ದ.ಕ. ಜಿಲ್ಲಾ ಕಬಡ್ಡಿ ತೀರ್ಪುಗಾರರ ಮಂಡಳಿ ಅಧ್ಯಕ್ಷರಾಗಿ ಶಿವರಾಮ ಏನೆಕಲ್

ಪುತ್ತೂರು : ದ.ಕ. ಜಿಲ್ಲಾ ಕಬಡ್ಡಿ ತೀರ್ಪುಗಾರ ಮಂಡಳಿ ಅಧ್ಯಕ್ಷರಾಗಿ ಶಿವರಾಮ ಏನೆಕಲ್ ಆಯ್ಕೆಯಾಗಿದ್ದಾರೆ. ಸುಳ್ಯ ತಾಲೂಕಿನ ಏನೆಕಲ್ ನಿವಾಸಿಯಾಗಿರುವ ಇವರು, ಏನೆಕಲ್ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ‌ ದೈಹಿಕ ಶಿಕ್ಷಣ ಶಿಕ್ಷಕರಾಗಿ, ಅನೇಕ ವಿದ್ಯಾರ್ಥಿಗಳನ್ನು ಕ್ರೀಡಾಪಟುಗಳಾಗಿ ತಯಾರುಗೊಳಿಸಿದ್ದರು. ಶಿವರಾಮ ಏನೆಕಲ್ ಅವರು ಏನೆಕಲ್ಲು ದೇವಸ್ಥಾನದ ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ ಸಮಿತಿಗಳ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ರೋಟರಿ ಸಂಸ್ಥೆ ಸುಬ್ರಹ್ಮಣ್ಯದ ಪೂರ್ವಾಧ್ಯಕ್ಷ ಹಾಗೂ 3181 ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್, ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ತಾಲೂಕು, […]

ದ.ಕ. ಜಿಲ್ಲಾ ಕಬಡ್ಡಿ ತೀರ್ಪುಗಾರರ ಮಂಡಳಿ ಅಧ್ಯಕ್ಷರಾಗಿ ಶಿವರಾಮ ಏನೆಕಲ್ Read More »

ಇಂದು ಬಲೆರಾವು ಸೇತುವೆ ಸಹಿತ ಕಿಂಡಿ ಅಣೆಕಟ್ಟು ಲೋಕಾರ್ಪಣೆ | ತ್ರಿವಳಿ ತಾಲೂಕಿನ ಕೊಂಡಿ ಈ ಸೇತುವೆ

ಪುತ್ತೂರು: ಶಾಂತಿಗೋಡು ಗ್ರಾಮದ ಬಲೆರಾವು ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮಾ. 22ರ ಬುಧವಾರ ಲೋಕಾರ್ಪಣೆಗೊಳ್ಳಲಿದೆ. ಬಲ್ಲೇಗಳೇ ತುಂಬಿದ ಊರು ಬಲೆರಾವು. ತೀರಾ ಹಿಂದುಳಿದ ಪ್ರದೇಶ ಎನ್ನುವುದು ಹೆಸರಿನಿಂದಲೇ ತಿಳಿದುಬರುವ ಸತ್ಯ. ಇದೀಗ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಊರಿನ ಚಿತ್ರಣವನ್ನೇ ಬದಲಾಯಿಸಲಿದೆ. ಇದರೊಂದಿಗೆ ರಸ್ತೆ ಅಭಿವೃದ್ಧಿ, ಶಾಲೆಗಳಿಗೆ ಮೂಲಭೂತ ಸೌಕರ್ಯ ಸೇರಿದಂತೆ ಶಾಂತಿಗೋಡು ಗ್ರಾಮಕ್ಕೆ ಪುತ್ತೂರು ಶಾಸಕರು ಭರಪೂರ ಅನುದಾನವನ್ನು ಮಂಜೂರುಗೊಳಿಸಿದ್ದಾರೆ. ಬಲೆರಾವು ಪ್ರದೇಶದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಸೇತುವೆ ಸಹಿತ ಕಿಂಡಿ

ಇಂದು ಬಲೆರಾವು ಸೇತುವೆ ಸಹಿತ ಕಿಂಡಿ ಅಣೆಕಟ್ಟು ಲೋಕಾರ್ಪಣೆ | ತ್ರಿವಳಿ ತಾಲೂಕಿನ ಕೊಂಡಿ ಈ ಸೇತುವೆ Read More »

