ಪಡುವನ್ನೂರು ದರೋಡೆ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಪುತ್ತಿಲ ಪರಿವಾರ
ಪುತ್ತೂರು: ಪಡುವನ್ನೂರು ಗ್ರಾಮದ ಕುದ್ಕಾಡಿ ಗುರುಪ್ರಸಾದ್ ರೈ ಅವರ ಮನೆಯಲ್ಲಿ ಸೆ. 9ರಂದು ರಾತ್ರಿ ನಡೆದ ದರೋಡೆ ಪ್ರಕರಣವನ್ನು ತಿಂಗಳೊಳಗೆ ಭೇದಿಸಿದ ಪೊಲೀಸ್ ಇಲಾಖೆಗೆ ಪುತ್ತಿಲ ಪರಿವಾರ ಅಭಿನಂದನೆ ಸಲ್ಲಿಸಿದೆ. ಘಟನೆ ನಡೆದ ದಿನವೇ ಅರುಣ್ ಕುಮಾರ್ ಪುತ್ತಿಲ ಸಹಿತ ಪುತ್ತಿಲ ಪರಿವಾರದ ಪ್ರಮುಖರು ಗುರುಪ್ರಸಾದ್ ರೈಯವರ ಮನೆಗೆ ಭೇಟಿ ನೀಡಿದ್ದು, ಆ ಸಂದರ್ಭ ಕಳ್ಳತನ ನಡೆದ ಘಟನೆಯನ್ನು ತಾಯಿ ಮಗ ವಿವರಿಸಿದ ರೀತಿಯನ್ನು ಕಂಡಾಗ ಆರೋಪಿಗಳ ಪತ್ತೆ ಕಷ್ಟಸಾಧ್ಯವೆಂಬಂತೆ ಕಾಣುತಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲಾ […]










