ಹಿಂದಿ ಕೇವಲ ರಾಷ್ಟ್ರೀಯ ಭಾಷೆಯಲ್ಲ, ಏಕತೆಯ ಸಂಕೇತವೂ ಹೌದು | ಅಂಬಿಕಾ ಸಿಬಿಎಸ್ಇ ವಿದ್ಯಾಲಯದಲ್ಲಿ ಹಿಂದಿ ದಿನಾಚರಣೆಯಲ್ಲಿ ಪುಷ್ಪಲತಾ
ಪುತ್ತೂರು: ಹಿಂದಿ ಭಾಷೆ ಕೇವಲ ರಾಷ್ಟ್ರೀಯ ಭಾಷೆಯಷ್ಟೇ ಅಲ್ಲದೆ ಏಕತೆಯ ಸಂಕೇತವೂ ಹೌದು. ಯಾವುದೇ ಭಾಷೆಯ ಬಗೆಗಿನ ದ್ವೇಷ ಒಳಿತಲ್ಲ. ಅದರಿಂದ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಂದು ಭಾಷೆಯನ್ನೂ ಗೌರವಿಸಬೇಕು ಎಂದು ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಹಿಂದಿ ಉಪನ್ಯಾಸಕಿ ಪುಷ್ಪಲತಾ ಹೇಳಿದರು. ಅವರು ಬಪ್ಪಳಿಗೆ ಅಂಬಿಕಾ ಸಿಬಿಎಸ್ಇ ವಿದ್ಯಾಲಯದಲ್ಲಿ ನಡೆದ ಅಂತರಾಷ್ಟ್ರೀಯ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಅಧ್ಯಕ್ಷತೆ […]