ತುಮಕೂರಿನಲ್ಲಿ ಬೈಕ್ ಅಪಘಾತ: ಸುಳ್ಯದ ಯುವಕ ಸ್ಥಳದಲ್ಲೇ ಸಾವು

ಸುಳ್ಯ: ತುಮಕೂರು ಟೋಲ್ ಬಳಿ ನಡೆದ ಬೈಕ್ ಅಪಘಾತದಲ್ಲಿ ಸುಳ್ಯದ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಯುವಕನನ್ನು ಸುಳ್ಯ ತಾಲೂಕಿನ ಕೇರ್ಪಳ ನಿವಾಸಿ ಪ್ರಜ್ವಲ್ (25) ಎಂದು ಗುರುತಿಸಲಾಗಿದೆ. ಇವರು ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿರುವ ರಮೇಶ್ ಅವರ ಪುತ್ರ. ಪ್ರಜ್ವಲ್ ತುಮಕೂರಿನಲ್ಲಿ ಟೋಲ್ ಸೂಪರ್ ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ರವಿವಾರ ತಡರಾತ್ರಿ ಟೋಲ್ ಸಮೀಪವೇ ಬೈಕ್ ಸ್ಕಿಡ್ ಆಗಿ, ಅಪಘಾತ ಸಂಭವಿಸಿತ್ತು. ಪ್ರಜ್ವಲ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ‌. ಮೃತ ಪ್ರಜ್ವಲ್ ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.

ತುಮಕೂರಿನಲ್ಲಿ ಬೈಕ್ ಅಪಘಾತ: ಸುಳ್ಯದ ಯುವಕ ಸ್ಥಳದಲ್ಲೇ ಸಾವು Read More »

ಏ. 10ರಿಂದ ಐತಿಹಾಸಿಕ ಪುತ್ತೂರು ಜಾತ್ರೆ | ಮಾ. 25ರಂದು ಆಹ್ವಾನ ಪತ್ರಿಕೆ ವಿತರಣೆ, ಮಾ. 9ರಂದು ಹಸಿರು ಹೊರೆಕಾಣಿಕೆ

ಪುತ್ತೂರು: ಹತ್ತೂರ ಭಕ್ತರಿಂದ ಆರಾಧನೆ ಪಡೆದುಕೊಳ್ಳುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಏ. 10ರಿಂದ 20ರವರೆಗೆ ನಡೆಯಲಿದೆ. ಪುತ್ತೂರು ಜಾತ್ರೆಯ ಹಿನ್ನೆಲೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾಹಿತಿ ನೀಡುತ್ತಾ, ಏ. 1ರಂದು ಗೊನೆ ಮುಹೂರ್ತ ನಡೆಯಲಿದೆ. ಬೆಳಿಗ್ಗೆ ಪ್ರಾರ್ಥನೆ ನಡೆದು 9.35ರ ವೃಷಭ ಲಗ್ನದಲ್ಲಿ ಜಾತ್ರೆಗೆ ಗೊನೆ ಕಡಿಯಲಾಗುವುದು. ಏ. 10ರಂದು ಬೆಳಿಗ್ಗೆ 9.25ರ ವೃಷಭ ಲಗ್ನದಲ್ಲಿ ಧ್ವಜಾರೋಹಣ ನಡೆದು, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಅಂಕುರಾರ್ಪಣೆ, ಬಲಿ ಹೊರಟು ಉತ್ಸವ,

ಏ. 10ರಿಂದ ಐತಿಹಾಸಿಕ ಪುತ್ತೂರು ಜಾತ್ರೆ | ಮಾ. 25ರಂದು ಆಹ್ವಾನ ಪತ್ರಿಕೆ ವಿತರಣೆ, ಮಾ. 9ರಂದು ಹಸಿರು ಹೊರೆಕಾಣಿಕೆ Read More »

ನಾಳೆ (ಮಾ.22) : ಮಕ್ಕಳ ಹಕ್ಕುಗಳ ಪರವಾದ ಚುನಾವಣಾ ಪ್ರಣಾಳಿಕೆಗಾಗಿ ಹಕ್ಕೊತ್ತಾಯ ಸಭೆ

ಪುತ್ತೂರು: ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ, ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ, ದ.ಕ.ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇದ್ರಗಳ ಒಕ್ಕೂಟ ಹಾಗೈ ಎಸ್ ಡಿಎಂಸಿ ಸಮನ್ವಯ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ಪರವಾದ ಚುನಾವಣಾ ಪ್ರಣಾಳೀಕೆಗಾಗಿ ಹಕ್ಕೊತ್ತಾಯ ಸಭೆಯನ್ನು ಮಾ.22 ಬುಧವಾರ ಪುತ್ತೂರು ಲಯನ್ಸ್ ಕ್ಲಬ್‍ನಲ್ಲಿ ಆಯೋಜಿಸಲಾಗಿದೆ. ರಾಷ್ಟ್ರೀಯ ರಾಜಕೀಯ ಪಕ್ಷಗಳ ಕಚೇರಿಗಳಿಗೆ ಭೇಟಿ ಮಾಡಿ ಅವರು ತಮ್ಮ ಚುನಾವಣಾ ಪ್ರಣಾಳಕೆಯಲ್ಲಿ ಮಕ್ಕಳ ಬೇಡಿಕೆಗಳನ್ನು ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತರುವಂತೆ ಮತ್ತು ಮಕ್ಕಳಿಗೆ

