂದಾಪುರದ ಬಾಲಕನಿಗೆ ನೆರವಾದ ಪುತ್ತೂರಿನ ಲೋಕಸೇವಾ ಟ್ರಸ್ಟ್ Read More »

ಸಂತ ಫಿಲೋಮಿನಾದ ದತ್ತು ಗ್ರಾಮ ಕೆದಂಬಾಡಿಯಲ್ಲಿ, ರಸ್ತೆ ದುರಸ್ಥಿ ಸ್ವಚ್ಛತೆ

ಪುತ್ತೂರು: ಕೆದಂಬಾಡಿ ಗ್ರಾಮವನ್ನು ದತ್ತು ಸ್ವೀಕರಿಸಿರುವ ಸಂತ ಫಿಲೋಮಿನಾ ಕಾಲೇಜಿನ ವತಿಯಿಂದ ಗ್ರಾಮದ ವಿವಿಧೆಡೆಗಳಲ್ಲಿ ರಸ್ತೆ ದುರಸ್ಥಿ ಹಾಗೂ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ನೇತೃತ್ವದಲ್ಲಿ ಕೆದಂಬಾಡಿ ಗ್ರಾಮ ಪಂಚಾಯತ್ ನ ಸಹಕಾರದೊಂದಿಗೆ ದತ್ತು ಸ್ವೀಕಾರದ ಬಳಿಕ ಪ್ರಥಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ ಮಾತನಾಡಿ, ಸ್ವಚ್ಛ ರಸ್ತೆ ಯಾವತ್ತೂ ಸುರಕ್ಷಿತ. ಈ ಹಿನ್ನೆಲೆಯಲ್ಲಿ ಸಂತ ಫಿಲೋಮಿನಾ

ಸಂತ ಫಿಲೋಮಿನಾದ ದತ್ತು ಗ್ರಾಮ ಕೆದಂಬಾಡಿಯಲ್ಲಿ, ರಸ್ತೆ ದುರಸ್ಥಿ ಸ್ವಚ್ಛತೆ Read More »

ಒಕ್ಕಲಿಗ ಗೌಡ ಯುವ ಸಮುದಾಯದ ತಾ| ಮಟ್ಟದ ಕ್ರೀಡಾ ಸಂಭ್ರಮ

ಪುತ್ತೂರು: ತೆಂಕಿಲ ಯುವ ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ವಲಯದ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ ಡಿ. 26ರಂದು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. ದಕ್ಷಿಣ ಕನ್ನಡ ಗೌಡ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಧ್ವಜಾರೋಹಣ ನೆರವೇರಿಸಿದರು. ಕ್ರೀಡಾ ಸಂಭ್ರಮವನ್ನು ಕೊಡಿಪ್ಪಾಡಿ ಊರ ಗೌಡರಾದ ಪಕ್ರು ಗೌಡ ನಂದನ ಉದ್ಘಾಟಿಸಿದರು. ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಮಾತನಾಡಿ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ, ಅವಕಾಶ ಮಾಡಿಕೊಟ್ಟಾಗ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ‍್ಯ. ಇಂತಹ ಕಾರ್ಯಗಳು ನಡೆದಾಗ ಸಮಾಜ ಗುರುತಿಸುವಂತೆ ಆಗುತ್ತದೆ. ಕ್ರೀಡೆಗೆ ಪ್ರಾಮುಖ್ಯತೆ ಕೊಟ್ಟು ಇಂತಹ ಕ್ರೀಡಾ ಸಂಭ್ರಮವನ್ನು ಆಯೋಜಿಸಿದಾಗ ಎಲ್ಲಾ ವಲಯದವರು ಪಾಲ್ಗೊಂಡು, ಸಮುದಾಯದಲ್ಲಿ ಒಗ್ಗಟ್ಟು

ಒಕ್ಕಲಿಗ ಗೌಡ ಯುವ ಸಮುದಾಯದ ತಾ| ಮಟ್ಟದ ಕ್ರೀಡಾ ಸಂಭ್ರಮ Read More »