ನಾಳೆ (ಮಾ.22) : ಮಕ್ಕಳ ಹಕ್ಕುಗಳ ಪರವಾದ ಚುನಾವಣಾ ಪ್ರಣಾಳಿಕೆಗಾಗಿ ಹಕ್ಕೊತ್ತಾಯ ಸಭೆ Read More »

ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆಧಾರ್ ಕಾರ್ಡ್ ಪರಿಷ್ಕರಣೆ, ನೋಂದಣಿ ಶಿಬಿರ

ಪುತ್ತೂರು: ಭಾರತೀಯ ಅಂಚೆ ಇಲಾಖೆ ಹಾಗೂ ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ಮಾರ್ಚ್ 21ರಂದು ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆಧಾರ್ ಕಾರ್ಡ್ ಪರಿಷ್ಕರಣೆ ಮತ್ತು ಹೊಸ ಆಧಾರ್ ಕಾರ್ಡ್ ನೊಂದಣಿ ಶಿಬಿರ ಉದ್ಘಾಟನೆಗೊಂಡಿತು. ಶಿಬಿರದಲ್ಲಿ ಆಧಾರ್ ಪರಿಷ್ಕರಣೆ, ಮಕ್ಕಳ ಆಧಾರ್ ಅಪ್’ಡೇಟ್, ಹೊಸ ಆಧಾರ್ ಮತ್ತು ಪುತ್ತೂರು ತಾಲೂಕು ಬದಲು ಕಡಬ ತಾಲೂಕು ಎಂಬ ಬದಲಾವಣೆ ಮಾಡಲು ಅವಕಾಶ ಇದೆ. ಈ ಬದಲಾವಣೆಗೆ ರೇಷನ್ ಕಾರ್ಡ್, ಫೋಟೋ, ಆಧಾರ್ ಕಾರ್ಡ್ ಅಗತ್ಯ.

ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆಧಾರ್ ಕಾರ್ಡ್ ಪರಿಷ್ಕರಣೆ, ನೋಂದಣಿ ಶಿಬಿರ Read More »

ಮುಳಿಯ ಜ್ಯುವೆಲ್ಸ್‌ನೊಂದಿಗೆ ಯುಗಾದಿ ಸಂಭ್ರಮ | ಮಾರ್ಚ್ 22ರಂದು ಒನ್‌ ಡೇ ಆಫರ್; ಚಿನ್ನ, ಬೆಳ್ಳಿ ನಾಣ್ಯಗಳನ್ನು ಗೆಲ್ಲುವ ಅವಕಾಶ

ಪುತ್ತೂರು: ರಾಜ್ಯದ ಹೆಸರಾಂತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ ಯುಗಾದಿ ಹಬ್ಬದ ಪ್ರಯುಕ್ತ ತನ್ನ ಎಲ್ಲ ಶೋರೂಂಗಳಲ್ಲಿ ಮಾರ್ಚ್ 22ರಂದು ಯುಗಾದಿ ಒನ್‌ ಡೇ ವಿಶೇಷ ಆಫರ್‍‌ ನೀಡುತ್ತಿದೆ. ಪ್ರತಿ ಖರೀದಿಗೆ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಗೆಲ್ಲುವ ಸುವರ್ಣಾವಕಾಶವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ಮುಳಿಯ ಜ್ಯುವೆಲ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ. ಒಟ್ಟಾರೆಯಾಗಿ 100 ನಾಣ್ಯಗಳನ್ನು ಗೆಲ್ಲುವ ಅವಕಾಶವಿದೆ. ಪ್ರತಿ Walk-inಗೆ ಬೆಳ್ಳಿ ನಾಣ್ಯ ಗೆಲ್ಲುವ ಅವಕಾಶ ನೀಡಲಾಗುತ್ತಿದೆ. ಈ ಆಫರ್ ನ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ

ಮುಳಿಯ ಜ್ಯುವೆಲ್ಸ್‌ನೊಂದಿಗೆ ಯುಗಾದಿ ಸಂಭ್ರಮ | ಮಾರ್ಚ್ 22ರಂದು ಒನ್‌ ಡೇ ಆಫರ್; ಚಿನ್ನ, ಬೆಳ್ಳಿ ನಾಣ್ಯಗಳನ್ನು ಗೆಲ್ಲುವ ಅವಕಾಶ Read More »

ಮಹಿಳೆಯರು ಜಾಗೃತರಾದರೆ ಸಮಾಜದಲ್ಲಿ ಪರಿವರ್ತನೆ ಸಾಧ್ಯ : ಶಾಸಕ ಸಂಜೀವ ಮಠಂದೂರು | ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಮಹಿಳಾ ದಿನಾಚರಣೆ

ಪುತ್ತೂರು: ಜಾಗೃತ ಸಮಾಜದಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದ್ದು, ಮಹಿಳೆಯರು ಜಾಗೃತರಾದರೆ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಸಂವಿಂಧಾನಬದ್ಧ ಹಕ್ಕು ಚಲಾಯಿಸಲು ಅವಕಾಶ, ಅನ್ಯಾಯ ಆದಾಗ ನ್ಯಾಯ ಕೊಡುವ ಕೆಲಸ ನಮ್ಮೆಲ್ಲರಿಂದ ಆಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಮಂಗಳವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ  ಹಾಗೂ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಜಂಟಿ ಆಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಠಾರದಲ್ಲಿ ನಡೆದ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ

ಮಹಿಳೆಯರು ಜಾಗೃತರಾದರೆ ಸಮಾಜದಲ್ಲಿ ಪರಿವರ್ತನೆ ಸಾಧ್ಯ : ಶಾಸಕ ಸಂಜೀವ ಮಠಂದೂರು | ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಮಹಿಳಾ ದಿನಾಚರಣೆ Read More »

ಪುತ್ತೂರು ಪೇಟೆಯಲ್ಲಿ ಮಜಲುಮಾರು ಬ್ರಹ್ಮಕಲಶೋತ್ಸವದ ಆಮಂತ್ರ ಪತ್ರಿಕೆ ವಿತರಣೆ

ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾ.25 ರಿಂದ 31 ರ ತನಕ  ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಪುತ್ತೂರು ನಗರದಲ್ಲಿ ವಿತರಿಸಲಾಯಿತು. ಬೊಳುವಾರು ಆಂಜನೇಯ ಮಂತ್ರಾಲಯದ ಬಳಿ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮೀಶ ತಂತ್ರಿಯವರು ಆಮಂತ್ರಣ ವಿತರಣೆಗೆ ಚಾಲನೆ ನೀಡಿದರು. ಬಳಿಕ ಮುಖ್ಯರಸ್ತೆಯ ಮೂಲಕ ದರ್ಬೆ, ಕೂರ್ನಡ್ಕದ ತನಕ ಆಮಂತ್ರಣ ವಿತರಿಸಿದರು. ದೇವಸ್ಥಾನದ ಟ್ರಸ್ಟ್‌ನ ಕಾರ್ಯದರ್ಶಿ ಯಂ.ಕೇಶವ ಪೂಜಾರಿ ಮುಕ್ವೆ, ಕೋಶಾಧಿಕಾರಿ ನವೀನ್ ರೈ ಶಿಬರ, ಸದಸ್ಯರಾದ

ಪುತ್ತೂರು ಪೇಟೆಯಲ್ಲಿ ಮಜಲುಮಾರು ಬ್ರಹ್ಮಕಲಶೋತ್ಸವದ ಆಮಂತ್ರ ಪತ್ರಿಕೆ ವಿತರಣೆ Read More »

ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ ಎಂದ ನಟ ಚೇತನ್‌ ಬಂಧನ

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಹಿಂದುತ್ವ ಹಾಗೂ ಹಿಂದೂ ಧರ್ಮದ ವಿರುದ್ಧ ಕೆಟ್ಟದಾಗಿ ಪೋಸ್ಟ್‌ ಮಾಡಿದ ಹಿನ್ನೆಲೆಯಲ್ಲಿ ಶೇಷಾದ್ರಿಪುರ ಠಾಣೆ ಪೊಲೀಸರು ನಟ ಚೇತನ್‌ನನ್ನು ಬಂಧಿಸಿದ್ದಾರೆ. ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ ಎಂದು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಟ್ವೀಟ್‌ ಮಾಡಿಕೊಂಡು ಅದಕ್ಕೊಂದು ಫೋಟೊ ಕೂಡ ಹಂಚಿಕೊಂಡಿದ್ದರು. ಜತೆಗೆ, ಉರಿಗೌಡ ಮತ್ತು ನಂಜೇಗೌಡ ಬಗ್ಗೆ ಟ್ವೀಟ್ ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ ಬೆನ್ನಲ್ಲೇ ಶಿವಕುಮಾರ್ ಎಂಬವರು ಶೇಷಾದ್ರಿಪುರ ಠಾಣೆಗೆ ದೂರು ದಾಖಲಿಸಿದ್ದರು. ಹಿಂದೂ ಭಾವನೆಗಳಿಗೆ ಧಕ್ಕೆ

ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ ಎಂದ ನಟ ಚೇತನ್‌ ಬಂಧನ Read More »

error: Content is protected !!
Scroll to Top