ಎಂಟು ತಿಂಗಳು ಮುಚ್ಚಲಿದೆ ತಿರುಪತಿ ಗರ್ಭಗುಡಿ

ಮುಖ್ಯ ಗರ್ಭಗುಡಿಗೆ ಚಿನ್ನದ ಲೇಪನ ಕಾರ್ಯ ; ದರ್ಶನಕ್ಕೆ ಬಾಲಾಲಯದ ವ್ಯವಸ್ಥೆ ಹೈದರಾಬಾದ್‌: ಜಗತ್ಪ್ರಸಿದ್ಧ ತಿರುಪತಿ ದೇವಸ್ಥಾನದ ಮುಖ್ಯ ಗರ್ಭಗುಡಿಯನ್ನು ಮುಂದಿನ ವರ್ಷ ಸುಮಾರು ತಿಂಗಳು ಮುಚ್ಚುವ ಸಾಧ್ಯತೆಯಿದೆ. ದೇವಸ್ಥಾನದ ಆಡಳಿತ ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತಿರುಪತಿ ತಿಮ್ಮಪ್ಪನ ದೇಗುಲದ ಆನಂದ ನಿಲಯಂ ಚಿನ್ನದ ಲೇಪನವನ್ನು ಬದಲಾಯಿಸಲು ಯೋಜಿಸಿದೆ. ಆನಂದ ನಿಲಯಂ ಅಂದರೆ ಗರ್ಭಗುಡಿಯ ಮೇಲಿರುವ ಮೂರು ಅಂತಸ್ತಿನ ಗುಮ್ಮಟದ ಆಕಾರದ ಗೋಪುರ. ಮುಖ್ಯ ದೇವಾಲಯದ ಪಕ್ಕದಲ್ಲಿ ತಾತ್ಕಾಲಿಕವಾಗಿ ತಿರುಪತಿ ವೆಂಕಟೇಶ್ವರ ದೇವರ ತದ್ರೂಪಿ

ಎಂಟು ತಿಂಗಳು ಮುಚ್ಚಲಿದೆ ತಿರುಪತಿ ಗರ್ಭಗುಡಿ Read More »

ಸ್ಟೇಟ್‌ ಬ್ಯಾಂಕ್‌ನಲ್ಲಿ ನಿವೃತ್ತರಿಗೆ 1438 ಹುದ್ದೆಗಳು

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಂದದ ಆಧಾರದ ಮೇಲೆ 1438 ಕಲೆಕ್ಷನ್ ಫೆಸಿಲಿಟೇಟರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ.SBI ನಿವೃತ್ತ ಅಧಿಕಾರಿಗಳು/ಸಿಬ್ಬಂದಿ ಮತ್ತು SBIಯ ಹಿಂದಿನ ಅಸೋಸಿಯೇಟ್ಸ್ ಬ್ಯಾಂಕ್‌ಗಳ ಸಿಬ್ಬಂದಿ (e-ABs) ಒಪ್ಪಂದದ ಆಧಾರದ ಮೇಲೆ ಕಲೆಕ್ಷನ್ ಫೆಸಿಲಿಟೇಟರ್‌ಗಳ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ನಿವೃತ್ತ ಅಧಿಕಾರಿಗಳು, ಸಿಬ್ಬಂದಿಯನ್ನು CPC/ಪ್ರಾದೇಶಿಕ ಕಚೇರಿ/ AO (ಆಡಳಿತಾತ್ಮಕ ಕಚೇರಿ)/ ATC (ಆಸ್ತಿಗಳ ಟ್ರ್ಯಾಕಿಂಗ್ ಕೇಂದ್ರ) ಅಥವಾ LHO ನಿರ್ಧರಿಸಿದಂತೆ ಯಾವುದೇ ಇತರ ಕಚೇರಿ ಸ್ಥಳಗಳು/ಸಂಸ್ಥೆಗಳಲ್ಲಿ ನಿಯೋಜಿಸಲಾಗುವುದು.ಅಭ್ಯರ್ಥಿಗಳು ಜನವರಿ 10, 2023ರ

ಸ್ಟೇಟ್‌ ಬ್ಯಾಂಕ್‌ನಲ್ಲಿ ನಿವೃತ್ತರಿಗೆ 1438 ಹುದ್ದೆಗಳು Read More »

error: Content is protected !!
Scroll to Top